AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಖಾನ್​ಗಳ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ, ಆದರೂ ಅವರ ಸಿನಿಮಾದಲ್ಲಿ ನಟಿಸಲ್ಲ’; ಕಂಗನಾ

ನಟಿಯಾಗಿ ಯಶಸ್ವಿ ಆದ ಬಳಿಕ ಕಂಗನಾ ರಣಾವತ್​ ಅವರು ರಾಜಕೀಯದಲ್ಲೂ ಗೆಲುವು ಕಂಡಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಅವರು ಸಂಸದೆ ಆಗಿದ್ದು, ಸಂಪೂರ್ಣ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರು ಈಗ ತಮ್ಮ ಸಿನಿಮಾ ಆಯ್ಕೆಗಳ ಬಗ್ಗೆ ಮಾತನಾಡಿದ್ದಾರೆ.

‘ಖಾನ್​ಗಳ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ, ಆದರೂ ಅವರ ಸಿನಿಮಾದಲ್ಲಿ ನಟಿಸಲ್ಲ’; ಕಂಗನಾ
ಕಂಗನಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 19, 2024 | 6:33 AM

ನಟಿ ಕಂಗನಾ ರಣಾವತ್ ಅವರು ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಅವರ ಸಿನಿಮಾಗಳ ಆಯ್ಕೆ ಕೂಡ ಭಿನ್ನವಾಗಿಯೇ ಇರುತ್ತವೆ. ಅವರು ಈವರೆಗೆ ಬಾಲಿವುಡ್​ನ ಪ್ರಮುಖ ಹೀರೋಗಳ ಜೊತೆ ನಟಿಸಿಲ್ಲ. ಅವರ ಮೇಲೆ ಏನಾದರೂ ದ್ವೇಷವೇ ಎನ್ನುವ ಪ್ರಶ್ನೆ ಇತ್ತು. ಇದಕ್ಕೆ ಕಂಗನಾ ರಣಾವತ್ ಅವರು ಉತ್ತರ ನೀಡಿದ್ದಾರೆ. ಹೀಗೇಕೆ ಎನ್ನುವುದಕ್ಕೆ ಅವರು ವಿವರಣೆ ನೀಡಿದ್ದಾರೆ. ಅವರ ಉತ್ತರದಲ್ಲಿ ಅರ್ಥವಿದೆ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ.

ಕಂಗನಾ ರಣಾವತ್ ಅವರು ಈವರೆಗೆ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮಿರ್ ಖಾನ್, ರಣಬೀರ್ ಕಪೂರ್ ಹಾಗೂ ಅಕ್ಷಯ್ ಕುಮಾರ್ ಜೊತೆ ತೆರೆ ಹಂಚಿಕೊಂಡಿಲ್ಲ. ಇವರ ಜೊತೆ ಸಿನಿಮಾ ಮಾಡದೆಯೂ ಬಾಲಿವುಡ್​ನಲ್ಲಿ ಹೆಸರು ಮಾಡಬಹುದು ಎಂಬುದನ್ನು ಇತರ ನಾಯಕಿಯರಿಗೆ ತೋರಿಸುವ ಉದ್ದೇಶ ಕಂಗನಾ ರಣಾವತ್​ಗೆ ಇದೆ.

‘ಖಾನ್​ಗಳು ಹೀರೋಗಳಾಗಿ ನಟಿಸಿದ ಸಿನಿಮಾಗಳನ್ನು ನಾನು ರಿಜೆಕ್ಟ್ ಮಾಡಿದೆ. ಎಲ್ಲಾ ಖಾನ್​ಗಳೂ ನನ್ನ ಜೊತೆ ಚೆನ್ನಾಗಿಯೇ ಇದ್ದಾರೆ. ಅವರು ಯಾರೂ ನನ್ನ ಜೊತೆ ತಪ್ಪಾಗಿ ವರ್ತಿಸಿಲ್ಲ. ಕೆಲ ಬಾಲಿವುಡ್ ಹೀರೋಗಳು ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದು ಇದೆ. ಆದರೆ ಖಾನ್​ಗಳು ಹಾಗಲ್ಲ. ಆದಾಗ್ಯೂ ನಾನು ಅವರ ಸಿನಿಮಾಗಳಲ್ಲಿ ನಟಿಸಲು ಇಚ್ಛಿಸಿಲ್ಲ’ ಎಂದಿದ್ದಾರೆ ಕಂಗನಾ.

‘ಈ ಹೀರೋಗಳ ಸಿನಿಮಾಗಳಲ್ಲಿ ಹೀರೋಯಿನ್​ಗಳಿಗೆ ಕೇವಲ ಎರಡು ದೃಶ್ಯ ಇರುತ್ತವೆ. ಅದನ್ನು ಮಾಡೋಕೆ ನನಗೆ ಇಷ್ಟ ಇಲ್ಲ. ಎ-ಲಿಸ್ಟ್​ನಲ್ಲಿ ಇರುವ ನಟಿಯರಿಗೆ ನಾನು ಮಾದರಿ ಆಗಬೇಕು. ನಾನು ರಣಬೀರ್ ಕಪೂರ್, ಅಕ್ಷಯ್ ಕುಮಾರ್ ಸಿನಿಮಾಗಳಲ್ಲಿ ನಟಿಸಲು ನೋ ಹೇಳಿದ್ದೇನೆ. ಹೀರೋಯಿನ್​ನ ಹೀರೋ ಮಾತ್ರ ಸಕ್ಸಸ್​ಫುಲ್ ಮಾಡಬಲ್ಲ ಎನ್ನುವಂಥ ಸಿನಿಮಾಗಳು ನನಗೆ ಇಷ್ಟವಿಲ್ಲ. ನಾವಾಗೇ ಬೇಕಿದ್ದರೂ ಯಶಸ್ಸು ಕಾಣಬಹುದು’ ಎಂಬುದು ಕಂಗನಾ ಅಭಿಪ್ರಾಯ.

ಇದನ್ನೂ ಓದಿ: ಸಂಸದೆ, ನಟಿ ಕಂಗನಾ ರಣಾವತ್​ ಮನೆ ಮಾರಿಕೊಳ್ಳುವ ಸ್ಥಿತಿ ಬಂತಾ? ಎಲ್ಲರಿಗೂ ಅಚ್ಚರಿ

ಕಂಗನಾ ರಣಾವತ್ ಅವರು ಸದ್ಯ ಸಂಸದೆ ಆಗಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸ್ಪರ್ಧಿಸಿ ಅವರು ಎಂಪಿ ಆಗಿ ಆಯ್ಕೆ ಆಗಿದ್ದಾರೆ. ಒಂದೊಮ್ಮೆ ಎಂಪಿ ಆದರೆ ಚಿತ್ರರಂಗ ತೊರೆಯೋದಾಗಿ ಅವರು ಚುನಾವಣೆಗೂ ಮೊದಲು ಹೇಳಿದ್ದರು. ಆದರೆ, ಈ ಬಗ್ಗೆ ಅವರು ಈಗ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಯಡಿಯೂರಪ್ಪ ಕುಟುಂಬ ವಿರುದ್ಧ ಮಾತಾಡಿದ್ದಕ್ಕೆ ಕ್ಷಮೆ ಕೇಳಲ್ಲ: ಯತ್ಮಾಳ್
ಯಡಿಯೂರಪ್ಪ ಕುಟುಂಬ ವಿರುದ್ಧ ಮಾತಾಡಿದ್ದಕ್ಕೆ ಕ್ಷಮೆ ಕೇಳಲ್ಲ: ಯತ್ಮಾಳ್
ಉಗ್ರರ ದಾಳಿ ಬಳಿಕ ಪಹಲ್ಗಾಮ್​ನ ಬೇತಾಬ್ ಕಣಿವೆ ಪ್ರವಾಸಿಗರಿಗೆ ಓಪನ್
ಉಗ್ರರ ದಾಳಿ ಬಳಿಕ ಪಹಲ್ಗಾಮ್​ನ ಬೇತಾಬ್ ಕಣಿವೆ ಪ್ರವಾಸಿಗರಿಗೆ ಓಪನ್
ಶಿವಣ್ಣ ಬಗ್ಗೆ ಅವಹೇಳನಕಾರಿ ಮಾತು: ಮಡೆನೂರು ಮನು ವಿರುದ್ಧ ಚೇಂಬರ್ ಕ್ರಮ
ಶಿವಣ್ಣ ಬಗ್ಗೆ ಅವಹೇಳನಕಾರಿ ಮಾತು: ಮಡೆನೂರು ಮನು ವಿರುದ್ಧ ಚೇಂಬರ್ ಕ್ರಮ
ಗಾಂಧಿನಗರದಲ್ಲಿ ಪ್ರಧಾನಿ ಮೋದಿ ರೋಡ್ ಶೋ; ಜನರಿಂದ ಹೂವಿನ ಮಳೆ
ಗಾಂಧಿನಗರದಲ್ಲಿ ಪ್ರಧಾನಿ ಮೋದಿ ರೋಡ್ ಶೋ; ಜನರಿಂದ ಹೂವಿನ ಮಳೆ
ಜನರಲ್ಲಿ ಗೊಂದಲ, ಅಶಾಂತಿ ಸೃಷ್ಟಿಸುವುದೇ ಬಿಜೆಪಿ ನಾಯಕರ ಕೆಲಸ: ಸಿದ್ದರಾಮಯ್ಯ
ಜನರಲ್ಲಿ ಗೊಂದಲ, ಅಶಾಂತಿ ಸೃಷ್ಟಿಸುವುದೇ ಬಿಜೆಪಿ ನಾಯಕರ ಕೆಲಸ: ಸಿದ್ದರಾಮಯ್ಯ
ಕರೆಂಟ್ ಬೇಲಿ ದಾಟಲು ಆನೆ ಬಳಸಿದ ಈ ಟ್ರಿಕ್, ನಿಮಗೂ ಉಪಯೋಗಕ್ಕೆ ಬರಬಹುದು
ಕರೆಂಟ್ ಬೇಲಿ ದಾಟಲು ಆನೆ ಬಳಸಿದ ಈ ಟ್ರಿಕ್, ನಿಮಗೂ ಉಪಯೋಗಕ್ಕೆ ಬರಬಹುದು
ಅವರಿಬ್ಬರು ಯಾರನ್ನೂ ರೇಪ್ ಮಾಡಿರಲಿಲ್ಲ ಅಲ್ವಾ: ಡಿಕೆಶಿ ಪ್ರಶ್ನೆ
ಅವರಿಬ್ಬರು ಯಾರನ್ನೂ ರೇಪ್ ಮಾಡಿರಲಿಲ್ಲ ಅಲ್ವಾ: ಡಿಕೆಶಿ ಪ್ರಶ್ನೆ
ಭಾರತೀಯ ಮಹಿಳೆಯರ ಏಳಿಗೆ ರವಿಕುಮಾರ್​ಗೆ ಸಹನೆ ಆಗಲ್ಲ: ಪ್ರಿಯಾಂಕ್ ಖರ್ಗೆ
ಭಾರತೀಯ ಮಹಿಳೆಯರ ಏಳಿಗೆ ರವಿಕುಮಾರ್​ಗೆ ಸಹನೆ ಆಗಲ್ಲ: ಪ್ರಿಯಾಂಕ್ ಖರ್ಗೆ
ಪೊಲೀಸರನ್ನೂ ಅವಾಚ್ಯ ಪದಗಳಿಂದ ನಿಂದಿಸಿದ ಪುಡಿರೌಡಿ
ಪೊಲೀಸರನ್ನೂ ಅವಾಚ್ಯ ಪದಗಳಿಂದ ನಿಂದಿಸಿದ ಪುಡಿರೌಡಿ
ತಜ್ಞರ ಪ್ರಕಾರ ಜಲಾಶಯದಲ್ಲಿ 80 ಟಿಎಂಸಿಗಿಂತ ಹೆಚ್ಚು ನೀರು ತುಂಬಿದರೆ ಅಪಾಯ!
ತಜ್ಞರ ಪ್ರಕಾರ ಜಲಾಶಯದಲ್ಲಿ 80 ಟಿಎಂಸಿಗಿಂತ ಹೆಚ್ಚು ನೀರು ತುಂಬಿದರೆ ಅಪಾಯ!