ಅಣ್ಣ ಬೋನಿ ಜೊತೆ ಮಾತು ಬಿಟ್ಟ ಅನಿಲ್ ಕಪೂರ್; ಸಿನಿಮಾ ವಿಚಾರದಲ್ಲಿ ಕಿರಿಕ್

‘ನೋ ಎಂಟ್ರಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್, ಅನಿಲ್ ಕಪೂರ್, ಫರ್ದೀನ್ ಖಾನ್, ಇಶಾ ಡಿಯೋಲ್, ಲಾರಾ ದತ್ತ, ಬಿಪಾಶಾ ಬಸು ಮೊದಲಾದವರು ನಟಿಸಿದ್ದರು. ಎರಡನೇ ಪಾರ್ಟ್​ನಲ್ಲಿ ಅನಿಲ್ ಕಪೂರ್ ನಟಿಸಬೇಕಿತ್ತು. ಆದರೆ, ಇದಕ್ಕೆ ನಿರ್ಮಾಪಕ ಬೋನಿ ಕಪೂರ್ ಅವಕಾಶ ನೀಡಲಿಲ್ಲ.  

ಅಣ್ಣ ಬೋನಿ ಜೊತೆ ಮಾತು ಬಿಟ್ಟ ಅನಿಲ್ ಕಪೂರ್; ಸಿನಿಮಾ ವಿಚಾರದಲ್ಲಿ ಕಿರಿಕ್
ಅನಿಲ್-ಬೋನಿ
Follow us
|

Updated on: Mar 30, 2024 | 7:04 AM

ಬೋನಿ ಕಪೂರ್ ಹಾಗೂ ಅನಿಲ್ ಕಪೂರ್ (Anil Kapoor) ಸಹೋದರರು. ಇಬ್ಬರೂ ಬಾಲಿವುಡ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಬೋನಿ ನಿರ್ಮಾಪಕನಾಗಿ ಗುರುತಿಸಿಕೊಂಡರೆ, ಅನಿಲ್ ಕಪೂರ್ ಅವರು ಹೀರೋ ಆಗಿ ಹೆಸರು ಮಾಡಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಇಬ್ಬರ ಮಧ್ಯೆ ಈಗ ಮೊದಲಿನ ಬಾಂಧವ್ಯ ಉಳಿದಿಲ್ಲ. ಇಬ್ಬರೂ ಅಷ್ಟಾಗಿ ಮಾತನಾಡಿಕೊಳ್ಳುವುದಿಲ್ಲ. ಈ ವಿಚಾರವನ್ನು ಸ್ವತಃ ಬೋನಿ ಕಪೂರ್ ಅವರೇ ರಿವೀಲ್ ಮಾಡಿದ್ದಾರೆ. ಇದಕ್ಕೆ ಕಾರಣವನ್ನು ಕೂಡ ಅವರು ವಿವರಿಸಿದ್ದಾರೆ.

‘ನೋ ಎಂಟ್ರಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್, ಅನಿಲ್ ಕಪೂರ್, ಫರ್ದೀನ್ ಖಾನ್, ಇಶಾ ಡಿಯೋಲ್, ಲಾರಾ ದತ್ತ, ಬಿಪಾಶಾ ಬಸು ಮೊದಲಾದವರು ನಟಿಸಿದ್ದರು. ಎರಡನೇ ಪಾರ್ಟ್​ನಲ್ಲಿ ಅನಿಲ್ ಕಪೂರ್ ನಟಿಸಬೇಕಿತ್ತು. ಆದರೆ, ಇದಕ್ಕೆ ನಿರ್ಮಾಪಕ ಬೋನಿ ಕಪೂರ್ ಅವಕಾಶ ನೀಡಲಿಲ್ಲ.

ವರುಣ್ ಧವನ್, ದಿಲ್ಜಿತ್, ಅರ್ಜುನ್ ಕಪೂರ್ ‘ನೋ ಎಂಟ್ರಿ 2’ ಸಿನಿಮಾದ ಭಾಗವಾಗಿದ್ದಾರೆ. ಈ ಬಗ್ಗೆ ಸುದ್ದಿ ಲೀಕ್ ಆಗಿತ್ತು. ‘ನಾನು ನೋ ಎಂಟ್ರಿ ಸೀಕ್ವೆಲ್ ಬಗ್ಗೆ ಅನಿಲ್ ಬಳಿ ಮಾತನಾಡುವ ಮೊದಲೇ ಸಿನಿಮಾದ ಪಾತ್ರವರ್ಗದ ವಿಚಾರ ಲೀಕ್ ಆಗಿತ್ತು. ಅದು ನನ್ನ ದುರಾದೃಷ್ಟ. ಅವರಿಗೆ ಈ ಸಿನಿಮಾದ ಭಾಗ ಆಗಬೇಕು ಎನ್ನುವ ಆಸೆ ಇತ್ತು. ಆದರೆ, ಅದಕ್ಕೆ ಜಾಗವೇ ಇರಲಿಲ್ಲ. ನಾನು ಅದನ್ನು ವಿವರಿಸಬೇಕು ಎಂದುಕೊಂಡಿದ್ದೆ’ ಎಂದಿದ್ದಾರೆ ಬೋನಿ ಕಪೂರ್.

‘ವರುಣ್ ಧವನ್ ಹಾಗೂ ಅರ್ಜುನ್ ಕಪೂರ್ ಉತ್ತಮ ಗೆಳೆಯರು. ಅವರ ಕೆಮಿಸ್ಟ್ರಿ ಸಿನಿಮಾಗೆ ಸಹಾಯ ಆಗುತ್ತಿತ್ತು. ದಿಲ್ಜಿತ್​​ಗೂ ದೊಡ್ಡ ಅಭಿಮಾನಿ ಬಳಗ ಇದೆ. ಇದನ್ನು ಗಮನದಲ್ಲಿಟ್ಟಕೊಂಡು ಪಾತ್ರವರ್ಗ ಆಯ್ಕೆ ಮಾಡಿದ್ದೆ. ಈ ಕಾರಣಕ್ಕೆ ಅನಿಲ್ ಕಪೂರ್ ಈಗಲೂ ನನ್ನ ಬಳಿ ಸರಿಯಾಗಿ ಮಾತನಾಡುತ್ತಿಲ್ಲ. ಇದು ಕೊನೆಯಾಗಬಹುದು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅನಿಲ್ ಕಪೂರ್ ಕುಟುಂಬ ಎಷ್ಟು ದೊಡ್ಡದು ಗೊತ್ತಾ? ಇಲ್ಲಿದೆ ಫ್ಯಾಮಿಲಿ ಟ್ರೀ

‘ನೋ ಎಂಟ್ರಿ 2’ ಸಿನಿಮಾ ಡಿಸೆಂಬರ್ 2024ರ ವೇಳೆಗೆ ಸೆಟ್ಟೇರಬಹುದು. ಈ ಚಿತ್ರ 2025ರಲ್ಲಿ ಥಿಯೇಟರ್​ನಲ್ಲಿ ರಿಲೀಸ್ ಆಗಲಿದೆ. ಮೊದಲ ಸಿನಿಮಾ ರಿಲೀಸ್ ಆಗಿ 20 ವರ್ಷಗಳ ಬಳಿಕ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ