Salman Khan: ಸಲ್ಮಾನ್ ಖಾನ್ ಸಿನಿಮಾ ಸೆಟ್​ನಲ್ಲಿದೆ ಡ್ರೆಸ್​ಕೋಡ್​; ಇದು ಮಹಿಳೆಯರಿಗೆ ಮಾತ್ರ

ಪಲಕ್ ತಿವಾರಿ ಹಲವು ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಸೆಟ್ ಅನುಭವ ಹಂಚಿಕೊಂಡಿದ್ದಾರೆ. ಅವರು ರಿವೀಲ್ ಮಾಡಿರುವ ವಿಚಾರದಿಂದ ಅನೇಕರಿಗೆ ಸಲ್ಲು ಮೇಲಿದ್ದ ಗೌರವ ಹೆಚ್ಚಿದೆ.

Salman Khan: ಸಲ್ಮಾನ್ ಖಾನ್ ಸಿನಿಮಾ ಸೆಟ್​ನಲ್ಲಿದೆ ಡ್ರೆಸ್​ಕೋಡ್​; ಇದು ಮಹಿಳೆಯರಿಗೆ ಮಾತ್ರ
Follow us
|

Updated on: Apr 13, 2023 | 8:16 AM

ಸಲ್ಮಾನ್ ಖಾನ್ ಅವರು ಬಾಲಿವುಡ್​ನ ಸ್ಟಾರ್ ಹೀರೋ. ಚಿತ್ರರಂಗದಲ್ಲಿ ಅವರು ತಮ್ಮದೇ ಆದ ಕೆಲ ನಿಯಮಗಳನ್ನು ಇಟ್ಟುಕೊಂಡಿದ್ದಾರೆ. ಅವರು ಎಂದಿಗೂ ತೆರೆಮೇಲೆ ಕಿಸ್ ಮಾಡುವುದಿಲ್ಲ. ತಮ್ಮ ಫ್ಯಾಮಿಲಿ ಆಡಿಯನ್ಸ್​ಗೆ ಮುಜುಗರ ಆಗಬಾರದು ಎನ್ನುವುದು ಅವರ ನಂಬಿಕೆ. ವಿಶೇಷ ಎಂದರೆ ಸಲ್ಮಾನ್ ಖಾನ್ (Salman Khan) ತಮ್ಮ ಸೆಟ್​ಗೆ ಬರೋ ಮಹಿಳೆಯರಿಗೆ ಡ್ರೆಸ್​ಕೋಡ್ ಇಟ್ಟಿದ್ದಾರಂತೆ! ಹೀಗೊಂದು ಅಚ್ಚರಿಯ ವಿಚಾರವನ್ನು ನಟಿ ಪಲಕ್ ತಿವಾರಿ ರಿವೀಲ್ ಮಾಡಿದ್ದಾರೆ. ಪುರುಷರ ಮಧ್ಯೆ ಇರುವ ಮಹಿಳೆಯರಿಗೆ ಸೆಟ್​ನಲ್ಲಿ ಯಾವುದೇ ತೊಂದರೆ ಆಗಬಾರದು ಅನ್ನೋದು ಭಾಯಿಜಾನ್​ ಉದ್ದೇಶ.

ಪಲಕ್ ತಿವಾರಿ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದಲ್ಲಿ ಅವರು ಪಾತ್ರ ಒಂದನ್ನು ಮಾಡಿದ್ದಾರೆ. ಏಪ್ರಿಲ್ 21ರಂದು ಚಿತ್ರ ತೆರೆಗೆ ಬರುತ್ತಿದೆ. ಇದರ ಪ್ರಚಾರದಲ್ಲಿ ತೊಡಗಿರುವ ಪಲಕ್ ತಿವಾರಿ ಹಲವು ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಸೆಟ್ ಅನುಭವ ಹಂಚಿಕೊಂಡಿದ್ದಾರೆ. ಅವರು ರಿವೀಲ್ ಮಾಡಿರುವ ವಿಚಾರದಿಂದ ಅನೇಕರಿಗೆ ಸಲ್ಲು ಮೇಲಿದ್ದ ಗೌರವ ಹೆಚ್ಚಿದೆ.

‘ಅಂತಿಮ್​: ದಿ ಫೈನಲ್ ಟ್ರುತ್’ ಸಿನಿಮಾದಲ್ಲಿ ಪಲಕ್ ಅವರು ಸಹಾಯಕ ನಿರ್ದೇಶಕಿ ಆಗಿದ್ದರು. ಆಯುಷ್ ಶರ್ಮಾ ನಟನೆಯ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಕೂಡ ಕಾಣಿಸಿಕೊಂಡಿದ್ದರು. ಸಲ್ಮಾನ್ ಖಾನ್ ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಕಾರಣಕ್ಕೆ ಸಲ್ಲು ಕೆಲ ನಿಯಮ ತಂದಿದ್ದರು.

ಇದನ್ನೂ ಓದಿ:‘ಏಪ್ರಿಲ್ 30ಕ್ಕೆ ಸಲ್ಮಾನ್ ಖಾನ್​ನ ಮುಗಿಸ್ತೀವಿ’; ಸಲ್ಲುಗೆ ಬಂತು ಮತ್ತೊಂದು ಬೆದರಿಕೆ ಕರೆ

‘ಸಲ್ಮಾನ್ ಖಾನ್ ಅವರು ಸೆಟ್​​ನಲ್ಲಿ ಮಹಿಳೆಯರಿಗೆ ನಿಯಮ ತಂದಿದ್ದರು. ಸರಿಯಾಗಿರೋ ಡ್ರೆಸ್​ನ ಮಾತ್ರ ಹಾಕಬೇಕು. ಕತ್ತಿನ ಬಳಿ ಡ್ರೆಸ್​ ಸರಿಯಾಗಿ ಇರಬೇಕು. ದೇಹದ ಮುಖ್ಯ ಪಾರ್ಟ್ ಕವರ್ ಆಗಿರಬೇಕಿತ್ತು’ ಎಂದಿದ್ದಾರೆ ಪಲಕ್​. ಒಮ್ಮೆ ಪಲಕ್ ಸೆಟ್​ಗೆ ಹೊರಟಿದ್ದರು. ಅವರು ತೊಟ್ಟಿದ್ದ ಸಾಂಪ್ರದಾಯಿಕ ಬಟ್ಟೆ ನೋಡಿ ಅವರ ತಾಯಿ ಶ್ವೇತಾ ತಿವಾರಿಗೆ ಅಚ್ಚರಿ ಆಗಿತ್ತು. ಈ ಬಗ್ಗೆ ಕೇಳಿದಾಗ ಸಲ್ಲು ನಿಯಮದ ಬಗ್ಗೆ ಹೇಳಿದ್ದರು ಪಲಕ್​. ಇದರಿಂದ ಶ್ವೇತಾಗೆ ಸಲ್ಲು ಮೇಲಿದ್ದ ಗೌರವ ಹೆಚ್ಚಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ