
‘ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸಂಸಾರ ಸರಿ ಇಲ್ಲ’-ಹೀಗೊಂದು ವಿಷಯ ಇತ್ತೀಚೆಗೆ ಬಲವಾಗಿ ಚರ್ಚೆ ಆಗಿತ್ತು. ಇದಕ್ಕೆ ಕಾರಣವೂ ಇದೆ. ರಣವೀರ್ ಸಿಂಗ್ ಅವರು ‘ಧುರಂಧರ್ 2’ ಯಶಸ್ಸಿನ ಅಲೆಯಲ್ಲಿ ತೇಲಿದರೂ ದೀಪಿಕಾ ಪಡುಕೋಣೆ ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹೊರಹಾಕಿರಲಿಲ್ಲ. ಇದು ಚರ್ಚೆಗೆ ಕಾರಣ ಆಗಿತ್ತು. ರಣವೀರ್-ದೀಪಿಕಾ ದೂರ ಆಗುತ್ತಾರೆ ಎಂದೆಲ್ಲ ಮಾತನಾಡಿಕೊಂಡಿದ್ದೇ ಬಂತು. ಆದರೆ, ಹಾಗಾಗಲೇ ಇಲ್ಲ. ದೀಪಿಕಾ (Deepika Padukone) ಎರಡನೇ ಬಾರಿಗೆ ತಾಯಿ ಆಗುತ್ತಿರುವುದಾಗಿ ಘೋಷಿಸಿದ್ದಾರೆ. ಇವರ ಸಂಬಂಧ ಸರಿ ಇಲ್ಲ ಎಂದವರಿಗೆಲ್ಲ ಭಾರೀ ಮುಖಭಂಗ ಆಗಿದೆ.
ದೀಪಿಕಾ ಎಡಪಂಕ್ತೀಯ ಸಿದ್ಧಾಂತಗಳನ್ನು ನಂಬುತ್ತಾರೆ. ಅದಕ್ಕೆ ಈ ಮೊದಲು ಅವರು ಜೆಎನ್ಯು ಯುನಿವರ್ಸಿಟಿಗೆ ತೆರಳಿ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಬೆಂಬಲ ಕೊಟ್ಟಿದ್ದರು. ರಣವೀರ್ ಸಿಂಗ್ ಅವರು ಇತ್ತೀಚೆಗೆ ಆರ್ಎಸ್ಎಸ್ ಕಚೇರಿಗೆ ತೆರಳಿದ್ದರು. ಈ ಘಟನೆಯಿಂದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಅವರ ಸಿದ್ಧಾಂತ ಬೇರೆ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿದೆ. ಆದರೆ, ಇದು ಅವರ ಸಂಸಾರದ ಮೇಲೆ ಯಾವುದೇ ಪರಿಣಾಮ ಬಿರಿಲ್ಲ.
ದೀಪಿಕಾ ಹಾಗೂ ರಣವೀರ್ ಅವರನ್ನು ಇಷ್ಟಪಡದ ಕೆಲವರು ಇತ್ತೀಚೆಗೆ ಬಾಯಿಗೆ ಬಂದಂತೆ ಮಾತನಾಡಿದ್ದರು. ‘ರಣವೀರ್-ದೀಪಿಕಾ ಸಿದ್ಧಾಂತ, ಆಲೋಚನೆಗಳು ಹೊಂದಿಕೆ ಆಗುತ್ತಿಲ್ಲ. ಇವರು ಬೇರೆ ಆಗುತ್ತಾರೆ’ ಎಂದೆಲ್ಲ ಕೆಲವರು ವದಂತಿ ಹಬ್ಬಿಸಿದ್ದು ಇದೆ. ಆದರೆ, ಇದು ಸುಳ್ಳು ಎಂಬುದು ಈಗ ಸ್ಪಷ್ಟವಾಗಿದೆ. ಈ ರೀತಿಯ ಸುದ್ದಿ ಹಬ್ಬಿಸಿದವರಿಗೆ ದೀಪಿಕಾ ದೊಡ್ಡ ಏಟು ಕೊಟ್ಟಿದ್ದಾರೆ. ಎಲ್ಲಾ ಸೆಲೆಬ್ರಿಟಿಗಳು ಎಲ್ಲಾ ವಿಷಯವನ್ನೂ ಹೇಳಿಕೊಳ್ಳುವುದಿಲ್ಲ. ಹಾಗಂದ ಮಾತ್ರಕ್ಕೆ ಅವರ ಜೀವನ ಸರಿ ಇಲ್ಲ ಎಂದು ನಿರ್ಧರಿಸಬಾರದು. ರಣವೀರ್-ದೀಪಿಕಾ ಪ್ರಕರಣ ಇದಕ್ಕೆ ಒಳ್ಳೆಯ ಉದಾಹರಣೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಮತ್ತೆ ಪ್ರೆಗ್ನೆಂಟ್; 2ನೇ ಮಗುವಿನ ನಿರೀಕ್ಷೆಯಲ್ಲಿ ರಣವೀರ್ ಸಿಂಗ್
ದೀಪಿಕಾ ಹಾಗೂ ರಣವೀರ್ ಅವರು ಭಾನುವಾರ ಪ್ರೆಗ್ನೆನ್ಸಿ ಘೋಷಣೆ ಮಾಡಿದರು. ಮಗಳು ದುವಾ ಬಳಿ ಪ್ರೆಗ್ನೆನ್ಸಿ ಕಿಟ್ ಹಿಡಿಸಿ ಈ ವಿಷಯ ಅಭಿಮಾನಿಗಳಿಗೆ ತಿಳಿಸಿದರು. ಈಗ ದೀಪಿಕಾ ಎರಡನೇ ಬಾರಿಗೆ ತಾಯಿ ಆಗುತ್ತಿದ್ದು ಎಲ್ಲರೂ ಶುಭ ಕೋರುತ್ತಿದ್ದಾರೆ. ಅವರು ಮೊದಲು ಒಪ್ಪಿಕೊಂಡ ಸಿನಿಮಾ ಕೆಲಸ ಪೂರ್ಣಗೊಳಿಸಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.