ರಣವೀರ್ ಸಿಂಗ್ ಮೊದಲ ಆಡಿಷನ್ ಹೇಗಿತ್ತು ನೋಡಿ; ನೀವು ನಗೋದು ಗ್ಯಾರಂಟಿ

‘ಕಿಶೋರ್ ನಮಿತ್ ಕಪೂರ್’ ಅವರ ನಟನಾ ಶಾಲೆಯಲ್ಲಿ ರಣವೀರ್ ಸಿಂಗ್ ತರಬೇತಿ ಪಡೆದರು. ಆ ಬಳಿಕ ಅವರು ‘ಬ್ಯಾಂಡ್ ಬಾಜಾ ಭಾರತ್’ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು. ಅವರು ಈ ಚಿತ್ರಕ್ಕಾಗಿ ಆಡಿಷನ್ ನೀಡಿದ್ದರು. ಈ ಆಡಿಷನ್​ನಲ್ಲಿ ಅವರು ಸಖತ್ ಚಿಲ್ ಆಗಿ ಕಾಣಿಸಿಕೊಂಡಿದ್ದಾರೆ.

ರಣವೀರ್ ಸಿಂಗ್ ಮೊದಲ ಆಡಿಷನ್ ಹೇಗಿತ್ತು ನೋಡಿ; ನೀವು ನಗೋದು ಗ್ಯಾರಂಟಿ
ರಣವೀರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jun 11, 2024 | 1:59 PM

ರಣವೀರ್ ಸಿಂಗ್ (Ranveer Singh) ಅವರಿಗೆ ಬಾಲಿವುಡ್​ನಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. ಅವರನ್ನು ಅನೇಕರು ಲಕ್ಕಿ ಎಂದು ಕರೆದಿದ್ದು ಇದೆ. ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದ ಅವರಿಗೆ ಚಿತ್ರರಂಗದಲ್ಲಿ ಸುಲಭದಲ್ಲಿ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಅವರು ಬಳಕೆ ಮಾಡಿದರು. ಅವರು ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಮೂಲಕ ಅವರಿಗೆ ಮತ್ತೊಂದು ಯಶಸ್ಸು ಸಿಕ್ಕಿದೆ. ರಣವೀರ್ ಸಿಂಗ್ ಅವರ ಮೊದಲ ಆಡಿಷನ್ ವಿಡಿಯೋ ಈಗ ವೈರಲ್ ಆಗಿದೆ. ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.

‘ಕಿಶೋರ್ ನಮಿತ್ ಕಪೂರ್’ ಅವರ ನಟನಾ ಶಾಲೆಯಲ್ಲಿ ರಣವೀರ್ ಸಿಂಗ್ ತರಬೇತಿ ಪಡೆದರು. ಆ ಬಳಿಕ ಅವರು ‘ಬ್ಯಾಂಡ್ ಬಾಜಾ ಭಾರತ್’ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು. ಅವರು ಈ ಚಿತ್ರಕ್ಕಾಗಿ ಆಡಿಷನ್ ನೀಡಿದ್ದರು. ಈ ಆಡಿಷನ್​ನಲ್ಲಿ ಅವರು ಸಖತ್ ಚಿಲ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಆಡಿಷನ್ ಮಾಡುವಾಗ ‘ಬ್ಯಾಂಡ್ ಬಾಜಾ ಭಾರತ್’ ಸಿನಿಮಾದ ದೃಶ್ಯವನ್ನೇ ನೀಡಲಾಗಿತ್ತು. ಅದನ್ನು ರಣವೀರ್ ಸಿಂಗ್ ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ.  ಆ ಬಳಿಕ ಅವರು ಸಿನಿಮಾಗೆ ಆಯ್ಕೆ ಆಗಿದ್ದಾರೆ. ಆದಿತ್ಯ ಚೋಪ್ರಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆರಂಭದಲ್ಲಿ ಅವರಿಗೆ ರಣವೀರ್ ಅವರ ಫೋಟೋ ನೋಡಿ ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲು ಮನಸ್ಸು ಬಂದಿರಲಿಲ್ಲ. ಆದಾಗ್ಯೂ ಅವರನ್ನು ಶಾನೂ ಶರ್ಮಾ ಒತ್ತಾಯದಿಂದ ಆಡಿಷನ್ ಮಾಡಲಾಯಿತು. ಭೂಮಿ ಪಡ್ನೇಕರ್ ಈ ಆಡಿಷನ್​ನ ಆಯೋಜನೆ ಮಾಡಿದ್ದರು.

ಇದನ್ನೂ ಓದಿ: ಯಾರೂ ಒಪ್ಪದ ಕೆಲಸ ಮಾಡಿದ ರಣವೀರ್ ಸಿಂಗ್; ದಕ್ಷಿಣ ಭಾರತದವರ ಛೀಮಾರಿ

ರಣವೀರ್ ಸಿಂಗ್ ಅವರಿಗೆ ಮೊದಲ ಸಿನಿಮಾದಿಂದಲೇ ಸಾಕಷ್ಟು ಖ್ಯಾತಿ ಸಿಕ್ಕಿತು. ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ ಜೊತೆ ಅವರು ನಟಿಸಿದ್ದರು. ಈ ಮೂಲಕ ಅವರು ಗಮನ ಸೆಳೆದರು. ಕಳೆದ ವರ್ಷ ಅವರು ಹಾಗೂ ಆಲಿಯಾ ಒಟ್ಟಾಗಿ ನಟಿಸಿದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಗೆಲುವು ಕಂಡಿದೆ. ಈಗ ರಣವೀರ್  ಸಿಂಗ್ ಅವರು ‘ಡಾನ್ 3’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಫರ್ಹಾನ್ ಅಖ್ತರ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:22 am, Tue, 11 June 24

ಸ್ವಂತ ಖರ್ಚಿನಲ್ಲಿ ದೆಹಲಿ ಬರುತ್ತೇವೆ, ಸುಂಕ ವಸೂಲಿ ಎಲ್ಲಿಂದ ಬಂತು?ಯತ್ನಾಳ್
ಸ್ವಂತ ಖರ್ಚಿನಲ್ಲಿ ದೆಹಲಿ ಬರುತ್ತೇವೆ, ಸುಂಕ ವಸೂಲಿ ಎಲ್ಲಿಂದ ಬಂತು?ಯತ್ನಾಳ್
ಏರ್ ಶೋ: ಸೂರ್ಯ ಕಿರಣ್ ತಂಡದ ವೈಮಾನಿಕ ಸಾಹಸದ ವಿಡಿಯೋ ಇಲ್ಲಿದೆ ನೋಡಿ
ಏರ್ ಶೋ: ಸೂರ್ಯ ಕಿರಣ್ ತಂಡದ ವೈಮಾನಿಕ ಸಾಹಸದ ವಿಡಿಯೋ ಇಲ್ಲಿದೆ ನೋಡಿ
ಬೆಂಗಳೂರು ಏರ್​ ಶೋ: ಏರ್​ಪೋರ್ಟ್​ ರಸ್ತೆಯಲ್ಲಿ ಟ್ರಾಫಿಕ್ ಜಾಮ್​​
ಬೆಂಗಳೂರು ಏರ್​ ಶೋ: ಏರ್​ಪೋರ್ಟ್​ ರಸ್ತೆಯಲ್ಲಿ ಟ್ರಾಫಿಕ್ ಜಾಮ್​​
ಏರ್ ಶೋಗೆ ವೀಕ್ಷಿಸಲು ತೆರಳಿರುವವರು ಟ್ರಾಫಿಕ್ ನಿರ್ಬಂಧಗಳನ್ನು ಗಮನಿಸಿ
ಏರ್ ಶೋಗೆ ವೀಕ್ಷಿಸಲು ತೆರಳಿರುವವರು ಟ್ರಾಫಿಕ್ ನಿರ್ಬಂಧಗಳನ್ನು ಗಮನಿಸಿ
ಯುವಜನಾಂಗದಲ್ಲಿ ಜಾತ್ರೆ, ಊರಹಬ್ಬಗಳ ಮೇಲಿನ ಆಸಕ್ತಿ ಕಮ್ಮಿಯಾಗುತ್ತಿದೆ
ಯುವಜನಾಂಗದಲ್ಲಿ ಜಾತ್ರೆ, ಊರಹಬ್ಬಗಳ ಮೇಲಿನ ಆಸಕ್ತಿ ಕಮ್ಮಿಯಾಗುತ್ತಿದೆ
Aero India 2025: ಬೆಂಗಳೂರು ಏರ್​ ಶೋ ಲೈವ್​, ಲೋಹದ ಹಕ್ಕಿಗಳ ಚಮತ್ಕಾರ
Aero India 2025: ಬೆಂಗಳೂರು ಏರ್​ ಶೋ ಲೈವ್​, ಲೋಹದ ಹಕ್ಕಿಗಳ ಚಮತ್ಕಾರ
ವಿಠಲ ಗ್ರಾಮದ ಬಳಿ 20ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ
ವಿಠಲ ಗ್ರಾಮದ ಬಳಿ 20ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ
ಇಂದಿನಿಂದ 3 ದಿನ ಟಿ ನರಸೀಪುರದಲ್ಲಿ ಕುಂಭಮೇಳ: ಸಿದ್ಧತೆ ಹೇಗಿದೆ ನೋಡಿ
ಇಂದಿನಿಂದ 3 ದಿನ ಟಿ ನರಸೀಪುರದಲ್ಲಿ ಕುಂಭಮೇಳ: ಸಿದ್ಧತೆ ಹೇಗಿದೆ ನೋಡಿ
ಮೈಸೂರು: ತ್ರಿವೇಣಿ ಸಂಗಮ ಕುಂಭಮೇಳದ ಮಹತ್ವ ತಿಳಿಯಿರಿ
ಮೈಸೂರು: ತ್ರಿವೇಣಿ ಸಂಗಮ ಕುಂಭಮೇಳದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ನಾಲ್ಕು ಗ್ರಹಗಳ ಶುಭಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ನಾಲ್ಕು ಗ್ರಹಗಳ ಶುಭಫಲವಿದೆ