‘ಧುರಂಧರ್ 2’ ಟೀಸರ್ ನೋಡಿದವರಿಗೆ ಭಾರೀ ನಿರಾಸೆ; ರಿಲೀಸ್ ದಿನಾಂಕವೂ ರಿವೀಲ್

'ಧುರಂಧರ್ 2' ಟೀಸರ್ ನಿರೀಕ್ಷೆಗಳನ್ನು ತಲುಪುವಲ್ಲಿ ವಿಫಲವಾಗಿದೆ. ರಣವೀರ್ ಸಿಂಗ್ ನಟನೆಯ ಈ ಬಹುನಿರೀಕ್ಷಿತ ಸೀಕ್ವೆಲ್‌ನ ಟೀಸರ್, ಹಿಂದಿನ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನೇ ಮರುಬಳಕೆ ಮಾಡಿಕೊಂಡಿರುವುದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ. ಚಿತ್ರದ ಬಿಡುಗಡೆ ದಿನಾಂಕ ಬಹಿರಂಗವಾಗಿದ್ದರೂ, ಹೊಸತನದ ಕೊರತೆಯಿಂದಾಗಿ "ಟಾಕ್ಸಿಕ್" ಚಿತ್ರಕ್ಕೆ ಲಾಭವಾಗುವ ಸಾಧ್ಯತೆಯಿದೆ.

‘ಧುರಂಧರ್ 2’ ಟೀಸರ್ ನೋಡಿದವರಿಗೆ ಭಾರೀ ನಿರಾಸೆ; ರಿಲೀಸ್ ದಿನಾಂಕವೂ ರಿವೀಲ್
ಧುರಂಧರ್ 2

Updated on: Feb 03, 2026 | 12:42 PM

ರಣವೀರ್ ಸಿಂಗ್ ನಟನೆಯ, ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಸಿನಿಮಾ (Dhurandhar Movie) ಮಾಡಿದ ದಾಖಲೆಗಳು ಹಲವು. ಕಳೆದ ವರ್ಷ ಡಿಸೆಂಬರ್​​ನಲ್ಲಿ ‘ಧುರಂಧರ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರಕ್ಕೆ ಸೀಕ್ವೆಲ್ ಬರುತ್ತಿದೆ. ಸಾಮಾನ್ಯವಾಗಿ ಸೀಕ್ವೆಲ್ ಎಂದಾಗ ಒಂದಷ್ಟು ಸಮಯ ತೆಗೆದುಕೊಳ್ಳಲಾಗುತ್ತದೆ. ಆದರೆ ಆದಿತ್ಯ ಧಾರ್ ಹಾಗಲ್ಲ. ಕೇವಲ ಮೂರೇ ತಿಂಗಳಿಗೆ ಸೀಕ್ವೆಲ್ ತರುತ್ತಿದ್ದಾರೆ. ಮೊದಲೇ ಶೂಟಿಂಗ್ ಮುಗಿದಿರುವುದರಿಂದ, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಸಲಾಗುತ್ತಿದೆ. ಈಗ ಸಿನಿಮಾದ ರಿಲೀಸ್ ದಿನಾಂಕವನ್ನು ಟೀಸರ್ ಮೂಲಕ ಖಚಿತಪಡಿಸಿಯಾಗಿದೆ. ಆದರೆ, ಟೀಸರ್ ನೋಡಿದ ಅನೇಕರಿಗೆ ನಿರಾಸೆ ಆಗಿದೆ.

ರಣವೀರ್ ಸಿಂಗ್ ಅವರು ‘ಧುರಂಧರ್’ ಸಿನಿಮಾದಲ್ಲಿ ಸ್ಪೈ ಆಗಿ ಕಾಣಿಸಿಕೊಳ್ಳುತ್ತಾರೆ. ಪಾಕಿಸ್ತಾನಕ್ಕೆ ತೆರಳೋ ಈ ವ್ಯಕ್ತಿ ಅಲ್ಲಿ ಉಗ್ರಗಾಮಿಗಳ ಜೊತೆ ಬೆರೆತು ಭಾರತಕ್ಕೆ ಸಹಾಯ ಮಾಡುತ್ತಾರೆ. ಇದರಿಂದ ಸಾಕಷ್ಟು ಉಪಯೋಗ ಆಗುತ್ತದೆ. ‘ಧುರಂಧರ್’ ಕ್ಲೈಮ್ಯಾಕ್ಸ್ ಅಲ್ಲಿ ಎರಡನೇ ಪಾರ್ಟ್​ ಹೇಗಿರಲಿದೆ ಎಂಬುದನ್ನು ತೋರಿಸಿದ್ದರು. ಈಗ ಅದನ್ನೇ ಟೀಸರ್ ಎಂದು ಬಿಡಲಾಗಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: ‘ಟಾಕ್ಸಿಕ್​​’ಗೆ ಸೆಡ್ಡು ಹೊಡೆಯಲು ದೊಡ್ಡ ತಂತ್ರ ರೂಪಿಸಿದ ‘ಧುರಂಧರ್’ ನಿರ್ದೇಶಕ

‘ಧುರಂಧರ್ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಸೃಷ್ಟಿಸಿದೆ. ಆ ನಿರೀಕ್ಷೆ ತಲುಪಬೇಕು ಎಂದರೆ ಅದಕ್ಕೆ ತಕ್ಕಂತೆ ಟೀಸರ್ ಬಿಡುಗಡೆ ಮಾಡಬೇಕು. ಆದರೆ, ಹಳೆಯ ವಿಷಯವನ್ನೇ ಮತ್ತೆ ತೋರಿಸಿದರೆ ಸಹಜವಾಗಿಯೇ ಬೇಸರ ಆಗಿಯೇ ಆಗುತ್ತದೆ. ಕನ್ನಡ ಟೀಸರ್ ಕೊನೆಯಲ್ಲಿ, ‘ಇದು ಹೊಸ ಭಾರತ, ಇದು ಮನೆಯ ಒಳಗೆ ನುಗ್ಗಿ ಹೊಡೆಯುತ್ತದೆ, ಕೊಲ್ಲುತ್ತದೆ’ ಎಂಬ ಸಾಲುಗಳು ಇವೆ. ಇದು ಸರಿ ಹೊಂದುತ್ತಿಲ್ಲ. ಈ ಬೆಳವಣಿಗೆಯಿಂದ ‘ಟಾಕ್ಸಿಕ್’ ಚಿತ್ರಕ್ಕೆ ಲಾಭ ಆಗೋ ಸಾಧ್ಯತೆ ಹೆಚ್ಚು.

‘ಧುರಂಧರ್’ ಸಿನಿಮಾದಲ್ಲಿ ರಣವೀರ್ ಅವರು ಹಮ್ಜಾ ಅಲಿ ಮಜಾರಿ ಪಾತ್ರ ಮಾಡಿದ್ದಾರೆ. ಜಸ್ಕಿರತ್ ಸಿಂಗ್ ರಂಗಿ ಹೇಗೆ ಹಮ್ಜಾ ಆದರು ಎಂಬ ಜರ್ನಿಯನ್ನು ‘ಧುರಂಧರ್ 2’ ಸಿನಿಮಾದಲ್ಲಿ ಹೇಳಲಾಗುತ್ತಿದೆ ಎನ್ನಲಾಗಿದೆ. ರಿಲೀಸ್​​ಗೆ ಕೆಲವು ದಿನ ಮೊದಲು ‘ಧುರಂಧರ್ 2’ ಟ್ರೇಲರ್ ಬಿಡುಗಡೆ ಮಾಡಲು ತಂಡ ನಿರ್ಧರಿಸಿದೆ. ಆಗ ಇನ್ನೊಂದಷ್ಟು ಹೊಸ ವಿಷಯಗಳನ್ನು ನಿರೀಕ್ಷಿಸಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us