AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನಲ್ಲಿ ಜನಪ್ರಿಯತೆ ಪಡೆದ ಇವರ್ಯಾರೂ ಹೊರಗಿನವರಲ್ಲ; ಇದೆ ದೊಡ್ಡ ಹಿನ್ನೆಲೆ

ವಿಕ್ಕಿ ಕೌಶಲ್ ಅವರು ಬಾಲಿವುಡ್​ನಲ್ಲಿ ಸ್ಥಾನ ಪಡೆದಿದ್ದಾರೆ. ಅವರನ್ನು ಹುಡುಕಿ ದೊಡ್ಡ ದೊಡ್ಡ ಆಫರ್​ಗಳು ಬರುತ್ತಿವೆ. ವಿಶೇಷ ಎಂದರೆ, ಅವರು ಕತ್ರಿನಾ ಕೈಫ್​ನ ಮದುವೆ ಆಗಿದ್ದಾರೆ. ವಿಕ್ಕಿ ತಂದೆ ಶ್ಯಾಮ್ ಕೌಶಲ್ ಅವರು ಆ್ಯಕ್ಷನ್ ಡೈರೆಕ್ಟರ್. ಅವರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ಬಾಲಿವುಡ್​ನಲ್ಲಿ ಜನಪ್ರಿಯತೆ ಪಡೆದ ಇವರ್ಯಾರೂ ಹೊರಗಿನವರಲ್ಲ; ಇದೆ ದೊಡ್ಡ ಹಿನ್ನೆಲೆ
ಬಾಲಿವುಡ್​ನಲ್ಲಿ ಜನಪ್ರಿಯತೆ ಪಡೆದ ಇವರ್ಯಾರೂ ಹೊರಗಿನವರಲ್ಲ; ಇದೆ ದೊಡ್ಡ ಹಿನ್ನೆಲೆ
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 16, 2024 | 7:00 AM

Share

ಬಾಲಿವುಡ್ (Bollywood)​ ಚಿತ್ರರಂಗದಲ್ಲಿ ಹೊರಗಿನವರಿಗೆ ಅಷ್ಟು ಸುಲಭದಲ್ಲಿ ಅವಕಾಶ ಸಿಗೋದಿಲ್ಲ ಎನ್ನುವ ಆರೋಪ ಇದೆ. ಇದು ಆಗಾಗ ನಿಜ ಎಂದು ಕೂಡ ಅನಿಸುತ್ತದೆ. ಆದಾಗ್ಯೂ ಕೆಲವರು ಹೊರಗಿನಿಂದ ಬಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇನ್ನೂ ಕೆಲವರು ಹೊರಗಿನವರು ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಅಸಲಿಗೆ ಅವರು ಹೊರಗಿನವರಾಗಿರುವುದಿಲ್ಲ. ಈ ರೀತಿ ಅನೇಕ ಸ್ಟಾರ್​​ಗಳು ಇದ್ದಾರೆ ಆ ಬಗ್ಗೆ ಇಲ್ಲಿದೆ ವಿವರ.

 ವಿಕ್ಕಿ ಕೌಶಲ್

ವಿಕ್ಕಿ ಕೌಶಲ್ ಅವರು ಬಾಲಿವುಡ್​ನಲ್ಲಿ ಸ್ಥಾನ ಪಡೆದಿದ್ದಾರೆ. ಅವರನ್ನು ಹುಡುಕಿ ದೊಡ್ಡ ದೊಡ್ಡ ಆಫರ್​ಗಳು ಬರುತ್ತಿವೆ. ವಿಶೇಷ ಎಂದರೆ, ಅವರು ಕತ್ರಿನಾ ಕೈಫ್​ನ ಮದುವೆ ಆಗಿದ್ದಾರೆ. ವಿಕ್ಕಿ ತಂದೆ ಶ್ಯಾಮ್ ಕೌಶಲ್ ಅವರು ಆ್ಯಕ್ಷನ್ ಡೈರೆಕ್ಟರ್. ಅವರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಹಲವು ಅವಾರ್ಡ್ ಕೂಡ ಪಡೆದಿದ್ದಾರೆ.

ಅಜಯ್ ದೇವಗನ್

ಅಜಯ್ ದೇವಗನ್ ಅವರು ಬಾಲಿವುಡ್​ನಲ್ಲಿ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಅವರ ತಂದೆ ವೀರು ದೇವಗನ್ ಅವರು ಆ್ಯಕ್ಷನ್ ಕೋರಿಯೋಗ್ರಫರ್. ವೀರು ದೇವಗನ್ ಹಲವು ಸಿನಿಮಾಗಳಿಗೆ ಸ್ಟಂಟ್ಸ್ ಕೊರಿಯೋಗ್ರಫಿ ಮಾಡುತ್ತಿದ್ದರು. ಅಜಯ್ ತಾಯಿ ವೀನಾ ದೇವಗನ್ ಅವರು ನಿರ್ಮಾಪಕಿ. ಹೀಗಾಗಿ ಅಜಯ್​ಗೆ ಸುಲಭದಲ್ಲಿ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದೆ.

ತಾರಾ ಸುತಾರಿಯಾ

ತಾರಾ ಅವರು ಬಾಲಿವುಡ್​​ಗೆ 2019ರಲ್ಲಿ ಕಾಲಿಟ್ಟರು. ‘ಸ್ಟುಡೆಂಟ್ ಆಪ್ ದಿ ಇಯರ್ 2’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಕರಣ್ ಜೋಹರ್. ಅವರು ಸೆಲೆಬ್ರಿಟಿ ಕಿಡ್​ನ ಮಾತ್ರ ಪರಿಚಯಿಸುತ್ತಾರೆ. ಅಂದಹಾಗೆ ತಾರಾ ಅವರ ಕುಟುಂಬ ಕಪೂರ್ ಕುಟುಂಬ ಹಾಗೂ ಜಾನ್ ಅಬ್ರಹಾಂ ಜೊತೆ ಗೆಳೆತನ ಹೊಂದಿದೆ.

ಕಿಯಾರಾ ಅಡ್ವಾಣಿ

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರಿಗೆ ಸಖತ್ ಬೇಡಿಕೆ ಇದೆ. ಅವರು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದ್ದಾರೆ.  ಅವರು ಚಾರ್ಮಿಂಗ್ ಪರ್ಸಾನಿಲಿಟಿ ಮೂಲಕ ಗಮನ ಸೆಳೆದರು. ಜೂಹಿ ಚಾವ್ಲಾ ಕುಟುಂಬದ ಜೊತೆ ಇವರ ಕುಟುಂಬ ಗೆಳೆತನ ಹೊಂದಿದೆ. ಪಾರ್ಟಿಗಳಲ್ಲಿ ನಿರ್ದೇಶಕರ ಪರಿಚಯವನ್ನು ಕಿಯಾರಾಗೆ ಜೂಹಿ ಮಾಡಿದ್ದರು.

ರಿಯಾ ಸೇನ್

ರಿಯಾ ಸೇನ್ ಹಾಗೂ ರೈಮಾ ಸೇನ್ ಮೂನ್ ಮೂನ್ ಸೇನ್​ನ ಮಕ್ಕಳು. ಅವರ ಅಜ್ಜಿ ಸುಚಿತ್ರಾ ಸೇನ್ ಅವರು ಖ್ಯಾತ ಬೆಂಗಾಲಿ ನಟಿ.

ರಣವೀರ್ ಸಿಂಗ್

ಇತ್ತೀಚೆಗೆ ರಣವೀರ್ ಸಿಂಗ್ ಅವರ ಆಡಿಷನ್ ವಿಡಿಯೋ ವೈರಲ್ ಆಗಿತ್ತು. ಇವರ ಮೊದಲ ಸಿನಿಮಾಗೆ ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದೆ. ಅಂದರೆ ಇವರ ಹಿನ್ನೆಲೆ ಏನು ಎಂಬುದು ನಿಮಗೆ ಅರ್ಥವಾಗಿರಬೇಕು. ರಣವೀರ್ ಸಿಂಗ್ ತಾಯಿ ಅಂಜು ಭವಾನಿ ಹಾಗೂ ಅನಿಲ್ ಕಪೂರ್ ಪತ್ನಿ ಸುನಿತಾ ಸಂಬಂಧಿಗಳು. ಹೀಗಾಗಿ ರಣವೀರ್​ಗೆ ಚಿತ್ರರಂಗದಲ್ಲಿ ಸುಲಭದಲ್ಲಿ ಅವಕಾಶ ಸಿಕ್ಕಿದೆ.

ಯಾಮಿ ಗೌತಮ್

ಯಾಮಿ ಗೌತಮ್ ಅವರು ‘ವಿಕ್ಕಿ ಡೋನರ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಅವರು ಮುಕೇಶ್ ಗೌತಮ್​ನ ಮಗಳು. ಮುಕೇಶ್ ಪಂಜಾಬ್​ನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ.

ಇದನ್ನೂ ಓದಿ: ರಣವೀರ್ ಸಿಂಗ್ ಮೊದಲ ಆಡಿಷನ್ ಹೇಗಿತ್ತು ನೋಡಿ; ನೀವು ನಗೋದು ಗ್ಯಾರಂಟಿ

ಅಮೀಶಾ ಪಟೇಲ್

ಅಮೀಶಾ ಪಟೇಲ್ ಅವರ ತಾತ ರಜ್ನಿ ಪಟೇಲ್ ಅವರು ವಕೀಲರು ಹಾಗೂ ರಾಜಕಾರಣಿ. ಅವರು ‘ಕಹೋ ನಾ ಪ್ಯಾರ್ ಹೇ’ ಸಿನಿಮಾದಲ್ಲಿ ನಟಿಸಿದ್ದರು. ರಾಕೇಶ್ ರೋಷನ್ ಹಾಗೂ ರಜ್ನಿ ಪಟೇಲ್ ಗೆಳೆಯರು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?