AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ಗಾಯತ್ರಿ ಮಂತ್ರ, ಹನುಮಾನ್ ಚಾಲೀಸ್ ಕೇಳೋದು ಇಷ್ಟ’; ಮುಸ್ಲಿಂ ನಟಿ

ಮುಸ್ಲಿಂ ನಟಿ ನರ್ಗಿಸ್ ಫಕ್ರಿ ಅವರು ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ತಮ್ಮ ಆಳವಾದ ನಂಬಿಕೆಯನ್ನು ಬಹಿರಂಗಪಡಿಸಿದ್ದಾರೆ. ಹನುಮಾನ್ ಚಾಲೀಸಾ ಮತ್ತು ಗಾಯತ್ರಿ ಮಂತ್ರವನ್ನು ಕೇಳುವುದು ಮತ್ತು ಪಠಿಸುವುದು ತಮಗೆ ಶಾಂತಿ ಮತ್ತು ಏಕಾಗ್ರತೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ. ವರ್ಷಕ್ಕೆ ಎರಡು ಬಾರಿ ಒಂಬತ್ತು ದಿನಗಳ ಉಪವಾಸವನ್ನು ಆಚರಿಸುವುದಾಗಿ ಅವರು ತಿಳಿಸಿದ್ದಾರೆ.

‘ನನಗೆ ಗಾಯತ್ರಿ ಮಂತ್ರ, ಹನುಮಾನ್ ಚಾಲೀಸ್ ಕೇಳೋದು ಇಷ್ಟ’; ಮುಸ್ಲಿಂ ನಟಿ
ನರ್ಗಿಸ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jul 07, 2025 | 8:14 AM

Share

ಮುಸ್ಲಿಮರಾಗಿದ್ದರೂ ಶಿವನಲ್ಲಿ ಅಪಾರ ನಂಬಿಕೆ ಹೊಂದಿರುವ ನಟಿಯರಲ್ಲಿ ಸಾರಾ ಅಲಿ ಖಾನ್ ಮತ್ತು ನುಶ್ರತ್ ಭರೂಚಾ ಸೇರಿದ್ದಾರೆ. ಸಾರಾ ಆಗಾಗ್ಗೆ ದೇವಾಲಯಗಳಿಗೆ ಭೇಟಿ ನೀಡುತ್ತಾ ಶಿವನನ್ನು ಪೂಜಿಸುವುದನ್ನು ಕಾಣಬಹುದು. ಶಿವನಲ್ಲಿ ತಮಗೆ ವಿಶೇಷ ನಂಬಿಕೆ ಇದೆ ಎಂದು ನುಶ್ರತ್ ಹೇಳಿದ್ದಾರೆ. ಈಗ ಮತ್ತೊಬ್ಬ ಮುಸ್ಲಿಂ ನಟಿ ತಮ್ಮ ಧಾರ್ಮಿಕ ನಂಬಿಕೆಗಳ ಬಗ್ಗೆ ಬಹಿರಂಗಪಡಿಸಿದ್ದಾರೆ. ಹನುಮಾನ್ ಚಾಲೀಸಾ ಓದುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಅವರು ಹೇಳಿದ್ದಾರೆ. ಅದೇ ರೀತಿ, ತಾವು ಗಾಯತ್ರಿ ಮಂತ್ರವನ್ನು ಸಹ ಕೇಳುವುದಾಗಿ ಹೇಳಿದ್ದಾರೆ. ಈ ನಟಿ ಬೇರೆ ಯಾರೂ ಅಲ್ಲ, ಅಕ್ಷಯ್ ಕುಮಾರ್ ಅವರ ‘ಹೌಸ್‌ಫುಲ್ 5′ ಚಿತ್ರದ ನಟಿ ನರ್ಗಿಸ್ ಫಕ್ರಿ.

45 ವರ್ಷದ ನರ್ಗಿಸ್ ಫಕ್ರಿ ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿ ಹುಟ್ಟಿ ಬೆಳೆದರು. ಅವರ ತಂದೆಯ ಹೆಸರು ಮೊಹಮ್ಮದ್ ಫಕ್ರಿ ಮತ್ತು ಅವರ ತಾಯಿಯ ಹೆಸರು ಮೇರಿ ಫಕ್ರಿ. ನರ್ಗಿಸ್‌ಗೆ ಆಲಿಯಾ ಎಂಬ ತಂಗಿಯೂ ಇದ್ದಾಳೆ. ಮುಸ್ಲಿಂ ಆಗಿದ್ದರೂ, ಹಿಂದೂ ಆಚರಣೆಗಳನ್ನು ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ನರ್ಗಿಸ್ ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

‘ನ್ಯೂಸ್ 9 ಲೈವ್’ ಜೊತೆ ಮಾತನಾಡಿದ ನರ್ಗಿಸ್ , ’ನಾನು ಧಾರ್ಮಿಕಳಲ್ಲ, ಆದರೆ ನಾನು ಆಧ್ಯಾತ್ಮಿಕದ ಬಗ್ಗೆ ನಂಬಿಕೆ ಹೊಂದಿದ್ದೇನೆ. ನನಗೆ ಎಲ್ಲಾ ಧರ್ಮಗಳ ಬಗ್ಗೆ ತಿಳಿದುಕೊಳ್ಳಲು ಇಷ್ಟ. ನಾನು ಯಾರ ಮನೆಯಲ್ಲಿದ್ದರೂ ಗಾಯತ್ರಿ ಮಂತ್ರವನ್ನು ಕೇಳಬಹುದು. ಗಾಯತ್ರಿ ಮಂತ್ರ, ಹನುಮಾನ್ ಚಾಲೀಸಾ ಕೇಳಲು ಮತ್ತು ಅದನ್ನು ಓದಲು ನನಗೆ ಇಷ್ಟ’ ಎಂದು ಹೇಳಿದರು.

ಇದನ್ನೂ ಓದಿ
Image
‘ಬಂಧನ’ ಸಿನಿಮಾ ತಡೆಯಲು ಬ್ಲೇಡ್ ಹೊಡೆದು, ಖಾರದ ಪುಡಿ ಎರಚಿದ್ದರು
Image
‘ಟಾಕ್ಸಿಕ್’ ಚಿತ್ರದಿಂದ ರವಿ ಬಸ್ರೂರು ಔಟ್? ರಾಕ್​ಸ್ಟಾರ್​ಗೆ ಮಣೆ?  
Image
ಮತ್ತೊಂದು ‘ಅನಿಮಲ್’; ‘ಧುರಂಧರ್’ ಚಿತ್ರದಲ್ಲಿ ರಣವೀರ್ ಸಿಂಗ್ ರಕ್ಕಸ ಅವತಾರ
Image
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ

ಅಷ್ಟೇ ಅಲ್ಲ, ವರ್ಷಕ್ಕೆ ಎರಡು ಬಾರಿ ಒಂಬತ್ತು ದಿನಗಳ ಕಾಲ ಉಪವಾಸ ಮಾಡುವುದಾಗಿಯೂ ಅವರು ಹೇಳಿದರು. ಈ ಉಪವಾಸದ ಸಮಯದಲ್ಲಿ, ಅವರು ಏನನ್ನೂ ತಿನ್ನುವುದಿಲ್ಲ, ನೀರು ಮಾತ್ರ ಕುಡಿಯುತ್ತಾರೆ. ಇದು ತುಂಬಾ ಕಷ್ಟಕರವಾದರೂ, ಉಪವಾಸದ ನಂತರ ಅವರ ಏಕಾಗ್ರತೆ ಹೆಚ್ಚಾಗುವುದನ್ನು ಅವರು ಗಮನಿಸಿದ್ದಾರೆ.

ಇದನ್ನೂ ಓದಿ: ಸೆಟ್​​ನಲ್ಲಿ ಹೀಗೆಲ್ಲ ತರ್ಲೆ ಮಾಡುತ್ತಾರೆ ನಟಿ ಸಾರಾ ಅಲಿ ಖಾನ್

‘ಕೆಲಸದಲ್ಲಿ ನನಗೆ ನಿರಂತರ ಒತ್ತಡ ಉಂಟಾದಾಗ, ನಾನು ಹನುಮಾನ್ ಚಾಲೀಸಾ ಕೇಳುತ್ತೇನೆ. ನಾನು ಯಾವ ರೀತಿಯ ಹಾಡುಗಳನ್ನು ಕೇಳುತ್ತೇನೆ ಎಂದು ಅನೇಕ ಜನರು ನನ್ನನ್ನು ಕೇಳುತ್ತಾರೆ. ನನ್ನ ಉತ್ತರವನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದರೆ ನಾನು ವಿವಿಧ ಮಂತ್ರಗಳನ್ನು ಕೇಳುತ್ತೇನೆ. ನಾನು ಹನುಮಾನ್ ಚಾಲೀಸಾ ಮತ್ತು ಗಾಯತ್ರಿ ಮಂತ್ರವನ್ನು ಕೇಳುತ್ತೇನೆ, ಅದು ಆತಂಕವನ್ನು ಕಡಿಮೆ ಮಾಡುತ್ತದೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!