AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾತನ 77 ವರ್ಷ ಹಳೆಯ ನಿರ್ಮಾಣ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡ ರಣ್ಬೀರ್ ಕಪೂರ್

Ranbir Kapoor movies: 1948 ರಲ್ಲಿ ತಾತ ರಾಜ್ ಕಪೂರ್ ಮೂಲಕ ಪ್ರಾರಂಭಿಸಲಾಗಿದ್ದ ಆರ್​ಕೆ ಫಿಲಮ್ಸ್ ಅನ್ನು 26 ವರ್ಷಗಳ ಬಳಿಕ ಮತ್ತೆ ರೀ ಲಾಂಚ್ ಮಾಡಲು ರಣ್​ಬೀರ್ ಕಪೂರ್ ಮುಂದಾಗಿದ್ದಾರೆ. ಅದೂ ತಮ್ಮದೇ ನಿರ್ದೇಶನದ ಮೂಲಕ. ಬಾಲಿವುಡ್​​ನ ಟಾಪ್ ಹೀರೋ ಆಗಿ ಮೆರೆಯುತ್ತಿರುವಾಗಲೇ ರಣ್​​ಬೀರ್ ಕಪೂರ್ ನಿರ್ದೇಶಕನ ಟೋಪಿ ಧರಿಸಲು ಮುಂದಾಗಿದ್ದಾರೆ.

ತಾತನ 77 ವರ್ಷ ಹಳೆಯ ನಿರ್ಮಾಣ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡ ರಣ್ಬೀರ್ ಕಪೂರ್
Ranbir Kapoor
ಮಂಜುನಾಥ ಸಿ.
|

Updated on:Nov 02, 2025 | 4:13 PM

Share

ಆರ್​​ಕೆ ಸ್ಟುಡಿಯೋ (RK Studio) 1948ರಲ್ಲಿ ರಾಜ್ ಕಪೂರ್ ನಿರ್ಮಾಣ ಮಾಡಿದರು. ಮುಂಬೈನ ಚೆಂಬುರ್​​ನಲ್ಲಿರುವ ಈ ಐತಿಹಾಸಿಕ ಸ್ಟುಡಿಯೋನಲ್ಲಿ ಹಲವಾರು ಬಾಲಿವುಡ್ ಸಿನಿಮಾಗಳು ಚಿತ್ರೀಕರಣಗೊಂಡಿವೆ. ಇದೇ ಸ್ಟುಡಿಯೋನಲ್ಲಿ ಆರ್​​ಕೆ ಫಿಲಮ್ಸ್ ನಿರ್ಮಾಣ ಸಂಸ್ಥೆಯನ್ನು ಸಹ ರಾಜ್ ಕಪೂರ್ ಪ್ರಾರಂಭ ಮಾಡಿದ್ದರು. 2017 ರಲ್ಲಿ ರಾಜ್ ಕಪೂರ್ ಸ್ಟುಡಿಯೋಕ್ಕೆ ಬೆಂಕಿ ಬಿದ್ದು ಭಾರಿ ನಷ್ಟ ಉಂಟಾಯ್ತು, ರಾಜ್ ಕಪೂರ್ ಸೇರಿದಂತೆ ಹಲವು ದಿಗ್ಗಜರಿಗೆ ಸೇರಿದ್ದ ಅಮೂಲ್ಯ ವಸ್ತುಗಳು ನಾಶವಾದವು, ಸೆಟ್​ಗಳು ನಾಶವಾದವು. ಕೊನೆಗೆ 2019 ರಲ್ಲಿ ಆರ್​​ಕೆ ಸ್ಟುಡಿಯೋ ಅನ್ನು ಗೋದ್ರೆಜ್​​ಗೆ ಮಾರಾಟ ಮಾಡಲಾಯ್ತು. ಆದರೆ ಇದೀಗ ರಣ್​ಬೀರ್ ಕಪೂರ್ ಆರ್​​ಕೆ ಫಿಲಮ್ಸ್ ಅನ್ನು ಮತ್ತೆ ಪ್ರಾರಂಭಿಸಲು ಮುಂದಾಗಿದ್ದಾರೆ.

ಸ್ಟುಡಿಯೋ ಇದ್ದ ಜಾಗದಲ್ಲಿ ಗೋದ್ರೆಜ್ ಅಪಾರ್ಟ್​​ಮೆಂಟ್​​ಗಳನ್ನು ನಿರ್ಮಾಣ ಮಾಡುತ್ತಿದೆ. ಆದರೆ ಆರ್​ಕೆ ಫಿಲಮ್ಸ್ ಅನ್ನಾದರೂ ಉಳಿಸಿಕೊಳ್ಳುವ ಮತ್ತು ಅದನ್ನು ಭಾರತದ ಪ್ರಮುಖ ನಿರ್ಮಾಣ ಸಂಸ್ಥೆಯನ್ನಾಗಿ ರೂಪಿಸುವ ಯೋಜನೆಯನ್ನು ರಾಜ್ ಕಪೂರ್ ಅವರ ಮೊಮ್ಮಗ ರಣ್​ಬೀರ್ ಕಪೂರ್ ಕೈಗೆತ್ತಿಕೊಂಡಿದ್ದಾರೆ. ನಿರ್ಮಾಣ ಸಂಸ್ಥೆಯನ್ನು ತಾವೇ ನಿರ್ದೇಶಿಸಲಿರುವ ಸಿನಿಮಾದ ಮೂಲಕ ರೀ ಲಾಂಚ್ ಮಾಡಲಿದ್ದಾರೆ.

ಆರ್​​ಕೆ ಫಿಲಮ್ಸ್ 1948ರಲ್ಲೇ ಪ್ರಾರಂಭವಾದರೂ ಸಹ ದೊಡ್ಡ ಸಂಖ್ಯೆಯ ಸಿನಿಮಾಗಳನ್ನು ನಿರ್ಮಾಣ ಮಾಡಿಲ್ಲ. ಈ ವರೆಗೆ ಕೇವಲ 21 ಸಿನಿಮಾಗಳನ್ನಷ್ಟೆ ನಿರ್ಮಾಣ ಮಾಡಲಾಗಿದೆ. ಕಪೂರ್ ಕುಟುಂಬಕ್ಕೆ ಸೇರಿದವರು ನಟಿಸಿದ ಅಥವಾ ನಿರ್ದೇಶನ ಮಾಡಿದ ಸಿನಿಮಾಗಳನ್ನಷ್ಟೆ ‘ಆರ್​​ಕೆ ಫಿಲಮ್ಸ್ ಮೂಲಕ ನಿರ್ಮಾಣ ಮಾಡಲಾಗಿತ್ತು. 1999 ರಲ್ಲಿ ರಿಶಿ ಕಪೂರ್ ನಿರ್ದೇಶಿಸಿದ್ದ ‘ಆ ಅಬ್ ಲೌಟ್ ಚಲೆ’ ಸಿನಿಮಾ, ಆರ್​​ಕೆ ಫಿಲಮ್ಸ್​​ನ ಕೊನೆಯ ಸಿನಿಮಾ ಆಗಿತ್ತು. ಇದೀಗ 26 ವರ್ಷಗಳ ಬಳಿಕ ರಣ್​ಬೀರ್ ಕಪೂರ್ ತಮ್ಮದೇ ನಿರ್ದೇಶನದ ಮೂಲಕ ಆರ್​​ಕೆ ಫಿಲಮ್ಸ್ ಅನ್ನು ರೀಲಾಂಚ್ ಮಾಡುತ್ತಿದ್ದಾರೆ.

ಇದನ್ನೂ ಓದಿ:ಬಾಲಿವುಡ್ಡಿಗರ ಹಾಲೋವೀನ್ ಪಾರ್ಟಿ: ಯಾರ್ಯಾರಾದಿದ್ದಾರೆ ನೋಡಿ

ಅದು ಮಾತ್ರವೇ ಅಲ್ಲದೆ ತಮ್ಮದೇ ನಟನೆಯ ಎರಡು ಸಿನಿಮಾಗಳನ್ನು ಆರ್​​ಕೆ ಫಿಲಮ್ಸ್ ಮೂಲಕ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ‘ಬ್ರಹ್ಮಾಸ್ತ್ರ 2’ ಮತ್ತು ಅನುರಾಗ್ ಬಸು ನಿರ್ದೇಶಿಸಲಿರುವ ಇನ್ನೊಂದು ಸಿನಿಮಾವನ್ನು ಸಹ ಆರ್​​ಕೆ ಫಿಲಮ್ಸ್ ಮೂಲಕವೇ ನಿರ್ಮಾಣ ಮಾಡಲು ರಣ್​​ಬೀರ್ ಕಪೂರ್ ಮುಂದಾಗಿದ್ದಾರೆ. ಕೇವಲ ಹಿಂದಿಯಲ್ಲಿ ಮಾತ್ರವೇ ಅಲ್ಲದೆ ಭಾರತದ ಬೇರೆ ಕೆಲವು ಭಾಷೆಗಳಲ್ಲಿಯೂ ಸಿನಿಮಾ ನಿರ್ಮಾಣ ಮಾಡುವ ಗುರಿಯನ್ನು ರಣ್​​ಬೀರ್ ಕಪೂರ್ ಹೊಂದಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Sun, 2 November 25

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಮನೆ ಬಾಗಿಲಲ್ಲೇ ಮಲಗಿತ್ತು 10 ಅಡಿ ಕಾಳಿಂಗ ಸರ್ಪ!
ಮನೆ ಬಾಗಿಲಲ್ಲೇ ಮಲಗಿತ್ತು 10 ಅಡಿ ಕಾಳಿಂಗ ಸರ್ಪ!
ದುಬಾರೆ ಆನೆ ಶಿಬಿರ 2 ದಿನ ಬಂದ್: ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ
ದುಬಾರೆ ಆನೆ ಶಿಬಿರ 2 ದಿನ ಬಂದ್: ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ