ಮನಸ್ಸು ಬದಲಾಯಿಸಿದ ಕೆಜಿಎಫ್ ಬೆಡಗಿ; ಭಾರತದ ಸಮುದ್ರ ತಟದಲ್ಲೇ ನೆರವೇರಲಿದೆ ಅದ್ದೂರಿ ಕಲ್ಯಾಣ

Mouni Roy | Suraj Nambiar: ಬಾಲಿವುಡ್ ಬೆಡಗಿ ಮೌನಿ ರಾಯ್ ವಿವಾಹದ ತಯಾರಿಯಲ್ಲಿದ್ದಾರೆ. ಗೆಳೆಯ ಸೂರಜ್ ನಂಬಿಯಾರ್ ಜತೆ ಹಸೆಮಣೆ ಏರಲಿರುವ ಅವರು, ಭಾರತದಲ್ಲೇ ವಿವಾಹವಾಗಲು ನಿರ್ಧರಿಸಿದ್ದಾರೆ.

ಮನಸ್ಸು ಬದಲಾಯಿಸಿದ ಕೆಜಿಎಫ್ ಬೆಡಗಿ; ಭಾರತದ ಸಮುದ್ರ ತಟದಲ್ಲೇ ನೆರವೇರಲಿದೆ ಅದ್ದೂರಿ ಕಲ್ಯಾಣ
ಮೌನಿ ರಾಯ್
Follow us
| Updated By: shivaprasad.hs

Updated on:Jan 12, 2022 | 3:58 PM

‘ಕೆಜಿಎಫ್’ (KGF) ಚಿತ್ರದ ಹಿಂದಿ ಅವತರಣಿಕೆಯಲ್ಲಿ ಮೂಡಿ ಬಂದಿದ್ದ ‘ಗಲಿ ಗಲಿ’ (Gali Gali) ಹಾಡಿಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಮೌನಿ ರಾಯ್ (Mouni Roy) ಇದೀಗ ಮದುವೆಯ ತಯಾರಿಯಲ್ಲಿದ್ದಾರೆ. ‘ನಾಗಿಣಿ’ಯಾಗಿ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದ್ದ ಮೌನಿ ರಾಯ್ ನಂತರ ಬಾಲಿವುಡ್​ನಲ್ಲಿ ಗುರುತಿಸಿಕೊಂಡರು. ಇತ್ತೀಚೆಗೆ ಅವರು ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ (Suraj Nambiar) ಜತೆ ಸುತ್ತಾಡುತ್ತಿದ್ದಾರೆ. 2022ರಲ್ಲಿ ಈರ್ವರು ವಿವಾಹವಾಗಲಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ಈ ಜೋಡಿ ‘ಡೆಸ್ಟಿನೇಷನ್ ವೆಡ್ಡಿಂಗ್​’ಗೆ ಪ್ಲಾನ್ ಮಾಡಿತ್ತು. ಅದರಲ್ಲೂ ದುಬೈನಲ್ಲಿಯೇ ಈರ್ವರೂ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಜೋಡಿ ಇದೀಗ ನಿರ್ಧಾರ ಬದಲಿಸಿದೆ. ಅಲ್ಲದೇ ಭಾರತದ ಸಮುದ್ರ ಕಿನಾರೆಯಲ್ಲಿ ವಿವಾಹವಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ಮೌನಿ ಹಾಗೂ ಸೂರಜ್ ಯೋಜಿಸಿದ್ದು, ಪಂಚತಾರಾ ಹೋಟೆಲ್ ಒಂದನ್ನು ಬುಕ್ ಮಾಡಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಇದೇ ಜನವರಿ 27ರಂದು ಈರ್ವರೂ ಹಸೆಮಣೆ ಏರಲಿದ್ದಾರೆ. ಈಗಾಗಲೇ ಅತಿಥಿಗಳಿಗೆ ಆಹ್ವಾನ ಹೋಗಿದ್ದು, ಹೊರಗೆಲ್ಲೂ ಹೆಚ್ಚು ಸುದ್ದಿ ಮಾಡದಂತೆ ಸೂಚಿಸಲಾಗಿದೆ ಎಂದು ಮೌನಿ ರಾಯ್ ಆಪ್ತ ಮೂಲಗಳು ತಿಳಿಸಿವೆ.

ಖಾಸಗಿ ಮಾಧ್ಯಮಗಳ ವರದಿಯ ಪ್ರಕಾರ ಪಶ್ಚಿಮ ಗೋವಾದ ವೆಗೇಟರ್ ಬೀಚ್​ನಲ್ಲಿ​​ (Vagator beach) ವಿವಾಹ ಸಮಾರಂಭ ನಡೆಯಲಿದೆ. ಮಧ್ಯಾಹ್ನದ ನಂತರ ಕಾರ್ಯಕ್ರಮ ಜರುಗಲಿದ್ದು, ಸಮುದ್ರಾಭಿಮುಖವಾಗಿ ನಡೆಯುವ ವಿಶೇಷ ವಿವಾಹ ಮಹೋತ್ಸವ ಇದಾಗಿರಲಿದೆ. ಇದಲ್ಲದೇ ಡಾನ್ಸ್​ ಮೂಲಕವೇ ಹೆಸರು ಮಾಡಿರುವ ಮೌನಿ ವಿವಾಹ ಸಮಾರಂಭದಲ್ಲೂ ವಿಶೇಷ ಕಾರ್ಯಕ್ರಮಕ್ಕೆ ತಯಾರಿ ನಡೆಸಿದ್ದಾರಂತೆ. ಜನವರಿ 28ರಂದು ವಿಶೇಷ ನೃತ್ಯ ಕಾರ್ಯಕ್ರಮ ನಡೆಯಲಿದ್ದು, ಅದಕ್ಕೆ ಮೌನಿ ತಮ್ಮ ಸ್ನೇಹಿತರಾದ ಪ್ರತೀಕ್ ಉಟೇಕರ್ ಹಾಗೂ ರಾಹುಲ್ ಶೆಟ್ಟಿ ಅವರೊಂದಿಗೆ ಅಭ್ಯಾಸವನ್ನೂ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಮೌನಿ ರಾಯ್, ಸೂರಜ್ ನಂಬಿಯಾರ್:

Mouni Roy

ಮೌನಿ ರಾಯ್, ಸೂರಜ್ ನಂಬಿಯಾರ್

ಸದ್ಯದ ಮಾಹಿತಿಯ ಪ್ರಕಾರ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್, ಏಕ್ತಾ ಕಪೂರ್, ವಿನ್ಯಾಸಗಾರ ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವರು ವಿವಾಹದಲ್ಲಿ ಭಾಗವಹಿಸಲಿದ್ದಾರೆ. ಮೌನಿ ರಾಯ್ ಗೋವಾ ಹಾಗೂ ಮುಂಬೈ ನಡುವೆ ಓಡಾಡುತ್ತಾ ತಯಾರಿ ಗಮನಿಸುತ್ತಿದ್ದಾರೆ. ಮದುಮಗ ಸೂರಜ್ ನಂಬಿಯಾರ್ ಕೂಡ ಭಾರತಕ್ಕೆ ಆಗಮಿಸಿದ್ದಾರೆ, ಆದರೆ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ ಎಂದಿವೆ ಬಾಲಿವುಡ್ ವರದಿಗಳು.

ಇದನ್ನೂ ಓದಿ:

‘ಈ ಜಾಥಾದ ಚಿತ್ರಕಥೆ ಸರಿಯಿಲ್ಲ; ಕಥೆಯೇ ಫ್ಲಾಪ್​’: ಮೇಕೆದಾಟು ಪಾದಯಾತ್ರೆ ಬಗ್ಗೆ ನಟಿ ಶ್ರುತಿ ಖಂಡನೆ

Trisha Krishnan: ಜೀವನದಲ್ಲಿ ಮೊದಲ ಬಾರಿಗೆ ‘ನೆಗೆಟಿವ್’ ರಿಪೋರ್ಟ್ ನೋಡಿ ಖುಷಿಪಟ್ಟ ತ್ರಿಷಾ; 2022ಕ್ಕೆ ರೆಡಿ ಎಂದ ನಟಿ

Published On - 3:53 pm, Wed, 12 January 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ