AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಕ್ಷಯ್ ಕುಮಾರ್​ಗೆ ಯಾವುವೇ ನಷ್ಟ ಇಲ್ಲ’; ನೇರವಾಗಿ ಹೇಳಿದ ನಿರ್ದೇಶಕ

‘ನೋ ಎಂಟ್ರಿ’ಯಲ್ಲಿ ಅನಿಲ್ ಕಪೂರ್ ಹಾಗೂ ಸಲ್ಮಾನ್ ಖಾನ್ ಇದ್ದರು. ‘ಭೂಲ್ ಭುಲಯ್ಯ’ದಲ್ಲಿ ಅಕ್ಷಯ್ ಕುಮಾರ್ ಇದ್ದರು. ಈಗ ಸೀಕ್ವೆಲ್​ಗಳಿಗೆ ಬೇರೆ ಹೀರೋಗಳ ಎಂಟ್ರಿ ಆಗಿದೆ. ಈ ಬಗ್ಗೆ ಅಕ್ಷಯ್​ಗಾಗಲಿ ಸಲ್ಲುಗಾಗಲೀ ಬೇಸರ ಇಲ್ಲ ಎಂದಿದ್ದಾರೆ ಅನೀಸ್.

‘ಅಕ್ಷಯ್ ಕುಮಾರ್​ಗೆ ಯಾವುವೇ ನಷ್ಟ ಇಲ್ಲ’; ನೇರವಾಗಿ ಹೇಳಿದ ನಿರ್ದೇಶಕ
ಅಕ್ಷಯ್
ರಾಜೇಶ್ ದುಗ್ಗುಮನೆ
|

Updated on: May 31, 2024 | 7:35 AM

Share

ಅಕ್ಷಯ್ ಕುಮಾರ್ (Akshay Kumar) ಅವರು ಬಾಲಿವುಡ್​ನ ಸ್ಟಾರ್ ನಟ. ಇತ್ತೀಚೆಗೆ ಅವರ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿವೆ. ಆದರೆ, ಯಾವುದೂ ಗೆಲುವಿನ ನಗೆ ಬೀರಿಲ್ಲ. ಈ ಬಗ್ಗೆ ಅವರ ಅಭಿಮಾನಿಗಳಿಗೆ ಬೇಸರ ಇದೆ. ಈ ಮಧ್ಯೆ ಕೆಲವು ಸೀಕ್ವೆಲ್​ಗಳಿಂದ ಅಕ್ಷಯ್ ಕುಮಾರ್ ಅವರನ್ನು ಕೈ ಬಿಡಲಾಗಿದೆ. ಇದು ಅಕ್ಷಯ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಆದರೆ, ಈ ನಿರ್ಧಾರದಿಂದ ಅಕ್ಷಯ್ ಕುಮಾರ್​ಗೆ ಯಾವುದೇ ನಷ್ಟ ಇಲ್ಲ ಎಂದು ಖ್ಯಾತ ನಿರ್ದೇಶಕರೊಬ್ಬರು ಹೇಳಿದ್ದಾರೆ.

ನಿರ್ದೇಶಕ ಅನೀಸ್ ಬಜ್ಮೀ ಅವರು ಮಾತನಾಡಿದ್ದಾರೆ. ಅವರು ‘ನೋ ಎಂಟ್ರಿ 2’ ಹಾಗೂ ‘ಭೂಲ್ ಭುಲಯ್ಯ 3’ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ನೋ ಎಂಟ್ರಿ’ಯಲ್ಲಿ ಅನಿಲ್ ಕಪೂರ್ ಹಾಗೂ ಸಲ್ಮಾನ್ ಖಾನ್ ಇದ್ದರು. ‘ಭೂಲ್ ಭುಲಯ್ಯ’ದಲ್ಲಿ ಅಕ್ಷಯ್ ಕುಮಾರ್ ಇದ್ದರು. ಈಗ ಸೀಕ್ವೆಲ್​ಗಳಿಗೆ ಬೇರೆ ಹೀರೋಗಳ ಎಂಟ್ರಿ ಆಗಿದೆ. ಈ ಬಗ್ಗೆ ಅಕ್ಷಯ್​ಗಾಗಲಿ ಸಲ್ಲುಗಾಗಲೀ ಬೇಸರ ಇಲ್ಲ ಎಂದಿದ್ದಾರೆ ಅನೀಸ್.

‘ನಾನು ಅಕ್ಷಯ್ ಜೊತೆ ಈಗಲೂ ಒಳ್ಳೆಯ ಬಾಂಧವ್ಯ ಹೊಂದಿದ್ದೇನೆ. ಅವರ ಜೊತೆ ಸಿಂಗ್ ಈಸ್ ಕಿಂಗ್ ಹಾಗೂ ವೆಲ್​ಕಮ್ ಹೆಸರಿನ ಎರಡು ಸುಂದರ ಸಿನಿಮಾ ಮಾಡಿದ್ದೇನೆ. ಭೂಲ್ ಭುಲಯ್ಯ ವಿಚಾರದಲ್ಲಿ ನಿರ್ಧಾರ ತೆಗೆದುಕೊಂಡಿದ್ದು ನಿರ್ಮಾಪಕರು. ನನ್ನನ್ನು ಕೇಳಿದರೆ ನಾನು ಅವರ ಜೊತೆ ಯಾವಾಗಲೂ ಕೆಲಸ ಮಾಡಬೇಕು ಎಂದು ಬಯಸುತ್ತೇನೆ. ಅವರು ಒಳ್ಳೆಯ ನಟ. ನಾವು ಒಳ್ಳೆಯ ಗೆಳೆಯರು. ಅವರು ದೊಡ್ಡ ನಟ. ಅವರು ಸಿನಿಮಾ ಮಾಡುತ್ತಿಲ್ಲ ಎಂದರೆ ಅದು ಬೇರೆಯವರಿಗೆ ನಷ್ಟವೇ ಹೊರತು, ಇದರಿಂದ ಅವರಿಗೆ ಯಾವುದೇ ನಷ್ಟ ಇಲ್ಲ’ ಎಂದಿದ್ದಾರೆ ಅನೀಸ್.

‘ನೋ ಎಂಟ್ರಿ 2’ ಚಿತ್ರದಲ್ಲಿ ಸಲ್ಮಾನ್ ಖಾನ್ ಇಲ್ಲ. ಈ ಬಗ್ಗೆ ಮಾತನಾಡಿರುವ ಅವರು. ‘ಆ ಬಗ್ಗೆ ನಾನು ಸಲ್ಮಾನ್ ಖಾನ್ ಜೊತೆ ಮಾತನಾಡಿಲ್ಲ. ಆದರೆ, ನಾನು ಅವರು ಒಳ್ಳೆಯ ಗೆಳೆಯರು. ಅವರ ಮನಸ್ಸಲ್ಲಿ ಈ ಬಗ್ಗೆ ಏನಾದರೂ ಬೇಸರ ಇದ್ದಿದ್ದರೆ ಅವರು ಹೇಳಿಕೊಳ್ಳುತ್ತಿದ್ದರು. ಅವರು ಏನೂ ಹೇಳಿಲ್ಲ ಎಂದರೆ ಅವರಿಗೆ ಇದರಿಂದ ಯಾವುದೇ ತೊಂದರೆ ಇಲ್ಲ ಎಂದೇ ಅರ್ಥ. ಕಳೆದವಾರವಷ್ಟೇ ಅವರನ್ನು ಭೇಟಿ ಮಾಡಿದೆ. ನಾವು ಮುಂದೆ ಸಿನಿಮಾ ಮಾಡುತ್ತೇವೋ ಇಲ್ಲವೋ ಎನ್ನುವುದು ಮಾತ್ರ ಮುಖ್ಯವಾಗುತ್ತದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಅಣ್ಣ ಬೋನಿ ಜೊತೆ ಮಾತು ಬಿಟ್ಟ ಅನಿಲ್ ಕಪೂರ್; ಸಿನಿಮಾ ವಿಚಾರದಲ್ಲಿ ಕಿರಿಕ್

ಅನಿಲ್ ಕಪೂರ್ ಅವರನ್ನು ‘ನೋ ಎಂಟ್ರಿ 2’ ಚಿತ್ರದಿಂದ ಕೈ ಬಿಡುವ ಬಗ್ಗೆ ಬೋನಿ ಕಪೂರ್ ಚರ್ಚೆ ಮಾಡಿರಲಿಲ್ಲ. ಬೋನಿ ಅನೌನ್ಸ್ ಮಾಡುವ ಮೊದಲೇ ಮಾಧ್ಯಮಗಳಲ್ಲಿ ಈ ವಿಚಾರ ಲೀಕ್ ಆಯಿತು. ಇದು ಅನಿಲ್ ಕಪೂರ್ ಕೋಪಕ್ಕೆ ಕಾರಣ ಆಗಿತ್ತು. ಇದಾದ ಬಳಿಕ ಬೋನಿ ಬಳಿ ಅನಿಲ್ ಕಪೂರ್ ಮಾತನಾಡಿಲ್ಲ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ