AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲಿಬಾಗ್ ಬಂಗಲೆಗೆ ತೆರಳಲು ದೀಪಿಕಾ- ರಣವೀರ್ ಕಾತರ?; ₹ 22 ಕೋಟಿ ನೀಡಿ ಖರೀದಿಸಿದ ಬಂಗಲೆಯ ಮರುವಿನ್ಯಾಸ ಶುರು

ದೀಪಿಕಾ ಹಾಗೂ ರಣವೀರ್ ಬರೋಬ್ಬರಿ ₹ 22 ಕೋಟಿ ನೀಡಿ ಖರೀದಿಸಿದ ಹೊಸ ಮನೆಯ ಮರು ವಿನ್ಯಾಸ ಕಾರ್ಯಗಳು ಪ್ರಾರಂಭವಾಗಿವೆಯೇ? ಹೌದು ಎನ್ನುತ್ತಿವೆ ಈ ಚಿತ್ರ.

ಆಲಿಬಾಗ್ ಬಂಗಲೆಗೆ ತೆರಳಲು ದೀಪಿಕಾ- ರಣವೀರ್ ಕಾತರ?; ₹ 22 ಕೋಟಿ ನೀಡಿ ಖರೀದಿಸಿದ ಬಂಗಲೆಯ ಮರುವಿನ್ಯಾಸ ಶುರು
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ
TV9 Web
| Edited By: |

Updated on:Sep 30, 2021 | 2:27 PM

Share

ಬಾಲಿವುಡ್​ನ ಖ್ಯಾತ ತಾರಾ ಜೋಡಿಯಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇತ್ತೀಚೆಗೆ ಹೊಸ ಬಂಗಲೆಯೊಂದನ್ನು ಖರೀದಿಸಿದ್ದು ಸಾಕಷ್ಟು ಸುದ್ದಿಯಾಗಿತ್ತು. ಮುಂಬೈನ ಸಮೀಪದ ಆಲಿಬಾಗ್​ನಲ್ಲಿ ₹ 22 ಕೋಟಿ ನೀಡಿ ಹೊಸ ಬಂಗಲೆಯನ್ನು ಈ ಜೋಡಿ ಖರೀದಿಸಿತ್ತು. ಇದೀಗ ಆ ಮನೆಯ ಮರು ವಿನ್ಯಾಸ ಕಾರ್ಯಗಳು ಪ್ರಾರಂಭವಾಗಿದೆಯೇ ಎಂಬ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಫೋಟೋ. ಹಾಗಂತ ಈ ಫೋಟೋ ನಕಲಿಯಲ್ಲ. ಖ್ಯಾತ ವಿನ್ಯಾಸಕಾರ್ತಿ ವಿನಿತಾ ಚೈತನ್ಯ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಿಂದ ಫೋಟೋವನ್ನು ಹಂಚಿಕೊಂಡಿದ್ದಾರೆ.

ವಿನಿತಾ ಚೈತನ್ಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ದೀಪಿಕಾ ರಣವೀರ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಅವರು, ‘ನನ್ನ ಕಾರಿನಲ್ಲಿರುವವರು ಯಾರು? ಆಲಿಬಾಗ್​ಗೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅವರು ಬಂಗಲೆಯ ವಿನ್ಯಾಸ ಕಾರ್ಯ ಮಾಡುತ್ತಿರುವುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ಈ ಕಪ್ಪು ಬಿಳುಪಿನ ಚಿತ್ರವು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ವಿನಿತಾ ಚೈತನ್ಯ ಹಂಚಿಕೊಂಡ ಚಿತ್ರ:

ಮನಿಕಂಟ್ರೋಲ್ ವರದಿ ಮಾಡಿರುವ ಪ್ರಕಾರ, ಬಂಗಲೆಯು ಸುಮಾರು 2.25 ಎಕರೆ ವಿಸ್ತೀರ್ಣದಲ್ಲಿದೆ. ಇದು ಎರಡು ಅಂತಸ್ತಿನ 5 BHK ಮನೆಯಾಗಿದೆ. ಖ್ಯಾತ ಕಿಹಿಮ್ ಬೀಚ್​ಗೆ ಕೇವಲ ಹತ್ತು ನಿಮಿಷ ದೂರದಲ್ಲಿ ಈ ಮನೆಯಿದೆ. ಈ ಏರಿಯಾವು ಕೋಟ್ಯಾಧಿಪತಿಗಳ ಮನೆಗಾಗಿ ಪ್ರಸಿದ್ಧಿ ಪಡೆದಿದ್ದು, ಖ್ಯಾತ ಬಾಲಿವುಡ್ ತಾರೆಯರು, ಉದ್ಯಮಿಗಳು ಇಲ್ಲಿ ಮನೆಯನ್ನು ಹೊಂದಿದ್ದಾರೆ. ಮುಂಬೈಗೆ ಈ ಸ್ಥಳ ಸುಮಾರು 45 ನಿಮಿಷಗಳ ದೂರದಲ್ಲಿದೆ. ಈ ಮನೆಯ ರಿಜಿಸ್ಟ್ರೇಷನ್​ಗಾಗಿ ಈ ತಾರಾ ಜೋಡಿ ಸುಮಾರು ₹ 1.32 ಕೋಟಿ ಪಾವತಿಸಿದೆ ಎನ್ನಲಾಗಿದೆ.

ರಣವೀರ್ ಹಾಗೂ ದೀಪಿಕಾ ಈಗಾಗಲೇ ಮುಂಬೈಯಲ್ಲಿ 4 ಬಿಎಚ್​​ಕೆ ಫ್ಲಾಟನ್ನು ಹೊಂದಿದ್ದಾರೆ. ಅದು ಪ್ರಭಾದೇವಿ ಏರಿಯಾದಲ್ಲಿದೆ. ಕಳೆದ ತಿಂಗಳು ದೀಪಿಕಾ ಬೆಂಗಳೂರಿನಲ್ಲಿ ಸರ್ವೀಸ್ ಅಪಾರ್ಟ್​ಮೆಂಟ್ ಖರೀದಿಸಿದ್ದರು. ಈಗ ಖರೀದಿಸಲಾಗಿರುವ ಹೊಸ ಮನೆಯ ಸುತ್ತಮುತ್ತ ತೆಂಗಿನ ತೋಟಗಳೂ ಇವೆ ಎನ್ನುತ್ತವೆ ವರದಿಗಳು.

ಚಿತ್ರಗಳ ವಿಷಯಕ್ಕೆ ಬಂದರೆ ದೀಪಿಕಾ- ರಣವೀರ್ ಜೊತೆಯಾಗಿ ನಟಿಸಿರುವ ‘83’ ಚಿತ್ರದಲ್ಲಿ ಈರ್ವರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 1983ರಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಕತೆಯನ್ನು ಚಿತ್ರವು ತೆರೆಯ ಮೇಲೆ ತರಲಿದ್ದು, ರಣವೀರ್ ಕಪಿಲ್ ದೇವ್ ಪಾತ್ರದಲ್ಲಿ, ದೀಪಿಕಾ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ರಿಸ್​ಮಸ್​ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ:

ಕೆಬಿಸಿಯಲ್ಲಿ 1 ಕೋಟಿ ಮೊತ್ತದ ಈ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?

ಅಪ್ಪನನ್ನೇ ಮನೆ ಬಾಗಿಲ ಮುಂದೆ ಗಂಟೆಗಟ್ಟಲೆ ಕಾಯಿಸಿದ್ರಾ ನಟ ವಿಜಯ್​? ತಂದೆಯಿಂದಲೇ ಸಿಕ್ತು ಸ್ಪಷ್ಟನೆ

ಸ್ಯಾಂಡಲ್​ವುಡ್​ ನಟಿ ಸವಿ ಮಾದಪ್ಪ ಆತ್ಮಹತ್ಯೆ; ಡೆತ್​ನೋಟ್​ ಬರೆದಿಟ್ಟು ನೇಣಿಗೆ ಶರಣು

Published On - 2:25 pm, Thu, 30 September 21

Follow Us
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ