AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪ್ರಿಂಗ್​ನಂತೆ ಸೊಂಟ ಬಳುಕಿಸುವ ಕೃತಿ ಸನೋನ್​ಗೆ ಖಾರವಾಗಿ ಬೈದಿದ್ದ ಕೊರಿಯೋಗ್ರಾಫರ್​

ಕೃತಿ ಮಾಡೆಲಿಂಗ್​ನಲ್ಲಿ ಗುರುತಿಸಿಕೊಂಡು ನಂತರ ಚಿತ್ರರಂಗಕ್ಕೆ ಬಂದವರು. ಮಾಡೆಲಿಂಗ್​ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು ಅವರು. ಆದರೆ, ಆರಂಭದಲ್ಲಿ ಕೃತಿ ಕಷ್ಟಗಳನ್ನು ಎದುರಿಸಿದ್ದರು.

ಸ್ಪ್ರಿಂಗ್​ನಂತೆ ಸೊಂಟ ಬಳುಕಿಸುವ ಕೃತಿ ಸನೋನ್​ಗೆ ಖಾರವಾಗಿ ಬೈದಿದ್ದ ಕೊರಿಯೋಗ್ರಾಫರ್​
TV9 Web
| Edited By: |

Updated on: Aug 29, 2021 | 11:05 PM

Share

ಬಾಲಿವುಡ್​ ನಟಿ ಕೃತಿ ಸನೋನ್​ ನಟನೆಯ ಜತೆಗೆ ನೃತ್ಯದ ಮೂಲಕವೂ ಸುದ್ದಿ ಮಾಡಿದ್ದಾರೆ. ‘ಮಿಮಿ’ ಚಿತ್ರದ ‘ಪರಮ ಸುಂದರಿ..’ ಹಾಡಿನಲ್ಲಿ ಅವರ ಡ್ಯಾನ್ಸ್​ ಮೆಚ್ಚಿಕೊಳ್ಳದವರಿಲ್ಲ. ಸದ್ಯ, ಈ ಹಾಡು ಸಾಕಷ್ಟು ವೈರಲ್​ ಆಗಿದೆ. ಇನ್ನು, ಕೃತಿ ಡ್ಯಾನ್ಸ್​ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಡ್ಯಾನ್ಸ್​ನಲ್ಲಿ ಪಳಗಿರುವ ಅವರು ಈ ಮೊದಲು ಕೊರಿಯೋಗ್ರಾಫರ್​​​​ನಿಂದ ಬೈಸಿಕೊಂಡಿದ್ದರು. ಅವರು ಸರಿಯಾಗಿ ಹೆಜ್ಜೆ ಹಾಕಿರಲಿಲ್ಲ ಎಂಬುದೇ ಇದಕ್ಕೆ ಕಾರಣ.

ಕೃತಿ ಮಾಡೆಲಿಂಗ್​ನಲ್ಲಿ ಗುರುತಿಸಿಕೊಂಡು ನಂತರ ಚಿತ್ರರಂಗಕ್ಕೆ ಬಂದವರು. ಮಾಡೆಲಿಂಗ್​ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು ಅವರು. ಆದರೆ, ಆರಂಭದಲ್ಲಿ ಕೃತಿ ಕಷ್ಟಗಳನ್ನು ಎದುರಿಸಿದ್ದರು. ಸುಮಾರು 20 ಮಾಡೆಲ್​ಗಳ ಎದುರು ಕೃತಿಗೆ ಕೊರಿಯೋಗ್ರಾಫರ್​ನಿಂದ ಅವಮಾನವಾಗಿತ್ತು. ಈ ಬಗ್ಗೆ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ಅದು ನನ್ನ ಮೊದಲ ರ್ಯಾಂಪ್​ ಶೋ. ನಾನು ಹೆಜ್ಜೆ ತಪ್ಪಿದ್ದೆ. ಕೋರಿಯೋಗ್ರಾಫರ್​ ಹೇಳಿದ್ದಕ್ಕೆ ವಿರುದ್ಧವಾಗಿ ಮಾಡಿದ್ದೆ. ಅವರು ತುಂಬಾನೇ ಸಿಟ್ಟಾದರು. 20 ಮಾಡೆಲ್​ಗಳ ಎದುರು ನನ್ನನ್ನು ಬೈದಿದ್ದರು. ಯಾರಾದರೂ ನನ್ನನ್ನು ಬೈದರೆ ನಾನು ಅಳೋಕೆ ಪ್ರಾರಂಭಿಸುತ್ತೇನೆ. ಅಂದು ಕೂಡ ನಾನು ಗಳಗಳನೆ ಅತ್ತಿದ್ದೆ’ ಎಂದರು ಕೃತಿ.

‘ಆಟೋದಲ್ಲಿ ಅಂದು ನಾನು ಮನೆಗೆ ತೆರಳಿದ್ದೆ. ದಾರಿಯುದ್ದಕೂ ಅಳುತ್ತಲೇ ಇದ್ದೆ. ನಾನು ಅಮ್ಮನ ಎದುರು ಕುಳಿತು ಅತ್ತಿದೆ. ನಿನಗೆ ಈ ವೃತ್ತಿ ಸರಿ ಹೊಂದುತ್ತದೆಯೋ ಎಂಬುದು ನನಗೆ ಗೊತ್ತಿಲ್ಲ. ಆದರೆ, ಮಾನಸಿಕವಾಗಿ ನೀನು ಗಟ್ಟಿ ಆಗಬೇಕು ಎಂದು ಅಮ್ಮ ಹುರಿದುಂಬಿಸಿದ್ದರು’ ಎಂದಿದ್ದಾರೆ ಅವರು.

2014ರಲ್ಲಿ ತೆರೆಗೆ ಬಂದ ತೆಲುಗಿನ ‘1: ನೆನೊಕ್ಕಡಿನೆ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು ಕೃತಿ. ಅದೇ ವರ್ಷ ತೆರೆಗೆ ಬಂದ ‘ಹೀರೋಪಂತಿ’ ಸಿನಿಮಾ ಕೃತಿಗೆ ಹೆಸರು ತಂದುಕೊಟ್ಟಿತು. ಈ ವರ್ಷ ಒಟಿಟಿಯಲ್ಲಿ ರಿಲೀಸ್​ ಆದ ‘ಮಿಮಿ’ ಸಿನಿಮಾ ದೊಡ್ಡಮಟ್ಟದಲ್ಲಿ ಹೆಸರು ಮಾಡಿದೆ. ಸದ್ಯ, ಅವರ ಕೈಯಲ್ಲಿ ನಾಲ್ಕು ಹಿಂದಿ ಚಿತ್ರಗಳಿವೆ. ಇದರಲ್ಲಿ ಕೆಲ ಸಿನಿಮಾಗಳ ಕೆಲಸಗಳು ಪೂರ್ಣಗೊಂಡಿದ್ದು, ರಿಲೀಸ್​ಗೆ  ರೆಡಿ ಇದೆ.

ಇದನ್ನೂ ಓದಿ: ‘ಪರಮ ಸುಂದರಿ’ ಹಾಡಿನಿಂದ ಮಿಂಚುತ್ತಿರುವ ನಟಿ ಕೃತಿ ಸನೋನ್​ ಸಂಭಾವನೆ ಎಷ್ಟು? ಇಲ್ಲಿವೆ ಇಂಟರೆಸ್ಟಿಂಗ್​ ವಿಷಯಗಳು

40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ