
ಭಾರತೀಯ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ರಾಮಾಯಣ’ (Ramayana) ಸಿನಿಮಾದ ಟೀಸರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಆದರೆ, ಟೀಸರ್ (Ramayana Teaser) ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮುಖ್ಯವಾಗಿ ರಣಬೀರ್ ಕಪೂರ್ (Ranbir Kapoor) ಅವರ ಶ್ರೀರಾಮನ ಅವತಾರ ನೆಟ್ಟಿಗರ ವಿಮರ್ಶೆಗೆ ಗುರಿಯಾಗಿದೆ. ಅಲ್ಲದೇ, ಈ ಟೀಸರ್ನ ವಿಎಫ್ಎಕ್ಸ್ ದೃಶ್ಯಗಳು ಸಮಾಧಾನಕರವಾಗಿಲ್ಲ ಎಂದು ಜನರು ಅಭಿಪ್ರಾಯ ತಿಳಿಸುತ್ತಿದ್ದಾರೆ.
ಅದ್ದೂರಿ ಕಾರ್ಯಕ್ರಮದ ಮೂಲಕ ಬಿಡುಗಡೆಯಾದ ಈ ಟೀಸರ್ನಲ್ಲಿ ರಣಬೀರ್ ಕಪೂರ್ ರಾಜವಂಶಸ್ಥನಾಗಿ, ವೀರ ಯೋಧನಾಗಿ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ರಾವಣನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ಕುತೂಹಲ ಮೂಡಿಸಿದೆ. ಟೀಸರ್ನಲ್ಲಿ ಯಶ್ ಅವರ ಮುಖವನ್ನು ಪೂರ್ಣವಾಗಿ ತೋರಿಸದಿದ್ದರೂ, ಅವರ ಝಲಕ್ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ.
ಆದರೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು? ಟೀಸರ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿರುವ ನಡುವೆಯೇ, ಹೆಚ್ಚಿನ ಸಂಖ್ಯೆಯ ಜನರು ಈ ಚಿತ್ರವನ್ನು ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರಕ್ಕೆ ಹೋಲಿಸುತ್ತಿದ್ದಾರೆ. ‘ಇದು ಆದಿಪುರುಷ್ 2.0 ರೀತಿ ಕಾಣುತ್ತಿದೆ, ಕೇವಲ ವಿಎಫ್ಎಕ್ಸ್ ಸ್ವಲ್ಪ ಸುಧಾರಿಸಿದೆ ಅಷ್ಟೇ’ ಎಂದು ಕಾಮೆಂಟ್ ಮಾಡಿದ್ದಾರೆ.
bro, here i legit thought I’m watching Adipurush 2.0 😭😭😭😭 https://t.co/shRnzkoAI6 pic.twitter.com/GnwiLgEap1
— 『Ꭺ 』 (@iluffy05) April 2, 2026
‘ಇದು ಫ್ಯಾನ್ ಮೇಡ್ ಟೀಸರ್ ರೀತಿ ಕಾಣುತ್ತಿದೆ. ಇದರಲ್ಲಿರುವ ದೃಶ್ಯಗಳು ಎಐ ಮೂಲಕ ಎಡಿಟ್ ಮಾಡಿದಂತಿವೆ’ ಎಂಬ ಅಸಮಾಧಾನದ ಕಮೆಂಟ್ ಕೂಡ ಬಂದಿದೆ.
even adhipurush feels better than
this #Ramayana glimpse tbh.Because of
– Ai
– Poor VFX
– Poor editing pic.twitter.com/TJSZZSMWy0— 🧊🌨️ (@Dq_Stan5_) April 2, 2026
ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅಭಿಮಾನಿಯೊಬ್ಬರು, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಆದಿಪುರುಷ್ ಪಾರ್ಟ್ 2 ನೋಡುತ್ತಿದ್ದೇನೆ ಎಂದೆನಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?
2023ರಲ್ಲಿ ಬಿಡುಗಡೆಯಾಗಿದ್ದ ‘ಆದಿಪುರುಷ್’ ಚಿತ್ರವು ರಾಮಾಯಣವನ್ನು ತಪ್ಪಾಗಿ ಚಿತ್ರಿಸಿದೆ ಮತ್ತು ಸಂಭಾಷಣೆಗಳು ಕಳಪೆಯಾಗಿವೆ ಎಂಬ ಕಾರಣಕ್ಕೆ ಭಾರಿ ವಿರೋಧ ಎದುರಿಸಿತ್ತು. ಹನುಮಂತ ಮತ್ತು ರಾವಣನ ಪಾತ್ರಧಾರಿಗಳ ಲುಕ್ ಬಗ್ಗೆಯೂ ಜನರು ಆಕ್ರೋಶ ಹೊರಹಾಕಿದ್ದರು. ಈಗ ನಿತೇಶ್ ತಿವಾರಿ ಅವರ ‘ರಾಮಾಯಣ’ ಕೂಡ ಅದೇ ಹಾದಿ ಹಿಡಿಯುತ್ತಿದೆಯೇ ಎಂಬ ಆತಂಕ ಸಿನಿಪ್ರೇಮಿಗಳಲ್ಲಿ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.