Shah Rukh Khan

Shah Rukh Khan

ಶಾರುಖ್ ಖಾನ್ ಅವರು ಬಾಲಿವುಡ್ನ ಬೇಡಿಕೆಯ ಹೀರೋ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಶಾರುಖ್ ಖಾನ್ ಜನಿಸಿದ್ದು 1965ರ ನವೆಂಬರ್ 2ರಂದು. ಅವರ ಆಸ್ತಿ ಮೌಲ್ಯ 6500 ಕೋಟಿ ರೂಪಾಯಿಗೂ ಮೀರಿದೆ. ಭಾರತದ ಅತ್ಯಂತ ಶ್ರೀಮಂತ ನಟ ಎನ್ನುವ ಹೆಗ್ಗಳಿಕೆ ಇವರಿಗೆ ಇದೆ.

ಶಾರುಖ್ ಖಾನ್ ಅವರು ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಸಾಲು ಸಾಲು ಸಿನಿಮಾ ಮಾಡಿ ಫೇಮಸ್ ಆದರು. ಶಾರುಖ್ ಖಾನ್ ‘ಡಿಡಿಎಲ್ಜೆ’, ‘ಡಾನ್’, ‘ಡಾನ್ 2’, ‘ಚೆನ್ನೈ ಎಕ್ಸ್ಪ್ರೆಸ್’ ಸೇರಿ ಹಲವು ಸೂಪರ್ ಹಿಟ್ ಚಿತ್ರ ನೀಡಿದ್ದಾರೆ.

2023ರಲ್ಲಿ ರಿಲೀಸ್ ಆದ ‘ಪಠಾಣ್’, ‘ಜವಾನ್’ ಹಿಟ್ ಆಗಿವೆ. ಗೌರಿ ಖಾನ್ ಅವರನ್ನು ಶಾರುಖ್ ಮದುವೆ ಆಗಿದ್ದು, ಸುಹಾನಾ ಖಾನ್, ಆರ್ಯನ್ ಖಾನ್ ಹಾಗೂ ಅಬ್ರಾಮ್ ಖಾನ್ ಹೆಸರಿನ ಮಕ್ಕಳು ಇವರಿಗೆ ಇದ್ದಾರೆ.

ಇನ್ನೂ ಹೆಚ್ಚು ಓದಿ

EMI ಕಟ್ಟದೇ ಶಾರುಖ್​ ಖಾನ್​ ಕಾರು ಸೀಜ್; ಶಾಕಿಂಗ್ ವಿಷಯ ತಿಳಿಸಿದ ಜೂಹಿ ಚಾವ್ಲಾ

ಶಾರುಖ್​ ಖಾನ್​ ಜೊತೆ ಜೂಹಿ ಚಾವ್ಲಾ ಅವರು ಹಲವು ವರ್ಷಗಳ ಒಡನಾಟ ಹೊಂದಿದ್ದಾರೆ. ಶಾರುಖ್​ ಖಾನ್​ ಅವರ ಕಷ್ಟದ ದಿನಗಳಲ್ಲಿ ಜೂಹಿ ಚಾವ್ಲಾ ಹತ್ತಿರದಿಂದ ನೋಡಿದ್ದಾರೆ. ಕಾರಿನ ಇಎಂಐ ಕಟ್ಟಲು ಕೂಡ ಶಾರುಖ್​ ಖಾನ್​ ಬಳಿ ಹಣ ಇರಲಿಲ್ಲ ಎಂಬುದನ್ನು ಜೂಹಿ ಚಾವ್ಲಾ ಈಗ ಬಹಿರಂಗಪಡಿಸಿದ್ದಾರೆ. ಆ ಕುರಿತು ಇಲ್ಲಿದೆ ಹೆಚ್ಚಿನ ವಿವರ..

ಸೆಲೆಬ್ರಿಟಿಗಳಿಗೆ ವಿವಿಧ ರೀತಿಯ ಭದ್ರತೆ; ಇದರ ವೆಚ್ಚವನ್ನು ಭರಿಸೋರು ಯಾರು?

ಅಮಿತಾಭ್ ಬಚ್ಚನ್ ಮತ್ತು ವಿವೇಕ್ ಅಗ್ನಿಹೋತ್ರಿ ಅವರಿಗೆ ವೈ ಭದ್ರತೆ ನೀಡಲಾಗಿದೆ. ಈ ಭದ್ರತೆಯಲ್ಲಿ 1 ಅಥವಾ 2 ಕಮಾಂಡೋಗಳು ಮತ್ತು 5ರಿಂದ 6 ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ. ವಿಐಪಿ ವ್ಯಕ್ತಿಯೊಂದಿಗೆ ಪ್ರಯಾಣಿಸಲು ಅವರಿಗೆ ಸರ್ಕಾರದಿಂದ ಒಂದು ಅಥವಾ ಎರಡು ವಾಹನಗಳನ್ನು ನೀಡಲಾಗುತ್ತದೆ.

ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರದ ವೇಳೆ ಪರಸ್ಪರ ತಬ್ಬಿಕೊಂಡ ಅಕ್ಷಯ್, ಶಾರುಖ್

ಶಾರುಖ್​ ಖಾನ್​ ಅವರು ಮುಖೇಶ್​ ಅಂಬಾನಿ ಮತ್ತು ಅನಂತ್​ ಅಂಬಾನಿ ಜತೆ ಆಗಮಿಸಿದರು. ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ವೀಕ್ಷಿಸಲು ಬಂದಿದ್ದ ಅಕ್ಷಯ್​ ಕುಮಾರ್​ ಮತ್ತು ಶಾರುಖ್​ ಖಾನ್​ ಅವರು ಪರಸ್ಪರ ಭೇಟಿಯಾದರು. ಅವರಿಬ್ಬರ ಈ ಫೋಟೋ ವೈರಲ್​ ಆಗಿದ್ದು, ಫ್ಯಾನ್ಸ್​ ಖುಷಿಯಾಗಿದ್ದಾರೆ.

ಶಾರುಖ್​ ಖಾನ್​ ನಟನೆಯ ‘ಕಿಂಗ್​’ ಸಿನಿಮಾ ಬಗ್ಗೆ ಸುಳ್ಳು ಸುದ್ದಿ ಹಬ್ಬಲು ಕಾರಣವಾಯ್ತು ಈ ಫೋಟೋ

‘ಕಿಂಗ್​’ ಸಿನಿಮಾಗೆ ಸ್ಪೇನ್​ನಲ್ಲಿ ಶಾರುಖ್​ ಖಾನ್​ ಅವರು ಚಿತ್ರೀಕರಣ ಶುರು ಮಾಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಕೆಲವು ವ್ಯಕ್ತಿಗಳ ಜೊತೆ ಶಾರುಖ್​ ಖಾನ್​ ಮೀಟಿಂಗ್​ ಮಾಡುತ್ತಿರುವ ಒಂದು ಫೋಟೋ ವೈರಲ್​ ಆಗಿದೆ. ಇದನ್ನು ನೋಡಿ ‘ಕಿಂಗ್​’ ಸಿನಿಮಾದ ಶೂಟಿಂಗ್​ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಅಸಲಿ ವಿಷಯ ಬೇರೆಯೇ ಇದೆ.

ಐಪಿಎಲ್ ಫೈನಲ್ ವೇಳೆ ಶಾರುಖ್ ಖಾನ್ ಧರಿಸಿದ ಈ ವಾಚ್ ಬೆಲೆ 11 ಕೋಟಿ ರೂಪಾಯಿ

ಇದು ಒಂದು ವಾಚ್​​ನ ವಿಷಯಕ್ಕೆ ಮಾತ್ರ ಸೀಮಿತವಲ್ಲ. ಶಾರುಖ್​ ಖಾನ್​ ಅವರ ಬಳಿಕ ಇಂಥ ಹಲವಾರು ವಾಚ್​ಗಳಿವೆ. ದುಬಾರಿ ಕೈ ಗಡಿಯಾರದ ಬಗ್ಗೆ ಅವರಿಗೆ ಕ್ರೇಜ್​ ಇದೆ. ಅವರ ಕಲೆಕ್ಷನ್​ನಲ್ಲಿ ಪ್ರತಿಷ್ಠಿತ ಬ್ರ್ಯಾಂಡ್​ಗಳ ಅನೇಕ ವಾಚ್​ಗಳಿವೆ. ಎಸ್​ಆರ್​ಎಚ್​ ವರ್ಸಸ್​ ಕೆಕೆಆರ್​ ತಂಡಗಳ ನಡುವಿನ ಮ್ಯಾಚ್​ ನೋಡಲು ಬಂದ ಶಾರುಖ್​ ಖಾನ್​ ಅವರು 11 ಕೋಟಿ ರೂಪಾಯಿ ಬೆಲೆ ಬಾಳುವ ವಾಚ್​ ಧರಿಸಿದ್ದರು.

ಗೆದ್ದ ಖುಷಿಯಲ್ಲಿ ಕೆಕೆಆರ್​ ಮೆಂಟರ್ ಗೌತಮ್​ ಗಂಭೀರ್​ಗೆ ಮುತ್ತಿಟ್ಟ ಶಾರುಖ್ ಖಾನ್

ಗೌತಮ್ ಗಂಭೀರ್ ಅವರು ಕೆಕೆಆರ್​ನ ಮೆಂಟರ್​ ಆಗಿ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕೋಲ್ಕತ್ತ ನೈಟ್ ರೈಡರ್ಸ್​ಗೆ ಗೌತಮ್ ಗಂಭೀರ್ ಈ ಮೊದಲು ಕ್ಯಾಪ್ಟನ್ ಆಗಿದ್ದರು. ಅವರ ನಾಯಕತ್ವದಲ್ಲಿ ತಂಡಕ್ಕೆ ಎರಡು ಟ್ರೋಫಿಗಳು ಬಂದಿದ್ದವು. ಈಗ 10 ವರ್ಷಗಳ ಬಳಿಕ ಮತ್ತೊಮ್ಮೆ ಕೆಕೆಆರ್​ ಗೆಲುವಿನ ಕೇಕೆ ಹಾಕಿದೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಶಾರುಖ್ ಖಾನ್; ಹೇಳಿದ್ದೇ ಒಂದು, ಆಗಿದ್ದೇ ಇನ್ನೊಂದು

Shah Rukh Khan Health Update: ಶಾರುಖ್ ಖಾನ್ ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದು. ಅವರಿಗೆ ಸಣ್ಣ ಪುಟ್ಟ ತೊಂದರೆ ಎದುರಾದರೂ ಫ್ಯಾನ್ಸ್ ವಲಯದಲ್ಲಿ ಆತಂಕ ಸೃಷ್ಟಿ ಆಗುತ್ತದೆ. ಶಾರುಖ್ ಖಾನ್​ಗೆ ಸನ್​ಸ್ಟ್ರೋಕ್ ಆಗಿದೆ ಎಂದಾಗಲೂ ಎಲ್ಲರೂ ಗಾಬರಿ ಆಗಿದ್ದರು.

ಶಾರುಖ್​​ ಖಾನ್​ಗೆ ಆದ ಪೆಟ್ಟುಗಳಿಗೆ ಲೆಕ್ಕವೇ ಇಲ್ಲ; ಇಲ್ಲಿದೆ ಅವರ ಮೆಡಿಕಲ್ ಹಿಸ್ಟರಿ

ಶಾರುಖ್ ಖಾನ್ ಅವರಿಗೆ ಈಗ 58 ವರ್ಷ. ಈಗಲೂ ಅವರು ಆರೋಗ್ಯವಾಗಿದ್ದಾರೆ. ಅವರು ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತಾರೆ. ಅವರು ಹಲವು ಬಾರಿ ಗಾಯಗೊಂಡ ಉದಾಹರಣೆ ಇದೆ. ಆ ಬಗ್ಗೆ ಇಲ್ಲಿದೆ ವಿವಿರ.  

ಶಾರುಖ್ ಖಾನ್ ಆರೋಗ್ಯ ಹೇಗಿದೆ? ಅಪ್​ಡೇಟ್ ಕೊಟ್ಟ ಜೂಹಿ ಚಾವ್ಲಾ

Shah Rukh Khan Health Update: ಇತ್ತೀಚೆಗೆ ಅಹಮದಾಬಾದ್​ನಲ್ಲಿ ನಡೆದ ಎಸ್​ಆರ್​ಎಚ್​ ವಿರುದ್ಧದ ಪಂದ್ಯದಲ್ಲಿ ಕೆಕೆಆರ್​ ಜಯ ಗಳಿಸಿತ್ತು. ಆಗ ಶಾರುಖ್ ಖಾನ್ ಅವರು ಇಡೀ ಗ್ರೌಂಡ್ ಸುತ್ತಾಡಿದ್ದರು. ಅಭಿಮಾನಿಗಳತ್ತ ಕೈ ಬೀಸಿದ್ದರು. ಆ ಬಳಿಕ ಅವರಿಗೆ ಅನಾರೋಗ್ಯ ಉಂಟಾಗಿದೆ. ಅವರು ಆಸ್ಪತ್ರೆಯಲ್ಲಿದ್ದಾರೆ.

Shah Rukh Khan: ಶಾರುಖ್ ಖಾನ್ ಅವರು ಒಂದುಸಲಕ್ಕೆ ಎಷ್ಟು ಸಿಗರೇಟು ಸೇದುತ್ತಾರೆ ಗೊತ್ತಾ?

80 ಹಾಗೂ 90ರ ದಶಕದಲ್ಲಿ ಹಿಂದಿಯಲ್ಲಿ ನೆಗೆಟಿವ್ ಪಾತ್ರಗಳನ್ನು ಮಾಡಿ ಗಮನ ಸೆಳೆದವರು ಪ್ರದೀಪ್ ರಾವತ್. ಶಾರುಖ್ ಖಾನ್ ಅವರು ‘ಕೊಯ್ಲಾ’ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾದ ಸೆಟ್​ನಲ್ಲಿ ಶಾರುಖ್ ಖಾನ್ ಓರ್ವ ಚೈನ್ ಸ್ಮೋಕರ್ ಅನ್ನೋದು ಪ್ರದೀಪ್ ರಾವತ್​ಗೆ ಗೊತ್ತಾಗಿತ್ತು.

ಜೈಲಿನಲ್ಲಿ ದರ್ಶನ್​ನ​ ಅಪ್ಪಿ ಕಣ್ಣೀರು ಹಾಕಿದ ತಾಯಿ ಮೀನಾ
ಜೈಲಿನಲ್ಲಿ ದರ್ಶನ್​ನ​ ಅಪ್ಪಿ ಕಣ್ಣೀರು ಹಾಕಿದ ತಾಯಿ ಮೀನಾ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!