AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರಂಭದಲ್ಲೇ ಎಡವಿದ ‘ರಾಮಾಯಣ’ ಚಿತ್ರತಂಡ; ಚಿತ್ರೀಕರಣದ ಫೋಟೋಗಳು ಲೀಕ್​

ಈ ರೀತಿಯ ಹೈ ಬಜೆಟ್​ ಸಿನಿಮಾಗಳನ್ನು ಮಾಡುವಾಗ ಚಿತ್ರತಂಡದವರು ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ ರಾಮಾಯಣ ಸಿನಿಮಾ ತಂಡದವರು ಪ್ರಾರಂಭದಲ್ಲೇ ಎಡವಿದಂತಿದೆ. ಕೈಕೇಯಿ ಪಾತ್ರ ಮಾಡುತ್ತಿರು ಲಾರಾ ದತ್ತ ಅವರ ಫೋಟೋಗಳು ಚಿತ್ರೀಕರಣದ ಸೆಟ್​ನಿಂದ ಲೀಕ್ ಆಗಿವೆ. ‘ಶೂಟಿಂಗ್​ ಜಾಗದಲ್ಲಿ ಮೊಬೈಲ್​ ಫೋನ್​ ನಿಷೇಧಿಸಿ’ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.

ಆರಂಭದಲ್ಲೇ ಎಡವಿದ ‘ರಾಮಾಯಣ’ ಚಿತ್ರತಂಡ; ಚಿತ್ರೀಕರಣದ ಫೋಟೋಗಳು ಲೀಕ್​
‘ರಾಮಾಯಣ’ ಚಿತ್ರೀಕರಣದ ಫೋಟೋಗಳು ಲೀಕ್​
ಮದನ್​ ಕುಮಾರ್​
|

Updated on: Apr 05, 2024 | 4:28 PM

Share

ಬಾಲಿವುಡ್​ ನಟ ರಣಬೀರ್​ ಕಪೂರ್​ (Ranbir Kapoor) ಅವರು ರಾಮನಾಗಿ ನಟಿಸಲಿರುವ ರಾಮಾಯಣ’ ಸಿನಿಮಾ (Ramayana Movie) ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಅಷ್ಟರಲ್ಲಾಗಲೇ ಶೂಟಿಂಗ್​ ಆರಂಭ ಆಗಿದೆ. ಈ ಸಿನಿಮಾಗೆ ನಿತೇಶ್​ ತಿವಾರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರ ಶೂಟಿಂಗ್​ ಶುರುವಾಗಿದೆ. ಅದರಲ್ಲಿ ಕೆಲವು ಕಲಾವಿದರು ಭಾಗಿ ಆಗಿದ್ದಾರೆ. ಬೇಸರದ ವಿಷಯ ಏನೆಂದರೆ, ಚಿತ್ರೀಕರಣದ ಸೆಟ್​ನಿಂದ ಕೆಲವು ಫೋಟೋಗಳು ವೈರಲ್​ ಆಗಿವೆ. ನಟಿ ಲಾರಾ ದತ್ತ (Lara Dutta), ನಟ ಅರುಣ್​ ಗೋವಿಲ್​ ಅವರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಇಂಥ ಹೈ ಬಜೆಟ್​ ಸಿನಿಮಾಗಳನ್ನು ಮಾಡುವಾಗ ಚಿತ್ರತಂಡದವರು ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ ರಾಮಾಯಣ ಸಿನಿಮಾ ತಂಡದವರು ಆರಂಭದಲ್ಲೇ ಎಡವಿದಂತಿದೆ. ಕೈಕೇಯಿ ಪಾತ್ರ ಮಾಡುತ್ತಿರು ಲಾರಾ ದತ್ತ ಅವರ ಫೋಟೋಗಳು ಶೂಟಿಂಗ್​ ಸೆಟ್​ನಿಂದ ಲೀಕ್ ಆಗಿವೆ. ಈ ಫೋಟೋಗಳನ್ನು ‘ಜೂಮ್​’ ವಾಹಿನಿ ಪ್ರಕಟಿಸಿದೆ.

ನಟ ಅರುಣ್​ ಗೋವಿಲ್​ ಅವರು ರಾಮಾಯಣ ಆಧಾರಿತ ಸಿನಿಮಾದಲ್ಲಿ ದಶರಥನ ಪಾತ್ರ ಮಾಡಲಿದ್ದಾರೆ. ರಮಾನಂದ್ ಸಾಗರ್​ ನಿರ್ದೇಶನ ಮಾಡಿದ್ದ ‘ರಾಮಾಯಣ’ ಧಾರಾವಾಹಿಯಲ್ಲಿ ಅರುಣ್​ ಗೋವಿಲ್​ ಅವರು ರಾಮನ ಪಾತ್ರ ಮಾಡಿ ಫೇಮಸ್​ ಆಗಿದ್ದರು. ಈಗ ಅವರಿಗೆ ಸಿನಿಮಾದಲ್ಲಿ ದಶರಥನ ಪಾತ್ರ ನೀಡಲಾಗಿದೆ. ಶೂಟಿಂಗ್​ ಸೆಟ್​ನಲ್ಲಿ ಅವರು ಬಾಲ ಕಲಾವಿದರ ಜೊತೆ ನಟಿಸುತ್ತಿರುವ ಫೋಟೋಗಳು ಸೋರಿಕೆ ಆಗಿವೆ.

ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಸಿನಿಮಾದ ಸೆಟ್ ಫೋಟೋ ಲೀಕ್; ಸಖತ್ ಅದ್ದೂರಿ

ಇನ್ಮುಂದೆ ಚಿತ್ರತಂಡದವರು ಎಚ್ಚರಿಕೆಯಿಂದ ಇರಬೇಕಾಗಿರುವುದು ಅನಿವಾರ್ಯ. ‘ಚಿತ್ರೀಕರಣದ ಸ್ಥಳದಲ್ಲಿ ಮೊಬೈಲ್​ ಫೋನ್​ ನಿಷೇಧ ಮಾಡಿ’ ಎಂದು ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಾರೆ ಎನ್ನಲಾಗಿದೆ. ಯಶ್​ ಅವರು ರಾವಣನ ಪಾತ್ರ ಮಾಡುತ್ತಾರೆ ಎಂದು ಕೂಡ ಸುದ್ದಿ ಹಬ್ಬಿದೆ. ಆದರೆ ಯಾವುದರ ಬಗ್ಗೆಯೂ ಚಿತ್ರತಂಡ ಅಧಿಕೃತ ಹೇಳಿಕೆ ನೀಡಿಲ್ಲ. ಮೂರು ಪಾರ್ಟ್​ಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. 2ನೇ ಪಾರ್ಟ್​ನಲ್ಲಿ ರಾವಣನ ಪಾತ್ರ ಬರಲಿದ್ದು, ಆಗ ಯಶ್​ ಕಾಣಿಸಿಕೊಳ್ಳುತ್ತಾರೆ ಎಂಬ ಮಾಹಿತಿ ಇದೆ. ಸದ್ಯಕ್ಕೆ ಬಾಲ ಕಲಾವಿದರ ದೃಶ್ಯಗಳನ್ನು ಚಿತ್ರಿಸಿಕೊಳ್ಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ