AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಬಿಗ್​ಬಾಸ್ ಸ್ಪರ್ಧಿ ಮೇಲೆ ಸಂಬಂಧಿಕರಿಂದ ಹಲ್ಲೆ, ದೂರು ಸ್ವೀಕರಿಸದೆ ಸೆಲ್ಫಿ ತೆಗೆದುಕೊಂಡ ಪೊಲೀಸ್ ಅಧಿಕಾರಿ

Rajasthan Shakira: ರಾಜಸ್ಥಾನದ ಶಕೀರಾ ಎಂದೇ ಖ್ಯಾತವಾಗಿರುವ ನೃತ್ಯಗಾರ್ತಿ, ಮಾಜಿ ಬಿಗ್​ಬಾಸ್ ಸ್ಪರ್ಧಿ ಗೋರಿ ನಗೋರಿ ಹಾಗೂ ಅವರ ತಂಡದ ಮೇಲೆ ಅವರ ಭಾವ ಹಾಗೂ ಅವರ ಗೆಳೆಯರು ಹಲ್ಲೆ ಮಾಡಿದ್ದಾರೆ. ವಿಡಿಯೋ ಹಂಚಿಕೊಂಡಿದ್ದಾರೆ ಗೋರಿ ನಗೋರಿ.

ಮಾಜಿ ಬಿಗ್​ಬಾಸ್ ಸ್ಪರ್ಧಿ ಮೇಲೆ ಸಂಬಂಧಿಕರಿಂದ ಹಲ್ಲೆ, ದೂರು ಸ್ವೀಕರಿಸದೆ ಸೆಲ್ಫಿ ತೆಗೆದುಕೊಂಡ ಪೊಲೀಸ್ ಅಧಿಕಾರಿ
ಗೋರಿ ನಗೋರಿ
ಮಂಜುನಾಥ ಸಿ.
|

Updated on: May 26, 2023 | 4:34 PM

Share

ರಾಜಸ್ಥಾನದ ಶಕೀರಾ (Rajasthan Shakira) ಎಂದೇ ಜನಪ್ರಿಯವಾಗಿರುವ ಜನಪ್ರಿಯ ನೃತ್ಯಗಾರ್ತಿ, ಮಾಜಿ ಬಿಗ್​ಬಾಸ್ (Bigg Boss) ಸ್ಪರ್ಧಿ ಗೋರಿ ನಗೋರಿ ಹಾಗೂ ಅವರ ತಂಡದ ಮೇಲೆ ಹಲ್ಲೆ ನಡೆದಿದೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಗೋರಿ ನಗೋರಿ (Gori Nagori), ತಮ್ಮ ಭಾವ ಹಾಗೂ ಅವನ ಗೆಳೆಯರು ತನ್ನ ಹಾಗೂ ತನ್ನ ತಂಡದ ಮೇಲೆ ನಿರ್ದಾಕ್ಷಿಣ್ಯವಾಗಿ ಹಲ್ಲೆ ಮಾಡಿದ್ದಾರೆ ಎಂದಿದ್ದಾರೆ. ಹಲ್ಲೆಯ ವಿಡಿಯೋವನ್ನು ಸಹ ಗೋರಿ ಹಂಚಿಕೊಂಡಿದ್ದು, ಗುಂಪೊಂದು ಚೇರುಗಳಿಂದ ಇಬ್ಬರ ಮೇಲೆ ಹಲ್ಲೆ ನಡೆಸುತ್ತಿರುವುದ ದೃಶ್ಯ ವಿಡಿಯೋದಲ್ಲಿದೆ. ಒಬ್ಬರಿಗೆ ತಲೆಗೆ ಗಂಭೀರ ಗಾಯವಾಗಿರುವುದು ಸಹ ವಿಡಿಯೋದಿಂದ ಗೊತ್ತಾಗುತ್ತಿದೆ.

ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿರುವ ಗೋರಿ, ನಾನು ಮೆರ್ಟಾ ನಗರದಲ್ಲಿ ವಾಸವಾಗಿದ್ದೀನಿ, ನನ್ನ ತಂದೆ ಅಥವಾ ಅಣ್ಣ ಇಲ್ಲ. ನಾನು ಸಹೋದರಿಯ ಮದುವೆ ಮಾಡಬೇಕಿತ್ತು. ಆಗ ನನ್ನ ಭಾವ, ನೀವು ಕಿಶನ್​ಘಡ್​ನಲ್ಲಿ ಮದುವೆ ಮಾಡು ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ ಎಂದ. ಸರಿ ಎಂದು ನಾನು ಕಿಶನ್​ಘಡ್​ನಲ್ಲಿ ಮದುವೆ ಮಾಡಲು ನಿಶ್ಚಯಿಸಿದೆ. ಆದರೆ ನನ್ನ ಭಾವ ಜಾವೆದ್ ಹುಸೇನ್ ಮೊದಲೇ ಎಲ್ಲ ಸಂಚುಗಳನ್ನು ರೂಪಿಸಿಕೊಂಡಿದ್ದ, ಮೇ 22 ರಂದು ಭಾವ ಜಾವೆದ್ ಹುಸೇನ್, ಅವನ ಸಹೋದರರು ಹಾಗೂ ಅವನ ಕೆಲವು ಗೆಳೆಯರು ಸೇರಿಕೊಂಡ ನನ್ನ ಹಾಗೂ ನನ್ನ ತಂಡದ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ” ಎಂದಿದ್ದಾರೆ.

ಬಳಿಕ ನಾನು ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಅವರು ಸರಿಯಾಗಿ ಸಹಕರಿಸಲಿಲ್ಲ, ನನ್ನನ್ನು ಬಹಳ ಹೊತ್ತು ಕಾಯುವಂತೆ ಮಾಡಿದರು ಕೊನೆಗೆ ಇದು ಮನೆಯ ವಿಷಯ ಮನೆಯಲ್ಲಿಯೇ ಸರಿ ಮಾಡಿಕೊಳ್ಳಿ ಎಂದರು. ದೂರು ಸ್ವೀಕರಿಸಿದೆ ಕೊನೆಯಲ್ಲಿ ನನ್ನೊಟ್ಟಿಗೆ ಸೆಲ್ಫಿ ತೆಗೆದುಕೊಂಡು ಕಳಿಸಿದರು” ಎಂದು ದೂರಿದ್ದಾರೆ ಗೋರಿ.

ನಾನು ಮತ್ತು ನನ್ನ ತಾಯಿ ಇಬ್ಬರೇ ಇದ್ದೇವೆ. ನನ್ನ ಪ್ರಾಣಕ್ಕೇನಾದರೂ ಆಗಿದ್ದರೆ ಯಾರು ಜವಾಭ್ದಾರಿ. ನನ್ನ ಭಾವ ಹಾಗೂ ಅವರ ಗೆಳೆಯರಿಂದ ನಮಗೆ ಅಪಾಯವಿದೆ, ನನ್ನ ತಾಯಿ, ನನ್ನ ತಂಡ, ನಂತರ ಈ ಜನರಿಗೆ ಏನಾದರೂ ಆದರೆ ಅದಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ ಎಂದಿರುವ ಗೋರಿ, ತಮ್ಮ ಹಾಗೂ ತಮ್ಮ ತಂಡದ ಮೇಲೆ ಹಲ್ಲೆ ನಡೆಸಿದವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ”ರಾಜಸ್ಥಾನದ ಜನರು ನನ್ನನ್ನು ಬೆಂಬಲಿಸುವಂತೆ ನಾನು ವಿನಂತಿಸುತ್ತೇನೆ. ರಾಜಸ್ಥಾನ ಸರ್ಕಾರವು ಸರ್ ಅಶೋಕ್ ಗೆಹ್ಲೋಟ್ ಜಿ ಮತ್ತು ಸಚಿನ್ ಪೈಲಟ್ ಅವರು ನನಗೆ ಸಹಾಯ ಮಾಡಬೇಕೆಂದು ನಾನು ಬಯಸುತ್ತೇನೆ. ಆದಷ್ಟು ಬೇಗ ನ್ಯಾಯ ದೊರಕಿಸಿ ಮತ್ತು ತಪ್ಪಿತಸ್ಥನನ್ನು ಶಿಕ್ಷಿಸಿ, ನನ್ನ ಜೀವಕ್ಕೆ ಅಪಾಯವಿದೆ, ಭದ್ರತೆ ಕಲ್ಪಿಸಿ ಎಂದು ಅವರು ಸರ್ಕಾರದ ಬಳಿ ಮನವಿ ಮಾಡಿದ್ದಾರೆ.

ಗೋರಿ, ರಾಜಸ್ಥಾನ, ಪಂಜಾಬ್ ಇನ್ನಿತರೆ ಉತ್ತರದ ರಾಜ್ಯಗಳಲ್ಲಿ ಬಹು ಜನಪ್ರಿಯ ನೃತ್ಯಗಾರ್ತಿ, ಅವರ ಫೋಟೊ ನಿಕಾಲ್ ಲೊ ಹಾಡು ಬಹಳ ಜನಪ್ರಿಯ. ಹಿಂದಿಯ ಬಿಗ್​ಬಾಸ್ ಸೀಸನ್ 16ರಲ್ಲಿ ಗೋರಿ ಭಾಗವಹಿಸಿದ್ದರು. ಶೋಗೆ ಅತಿಥಿಯಾಗಿ ಆಗಮಿಸಿದ್ದ ನಟಿ ಜಾನ್ಹವಿ ಕಪೂರ್, ತಾವು ಗೋರಿಯ ನೃತ್ಯದ ಫ್ಯಾನ್ ಎಂದು ಹೇಳಿಕೊಂಡಿದ್ದರು. ಸಲ್ಮಾನ್ ಖಾನ್ ಸಹ ಗೋರಿ ಜೊತೆಗೆ ನೃತ್ಯ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ