AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರಿಕ್​ ಮಾಡಿಕೊಂಡ ‘ಕಿಲಾಡಿ’: ರವಿ ತೇಜ ಚಿತ್ರಕ್ಕೆ ಬಾಲಿವುಡ್ ಮಂದಿಯಿಂದ ಎದುರಾಯ್ತು ವಿರೋಧ

ರವಿ ತೇಜ ನಟನೆಯ ‘ಕಿಲಾಡಿ’ ಸಿನಿಮಾದ ಶೀರ್ಷಿಕೆ ಬದಲಾಗಬೇಕು ಎಂದು ಬಾಲಿವುಡ್​ ನಿರ್ಮಾಪಕ ರತನ್​ ಜೈನ್ ಆಗ್ರಹಿಸಿದ್ದಾರೆ.​ ಅಲ್ಲದೇ ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.

ಕಿರಿಕ್​ ಮಾಡಿಕೊಂಡ ‘ಕಿಲಾಡಿ’: ರವಿ ತೇಜ ಚಿತ್ರಕ್ಕೆ ಬಾಲಿವುಡ್ ಮಂದಿಯಿಂದ ಎದುರಾಯ್ತು ವಿರೋಧ
ರವಿ ತೇಜ
TV9 Web
| Edited By: |

Updated on:Feb 13, 2022 | 10:06 AM

Share

ಟಾಲಿವುಡ್​ನ ಸ್ಟಾರ್​​ ನಟ ರವಿ ತೇಜ (Ravi Teja) ಅಭಿನಯದ ‘ಕಿಲಾಡಿ’ ಚಿತ್ರ ಬಿಡುಗಡೆ ಆಗಿದೆ. ಫೆ.11ರಂದು ತೆರೆಕಂಡ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರವಿ ತೇಜ ಜೊತೆ ಡಿಂಪಲ್​ ಹಯಾತಿ, ಮೀನಾಕ್ಷಿ ಚೌಧರಿ ಮುಂತಾದವರು ನಟಿಸಿದ್ದಾರೆ. ತೆಲುಗಿನಲ್ಲಿ ತಯಾರಾಗಿರುವ ಈ ಸಿನಿಮಾ ಇತರೆ ಭಾಷೆಗಳಿಗೆ ಡಬ್​ ಆಗಿ ಬಿಡುಗಡೆ ಆಗಿದೆ. ಟ್ರೇಲರ್​ ಮೂಲಕ ಗಮನ ಸೆಳೆದ ‘ಕಿಲಾಡಿ’  (Khiladi Movie) ಸಿನಿಮಾವನ್ನು ನೋಡಲು ರವಿ ತೇಜ ಫ್ಯಾನ್ಸ್​ ಚಿತ್ರಮಂದಿರಕ್ಕೆ ಮುಗಿಬಿದ್ದಿದ್ದಾರೆ. ಈ ಸಿನಿಮಾ ರಿಲೀಸ್​ ಆದ ಬಳಿಕ ಒಂದು ಹೊಸ ಕಿರಿಕ್​ ಎದುರಾಗಿದೆ. ಚಿತ್ರದ ಟೈಟಲ್​ ಬಗ್ಗೆ ಬಾಲಿವುಡ್​ ನಿರ್ಮಾಪಕರು ಆಕ್ಷೇಪ ಎತ್ತಿದ್ದಾರೆ. ‘ಕಿಲಾಡಿ’ ಶೀರ್ಷಿಕೆಯಲ್ಲಿ ಈ ಮೊದಲೇ ಅಕ್ಷಯ್​ ಕುಮಾರ್​ (Akshay Kumar) ಸಿನಿಮಾ ಮಾಡಿ ಗೆದ್ದಿದ್ದಾರೆ. ಅದರ ಸೀಕ್ವೆಲ್​ಗಳು ಕೂಡ ಬಂದಿವೆ. ಈಗ ರವಿ ತೇಜ ಸಿನಿಮಾ ಕೂಡ ಅದೇ ಟೈಟಲ್​ ಬಳಸಿಕೊಂಡಿರುವುದುಕ್ಕೆ ಬಾಲಿವುಡ್​ ನಿರ್ಮಾಪಕ ರತನ್​ ಜೈನ್​ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ರವಿ ತೇಜ ನಟನೆಯ ‘ಕಿಲಾಡಿ’ ಸಿನಿಮಾದ ಶೀರ್ಷಿಕೆ ಬದಲಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ದಕ್ಷಿಣ ಭಾರತದ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲು ಆರಂಭಿಸಿದ ಬಳಿಕ ಈ ಸಮಸ್ಯೆ ಶುರುವಾಗಿದೆ. ಆಯಾ ರಾಜ್ಯಗಳ ಚಲನಚಿತ್ರ ಮಂಡಳಿಗಳಲ್ಲಿ ಶೀರ್ಷಿಕೆ ನೋಂದಣಿ ಮಾಡಿಕೊಳ್ಳುವ ದಕ್ಷಿಣ ಭಾರತದ ಸಿನಿಮಾಗಳು ನಂತರ ಹಿಂದಿಗೂ ಡಬ್​ ಆಗಿ ಉತ್ತರ ಭಾರತದ ರಾಜ್ಯಗಳಲ್ಲಿ ತೆರೆ ಕಾಣುತ್ತವೆ. ಆಗ ಹಿಂದಿ ಸಿನಿಮಾಗಳ ಟೈಟಲ್​ ಜೊತೆ ಕ್ಲ್ಯಾಶ್​ ಆಗುತ್ತದೆ ಎಂದು ಬಾಲಿವುಡ್​ ನಿರ್ಮಾಪಕರು ಹೇಳಿದ್ದಾರೆ. ‘ಕಿಲಾಡಿ’ ವಿಚಾರದಲ್ಲಿ ಹಾಗೆಯೇ ಆಗಿದೆ.

‘ಟ್ರೇಡ್​ ಮಾರ್ಕ್​ ಕಾಯ್ದೆ ಅಡಿಯಲ್ಲಿ ನಾವು ‘ಕಿಲಾಡಿ’ ಎಂಬ ಶೀರ್ಷಿಕೆಯನ್ನು ನೋಂದಾಯಿಸಿದ್ದೇವೆ. ಈಗ ರವಿ ತೇಜ ಮಾಡಿರುವ ಸಿನಿಮಾದಿಂದ ಮೂಲ ‘ಕಿಲಾಡಿ’ ಚಿತ್ರದ ಪ್ರತಿಷ್ಠೆಗೆ ಧಕ್ಕೆ ಆಗುತ್ತದೆ. ಹಾಗಾಗಿ ಈ ಸಿನಿಮಾದ ಶೀರ್ಷಿಕೆ ಬದಲಾಗಬೇಕು ಹಾಗೂ ಅದರ ಒಟಿಟಿ ರಿಲೀಸ್​ಗೆ ತಡೆ ನೀಡಬೇಕು ಅಂತ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದೇವೆ’ ಎಂದು ರತನ್​ ಜೈನ್​ ಹೇಳಿದ್ದಾರೆ. ‘ಈ ರೀತಿ ಹಿಂದಿ ಸಿನಿಮಾಗಳ ಟೈಟಲ್​ಗಳನ್ನು ಬೇರೆ ಭಾಷೆಯವರು ಬಳಸಿಕೊಂಡರೆ ಬಾಲಿವುಡ್​ ಚಿತ್ರಗಳಿಗೆ ತೊಂದರೆ ಆಗುತ್ತದೆ. ನಮ್ಮಲ್ಲೇ ಕೆಲವರು ನಮ್ಮ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ’ ಎಂದು ರತನ್​ ಜೈನ್​ ಆರೋಪಿಸಿದ್ದಾರೆ.

ಬಿಡುಗಡೆಗೂ ಮುನ್ನವೇ ‘ಕಿಲಾಡಿ’ ಚಿತ್ರದ ವಿತರಣೆ ಹಕ್ಕುಗಳು ಭಾರಿ ಮೊತ್ತಕ್ಕೆ ಸೇಲ್​ ಆಗಿದ್ದವು. ಒಟಿಟಿ, ಕಿರುತೆರೆ ಪ್ರಸಾರದ ಹಕ್ಕುಗಳ ವಿಚಾರದಲ್ಲಿಯೂ ದೊಡ್ಡ ಆಫರ್​ ಬಂದಿದೆ. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾದ ರಿಲೀಸ್​ಗೂ ಮುನ್ನವೇ ನಿರ್ಮಾಪಕರು ಲಾಭ ಮಾಡಿಕೊಂಡಿದ್ದರು. ಇದಕ್ಕೆ ಕಾರಣವಾದ ನಿರ್ದೇಶಕ ರಮೇಶ್​ ವರ್ಮಾ ಅವರಿಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರನ್ನು ಉಡುಗೊರೆಯಾಗಿ ನಿರ್ಮಾಪಕರು ನೀಡಿದ್ದು ಸುದ್ದಿ ಆಗಿತ್ತು.

​ಇದನ್ನು ಓದಿ:

ನಟಿಯ ಜೊತೆ ರವಿ ತೇಜ ಲಿಪ್​ ಲಾಕ್​; ವೈರಲ್​ ಫೋಟೋದಲ್ಲಿರುವ ಸುಂದರಿ ಯಾರು? ಅರೆರೆ ‘ಕಿಲಾಡಿ’

ರವಿ ತೇಜ ಜೊತೆಗಿನ ಕಿಸ್ಸಿಂಗ್​ ದೃಶ್ಯ ವೈರಲ್​; ಮೊದಲ ಬಾರಿಗೆ ಮೌನ ಮುರಿದ ನಟಿ ಮೀನಾಕ್ಷಿ

Published On - 9:57 am, Sun, 13 February 22

Follow Us
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ