AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಲಿಗೆ ಭಾರಿಸಿದ್ದ ಧರ್ಮೆಂದ್ರ, ಹೆದರಿ ಸೆಟ್ ಬಿಟ್ಟು ಹೋಗಿದ್ದ ರಜನೀಕಾಂತ್

Rajinikanth-Dharmendra: ಬಾಲಿವುಡ್​ನ ಸ್ಟಾರ್ ನಟರಾಗಿ ದಶಕಗಳ ಕಾಲ ಮಿಂಚಿದ ನಟ ಧರ್ಮೇಂದ್ರ ಇತ್ತೀಚೆಗಷ್ಟೆ ಅಗಲಿದ್ದಾರೆ. ಅವರು ಬಿಟ್ಟು ಹೋಗಿರುವ ನೆನಪುಗಳು, ಸಿನಿಮಾಗಳು ಅಪಾರ. ಇದೀಗ ದಕ್ಷಿಣದ ಖ್ಯಾತ ನಟಿಯೊಬ್ಬರು ಧರ್ಮೇಂದ್ರ ಹಾಗೂ ರಜನೀಕಾಂತ್ ನಡುವೆ ನಡೆದಿದ್ದ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ. ಧರ್ಮೇಂದ್ರ ಮಾಡಿದ ಕೆಲಸಕ್ಕೆ ಹೆದರಿ ಸೆಟ್ ಬಿಟ್ಟು ಹೋಗಿದ್ದರಂತೆ ರಜನೀಕಾಂತ್.

ಹುಲಿಗೆ ಭಾರಿಸಿದ್ದ ಧರ್ಮೆಂದ್ರ, ಹೆದರಿ ಸೆಟ್ ಬಿಟ್ಟು ಹೋಗಿದ್ದ ರಜನೀಕಾಂತ್
Rajinikanth Dharmendra
ಮಂಜುನಾಥ ಸಿ.
|

Updated on: Nov 29, 2025 | 5:02 PM

Share

ಧರ್ಮೇಂದ್ರ, ಬಾಲಿವುಡ್​ನ (Bollywood) ಸ್ಟಾರ್ ನಟ. ಸಿನಿಮಾಗಳಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ಬಣ್ಣದ ಬದುಕು ಬದುಕಿದವರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮಗೆ ಇಷ್ಟ ಬಂದಿದ್ದನ್ನು ಮಾಡುತ್ತಾ ಬದುಕಿದ್ದವರು ಧರ್ಮೇಂದ್ರ. ಸ್ಟಾರ್ ಆಗಿದ್ದ ಸಮಯದಲ್ಲಂತೂ ಅವರ ಜಲ್ವಾ ಬಲು ಜೋರಾಗಿತ್ತು. ಬಾಲಿವುಡ್​ನಲ್ಲಿ ಮಾತ್ರವೇ ಅಲ್ಲದೆ ಹಲವು ಚಿತ್ರರಂಗದಲ್ಲಿ ಅವರಿಗೆ ಗೆಳೆಯರಿದ್ದರು. ರಜನೀಕಾಂತ್ ಸಹ ಧರ್ಮೇಂದ್ರ ಅವರಿಗೆ ಗೆಳೆಯರೇ ಆಗಿದ್ದರು. ಆದರೆ ಒಮ್ಮೆ ಧರ್ಮೇಂದ್ರ ಮಾಡಿದ ಕೆಲಸಕ್ಕೆ ಹೆದರಿ ಸೆಟ್​ ಬಿಟ್ಟು ಹೋಗಿಬಿಟ್ಟಿದ್ದರು ರಜನೀಕಾಂತ್.

ರಾಧಿಕಾ ಶರತ್​​ಕುಮಾರ್ ತಮಿಳು ಚಿತ್ರರಂಗದ ಖ್ಯಾತ ನಟಿ. ರಜನೀಕಾಂತ್ ಸೇರಿದಂತೆ ಹಲವು ಸ್ಟಾರ್ ನಟರುಗಳೊಡನೆ ರಾಧಿಕಾ ನಟಿಸಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಧರ್ಮೇಂದ್ರ ಮತ್ತು ರಜನೀಕಾಂತ್ ಕುರಿತಾಗಿ ಅಪರೂಪದ ಘಟನೆಯೊಂದನ್ನು ಹಂಚಿಕೊಂಡಿದ್ದರು.

ರಜನೀಕಾಂತ್ ಮತ್ತು ರಾಧಿಕಾ ಶರತ್​​ಕುಮಾರ್ ಅವರು ತಮಿಳು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದರಂತೆ. ಸ್ಟುಡಿಯೋ ಒಂದರಲ್ಲಿ ಸಿನಿಮಾದ ಶೂಟಿಂಗ್ ನಡೆದಿತ್ತಂತೆ. ಅದೇ ಸ್ಟುಡಿಯೋದ ಪಕ್ಕದ ಸೆಟ್​​ನಲ್ಲಿ ಧರ್ಮೇಂದ್ರ ಅವರ ಸಿನಿಮಾದ ಶೂಟಿಂಗ್ ನಡೆದಿತ್ತಂತೆ. ರಾಧಿಕಾ ಅವರು ಹೋಗಿ ಧರ್ಮೇಂದ್ರ ಅವರನ್ನು ಮಾತನಾಡಿಸಿ, ತಾವು ಪಕ್ಕದ ಸೆಟ್​ನಲ್ಲಿ ಶೂಟಿಂಗ್ ಮಾಡುತ್ತಿರುವುದಾಗಿಯೂ, ರಜನೀಕಾಂತ್ ಸಹ ನಟಿಸುತ್ತಿರುವುದಾಗಿಯೂ ಹೇಳಿ ಬಂದರಂತೆ.

ಇದನ್ನೂ ಓದಿ:ಚಿರಂಜೀವಿಗೆ ನೋ ಹೇಳಿ ಈಗ ರಜನೀಕಾಂತ್​​ಗೆ ಎಸ್ ಎಂದ ಸಾಯಿ ಪಲ್ಲವಿ

ರಜನೀಕಾಂತ್ ಅವರು ಅಂದು ಶೂಟಿಂಗ್ ಮಾಡಲು ಅಷ್ಟು ಉತ್ಸುಕರಾಗಿರಲಿಲ್ಲವಂತೆ ಏಕೆಂದರೆ ಅವರು ನಿಜವಾದ ಹುಲಿಯೊಂದಿಗೆ ಫೈಟ್ ಮಾಡಬೇಕಿತ್ತಂತೆ. ರಾಧಿಕಾರನ್ನು ವಿಲನ್​​ಗಳು ಮರಕ್ಕ ಕಟ್ಟಿ ಹಾಕಿರುವ ಸೀನ್, ರಾಧಿಕಾಗೆ ಹುಲಿ ಕಾವಲು, ರಜನೀಕಾಂತ್ ಹುಲಿಯೊಟ್ಟಿಗೆ ಫೈಟ್ ಮಾಡಿ ರಾಧಿಕಾರನ್ನು ಬಿಡಿಸಿಕೊಳ್ಳಬೇಕು, ಇದು ಸೀನ್. ಚಿತ್ರೀಕರಣ ನಡೆಯುವ ವೇಳೆ ಧರ್ಮೇಂದ್ರ ಸೆಟ್​​ಗೆ ಎಂಟ್ರಿ ಕೊಟ್ಟರಂತೆ. ಬಂದವರೇ ಎಲ್ಲರಿಗೂ ತಮ್ಮದೇ ಶೈಲಿಯಲ್ಲಿ ಹಾಯ್ ಹೇಳಿ, ಕೆಲವರನ್ನು ಗದರಿ, ಕೊನೆಗೆ ಹುಲಿಯ ಬಳಿ ಬಂದವರೇ ಹುಲಿಯ ಮುಖಕ್ಕೆ ಸರಿಯಾಗಿ ಭಾರಿಸಿಬಿಟ್ಟರಂತೆ.

ಧರ್ಮೇಂದ್ರ ಅವರ ಅಗಲವಾದ ಕೈಯಿಂದ ಏಟು ಬಿದ್ದೊಡನೆ ಹುಲಿ, ಬೆಕ್ಕಿನಂತಾಗಿಬಿಟ್ಟಿತಂತೆ. ಆದರೆ ಅದಾದ ಕೆಲವು ಹೊತ್ತಿನಲ್ಲೇ ರಜನೀಕಾಂತ್ ಸೆಟ್​ ಬಿಟ್ಟು ಕಾರಿನಲ್ಲಿ ಹೋಗಿ ಬಿಟ್ಟರಂತೆ. ಅವರು ಎಷ್ಟು ಹೊತ್ತಾದರೂ ಬಾರದ್ದು ನೋಡಿ ನಿರ್ದೇಶಕರು ಹೋಟೆಲ್​​ ರೂಂಗೆ ಕರೆ ಮಾಡಿದರೆ ರಜನೀಕಾಂತ್ ಸಿಕ್ಕರಂತೆ. ಏಕೆ ಹೋಗಿಬಿಟ್ಟಿರಿ, ಎಂದರೆ, ‘ಧರ್ಮೇಂದ್ರ ಆ ಹುಲಿಗೆ ಹೊಡೆದು ಹೋಗಿಬಿಟ್ಟರು. ಈಗ ಅದರೊಂದಿಗೆ ಫೈಟ್ ಮಾಡಬೇಕಿರುವುದು ನಾನು. ಹೊಡೆತ ತಿಂದ ಹುಲಿ ನನಗೆ ಏನಾದರೂ ಮಾಡಿದರೆ, ಆ ಹುಲಿ ಸ್ವಲ್ಪ ಸಮಾಧಾನ ಆಗಲಿ ಆ ಮೇಲೆ ನಾನು ಬರುತ್ತೇನೆ’ ಎಂದರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ