AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್​ಗೆ ಡ್ರಗ್ಸ್ ನೀಡಿದ್ದರೆ? ಮಾಟ ಮಾಡಿಸಿದ್ದರೆ? ಉತ್ತರ ನೀಡಿದ ಮಾಜಿ ಗೆಳತಿ ರಿಯಾ

Rhea Chakraborty: ಸುಶಾಂತ್ ಸಿಂಗ್ ಸಾವಿನ ಬಳಿಕ ಮಾಧ್ಯಮಗಳಿಂದ, ಸಾರ್ವಜನಿಕರಿಂದ ತೀವ್ರ ಮೂದಲಿಕೆ, ಮಾನಸಿಕ ಹಿಂಸೆಗೆ ಗುರಿಯಾಗಿದ್ದ ನಟಿ ರಿಯಾ ಚಕ್ರವರ್ತಿ ಮೊದಲ ಬಾರಿಗೆ ಸುಶಾಂತ್ ಸಾವಿನ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

ಸುಶಾಂತ್​ಗೆ ಡ್ರಗ್ಸ್ ನೀಡಿದ್ದರೆ? ಮಾಟ ಮಾಡಿಸಿದ್ದರೆ? ಉತ್ತರ ನೀಡಿದ ಮಾಜಿ ಗೆಳತಿ ರಿಯಾ
ಸುಶಾಂತ್ ಸಿಂಗ್
ಮಂಜುನಾಥ ಸಿ.
|

Updated on: Oct 07, 2023 | 8:56 PM

Share

ಸುಶಾಂತ್ ಸಿಂಗ್ (Sushant Singh) ನಿಧನ ಹೊಂದಿ ಮೂರು ವರ್ಷಗಳಾಗಿವೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್​ನ ಹಲವು ಹುಳುಕುಗಳು ಹೊರಬಂದವು. ನೆಪೊಟಿಸಂ, ಡ್ರಗ್ಸ್ ಪ್ರಕರಣ ಇನ್ನೂ ಹಲವು ವಿಷಯಗಳು ಹೊರಬಿದ್ದವು, ಖ್ಯಾತ ನಾಮ ನಟ-ನಟಿಯರು ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಎದುರಿಸಬೇಕಾಯ್ತು. ಹಲವರು ಜೈಲು ಸೇರಿದರು ಸಹ. ಅದರಲ್ಲಿ ಸುಶಾಂತ್ ಸಿಂಗ್​ರ ಮಾಜಿ ಗೆಳತಿ ರಿಯಾ ಚಕ್ರವರ್ತಿ ಸಹ ಒಬ್ಬರು. ಸುಶಾಂತ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಸಾರ್ವಜನಿಕರಿಂದ, ಮಾಧ್ಯಮಗಳಿಂದ, ತನಿಖಾ ಸಂಸ್ಥೆಗಳಿಂದ ತೀವ್ರ ಮೂದಲಿಕೆ, ಮಾನಸಿಕ ಹಿಂಸೆಯನ್ನು ಅನುಭವಿಸಬೇಕಾಯ್ತು. ಇಷ್ಟು ವರ್ಷ ಎಲ್ಲಿಯೂ ಸುಶಾಂತ್ ಸಾವಿನ ಬಗ್ಗೆ ಮಾತನಾಡದಿದ್ದ ರಿಯಾ ಇದೀಗ ಮೊದಲ ಬಾರಿಗೆ ಟಿವಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ರಿಯಾ, ಸುಶಾಂತ್​ಗೆ ಡ್ರಗ್ಸ್ ಸರಬರಾಜು ಮಾಡಿದ್ದರೆಂದು, ಸುಶಾಂತ್ ಮೇಲೆ ಮಾಟ ಮಾಡಿಸಿದ್ದರೆಂದು, ಸುಶಾಂತ್​ಗೆ ತಪ್ಪು ಔಷಧಗಳನ್ನು ನೀಡಿದ್ದರೆಂದು, ಬೇರೆಯವರೊಟ್ಟಿಗೆ ಆತ್ಮೀಯ ಸಂಬಂಧ ಹೊಂದಿ ಸುಶಾಂತ್​ಗೆ ಮೋಸ ಮಾಡಿದರು ಎಂದು ಹೀಗೆ ಹಲವು ಆರೋಪಗಳನ್ನು ರಿಯಾ ಮೇಲೆ ಮಾಡಲಾಗಿತ್ತು. ವಿಷಕನ್ಯೆ, ಮಾಟಗಾತಿ ಎಂದೆಲ್ಲ ಹೆಡ್​ಲೈನ್​ಗಳನ್ನು ನೀಡಿ ರಿಯಾ ವಿರುದ್ಧ ಕಾರ್ಯಕ್ರಮ ಪ್ರಸಾರ ಮಾಡಲಾಗಿತ್ತು. ಬಹುತೇಕ ಆರೋಪಗಳಿಗೆ ರಿಯಾ ಇದೀಗ ಉತ್ತರ ನೀಡಿದ್ದಾರೆ.

ಸುಶಾಂತ್ ಮೇಲೆ ಮಾಟ ಮಾಡಿಸಿದ್ದರಂತೆ ಹೌದೆ, ಎಂಬ ಪ್ರಶ್ನೆಗೆ ಪ್ರಪಂಚದಲ್ಲಿ ಮಾಟ ಅಥವಾ ಬ್ಲಾಕ್ ಮ್ಯಾಜಿಕ್ ಎಂಬ ವಿಷಯ ಯಾವುದೂ ಇಲ್ಲ. ಇನ್ನು ಡ್ರಗ್ಸ್ ವಿಷಯಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವುದಿಲ್ಲ. ಆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಎನ್​ಸಿಬಿ, ಸಿಬಿಐ ವಿಷಯವಾಗಿಯೂ ನಾನು ಈಗ ಏನೂ ಮಾತನಾಡುವುದಿಲ್ಲ ಎಂದಿದ್ದಾರೆ ರಿಯಾ ಚಕ್ರವರ್ತಿ.

ಇದನ್ನೂ ಓದಿ:ದಿವಂಗತ ಸುಶಾಂತ್ ಸಿಂಗ್ ಮಾಜಿ ಗೆಳತಿಯ ಗ್ಲಾಮರಸ್ ಅವತಾರ

ಸುಶಾಂತ್ ಸಿಂಗ್ ಬಗ್ಗೆ ಮಾತನಾಡಿರುವ ರಿಯಾ, ”ಸುಶಾಂತ್ ಸಿಂಗ್ ಮಾನಸಿಕ ಆರೋಗ್ಯ ಸರಿಯಿಲ್ಲ ಎಂಬ ವಿಷಯ ನನಗೆ ಮೊದಲೇ ಗೊತ್ತಿತ್ತು. ಆದರೆ ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳಲು ಏನು ಕಾರಣ ಎಂಬುದು ನನಗೆ ತಿಳಿದಿಲ್ಲ. ಅವನ ಮನಸ್ಸಿನಲ್ಲಿ ಏನು ನಡೆಯುತ್ತಿತ್ತು ಎಂಬುದನ್ನು ನಾನು ಹೇಗೆ ಊಹಿಸಬಲ್ಲೆ. ಈ ದೇಶದಲ್ಲಿ ಮಾನಸಿಕ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇತ್ತೀಚೆಗೆ ಕೆಲವು ಯುವಕರು ಆ ಬಗ್ಗೆ ಗಂಭೀರವಾಗಿ ಮಾತನಾಡುತ್ತಿದ್ದಾರೆ” ಎಂದಿದ್ದಾರೆ.

”ಅವಳು ಅವನ ಜೀವನದಲ್ಲಿ ಬಂದ ಮೇಲೆ ಅವನು ಹಾಳಾದ, ಅವಳು ಅವನನ್ನು ವಶಕ್ಕೆ ತೆಗೆದುಕೊಂಡಳು” ಎಂದು ಸುಶಾಂತ್ ಕುಟುಂಬದವರು ಆರೋಪಿಸುತ್ತಾರೆ. ನಾನು ಸುಶಾಂತ್ ಜೀವನಕ್ಕೆ ಬರುವ ಮುಂಚೆಯೇ ಅವನು ಸ್ಟಾರ್. ಸಣ್ಣ ನಗರದಿಂದ ಬಂದು ಬಾಲಿವುಡ್​ನಲ್ಲಿ ಸ್ಟಾರ್ ಆಗೆ ಬೆಳೆದು ಇತಿಹಾಸ ಬರೆದವನು. ಅವನದ್ದು ಕಂಟ್ರೋಲ್ ಮಾಡಬಹುದಾಂಥಹಾ ಮೆದುಳು ಅಥವಾ ವ್ಯಕ್ತಿತ್ವ ಆಗಿರಲಿಲ್ಲ” ಎಂದಿದ್ದಾರೆ ರಿಯಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ