ಸಮೀರ್ ವಾಂಖೆಡೆ ಆರೋಪಗಳಿಗೆ ಕೋರ್ಟ್​ನಲ್ಲೇ ಉತ್ತರ ಕೊಟ್ಟ ಶಾರುಖ್ ಕಂಪನಿ

ಐಆರ್​ಎಸ್ ಅಧಿಕಾರಿ ಸಮೀರ್ ವಾಂಖೆಡೆ, ಶಾರುಖ್ ಖಾನ್ ಕಂಪನಿ ರೆಡ್ ಚಿಲ್ಲೀಸ್ ನಿರ್ಮಿತ 'ಬ್ಯಾಡ್ಸ್ ಆಫ್ ಬಾಲಿವುಡ್' ಸರಣಿ ವಿರುದ್ಧ ದೂರು ನೀಡಿದ್ದಾರೆ. ಸರಣಿಯಲ್ಲಿ ತಮ್ಮನ್ನು ಹೋಲುವ ಪಾತ್ರವಿದೆ ಎಂದು ವಾಂಖೆಡೆ ಆರೋಪಿಸಿದ್ದಾರೆ. ಆದರೆ, ರೆಡ್ ಚಿಲ್ಲೀಸ್ ವಕೀಲರು, ಇದು ಕಾಲ್ಪನಿಕ ಕಥೆ, ಆರ್ಯನ್ ಖಾನ್ ಕ್ರೂಸ್ ಕೇಸ್​ಗೆ ಸಂಬಂಧವಿಲ್ಲ ಎಂದು ದೆಹಲಿ ಹೈಕೋರ್ಟ್​ ಅಲ್ಲಿ ವಾದ ಮಂಡಿಸಿದ್ದಾರೆ.

ಸಮೀರ್ ವಾಂಖೆಡೆ ಆರೋಪಗಳಿಗೆ ಕೋರ್ಟ್​ನಲ್ಲೇ ಉತ್ತರ ಕೊಟ್ಟ ಶಾರುಖ್ ಕಂಪನಿ
ಶಾರುಖ್, ಆರ್ಯನ್-ಸಮೀರ್

Updated on: Nov 27, 2025 | 12:26 PM

ಆರ್​ಎಸ್​ ಅಧಿಕಾರಿ ಸಮೀರ್ ವಾಂಖೆಡೆ ಅವರು ಈ ಮೊದಲು ಶಾರುಖ್ ಖಾನ್ ಮಗ ಆರ್ಯನ್​ ಖಾನ್​ನ ಡ್ರಗ್ ಕೇಸ್​ನಲ್ಲಿ ಬಂಧಿಸಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು.ಈ ಪ್ರಕರಣದಲ್ಲಿ ಆರ್ಯನ್ ಖಾನ್ ನಿರ್ದೋಷಿ ಎಂಬುದು ಸಾಬೀತಾಯಿತು. ಈ ಬೆನ್ನಲ್ಲೇ ಆರ್ಯನ್ ಖಾನ್ ನಿರ್ದೇಶನದ ‘ಬ್ಯಾಡ್ಸ್ ಆಫ್ ಬಾಲಿವುಡ್​’ನಲ್ಲಿ ಸಮೀರ್ (Sameer Wankhede) ಅವರನ್ನೇ ಹೋಲುವ ಪಾತ್ರ ಬಂದಿತ್ತು. ಇದನ್ನು ಪ್ರಶ್ನಿಸಿ ಸಮೀರ್ ಕೋರ್ಟ್ ಮೆಟ್ಟಿಲೇರಿದ್ದರು. ಶಾರುಖ್ ಖಾನ್ ನಿರ್ಮಾಣ ಸಂಸ್ಥೆ ಪರ ವಕೀಲರು ಸಮೀರ್​ಗೆ ತಿರುಗೇಟು ನೀಡಿದ್ದಾರೆ.

‘ಬ್ಯಾಡ್ಸ್ ಆಫ್ ಬಾಲಿವುಡ್​’ ವೆಬ್ ಸರಣಿಯನ್ನು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್​ಟೇನ್​ಮೆಂಟ್ ನಿರ್ಮಾಣ ಮಾಡಿದೆ. ಈ ಸರಣಿಯಲ್ಲಿ ಎನ್​ಸಿಬಿ ಅಧಿಕಾರಿ ಒಬ್ಬರನ್ನು ತೋರಿಸಲಾಗಿದ್ದು, ಅವರು ಬಾಲಿವುಡ್​ನವರನ್ನು ಮಾತ್ರ ಟಾರ್ಗೆಟ್​ ಮಾಡೋ ರೀತಿ ತೋರಿಸಲಾಗಿದೆ.ಅನೇಕರಿಗೆ ಇದು ಸಮೀರ್ ವಾಂಖೆಡೆ ಎಂದು ಅನಿಸಿದೆ. ಹೀಗಾಗಿ, ಸಮೀರ್ ಅವರು ದೂರು ದಾಖಲಿಸಿದ್ದರು.

‘ಈ ಸರಣಿ ಪ್ರಸಾರ ತಡೆಗೆ ನಿರ್ಬಂಧ ಹೇರಬೇಕು’ ಎಂದು ಸಮೀರ್ ಕೋರಿದ್ದು, ಇತ್ತೀಚೆಗೆ ದೆಹಲಿ ಹೈಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆದಿದೆ.

ರೆಡ್ ಚಿಲ್ಲೀಸ್ ಅನ್ನು ಪ್ರತಿನಿಧಿಸಿದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್, ನ್ಯಾಯಮೂರ್ತಿ ಪುರುಶೈಂದ್ರ ಕುಮಾರ್ ಕೌರವ್ ಅವರು ಇದು ಫಿಕ್ಷನ್ ಕಥೆ ಎಂದರು. ಇದಕ್ಕೂ ಕ್ರ್ಯೂಸ್ ಕೇಸ್​ಗೂ ಸಂಬಂಧ ಇಲ್ಲ ಎಂದರು.

‘ಈ ವೆಬ್ ಸರಣಿಯು ಸುಮಾರು 20 ವಿಭಿನ್ನ ವಿಷಯಗಳನ್ನು ಒಳಗೊಂಡಿದೆ. ನಾವು ಕಾರ್ಡೆಲಿಯಾ ಕ್ರೂಸ್ ಘಟನೆಯ ಕುರಿತು ಸಾಕ್ಷ್ಯಚಿತ್ರವನ್ನು ತೋರಿಸಿಲ್ಲ. ಅತಿ ಉತ್ಸಾಹಿ ಅಧಿಕಾರಿಗಳಿಂದ ಸ್ಫೂರ್ತಿ ಪಡೆದು ಇದನ್ನು ಮಾಡಲಾಗಿದೆ. ಇದು ಕಾರ್ಡೆಲಿಯಾ ಕ್ರೂಸ್ ಕಥೆ ಅಲ್ಲ’ ಎಂದು ವಕೀಲರು ವಾದ ಮಂಡಿಸಿದರು.

ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಬಳಿಕ ಮತ್ತೆ ಶಾರುಖ್ ಖಾನ್ ಮಗನ ಮೇಲೆ ಕೇಸ್ ಹಾಕಿದ ಸಮೀರ್ ವಾಂಖೆಡೆ

ಈ ಪ್ರಕರಣದಲ್ಲಿ ನೆಟ್​​ಫ್ಲಿಕ್ಸ್ ಕೂಡ ಭಾಗಿ ಆಗಿದೆ. ಏಕೆಂದರೆ ಈ ಸರಣಿಯು ಇದೇ ಒಟಿಟಿಯಲ್ಲಿ ಪ್ರಸಾರ ಕಂಡಿದೆ. ಹೀಗಾಗಿ, ಅವರ ವಿಚಾರಣೆಯನ್ನು ಗುರುವಾರ (ಡಿಸೆಂಬರ್ 4) ಮಾಡಲು ನಿರ್ಧರಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us