ಗ್ಲಾಮರ್ ಲೋಕ ಬಿಟ್ಟು ಅಧ್ಯಾತ್ಮದ ಕಡೆ ಆರ್ಷಿತರಾದ ಸೆಲೆಬ್ರಿಟಿಗಳು ಇವರು
ಕನ್ನಡ ಚಲನಚಿತ್ರ ಮತ್ತು ಬಾಲಿವುಡ್ನ ಅನೇಕ ನಟ-ನಟಿಯರು ಖ್ಯಾತಿ ಮತ್ತು ಸಂಪತ್ತನ್ನು ತ್ಯಜಿಸಿ ಆಧ್ಯಾತ್ಮಿಕತೆಯತ್ತ ಹೊರಳಿದ್ದಾರೆ. ಮಮತಾ ಕುಲಕರ್ಣಿ, ವಿನೋದ್ ಖನ್ನಾ, ಮಹೇಶ್ ಭಟ್ ಮುಂತಾದವರು ಈ ಪಟ್ಟಿಯಲ್ಲಿದ್ದಾರೆ. ಕೆಲವರು ತಮ್ಮ ವೃತ್ತಿಜೀವನದ ಏರಿಳಿತಗಳ ನಂತರ ಈ ನಿರ್ಧಾರ ತೆಗೆದುಕೊಂಡರೆ, ಇನ್ನು ಕೆಲವರು ಯಶಸ್ಸಿನ ನಂತರವೂ ಆಧ್ಯಾತ್ಮಿಕತೆಯನ್ನು ಆರಿಸಿಕೊಂಡಿದ್ದಾರೆ.

ಗ್ಲಾಮರ್ ಉದ್ಯಮದಲ್ಲಿ ಪ್ರತಿಯೊಬ್ಬ ಕಲಾವಿದನು ದೊಡ್ಡ ಸ್ಟಾರ್ ಆಗಬೇಕೆಂದು ಕನಸು ಕಾಣುತ್ತಾನೆ. ಅನೇಕರು ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಬರುತ್ತಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ಯಶಸ್ವಿಯಾಗುತ್ತಾರೆ. ಇಂಡಸ್ಟ್ರಿಯಲ್ಲಿ ಕಲಾವಿದರಿದ್ದಾರೆ, ತಮ್ಮ ಪರಿಶ್ರಮದಿಂದ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡವರಿದ್ದಾರೆ. ಮತ್ತೊಂದೆಡೆ ನಿರೀಕ್ಷಿತ ಯಶಸ್ಸು ಸಿಗದೆ ಬೇರೆ ಕ್ಷೇತ್ರಗಳತ್ತ ಮುಖ ಮಾಡಿದವರೂ ಇದ್ದಾರೆ. ಹಣ ಮತ್ತು ಖ್ಯಾತಿ ಪಡೆದ ನಂತರ ಈ ಕಲಾವಿದರು ಆಧ್ಯಾತ್ಮದತ್ತ ಮುಖ ಮಾಡಿದವರೂ ಇದ್ದಾರೆ. ಈ ಪಟ್ಟಿಯಲ್ಲಿ ಇತ್ತೀಚಿನ ಹೆಸರು ನಟಿ ಮಮತಾ ಕುಲಕರ್ಣಿ. ಅವರು ಉತ್ತರ ಪ್ರದೇಶದ ಪ್ರಯಾಗದ ಮಹಾಕುಂಭದಲ್ಲಿ ಸನ್ಯಾಸ ಸ್ವೀಕರಿಸಿದರು ಮತ್ತು ಕಿನ್ನರ ಅಖಾಡದ ಮಹಾಮಂಡಲೇಶ್ವರರಾದರು. ಅವರನ್ನು ಈಗ ಉಚ್ಛಾಟನೆ ಮಾಡಲಾಗಿದೆ. ಮಮತಾ ಅವರಿಗಿಂತ ಮೊದಲು ಅನೇಕ ಕಲಾವಿದರು ಆಧ್ಯಾತ್ಮಿಕತೆಯ ಹಾದಿಯನ್ನು ಆರಿಸಿಕೊಂಡಿದ್ದಾರೆ.
ಮಮತಾ ಅವರು ಕೆಲವೊಮ್ಮೆ ಮ್ಯಾಗಜಿನ್ಗಳಲ್ಲಿ ಬೋಲ್ಡ್ ಫೋಟೋಶೂಟ್ಗಳಿಂದ ಮತ್ತು ಕೆಲವೊಮ್ಮೆ ಭೂಗತ ಜಗತ್ತಿನೊಂದಿಗಿನ ಸಂಪರ್ಕದಿಂದಾಗಿ ಸುದ್ದಿ ಆಗಿದ್ದು ಇದೆ. ಆದರೆ ಈಗ ಮಾಯಾನಗರಿ ತೊರೆದು ಸಾಧು-ಸಂತರ ಲೋಕಕ್ಕೆ ಹೋಗಿದ್ದಾರೆ. ಆದರೆ, ಅಲ್ಲಿ ಆರಂಭದಲ್ಲೇ ಹಿನ್ನಡೆ ಆಗಿದೆ. ಅವರು ಅಖಾಡದಿಂದ ಉಚ್ಛಾಟನೆಗೊಂಡಿದ್ದಾರೆ.
ವಿನೋದ್ ಖನ್ನಾ, ಮಹೇಶ್ ಭಟ್, ವಿಜಯ್ ಆನಂದ್
ಹಿಂದಿ ಚಿತ್ರರಂಗದ ಪ್ರಸಿದ್ಧ ನಟರಾದ ವಿನೋದ್ ಖನ್ನಾ ಮತ್ತು ನಿರ್ಮಾಪಕ-ನಿರ್ದೇಶಕರಾದ ಮಹೇಶ್ ಭಟ್, ವಿಜಯ್ ಆನಂದ್ ಅವರು ಓಶೋ ಅಂದರೆ ಆಚಾರ್ಯ ರಜನೀಶ್ ಅವರ ಆಲೋಚನೆಗಳಿಂದ ಬಹಳ ಪ್ರಭಾವಿತರಾಗಿದ್ದರು.
ನಟ ಪ್ರೇಮನಾಥ್ ಅವರ ವೃತ್ತಿಜೀವನವು ಅವನತಿಗೆ ಬಂದಾಗ, ಅವರ ಚಿತ್ರಗಳು ವಿಫಲವಾದಾಗ, ಅವರು ಹತಾಶೆಯಿಂದ ಸಾಧುವಾದರು. ಹಲವು ವರ್ಷಗಳ ಕಾಲ ಗ್ಲಾಮರ್ ಲೋಕದಿಂದ ದೂರವೇ ಉಳಿದಿದ್ದರು. ಆದರೆ ಅವರಿಗೆ ಅಲ್ಲಿ ಹೆಚ್ಚು ಕಾಲ ಇರಲು ಸಾಧ್ಯವಾಗಲಿಲ್ಲ. ಚಿತ್ರರಂಗಕ್ಕೆ ಮರಳಿದ ನಂತರ ಅವರು ‘ಬಾದಲ್’, ‘ಬಾಬಿ’, ‘ಜಾನಿ ಮೇರಾ ನಾಮ್’ ಮತ್ತು ‘ಜಾನಿ ದುಷ್ಮನ್’ ಚಿತ್ರಗಳಲ್ಲಿ ನಟಿಸಿದ್ದಾರೆ.
ಅರವತ್ತು ಮತ್ತು ಎಪ್ಪತ್ತರ ದಶಕದ ಹಿಂದಿ ಮತ್ತು ಬೆಂಗಾಲಿ ಚಲನಚಿತ್ರಗಳಲ್ಲಿ ಜನಪ್ರಿಯ ನಟಿ ಸುಚಿತ್ರಾ ಸೇನ್ ಸುಮಾರು 25 ವರ್ಷಗಳ ವೃತ್ತಿಜೀವನದ ನಂತರ, ಅವರು 1978 ರಲ್ಲಿ ಚಲನಚಿತ್ರಗಳಿಂದ ನಿವೃತ್ತರಾದರು ಮತ್ತು ಆಧ್ಯಾತ್ಮಿಕತೆಯತ್ತ ಹೊರಳಲು ನಿರ್ಧರಿಸಿದರು.
ಇದನ್ನೂ ಓದಿ: ಸನ್ಯಾಸಿನಿಯಾದ ಖ್ಯಾತ ಬಾಲಿವುಡ್ ನಟಿ ಮಮತಾ, ಇಲ್ಲಿದೆ ವಿಡಿಯೋ
ಬರ್ಖಾ ಮದನ್ ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯ ರೂಪದರ್ಶಿ, ಸೌಂದರ್ಯ ರಾಣಿ ಮತ್ತು ನಟಿ. ಆದರೆ ಅವಳು ಬೌದ್ಧ ಸನ್ಯಾಸಿಯಾಗಲು ಕಲಾ ಪ್ರಪಂಚವನ್ನು ತೊರೆದರು. ಬೌದ್ಧ ಸನ್ಯಾಸಿಯಾದ ನಂತರ, ಅವಳು ತನ್ನ ಹೆಸರನ್ನು ಸಹ ಬದಲಾಯಿಸಿಕೊಂಡರು. ನಟಿ ಅನಘಾ ಭೋಸಲೆ ಕೆಲವು ವರ್ಷಗಳ ಹಿಂದೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಅವರು ನಂತರ ಬದಲಾದರು.
ಸೋಫಿಯಾ ಹಯಾತ್
ಖ್ಯಾತ ರಿಯಾಲಿಟಿ ಶೋ ತಾರೆ ಸೋಫಿಯಾ ಹಯಾತ್ ಕೂಡ ಗ್ಲಾಮರ್ ಜಗತ್ತನ್ನು ತೊರೆದು ಸನ್ಯಾಸಿನಿಯಾದರು. ಅದರ ನಂತರ, ಆಕೆಯ ವ್ಯಕ್ತಿತ್ವದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ.
‘ಆಶಿಕಿ’ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ನಟಿ ಅನು ಅಗರ್ವಾಲ್ ಅಧ್ಯಾತ್ಮದ ಹಾದಿ ಹಿಡಿದಾಗ ಎಲ್ಲರಿಗೂ ಶಾಕ್ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.