AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಣ್ ಹೇಳಿಕೆಗೆ ಕಂಗನಾ ರನೌತ್ ಪ್ರತಿಕ್ರಿಯೆ: ಮತ್ತೆ ಅದೇ ಮರುಕಳಿಸುವ ಭೀತಿ

Kangana-Karan: ತಮ್ಮ 'ಎಮರ್ಜೆನ್ಸಿ' ಸಿನಿಮಾ ನೋಡಲು ಕಾತರವಾಗಿರುವುದಾಗಿ ಹೇಳಿದ ಕರಣ್ ಜೋಹರ್​ ಹೇಳಿಕೆಗೆ ಕಂಗನಾ ತಿರುಗೇಟು ನೀಡಿದ್ದಾರೆ. ಕಳೆದ ಬಾರಿ ಕರಣ್ ಇದೇ ರೀತಿ ಹೇಳಿದಾಗ ನನ್ನ ವಿರುದ್ಧ ಆರೋಪಗಳ ಸುರಿಮಳೆಯಾಗಿತ್ತು, ಈಗ ನನಗೆ ಭಯವಾಗುತ್ತಿದೆ ಎಂದಿದ್ದಾರೆ.

ಕರಣ್ ಹೇಳಿಕೆಗೆ ಕಂಗನಾ ರನೌತ್ ಪ್ರತಿಕ್ರಿಯೆ: ಮತ್ತೆ ಅದೇ ಮರುಕಳಿಸುವ ಭೀತಿ
ಕರಣ್-ಕಂಗನಾ
ಮಂಜುನಾಥ ಸಿ.
|

Updated on:Aug 22, 2023 | 9:11 PM

Share

ಕಂಗನಾ ರನೌತ್ (Kangana Ranaut) ಅವಕಾಶ ಸಿಕ್ಕಾಗೆಲ್ಲ ಬಾಲಿವುಡ್ ಬಿಗ್ ಸೆಲೆಬ್ರಿಟಿಗಳ ಬಗ್ಗೆ ಆರೋಪ, ನಿಂದನೆಗಳನ್ನು ಮಾಡುತ್ತಲೇ ಇರುತ್ತಾರೆ. ಅದರಲ್ಲಿಯೂ ಸ್ವಜನಪಕ್ಷಪಾತಕ್ಕೆ (ನೆಪೊಟಿಸಂ) ಹೆಸರುವಾಸಿಯಾಗಿರುವ ಕರಣ್ ಜೋಹರ್ (Karan Johar) ವಿಷಯದಲ್ಲಂತೂ ಕಂಗನಾ ತುಸು ಆಕ್ರಮಣಕಾರಿಯಾಗಿಯೇ ದಾಳಿ ಮಾಡುತ್ತಾರೆ. ಕರಣ್ ಜೋಹರ್ ಸಹ ಆಗಾಗ್ಗೆ ಕಂಗನಾಗೆ ಕಟುವಾದ ಪ್ರತಿಕ್ರಿಯೆಗಳನ್ನೇ ನೀಡುತ್ತಾ ಬಂದಿದ್ದಾರೆ. ಆದರೆ ಇದೀಗ, ಕಂಗನಾರ ‘ಎಮರ್ಜೆನ್ಸಿ’ ಸಿನಿಮಾ ನೋಡಲು ಕಾಯುತ್ತಿರುವುದಾಗಿ ಕರಣ್ ಹೇಳಿ ಆಶ್ಚರ್ಯ ಮೂಡಿಸಿದ್ದರು. ಕರಣ್​ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಂಗನಾ, ಮತ್ತೊಮ್ಮೆ ಕರಣ್ ಕಾಲೆಳೆದಿದ್ದಾರೆ.

ತಮ್ಮ ಸಿನಿಮಾ ನೋಡಲು ಉತ್ಸುಕರಾಗಿರುವ ಬಗ್ಗೆ ಕರಣ್ ನೀಡಿರುವ ಹೇಳಿಕೆ ಕುರಿತು ಟ್ವೀಟ್ ಮಾಡಿರುವ ಕಂಗನಾ ರನೌತ್, ”ಈ ಹಿಂದೆ ‘ಮಣಿಕರ್ಣಿಕಾ’ ಸಿನಿಮಾ ನೋಡಲು ಕಾಯುತ್ತಿರುವುದಾಗಿ ಕರಣ್ ಹೇಳಿದ್ದರು. ಆ ಸಿನಿಮಾ ಬಿಡುಗಡೆ ಆಗುವಾಗ ನನ್ನ ಜೀವನದ ಅತ್ಯಂತ ಕೆಟ್ಟ ವೈಯಕ್ತಿಕ ದಾಳಿಯನ್ನು ವ್ಯಕ್ತಿತ್ವ ಹರಣ ಪ್ರಯತ್ನವನ್ನು ನಾನು ನೋಡಿದೆ. ಆ ಸಿನಿಮಾದಲ್ಲಿ ನಟಿಸಿರುವ ಬಹುತೇಕ ದೊಡ್ಡ ನಟರು ಹಣ ಪಡೆದು ನನ್ನ ಮೇಲೆ ನಿಂದನೆಗಳನ್ನು ಮಾಡಿದರು. ಸಿನಿಮಾ ಬಿಡುಗಡೆ ಆಗಿ ಒಳ್ಳೆಯ ಯಶಸ್ಸನ್ನು ಮೊದಲ ವಾರಾಂತ್ಯದಲ್ಲಿ ಪಡೆಯಿತಾದರೂ ನನ್ನ ಮೇಲೆ ನಡೆದ ವಾಗ್ದಾಳಿ ನನ್ನನ್ನು ದುಸ್ವಪ್ನದಂತೆ ಕಾಡಲು ಆರಂಭಿಸಿತು. ಈಗ ಮತ್ತೆ ಕರಣ್, ನನ್ನ ಸಿನಿಮಾ ನೋಡಲು ಉತ್ಸುಕನಾಗಿರುವದಾಗಿ ಹೇಳಿದ್ದಾರೆ. ನನಗೆ ಭಯ ಶುರುವಾಗಿದೆ” ಎಂದಿದ್ದಾರೆ.

ಕಂಗನಾ ರನೌತ್ ಟ್ವೀಟ್

ಕರಣ್ ಜೋಹರ್, ಸ್ಟಾರ್ ನಟರ ಮಕ್ಕಳನ್ನು ಹಾಕಿಕೊಂಡು ಸಿನಿಮಾ ಮಾಡಿ ಬಾಲಿವುಡ್​ನಲ್ಲಿ ನೆಪೋಟಿಸಂಗೆ ಬೆಂಬಲ ನೀಡುತ್ತಿದ್ದಾರೆ ಎಂದೂ. ಕರಣ್ ಜೋಹರ್ ಬಾಲಿವುಡ್ ಮಾಫಿಯಾದ ಸದಸ್ಯ, ಹೊರಗಿನಿಂದ ಬಾಲಿವುಡ್​ಗೆ ಬಂದವರನ್ನು ಸತತವಾಗಿ ತುಳಿಯುವ ಪ್ರಯತ್ನವನ್ನು ಕರಣ್ ಮಾಡುತ್ತಿದ್ದಾರೆ ಎಂದು ಸತತವಾಗಿ ಕಂಗನಾ ರನೌತ್ ಆರೋಪ ಮಾಡುತ್ತಲೇ ಬಂದಿದ್ದಾರೆ. ಕರಣ್ ಜೋಹರ್​ರ ‘ಕಾಫಿ ವಿತ್ ಕರಣ್’ ಶೋ ಅನ್ನೂ ಸಹ ಟೀಕಿಸುತ್ತಲೇ ಬಂದಿದ್ದಾರೆ.

ಇದನ್ನೂ ಓದಿ:ಪದೇಪದೇ ಕಿಡಿಕಾರುವ ಕಂಗನಾಗೂ ಪ್ರೀತಿ ತೋರಿದ ಕರಣ್​ ಜೋಹರ್​; ‘ಎಮರ್ಜೆನ್ಸಿ’ ನೋಡಲು ಕಾತರ

ಇದೀಗ ಕಂಗನಾ ರನೌತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಸಿನಿಮಾದಲ್ಲಿ ಇಂದಿರಾ ಗಾಂದಿ ಪಾತ್ರದಲ್ಲಿ ಕಂಗನಾ ನಟಿಸಿದ್ದಾರೆ. ಸಿನಿಮಾವನ್ನು ಕಂಗನಾ ರನೌತ್ ಸ್ವತಃ ನಿರ್ದೇಶನ ಮಾಡಿದ್ದು, ಚಿತ್ರಕತೆಯನ್ನು ರಿತೇಶ್ ಶಾ ಚಿತ್ರಕತೆ ಬರೆದಿದ್ದಾರೆ. ಸಿನಿಮಾಕ್ಕೆ ಬಂಡವಾಳವನ್ನೂ ಕಂಗನಾ ಅವರೇ ಹೂಡಿದ್ದಾರೆ. ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದ್ದು, ಕಂಗನಾ, ಇಂದಿರಾ ಗಾಂಧಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವುದು ಟೀಸರ್​ನಿಂದಲೇ ತಿಳಿದು ಬರುತ್ತಿದೆ.

ಇದರ ಹೊರತಾಗಿ ಕಂಗನಾ ರನೌತ್, ತಮಿಳಿನ ‘ಚಂದ್ರಮುಖಿ 2’ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಸಿನಿಮಾದ ಹಾಡು ಇತ್ತೀಚೆಗೆ ಬಿಡುಗಡೆ ಆಗಿದೆ. ಕಂಗನಾ ಒಳ್ಳೆಯ ನಟಿ ಹೌದು ಆದರೆ ಒಳ್ಳೆಯ ಡ್ಯಾನ್ಸರ್ ಅಲ್ಲವೆಂದು ಹಾಡು ನೋಡಿದ ಹಲವರು ಟೀಕಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:08 pm, Tue, 22 August 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ