AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರಾನ್ ಓದಿ ಇಸ್ಲಾಂ ಸ್ವೀಕರಿಸಿ ಎಂದು ಸಲಹೆ ನೀಡಿದ ವ್ಯಕ್ತಿಗೆ ಖಡಕ್ ಉತ್ತರ ನೀಡಿದ ನಟಿ

ಪವಿತ್ರಾ ಪುನಿಯಾ ಅವರು ತಮ್ಮ ಧರ್ಮವನ್ನು ಬದಲಾಯಿಸಲು ಒತ್ತಡ ಹೇರಲ್ಪಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಎಜಾಜ್ ಖಾನ್ ಜೊತೆಗಿನ ಸಂಬಂಧದ ನಂತರ, ಪವಿತ್ರಾ ಅವರಿಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಕೆಲವರು ಸಲಹೆ ನೀಡಿದ್ದಾರೆ. ಆದರೆ ಪವಿತ್ರಾ ಅವರು ತಮ್ಮ ಸನಾತನ ಧರ್ಮದಲ್ಲಿ ಅಚಲವಾಗಿ ನಿಂತಿದ್ದಾರೆ ಮತ್ತು ಯಾರೂ ತಮ್ಮ ಧರ್ಮವನ್ನು ಬದಲಾಯಿಸಲು ಒತ್ತಾಯಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕುರಾನ್ ಓದಿ ಇಸ್ಲಾಂ ಸ್ವೀಕರಿಸಿ ಎಂದು ಸಲಹೆ ನೀಡಿದ ವ್ಯಕ್ತಿಗೆ ಖಡಕ್ ಉತ್ತರ ನೀಡಿದ ನಟಿ
ಪವಿತ್ರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Dec 28, 2024 | 8:37 AM

‘ಹಿಂದಿ ಬಿಗ್ ಬಾಸ್’ ಖ್ಯಾತಿಯ ನಟಿ ಪವಿತ್ರಾ ಪುನಿಯಾ ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ಬದುಕಿನಿಂದ ಸುದ್ದಿಯಲ್ಲಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿದ್ದಾಗ ನಟ ಎಜಾಜ್ ಖಾನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ ಲಿವ್ ಇನ್ ರಿಲೇಶನ್ ಶಿಪ್​ನಲ್ಲಿ ಬದುಕಲು ಆರಂಭಿಸಿದರು. ಆದರೆ ಅವರು ಕೆಲವು ತಿಂಗಳ ಹಿಂದೆ ಇವರು ಬೇರ್ಪಟ್ಟರು. ಇಜಾಜ್ ಪವಿತ್ರಾಳನ್ನು ಮತಾಂತರ ಮಾಡುವಂತೆ ಒತ್ತಡ ಹೇರಿದ, ಹೀಗಾಗಿ ಆಕೆ ದೂರಾದ ಮಾತು ಕೇಳಿಬಂದಿತ್ತು. ಆದರೆ ನಾನು ಮತಾಂತರಗೊಳ್ಳುವುದಿಲ್ಲ ಎಂದು ಸಂಬಂಧದ ಆರಂಭದಲ್ಲೇ ಎಜಾಜ್​ಗೆ ಸ್ಪಷ್ಟಪಡಿಸಿದ್ದೆ ಎಂದು ಪವಿತ್ರಾ ವಿವರಿಸಿದ್ದಾರೆ. ಇದಾದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಪವಿತ್ರಾ ಅವರಿಗೆ ಕುರಾನ್ ಓದಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಸಲಹೆ ನೀಡಿದ್ದಾರೆ. ಪವಿತ್ರಾ ನೀಡಿದ ಉತ್ತರ ಸದ್ಯ ಚರ್ಚೆಯಲ್ಲಿದೆ.

ಪವಿತ್ರಾ ಅವರು ಇತ್ತೀಚೆಗೆ ದೇವಸ್ಥಾನಕ್ಕೆ ತೆರಳಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದರು. ಇದಕ್ಕೆ ವ್ಯಕ್ತಿಯೋರ್ವ ಕಾಮೆಂಟ್ ಮಾಡಿದ್ದಾರೆ. ‘ಪವಿತ್ರಾ.. ಮೂರ್ತಿ ಪೂಜೆ ಮಾಡುವುದನ್ನು ನಿಲ್ಲಿಸಿ ಎಂದು ನಿನಗೆ ನನ್ನ ಸಲಹೆ. ನೀವು ನಮ್ಮ ಸಹೋದರ ಎಜಾಜ್ ಖಾನ್ ಅವರನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿದು ತುಂಬಾ ದುಃಖವಾಯಿತು. ನೀವು ನಿಮ್ಮ ಧರ್ಮವನ್ನು ಬದಲಾಯಿಸದ ಹೊರತು, ಅವರು ನಿಮ್ಮನ್ನು ಮದುವೆಯಾಗಲು ಸಾಧ್ಯವಿಲ್ಲ. ಇದು ಇಸ್ಲಾಮಿನ ನಿಯಮ. ಹಾಗಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ನಾನು ನಿಮ್ಮನ್ನು ಈಗ ಆಹ್ವಾನಿಸುತ್ತೇನೆ. ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಎಲ್ಲರಿಗೂ ಇಸ್ಲಾಂ ಧರ್ಮ ಸತ್ಯ ಎಂದು ತಿಳಿದಿದೆ. ಅವರ ಮನೆಯಲ್ಲಿ ಕುರಾನ್ ಇದೆ. ಕುರಾನ್ ಓದಲು ಪ್ರಾರಂಭಿಸುವುದು ನನ್ನ ಸಲಹೆ. ನಾನು ನಿಮಗೆ ಅನುವಾದಿಸಿದ ಕುರಾನ್ ಲಿಂಕ್ ಅನ್ನು ಕಳುಹಿಸಿದ್ದೇನೆ. ನಮ್ಮ ನಂಬಿಕೆ ಅಲ್ಲಾನಲ್ಲಿದೆ. ಅವರು ಮಾನವಕುಲಕ್ಕೆ ಮಾರ್ಗದರ್ಶನ ನೀಡಲು ಅಂತಿಮ ಪ್ರವಾದಿ ಮುಹಮ್ಮದ್ ಅವರನ್ನು ಕಳುಹಿಸಿದರು. ಇಸ್ಲಾಂ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮವಾಗಿದೆ. ಅಮೆರಿಕವೊಂದರಲ್ಲೇ ಪ್ರತಿ ವರ್ಷ 25 ಸಾವಿರ ಮಂದಿ ಇಸ್ಲಾಂಗೆ ಮತಾಂತರವಾಗುತ್ತಿದ್ದಾರೆ. ಪಶ್ಚಿಮದಲ್ಲಿ, ಮತಾಂತರಗೊಂಡವರಲ್ಲಿ 75 ಪ್ರತಿಶತ ಮಹಿಳೆಯರು’ ಎಂದು ವ್ಯಕ್ತಿಯೋರ್ವ ಬರೆದಿದ್ದ.

ಈ ಕಾಮೆಂಟ್‌ಗೆ ಪವಿತ್ರಾ ಪ್ರತಿಕ್ರಿಯಿಸಿದ್ದಾರೆ. ‘ಮಗನೇ, ನನಗೆ ಕಲಿಸಬೇಡ. ಸನಾತನ ಧರ್ಮ ಎಂದರೇನು ಎಂಬುದನ್ನು ಚೆನ್ನಾಗಿ ವಿವರಿಸಲು ನನಗೆ ಸಾಕಷ್ಟು ಸಮಯವಿದೆ’ ಎಂದು ಅವರು ಉತ್ತರಿಸಿದ್ದಾರೆ. ಸದ್ಯ ಈ ವಿಚಾರ ಚರ್ಚೆಯಲ್ಲಿದೆ.

ಇದನ್ನೂ ಓದಿ: ಕಾಲಿವುಡ್-ಟಾಲಿವುಡ್ ಮಂದಿಗೂ ಇಷ್ಟವಾಯ್ತು ‘ಮ್ಯಾಕ್ಸ್’; ಶುಕ್ರವಾರ ಬಂಪರ್ ಕಲೆಕ್ಷನ್

‘ನಾನು ನನ್ನ ಧರ್ಮವನ್ನು ಎಂದಿಗೂ ಬದಲಾಯಿಸುವುದಿಲ್ಲ ಎಂದು ಎಜಾಜ್‌ಗೆ ಬಹಳ ಹಿಂದೆಯೇ ಹೇಳಿದ್ದೆ. ನನ್ನ ಪ್ರಕಾರ ಸ್ವಂತ ಧರ್ಮಕ್ಕೆ ಸೇರದ ವ್ಯಕ್ತಿ ಯಾರಿಗೂ ಸೇರಿಲ್ಲ. ಇನ್ನೊಬ್ಬರ ಧರ್ಮವನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ. ತನ್ನ ಧರ್ಮದಲ್ಲಿ ಪ್ರಾಮಾಣಿಕವಾಗಿಲ್ಲದವನು ನಿಮ್ಮೊಂದಿಗೆ ಹೇಗೆ ಪ್ರಾಮಾಣಿಕನಾಗಿರುತ್ತಾನೆ? ನೀವು ಮದುವೆಯಾಗಲು ಬಯಸಿದರೆ ಅದಕ್ಕೆ ಹೋಗಿ, ಆದರೆ ಧರ್ಮವನ್ನು ಬದಲಾಯಿಸಲು ಯಾರೂ ಏನನ್ನೂ ಹೇಳಬಾರದು’ ಎಂದು ಅವರು ಈ ಮೊದಲು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:50 am, Sat, 28 December 24

ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ