AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aryan Khan: ನಿಜಕ್ಕೂ ಆರ್ಯನ್ ಖಾನ್ ವ್ಯಕ್ತಿತ್ವ ಹೇಗೆ? ಶಾರುಖ್ ಮಗನ ನಿಜವಾದ ಮುಖ ತೆರೆದಿಟ್ಟ ಯುವ ನಟಿ

ಆರ್ಯನ್ ಖಾನ್ ಮೊದಲಾದವರ ಜೊತೆ ಪಲಕ್ ಸುತ್ತಾಟ ಮಾಡುತ್ತಿರುತ್ತಾರೆ. ಹೀಗಾಗಿ ಆರ್ಯನ್ ಖಾನ್ ಹೇಗೆ ಎಂಬುದನ್ನು ಅವರು ಹತ್ತಿರದಿಂದ ಕಂಡಿದ್ದಾರೆ.

Aryan Khan: ನಿಜಕ್ಕೂ ಆರ್ಯನ್ ಖಾನ್ ವ್ಯಕ್ತಿತ್ವ ಹೇಗೆ? ಶಾರುಖ್ ಮಗನ ನಿಜವಾದ ಮುಖ ತೆರೆದಿಟ್ಟ ಯುವ ನಟಿ
ಆರ್ಯನ್ ಖಾನ್
ರಾಜೇಶ್ ದುಗ್ಗುಮನೆ
|

Updated on:Apr 15, 2023 | 9:54 AM

Share

ಸ್ಟಾರ್ ನಟರ ಮಕ್ಕಳಿಗೆ ಅಹಂ ಜಾಸ್ತಿ ಎನ್ನುವ ನಂಬಿಕೆ ಅನೇಕರದ್ದು. ಅಪ್ಪನ ಪ್ರಭಾವ ಹಾಗೂ ದುಡ್ಡಿದೆ ಎನ್ನುವ ಕಾರಣಕ್ಕೆ ಅವರು ಬೇಕಾಬಿಟ್ಟಿ ನಡೆದುಕೊಳ್ಳುತ್ತಾರೆ ಎನ್ನುವ ಆರೋಪ ಅನೇಕರದ್ದು. ಇದಕ್ಕೆ ಪೂರಕವಾಗಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ (Aryan Khan) ಅವರು ಡ್ರಗ್​ ಕೇಸ್​ನಲ್ಲಿ ಸಿಕ್ಕಿ ಬಿದ್ದರು. ಪಾರ್ಟಿ ಮಾಡುತ್ತಿದ್ದಾಗ ಡ್ರಗ್ ಹೊಂದಿದ್ದ ಆರೋಪದ ಮೇಲೆ ಅವರನ್ನು ಜೈಲಿಗೆ ಕಳುಹಿಸಲಾಯಿತು. ಆದರೆ, ಕೋರ್ಟ್ ಅವರನ್ನು ನಿರಪರಾಧಿ ಎಂದು ಘೋಷಿಸಿತು. ಈ ಘಟನೆಯಿಂದ ಆರ್ಯನ್ ಖಾನ್ ಹೆಸರು ಹಾಳಾಯಿತು. ಅನೇಕರಿಗೆ ಶಾರುಖ್ ಬಗ್ಗೆ ಇದ್ದ ಗೌರವ ಕಡಿಮೆ ಆಯಿತು. ಹಾಗಾದರೆ ನಿಜಕ್ಕೂ ಆರ್ಯನ್ ಖಾನ್ ಹೇಗೆ? ಈ ಪ್ರಶ್ನೆಗೆ ನಟಿ ಪಲಕ್ ತಿವಾರಿ (Palak Tiwari) ಉತ್ತರ ಕೊಟ್ಟಿದ್ದಾರೆ.

ಪಲಕ್ ತಿವಾರಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ವಿಡಿಯೋ ಸಾಂಗ್ ಒಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಬಾಲಿವುಡ್​ಗೆ ಅವರ ಎಂಟ್ರಿ ಆಗುತ್ತಿದೆ. ಅವರು ಆರ್ಯನ್ ಖಾನ್ ಮೊದಲಾದವರ ಜೊತೆ ಸುತ್ತಾಟ ಮಾಡುತ್ತಿರುತ್ತಾರೆ. ಹೀಗಾಗಿ ಆರ್ಯನ್ ಖಾನ್ ಹೇಗೆ ಎಂಬುದನ್ನು ಅವರು ಹತ್ತಿರದಿಂದ ಕಂಡಿದ್ದಾರೆ.

ಇದನ್ನೂ ಓದಿ: ಸ್ಟಾರ್ ನಟಿಯ ತಂಗಿ ಜತೆ ಆರ್ಯನ್ ಖಾನ್ ಸುತ್ತಾಟ; ಪಾರ್ಟಿ ಫೋಟೋ ವೈರಲ್

‘ಆರ್ಯನ್ ಖಾನ್ ಹೇಗೆ ಕಾಣಿಸಿಕೊಳ್ಳುತ್ತಾರೋ ಹಾಗೆಯೇ ಇದ್ದಾರೆ. ಆರ್ಯನ್ ನಿಜವಾಗಲೂ ಸ್ವೀಟ್ ವ್ಯಕ್ತಿ. ಪಾರ್ಟಿಯಲ್ಲಿ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸುತ್ತಾರೆ. ಬಳಿಕ ತಮ್ಮ ಪಾಡಿಗೆ ತಾವಿರುತ್ತಾರೆ. ಆ ವಿಷಯದಲ್ಲಿ ನಾನು ಕೂಡ ಹಾಗೆಯೇ. ಆರ್ಯನ್ ಖುಷಿಯಿಂದ ಎರಡು ಮಾತನಾಡಿ ಮೂಲೆಯಲ್ಲಿ ಹೋಗಿ ತಮ್ಮ ಪಾಡಿಗೆ ತಾವಿದ್ದು ಬಿಡುತ್ತಾರೆ​. ಆರ್ಯನ್‌ ಅವರದ್ದು ನಿಗೂಢ ವ್ಯಕ್ತಿತ್ವ ಎನಿಸುತ್ತದೆ. ಇದು ಆಕರ್ಷಣೆಯ ಭಾಗವೂ ಹೌದು’ ಎಂಬುದು ಪಲಕ್ ಮಾತು.

 ಸಲ್ಲು ಡ್ರೆಸ್​ಕೋಡ್ ಬಗ್ಗೆ ಪಲಕ್ ಮಾತು

‘ಅಂತಿಮ್​: ದಿ ಫೈನಲ್ ಟ್ರುತ್’ ಸಿನಿಮಾದಲ್ಲಿ ಪಲಕ್ ಅವರು ಸಹಾಯಕ ನಿರ್ದೇಶಕಿ ಆಗಿದ್ದರು. ಆಯುಷ್ ಶರ್ಮಾ ನಟನೆಯ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಕೂಡ ಕಾಣಿಸಿಕೊಂಡಿದ್ದರು. ಸಲ್ಮಾನ್ ಖಾನ್ ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಕಾರಣಕ್ಕೆ ಸಲ್ಲು ಕೆಲ ನಿಯಮ ತಂದಿದ್ದರು.

‘ಸಲ್ಮಾನ್ ಖಾನ್ ಅವರು ಸೆಟ್​​ನಲ್ಲಿ ಮಹಿಳೆಯರಿಗೆ ನಿಯಮ ತಂದಿದ್ದರು. ಸರಿಯಾಗಿರೋ ಡ್ರೆಸ್​ನ ಮಾತ್ರ ಹಾಕಬೇಕು. ಕತ್ತಿನ ಬಳಿ ಡ್ರೆಸ್​ ಸರಿಯಾಗಿ ಇರಬೇಕು. ದೇಹದ ಮುಖ್ಯ ಪಾರ್ಟ್ ಕವರ್ ಆಗಿರಬೇಕಿತ್ತು’ ಎಂದಿದ್ದಾರೆ ಪಲಕ್​. ಒಮ್ಮೆ ಪಲಕ್ ಸೆಟ್​ಗೆ ಹೊರಟಿದ್ದರು. ಅವರು ತೊಟ್ಟಿದ್ದ ಸಾಂಪ್ರದಾಯಿಕ ಬಟ್ಟೆ ನೋಡಿ ಅವರ ತಾಯಿ ಶ್ವೇತಾ ತಿವಾರಿಗೆ ಅಚ್ಚರಿ ಆಗಿತ್ತು. ಈ ಬಗ್ಗೆ ಕೇಳಿದಾಗ ಸಲ್ಲು ನಿಯಮದ ಬಗ್ಗೆ ಹೇಳಿದ್ದರು ಪಲಕ್​. ಇದರಿಂದ ಶ್ವೇತಾಗೆ ಸಲ್ಲು ಮೇಲಿದ್ದ ಗೌರವ ಹೆಚ್ಚಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:14 am, Sat, 15 April 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ