AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೌನಿ ರಾಯ್ ರೆಸ್ಟೋರೆಂಟ್ ಸಖತ್ ದುಬಾರಿ; ಜಾಮೂನು, ಭೇಲ್​ ಪುರಿಗೆ 400 ರೂಪಾಯಿ

ಮೌನಿ ರಾಯ್ ಅವರ 'ಬದ್ಮಾಶ್' ರೆಸ್ಟೋರೆಂಟ್ ಬೆಂಗಳೂರು ಸೇರಿದಂತೆ ಹಲವೆಡೆ ದುಬಾರಿ ಬೆಲೆಗಳಿಂದ ಸುದ್ದಿಯಾಗಿದೆ. ಜಾಮೂನು, ಅವಕಾಡೋ ಭೇಲ್ ಪುರಿ, ತಂದೂರಿ ರೋಟಿ ಸೇರಿದಂತೆ ಹಲವು ತಿನಿಸುಗಳಿಗೆ 300 ರೂ.ನಿಂದ 800 ರೂ.ವರೆಗೆ ಬೆಲೆ ಇದೆ. ಸೆಲೆಬ್ರಿಟಿಗಳ ಹೋಟೆಲ್‌ಗಳಿಗೆ ಅಭಿಮಾನಿಗಳು ಖಂಡಿತಾ ಬರುತ್ತಾರೆ ಎಂಬ ನಂಬಿಕೆಯೇ ಈ ದುಬಾರಿ ಬೆಲೆಗೆ ಕಾರಣ ಎನ್ನಲಾಗಿದೆ.

ಮೌನಿ ರಾಯ್ ರೆಸ್ಟೋರೆಂಟ್ ಸಖತ್ ದುಬಾರಿ; ಜಾಮೂನು, ಭೇಲ್​ ಪುರಿಗೆ 400 ರೂಪಾಯಿ
ಮೌನಿ ರಾಯ್
ರಾಜೇಶ್ ದುಗ್ಗುಮನೆ
|

Updated on: Oct 27, 2025 | 12:49 PM

Share

ಎಲ್ಲಾ ಸೆಲೆಬ್ರಿಟಿಗಳು ಸಿನಿಮಾ ರಂಗದಲ್ಲಿ ಯಶಸ್ಸು ಕಂಡ ಬಳಿಕ ಯಾವುದಾದರೂ ಒಂದು ಉದ್ಯಮ ಆರಂಭಿಸುತ್ತಾರೆ. ಬಾಲಿವುಡ್​ನಲ್ಲಿ ಈ ಟ್ರೆಂಡ್ ಜೋರಾಗಿದೆ. ಅನೇಕ ಸೆಲೆಬ್ರಿಟಿಗಳು ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ. ಇನ್ನೂ ಕೆಲವು ಸೆಲೆಬ್ರಿಟಿಗಳು ತಮ್ಮದೇ ಹೋಟೆಲ್ ಉದ್ಯಮ ಹೊಂದಿದ್ದಾರೆ. ಇದಕ್ಕೆ ಮೌನಿ ರಾಯ್ (Mouni Roy) ಕೂಡ ಹೊರತಾಗಿಲ್ಲ. ಅವರು ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಆರು ರೆಸ್ಟೋರೆಂಟ್ ಹೊಂದಿದ್ದಾರೆ. ಈ ರೆಸ್ಟೋರೆಂಟ್​ನ ತಿನಿಸುಗಳ ಬೆಲೆ ಅನೇಕರಿಗೆ ಅಚ್ಚರಿ ಮೂಡಿಸಿದೆ.

‘ಬದ್​ಮಾಶ್’ ಅನ್ನೋದು ಮೌನಿ ರಾಯ್ ರೆಸ್ಟೋರೆಂಟ್ ಹೆಸರು. ಬೆಂಗಳೂರಿನ ಸರ್ಜಾಪುರದಲ್ಲಿ ಅವರು 2023ರಲ್ಲಿ ಮೊದಲ ಔಟ್​ಲೆಟ್ ಆರಂಭಿಸಿದರು. ಈಗ ಮುಂಬೈ, ಕೋಲ್ಕತ್ತ ಸೇರಿದಂತೆ ಆರು ಕಡೆಗಳಲ್ಲಿ ಅವರ ಹೋಟೆಲ್ ಇದೆ. ಈ ರೆಸ್ಟೋರೆಂಟ್​​ಗೆ ಭೇಟಿ ನೀಡಬೇಕು ಎಂದರೆ ನೀವು ದೊಡ್ಡ ಮೊತ್ತ ತೆತ್ತಲು ರೆಡಿ ಇರಬೇಕು. ಇಲ್ಲಿನ ತಿಂಡಿಗಳ ಬೆಲೆ 300 ರೂಪಾಯಿಯಿಂದ ಆರಂಭ ಆಗಿ 800 ರೂಪಾಯಿವರೆಗೆ ಇದೆ.

ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದ ಪ್ರಕಾರ, ಜಾಮೂನಿನ ಬೆಲೆ 410 ರೂಪಾಯಿ. ಅವಕಾಡೋ ಭೇಲ್ ಬೆಲೆ 395 ರೂಪಾಯಿ.  ಮಸಾಲಾ ಪೀನಟ್, ಮಸಾಲಾ ಪಾಪಡ್, ಕ್ರಿಸ್ಪಿ ಕಾರ್ನ್ ಹಾಗು ಶೇವ್ ಪುರಿ ಬೆಲೆ 295 ರೂಪಾಯಿ. ಸಿಗಡಿಯಿಂದ ಮಾಡಿದ ತಿಂಡಿಗಳ ಬೆಲೆ 795 ರೂಪಾಯಿ. ತಂದೂರಿ ರೋಟಿ ಒಂದಕ್ಕೆ 105 ರೂಪಾಯಿ. ನಾನ್ ಬೆಲೆ 115 ರೂಪಾಯಿ.

View this post on Instagram

A post shared by BADMAASH (@badmaashla)

ತಾವು ಆರಂಭಿಸಿದ ಹೋಟೆಲ್ ಎಂಬ ಕಾರಣಕ್ಕೆ ಅವರ ಫ್ಯಾನ್ಸ್ ಬಂದೇ ಬರುತ್ತಾರೆ ಎಂಬ ನಂಬಿಕೆ ಸೆಲೆಬ್ರಿಟಿಗಳದ್ದು. ಈ ಕಾರಣದಿಂದಲೇ ದುಬಾರಿ ಬೆಲೆಯನ್ನು ನಿಗದಿ ಮಾಡಲಾಗುತ್ತದೆ. ಶಿಲ್ಪಾ ಶೆಟ್ಟಿ ಅವರು ಮುಂಬೈನಲ್ಲಿ ತಮ್ಮದೇ ಆದ ಹೋಟೆಲ್ ಹೊಂದಿದ್ದಾರೆ. ಈ ಹೋಟೆಲ್​​ನಿಂದ ಶಿಲ್ಪಾ ಕೋಟಿ ಕೋಟಿ ಬಿಸ್ನೆಸ್ ಮಾಡುತ್ತಿದೆ.

ಇದನ್ನೂ ಓದಿ: ವೇದಿಕೆಯಲ್ಲಿ ಕೆಜಿಎಫ್ ಹಾಡಿಗೆ ಮೌನಿ ರಾಯ್ ಭರ್ಜರಿ ಡ್ಯಾನ್ಸ್

ಮೌನಿ ರಾಯ್ ಅವರು 2006ರಲ್ಲಿ ಚಿತ್ರರಂಗಕ್ಕೆ ಬಂದರು. ಅವರು ಸಿನಿಮಾ ಮಾಡಿದ್ದು ಕಡಿಮೆ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಾ ಗಮನ ಸೆಳೆಯುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ