AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೀವ ಅಂತ ಶುರು ಆಗತ್ತೆ, ಆ ಮೇಲೆ ಜೀವ ತೆಗೀತಾರೆ’: ಕೈ ಕೊಟ್ಟ ಹುಡುಗಿಯರ ಬಗ್ಗೆ ಸಲ್ಮಾನ್​ ಓಪನ್​ ಮಾತು

The Kapil Sharma Show: ಸಲ್ಮಾನ್​ ಖಾನ್​ ಅವರ ಬದುಕಿನಲ್ಲಿ ಅನೇಕ ಹುಡುಗಿಯರ ಎಂಟ್ರಿ ಆಗಿತ್ತು. ಆದರೆ ಯಾರೂ ಮದುವೆ ಆಗುವ ಮನಸ್ಸು ಮಾಡಲಿಲ್ಲ.

‘ಜೀವ ಅಂತ ಶುರು ಆಗತ್ತೆ, ಆ ಮೇಲೆ ಜೀವ ತೆಗೀತಾರೆ’: ಕೈ ಕೊಟ್ಟ ಹುಡುಗಿಯರ ಬಗ್ಗೆ ಸಲ್ಮಾನ್​ ಓಪನ್​ ಮಾತು
ಸಲ್ಮಾನ್ ಖಾನ್Image Credit source: Sony Tv
ಮದನ್​ ಕುಮಾರ್​
|

Updated on:Apr 14, 2023 | 6:01 PM

Share

ಮುಖ್ಯಾಂಶಗಳು

  • ‘ದಿ ಕಪಿಲ್​ ಶರ್ಮಾ ಶೋ’ ವೇದಿಕೆಯಲ್ಲಿ ಮಾತನಾಡಿದ ನಟ ಸಲ್ಮಾನ್​ ಖಾನ್​
  • ಜಾನ್​ ಎಂಬ ಪದದ ಹಿಂದೆ ಏನೆಲ್ಲ ಸಂಚು ಅಡಗಿದೆ ಅಂತ ವಿವರಿಸಿದ ಸಲ್ಲು
  • ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಚಿತ್ರದ ಪ್ರಚಾರದ ವೇಳೆ ಮಸ್ತ್​ ಮಾತುಕತೆ

ನಟ ಸಲ್ಮಾನ್​ ಖಾನ್​ (Salman Khan) ಅವರಿಗೆ ಈಗ 57 ವರ್ಷ ವಯಸ್ಸು. ಆದರೂ ಕೂಡ ಅವರಿಗೆ ಮದುವೆ ಆಗುವ ಮನಸ್ಸಿಲ್ಲ. ಅವರ ಸಮಕಾಲೀನ ಹೀರೋಗಳಾದ ಶಾರುಖ್​ ಖಾನ್​, ಅಕ್ಷಯ್​ ಕುಮಾರ್​, ಆಮಿರ್​ ಖಾನ್​ ಮುಂತಾದವರು ಮದುವೆ-ಮಕ್ಕಳು ಅಂತ ಸಂಸಾರದಲ್ಲಿ ಬ್ಯುಸಿಯಾದರು. ಆದರೆ ಸಲ್ಮಾನ್​ ಖಾನ್​ ಮಾತ್ರ ಬ್ಯಾಚುಲರ್​ ಆಗಿಯೇ ಉಳಿದುಕೊಂಡಿದ್ದಾರೆ. ಸಲ್ಲು ಮದುವೆ ಯಾವಾಗ ಎಂಬ ಪ್ರಶ್ನೆ ಆಗಾಗ ಎದುರಾಗುತ್ತದೆ. ಆ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಸದ್ಯಕ್ಕಂತೂ ಸಲ್ಮಾನ್​ ಖಾನ್​ ಮದುವೆ ಆಗುವ ಲಕ್ಷಣ ಕಾಣುತ್ತಿಲ್ಲ. ಈಗ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ (Kisi Ka Bhai Kisi Ki Jaan) ಸಿನಿಮಾದ ಬಿಡುಗಡೆಯ ತಯಾರಿಯಲ್ಲಿ ಅವರಿದ್ದಾರೆ. ರಿಯಲ್​ ಲೈಫ್​ನಲ್ಲಿ ‘ಜಾನ್​’ (ಜೀವ) ಎಂದು ಕರೆಯಲು ಯಾರಿಗೂ ಅವರು ಅಧಿಕಾರ ನೀಡಿಲ್ಲ! ‘ದಿ ಕಪಿಲ್​ ಶರ್ಮಾ ಶೋ’ (The Kapil Sharma Show) ವೇದಿಕೆಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಸಲ್ಮಾನ್​ ಖಾನ್​ ಅವರ ಬದುಕಿನಲ್ಲಿ ಅನೇಕ ಹುಡುಗಿಯರ ಎಂಟ್ರಿ ಆಗಿತ್ತು. ಅನೇಕರ ಜೊತೆ ಅವರು ಪ್ರೀತಿಯಲ್ಲಿ ಮುಳುಗಿದ್ದರು. ಆದರೆ ಯಾರೂ ಮದುವೆ ಆಗುವ ಮನಸ್ಸು ಮಾಡಲಿಲ್ಲ. ಜಾನ್​ ಎಂದು ಕರೆಸಿಕೊಂಡರೆ ಏನಾಗುತ್ತದೆ ಎಂಬುದನ್ನು ಸಲ್ಮಾನ್​ ಖಾನ್​ ವಿವರಿಸಿದ್ದಾರೆ. ‘ನಿಮ್ಮನ್ನು ಎಲ್ಲರೂ ಭಾಯ್​ ಅಂತ ಕರೆಯುತ್ತಾರೆ. ಆದರೆ ಜಾನ್​ ಎಂದು ಕರೆಯುವ ಅಧಿಕಾರ ಯಾರಿಗಾದರೂ ಕೊಟ್ಟಿದ್ದೀರಾ’ ಎಂದು ಸಲ್ಮಾನ್​ ಖಾನ್​ಗೆ ಕಪಿಲ್​ ಶರ್ಮ ಕೇಳಿದರು. ಅದಕ್ಕೆ ಸಲ್ಲು ನೀಡಿದ ಉತ್ತರ ಸಖತ್​ ಫನ್ನಿ ಆಗಿತ್ತು.

ಇದನ್ನೂ ಓದಿ
Image
ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್
Image
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
Image
ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ
Image
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

‘ಜಾನ್​ (ಜೀವ) ಎಂದು ಕರೆಯುವ ಹಕ್ಕನ್ನು ಯಾರಿಗೂ ನೀಡಬಾರದು. ಮೊದಲು ಜಾನ್​ ಎನ್ನುತ್ತಾರೆ. ಆಮೇಲೆ ಜಾನ್​ ತೆಗೆಯುತ್ತಾರೆ. ನಿನ್ನ ಜೊತೆ ಇರಲು ನಂಗೆ ಬಹಳ ಸಂತೋಷ ಆಗುತ್ತದೆ ಎನ್ನುತ್ತಾರೆ. ಸ್ವಲ್ಪ ಸಮಯ ಕಳೆದ ಬಳಿಕ ಐ ಲವ್​ ಯೂ ಎನ್ನುತ್ತಾರೆ. ನಾವು ಬಲೆಗೆ ಬಿದ್ವಿ ಅಂತ ಗೊತ್ತಾದ ತಕ್ಷಣ ನಮ್ಮ ಜೀವನ ಹಾಳು ಮಾಡ್ತಾರೆ. ಜಾನ್​ ಎಂಬುದು ಒಂದು ಅಪೂರ್ಣ ಪದ. ಅದರ ಹಿಂದೆ ಇಡೀ ವಾಕ್ಯ ಅಡಗಿರುತ್ತದೆ. ಮೊದಲು ನಿನ್ನ ಜಾನ್​ ತೆಗೆಯುತ್ತೇನೆ. ನಂತರ ಬೇರೆಯವನನ್ನು ಜಾನ್​ ಮಾಡಿಕೊಳ್ಳುತ್ತೇನೆ. ಆಮೇಲೆ ಅವನ ಜಾನ್​ ಕೂಡ ತೆಗೆಯುತ್ತೇನೆ ಎಂಬುದು ಅದರ ಪೂರ್ಣ ಅರ್ಥ ಆಗಿರಬಹುದು’ ಎಂದು ಹೇಳಿ ಜೋರಾಗಿ ನಕ್ಕಿದ್ದಾರೆ ಸಲ್ಮಾನ್​ ಖಾನ್​.

ಇದನ್ನೂ ಓದಿ: Salman Khan: ಈದ್​ಗೆ ಸಲ್ಮಾನ್​ ಖಾನ್​ ಕಡೆಯಿಂದ ಮನರಂಜನೆಯ ರಸದೌತಣ; ಇಲ್ಲಿದೆ ನೋಡಿ ಸ್ಯಾಂಪಲ್​

ಈದ್​ ಪ್ರಯುಕ್ತ ಏಪ್ರಿಲ್​ 21ರಂದು ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ಒಂದು ಮುಖ್ಯ ಪಾತ್ರದಲ್ಲಿ ದಗ್ಗುಬಾಟಿ ವೆಂಕಟೇಶ್​ ಅಭಿನಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:01 pm, Fri, 14 April 23

Follow Us
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಆ.13ರಂದು ಕರ್ನಾಟಕ ಬಂದ್​​ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹೇಳಿದ್ದೇನು?
ಆ.13ರಂದು ಕರ್ನಾಟಕ ಬಂದ್​​ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹೇಳಿದ್ದೇನು?
ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆಶಿ, ಕಾರಣ?
ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆಶಿ, ಕಾರಣ?
ಕಾವೇರಿ ನೀರು ವಿವಾದ: ಡಿಕೆಶಿ ಸರ್ಕಾರಕ್ಕೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು?
ಕಾವೇರಿ ನೀರು ವಿವಾದ: ಡಿಕೆಶಿ ಸರ್ಕಾರಕ್ಕೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು?