AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯದಲ್ಲಿ ನೋವಿದೆ: ಪಂಜಾಬಿಗರ ವಿರೋಧದ ಬಗ್ಗೆ ಕಂಗನಾ ಮಾತು

Kangana Ranaut: ನಟಿ, ಸಂಸದೆ ಕಂಗನಾ ರನೌತ್ ನಟಿಸಿ, ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರುವ ಇಂದಿರಾ ಗಾಂಧಿ ಜೀವನ ಆಧರಿಸಿದ ‘ಎಮರ್ಜೆನ್ಸಿ’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಪಂಜಾಬಿಗಳು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಇದ್ದು, ಇದೀಗ ಸಿನಿಮಾ ಪಂಜಾಬ್​ನಲ್ಲಿ ಬಿಡುಗಡೆ ಆಗದಂತೆ ತಡೆಯಲಾಗಿದೆ. ಈ ಬಗ್ಗೆ ಕಂಗನಾ ರನೌತ್ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.

ಹೃದಯದಲ್ಲಿ ನೋವಿದೆ: ಪಂಜಾಬಿಗರ ವಿರೋಧದ ಬಗ್ಗೆ ಕಂಗನಾ ಮಾತು
Kangana Ranaut1
ಮಂಜುನಾಥ ಸಿ.
|

Updated on: Jan 20, 2025 | 7:28 PM

Share

ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ ನಿರ್ದೇಶಿಸಿ, ನಿರ್ಮಾಣವೂ ಮಾಡಿರುವ ‘ಎಮರ್ಜೆನ್ಸಿ’ ಸಿನಿಮಾ ಹಲವು ಅಡೆ ತಡೆಗಳ ಬಳಿಕ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಆದರೆ ಕಂಗನಾರ ಸಿನಿಮಾ ಬಿಡುಗಡೆಗೆ ಪಂಜಾಬ್​ನಲ್ಲಿ ಹಾಗೂ ಇನ್ನೂ ಕೆಲವು ಕಡೆ ವಿರೋಧ ವ್ಯಕ್ತವಾಗಿದೆ. ಪಂಜಾಬ್​ನಲ್ಲಿ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆಗೆ ಅವಕಾಶವನ್ನೇ ನೀಡಲಾಗಿಲ್ಲ. ಇದರಿಂದ ಸಿನಿಮಾಕ್ಕೆ ಭಾರಿ ದೊಡ್ಡ ಹೊಡೆತ ಬಿದ್ದಿದೆ. ಇದೀಗ ಈ ವಿಷಯವಾಗಿ ನಟಿ ಕಂಗನಾ ರನೌತ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.

‘ನನ್ನ ಸಿನಿಮಾಕ್ಕೆ ಎಲ್ಲರೂ ಪ್ರೀತಿ ವ್ಯಕ್ತಪಡಿಸುತ್ತಿರುವುದರಿಂದ ನನ್ನ ಹೃದಯ ತುಂಬಿ ಬಂದಿದೆ. ಆದರೆ ನನ್ನ ಹೃದಯದಲ್ಲಿ ಇನ್ನೂ ನೋವಿದೆ. ಒಂದು ಸಮಯವಿತ್ತು, ನನ್ನ ಸಿನಿಮಾಗಳು ಪಂಜಾಬ್​ನಲ್ಲಿ ಅತಿ ಹೆಚ್ಚು ಪ್ರದರ್ಶನ ಕಾಣುತ್ತಿದ್ದವು. ಆದರೆ ಈಗ ಪಂಜಾಬ್​ನಲ್ಲಿ ನನ್ನ ಸಿನಿಮಾ (ಎಮರ್ಜೆನ್ಸಿ) ಬಿಡುಗಡೆಯನ್ನೇ ಮಾಡಲಾಗುತ್ತಿಲ್ಲ. ಕೆನಡಾ, ಬ್ರಿಟನ್ ಮತ್ತು ಇತರೆ ಕೆಲವು ಕಡೆ ನನ್ನ ಸಿನಿಮಾದ ಮೇಲೆ ದಾಳಿಗಳನ್ನು ಮಾಡಲಾಗುತ್ತಿದೆ. ಸಿನಿಮಾ ತಂಡದ ಮೇಲೆ ದಾಳಿಗಳನ್ನು ಮಾಡಲಾಗಿದೆ’ ಎಂದಿದ್ದಾರೆ ಕಂಗನಾ ರನೌತ್.

‘ಕೆಲವು ಸಣ್ಣ ಜನರು, ಬೆರಳೆಣಿಕೆಯಷ್ಟು ಜನರು ಈ ಬೆಂಕಿಯನ್ನು ಹಾಕಿದ್ದಾರೆ. ಈ ಬೆಂಕಿಯಲ್ಲಿ ನಾವು ನೀವು ಸುಡುತ್ತಿದ್ದೇವೆ. ನನ್ನ ವಿಚಾರ, ನನ್ನ ಸಿನಿಮಾ, ನನ್ನ ದೇಶದ ಪರವಾಗಿ ನನಗೆ ಇರುವ ವಿಚಾರಗಳು ಈ ಸಿನಿಮಾದಿಂದ ವ್ಯಕ್ತವಾಗುತ್ತಿವೆ. ಸಿನಿಮಾ ನೋಡಿ ನೀವೇ ನಿರ್ಣಯ ಮಾಡಿ ಈ ಸಿನಿಮಾ ನಮ್ಮನ್ನು ಜೋಡಿಸುವ ಸಂದೇಶ ಹೊಂದಿದೆಯೇ ಅಥವಾ ಬೇರ್ಪಡಿಸುವ ಸಂದೇಶ ಹೊಂದಿದೆಯೇ ಎಂಬುದನ್ನು ನೀವೇ ನಿರ್ಣಯಿಸಿ’ ಎಂದಿದ್ದಾರೆ ಕಂಗನಾ ರನೌತ್.

ಇದನ್ನೂ ಓದಿ:ಕಲೆಕ್ಷನ್ ವಿಚಾರದಲ್ಲಿ ತೆವಳಿಕೊಂಡು ಸಾಗುತ್ತಿದೆ ‘ಎಮರ್ಜೆನ್ಸಿ’ ಸಿನಿಮಾ

ಕಂಗನಾ ವಿರುದ್ಧ ಪಂಜಾಬಿಗಳು ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ರೈತ ಹೋರಾಟ ನಡೆದಾಗ ಕಂಗನಾ ರನೌತ್ ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಸರಣಿ ಟ್ವೀಟ್​ಗಳನ್ನು ಮಾಡಿದ್ದರು. ಆ ಸಮಯದಲ್ಲಿ ಪ್ರತಿಭಟನಾ ನಿರತ ರೈತರ ಬಗ್ಗೆ ಅವಹೇಳನಕಾರಿ ಟ್ವೀಟ್​ಗಳನ್ನು ಸಹ ಮಾಡಿದ್ದರು. ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಆ ಪ್ರತಿಭಟನೆಯಲ್ಲಿ ಇದ್ದಿದ್ದು ಬಹುತೇಕ ಪಂಜಾಬಿಗಳೆ. ಅಲ್ಲದೆ ಈಗ ಕಂಗನಾ ಮಾಡಿರುವ ಸಿನಿಮಾ ‘ಎಮರ್ಜೆನ್ಸಿ’ ಇಂದಿರಾ ಗಾಂಧಿಯ ಕುರಿತಾದ ಸಿನಿಮಾ. ಇಂದಿರಾ ಗಾಂಧಿಯನ್ನು ಕೊಂದ ವ್ಯಕ್ತಿಗಳು ಪಂಜಾಬಿಗಳಾಗಿದ್ದರು. ಹಾಗಾಗಿ ಸಿನಿಮಾದಲ್ಲಿ ಅವರನ್ನು ವಿಲನ್​ಗಳ ರೀತಿಯಲ್ಲಿ ತೋರಿಸಲಾಗಿದೆ ಎಂಬುದು ಸಹ ಪಂಜಾಬಿಗಳು ‘ಎಮರ್ಜೆನ್ಸಿ’ ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ