Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಿಲ್ ಕಪೂರ್ ಚಿತ್ರದಲ್ಲಿ ಡಬಲ್ ಮೀನಿಂಗ್ ಹಾಡು; ಏನಿದರ ಅರ್ಥ?

Anil Kapoor: ಹಾಡೊಂದನ್ನು ಸಿನಿಮಾದಿಂದ ಕೈಬಿಡುವಂತೆ ಬಾಲಿವುಡ್ ನಟ ಅನಿಲ್ ಕಪೂರ್ ನಿರ್ಮಾಪಕರೊಟ್ಟಿಗೆ ಜಗಳ, ಮಾಡಿದ್ದರು ನಟಿ ಜೂಹಿ ಚಾವ್ಲಾ ಕಣ್ಣೀರು ಹಾಕಿದ್ದರು. ಯಾವುದು ಆ ಹಾಡು? ಆ ಹಾಡಿನ ಅರ್ಥ ಏನು?

ಅನಿಲ್ ಕಪೂರ್ ಚಿತ್ರದಲ್ಲಿ ಡಬಲ್ ಮೀನಿಂಗ್ ಹಾಡು; ಏನಿದರ ಅರ್ಥ?
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Aug 20, 2024 | 2:55 PM

ಅನೇಕ ಸಿನಿಮಾಗಳಲ್ಲಿ ಡಬಲ್ ಮೀನಿಂಗ್ ಹಾಡುಗಳನ್ನು ಬರೆಯಲಾಗುತ್ತದೆ. ಇದಕ್ಕೆ ಕೆಲವೊಮ್ಮೆ ಕಲಾವಿದರು ತಕರಾರು ತೆಗೆದಿದ್ದೂ ಇದೆ. ಅದೇ ರೀತಿ ಅನಿಲ್ ಕಪೂರ್ ಅವರ ಸಿನಿಮಾ ಒಂದರಲ್ಲಿ ಡಬಲ್ ಮೀನಿಂಗ್ ಹಾಡು ಇತ್ತು. ಈ ಬಗ್ಗೆ ಅವರಿಗೆ ಈಗಲೂ ಬೇಸರ ಇದೆ. ಅತ್ಯಂತ ಸಿಟ್ಟು ತರಿಸಿದ ಹಾಡು ಇದು ಎಂದು ಅವರು ಪರಿಗಣಿಸಿದ್ದಾರೆ. ಈ ಮೊದಲ ‘ಕಾಫಿ ವಿತ್ ಕರಣ್’ ಶೋದಲ್ಲಿ ಹೇಳಿಕೊಂಡಿದ್ದಾರೆ.

‘ಖಡಾ ಹೇ..ಖಡಾ ಹೇ’ (ನಿಂತಿದೆ.. ನಿಂತಿದೆ) ಅನ್ನೋ ಹಾಡು 1994ರ ‘ಅಂದಾಜ್’ ಸಿನಿಮಾದ್ದು. ಈ ಸಿನಿಮಾದಲ್ಲಿ ಅನಿಲ್ ಕಪೂರ್, ಜೂಹಿ ಚಾವ್ಲಾ, ಕರೀಶ್ಮಾ ಕಪೂರ್ ಮೊದಲಾದವರು ನಟಿಸಿದ್ದರು. ಈ ಹಾಡಿನ ಬಗ್ಗೆ ಅನಿಲ್ ಕಪೂರ್ ಅವರಿಗೆ ಈಗಲೂ ಬೇಸರ ಇದೆ. ‘ಅತ್ಯಂತ ಇರಿಟೇಟ್ ಸಾಂಗ್ ಇದು’ ಎಂದು ಅನಿಲ್ ಕಪೂರ್ ಅವರು ಕರೆದಿದ್ದಾರೆ.

‘ಅತಿ ಹೆಚ್ಚು ಇರಿಟೇಷನ್ ಸಾಂಗ್ ಯಾವುದು’ ಎಂದು ಕರಣ್ ಜೋಹರ್ ಪ್ರಶ್ನೆ ಮಾಡಿದ್ದಾರೆ. ‘ನನ್ನದೇ ಸಿನಿಮಾದ ಹಾಡು. ಖಡಾ ಹೇ ಸಾಂಗ್. ಅತ್ಯಂತ ಕೆಟ್ಟ ಸಾಂಗ್ ಅದು. ನಾನು ಹಾಗೂ ಜೂಹಿ ಛಾವ್ಲಾ ಇಬ್ಬರೂ ನಿರ್ಮಾಪಕರ ಜೊತೆ ಜಗಳ ಆಡಿದೆವು. ಜೂಹಿ ಅತ್ತರು. ಸಿನಿಮಾದ ಶೂಟಿಂಗ್ ಕೂಡ ಬಹುತೇಕ ನಿಂತಿತ್ತು’ ಎಂದಿದ್ದರು ಅನಿಲ್ ಕಪೂರ್.

ಇದನ್ನೂ ಓದಿ:ಮೋದಿ ಪ್ರಮಾಣವಚನದಲ್ಲಿ ಭಾಗಿಯಾಗಲಿದ್ದಾರೆ ರಜನೀಕಾಂತ್, ಅನಿಲ್ ಕಪೂರ್

ಈ ಸಿನಿಮಾ ಅಂದಿನ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಅನೇಕರು ಈ ಹಾಡಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ ಈ ಹಾಡು ರಿಲೀಸ್ ಆಯಿತು. ಅನಿವಾರ್ಯವಾಗಿ ಅನಿಲ್ ಕಪೂರ್ ಹಾಗೂ ಜೂಹಿ ಒಟ್ಟಾಗಿ ಡ್ಯಾನ್ಸ್ ಮಾಡಿದರು. ಈ ಹಾಡು ಈಗಲೂ ಇನ್ಸ್ಟಾಗ್ರಾಮ್ನಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಈ ಹಾಡು ರಿಲೀಸ್ ಆಗಿ ಬರೋಬ್ಬರಿ 30 ವರ್ಷಗಳು ಕಳೆದಿವೆ.

ಅನಿಲ್ ಕಪೂರ್ ಅವರು ಈಗಲೂ ಕೆಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 3’ ಅನ್ನು ನಡೆಸಿಕೊಟ್ಟಿದ್ದರು. ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿ ಅವರು ಗಮನ ಸೆಳೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ