AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salman Khan: ಸಲ್ಮಾನ್ ಭೇಟಿಯಾದ ಮೇಲೆ ಅವರೆಡೆಗಿನ ದೃಷ್ಟಿಕೋನ ಬದಲಾಯಿತು; ಮಲಯಾಳಂ ನಟ ಟೊವಿನೊ

Tovino Thomas: ಮಲಯಾಳಂ ನಟ ಟೊವಿನೊ ಥಾಮಸ್ ಇತ್ತೀಚೆಗೆ ಸಲ್ಮಾನ್ ಖಾನ್​ರನ್ನು ಭೇಟಿಯಾಗಿದ್ದರು. ಅವರ ಮತ್ತೊಂದು ವ್ಯಕ್ತಿತ್ವ ತಮಗೆ ಪರಿಚಯವಾಯಿತು ಎಂದು ಟೊವಿನೊ ಹೇಳಿಕೊಂಡಿದ್ದಾರೆ.

Salman Khan: ಸಲ್ಮಾನ್ ಭೇಟಿಯಾದ ಮೇಲೆ ಅವರೆಡೆಗಿನ ದೃಷ್ಟಿಕೋನ ಬದಲಾಯಿತು; ಮಲಯಾಳಂ ನಟ ಟೊವಿನೊ
ಸಲ್ಮಾನ್ ಖಾನ್, ಟೊವಿನೊ ಥಾಮಸ್
TV9 Web
| Edited By: |

Updated on: Jan 01, 2022 | 8:21 AM

Share

ಮಲಯಾಳಂ ನಟ ಟೊವಿನೊ ಥಾಮಸ್ ಸದ್ಯ ಇತ್ತೀಚೆಗೆ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್​ರನ್ನು ಭೇಟಿಯಾಗಿದ್ದರು. ಆ ಒಂದು ಭೇಟಿ ಸಲ್ಮಾನ್​ರೆಡೆಗಿನ ದೃಷ್ಟಿಕೋನವನ್ನೇ ಸಂಪೂರ್ಣ ಬದಲಾಯಿಸಿತು ಎಂದಿದ್ದಾರೆ ಟೊವಿನೊ. ಸಂದರ್ಶನವೊಂದರಲ್ಲಿ ಮಾತನಾಡಿರುವ ಟೊವಿನೊ, ತಮಗೆ ವರ್ಕೌಟ್ ಪ್ರಾರಂಭಿಸಲು ಅಂದಿನ ಕಾಲದಲ್ಲಿ ಸಲ್ಮಾನ್ ಅವರೇ ಸ್ಫೂರ್ತಿ ಎಂದಿದ್ದಾರೆ. ‘ಓ ಓ ಜಾನೆ ಜಾನಾ’ದಲ್ಲಿ ಸಲ್ಮಾನ್ ಶರ್ಟ್​​ಲೆಸ್ ಆಗಿ ಕಾಣಿಸಿಕೊಂಡು ಗಿಟಾರ್ ಹಿಡಿದುಕೊಂಡಿದ್ದರು. ಅದು ಅಂದಿನ ಕಾಲದ ಯುವತಿಯರಿಗೆ ಕನಸಿನಂತೆ ಕಂಡಿದ್ದರೆ, ಯುವಕರು ತಾವೂ ಸಲ್ಮಾನ್​ರಂತೆ ಆಗಬೇಕು ಎಂಬ ಗುರಿ ಇಟ್ಟುಕೊಂಡಿದ್ದರು. ಇದಕ್ಕೆ ಟೊವಿನೋ ಕೂಡ ಹೊರತಾಗಿರಲಿಲ್ಲ. ಆ ಹಾಡನ್ನು ನೋಡಿ ತಾನೂ ವರ್ಕೌಟ್ ಮಾಡಿ, ಸಲ್ಮಾನ್​ರಂತೆ ದೇಹವನ್ನು ಹೊಂದಬೇಕು ಎಂದು ಶಾಲೆಯಲ್ಲಿರುವಾಗ ಟೊವಿನೊ ಕನಸು ಕಾಣುತ್ತಿದ್ದರಂತೆ. 10ನೇ ತರಗತಿ ಮುಗಿದ ತಕ್ಷಣ ಅವರು ಜಿಮ್​ಗೂ ಸೇರಿಕೊಂಡರಂತೆ. ತನಗೆ ವರ್ಕೌಟ್ ಮಾಡಲು ಪ್ರೇರಣೆಯಾದ ವ್ಯಕ್ತಿಯನ್ನು ಹಲವು ವರ್ಷಗಳ ನಂತರ ಅವರ ಆಫೀಸ್​ನಲ್ಲೇ ಭೇಟಿಯಾದೆ ಎಂದು ತಮ್ಮ ಕನಸು ನನಸಾದ ಸಂತಸವನ್ನು ಹಂಚಿಕೊಂಡಿದ್ದಾರೆ ಟೊವಿನೊ.

ಆರ್​​ಜೆ ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ ಟೊವಿನೊ ಸಲ್ಮಾನ್ ವ್ಯಕ್ತಿತ್ವವನ್ನು ವಿವರಿಸಿದ್ದಾರೆ. ಮೊದಲಿಗೆ ಸಲ್ಮಾನ್​ರನ್ನು ಭೇಟಿಯಾಗಲು ತಾನು ಮುಂಚಿತವಾಗಿ ಕೇಳಿದ್ದೆ.  ಆದರೆ ಅವರು ಬಹಳ ಸೌಮ್ಯ ಸ್ವಭಾವದ ವ್ಯಕ್ತಿ. ಯಾವುದೇ ಅಹಂಕಾರವಿಲ್ಲ  ಎಂದಿದ್ಧಾರೆ ಟೊವಿನೊ.

ಅಷ್ಟೇ ಅಲ್ಲದೇ ಸಲ್ಮಾನ್​ರನ್ನು ಭೇಟಿಯಾಗಲು 10 ನಿಮಿಷಗಳ ಅವಕಾಶ ಸಿಕ್ಕಿತಂತೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಲ್ಮಾನ್ ಅವರ ಒಂದು ಆಯಾಮ ಕಾಣಿಸುತ್ತದೆ. ಆದರೆ ನೇರವಾಗಿ ಭೇಟಿಯಾದಾಗ ಅವರು ಎಷ್ಟು ವಿನಮ್ರ ವ್ಯಕ್ತಿ ಎಂಬುದು ಮನವರಿಕೆಯಾಗುತ್ತದೆ. ಸಲ್ಮಾನ್ ಭೇಟಿಯಿಂದ ಅವರೆಡೆಗಿನ ತಮ್ಮ ದೃಷ್ಟಿಕೋನ ಬದಲಾಯಿತು. ಎಷ್ಟೇ ದೊಡ್ಡ ವ್ಯಕ್ತಿಯಾದವರೂ ಅವರು ಎಷ್ಟು ವಿನಮ್ರರಾಗಿದ್ದಾರೆಂದರೆ.. ಅವರನ್ನು ನೋಡಿ ನಾವೆಲ್ಲಾ ಕಲಿಯಬೇಕು ಎಂದಿದ್ದಾರೆ ಟೊವಿನೊ ಥಾಮಸ್.

ಕಳೆದ ತಿಂಗಳು ಟೊವಿನ್ ಸಲ್ಮಾನ್ ಅವರೊಂದಿಗೆ ತೆಗೆಸಿಕೊಂಡ ಚಿತ್ರವನ್ನು ಹಂಚಿಕೊಂಡಿದ್ದರು. ಸಲ್ಮಾನ್ ಅವರದ್ದು ಪ್ರೇರಣಾದಾಯಿ ವ್ಯಕ್ತಿತ್ವ ಎಂದು ಟೊವಿನೊ ಅದರಲ್ಲಿ ಬರೆದುಕೊಂಡಿದ್ದರು. ಚಿತ್ರಗಳ ವಿಷಯಕ್ಕೆ ಬಂದರೆ, ಟೊವಿನ್ ಸದ್ಯ ‘ಮಿನ್ನಲ್ ಮುರುಳಿ’ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ನೆಟ್​​ಫ್ಲಿಕ್ಸ್​​ನಲ್ಲಿ ಚಿತ್ರ ತೆರೆಕಂಡಿದ್ದು ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.

ಇದನ್ನೂ ಓದಿ:

2022ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳಲ್ಲಿ ಸ್ಥಾನ ಪಡೆದ ಕನ್ನಡದ ಏಕೈಕ ಚಿತ್ರ ‘ಕೆಜಿಎಫ್​ 2’ 

‘ಆರ್​ಆರ್​ಆರ್​’ ಬೆಂಗಳೂರು ಪ್ರೀ ರಿಲೀಸ್​ ಇವೆಂಟ್​ನಲ್ಲಿ ದಿಗ್ಗಜರು; ಸ್ಥಳ, ಸಮಯದ ಬಗ್ಗೆ ಇಲ್ಲಿದೆ ಮಾಹಿತಿ

ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ