AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮೀರ್ ವಾಂಖೆಡೆ ಆರೋಪಗಳಿಗೆ ಕೋರ್ಟ್​ನಲ್ಲೇ ಉತ್ತರ ಕೊಟ್ಟ ಶಾರುಖ್ ಕಂಪನಿ

ಐಆರ್​ಎಸ್ ಅಧಿಕಾರಿ ಸಮೀರ್ ವಾಂಖೆಡೆ, ಶಾರುಖ್ ಖಾನ್ ಕಂಪನಿ ರೆಡ್ ಚಿಲ್ಲೀಸ್ ನಿರ್ಮಿತ 'ಬ್ಯಾಡ್ಸ್ ಆಫ್ ಬಾಲಿವುಡ್' ಸರಣಿ ವಿರುದ್ಧ ದೂರು ನೀಡಿದ್ದಾರೆ. ಸರಣಿಯಲ್ಲಿ ತಮ್ಮನ್ನು ಹೋಲುವ ಪಾತ್ರವಿದೆ ಎಂದು ವಾಂಖೆಡೆ ಆರೋಪಿಸಿದ್ದಾರೆ. ಆದರೆ, ರೆಡ್ ಚಿಲ್ಲೀಸ್ ವಕೀಲರು, ಇದು ಕಾಲ್ಪನಿಕ ಕಥೆ, ಆರ್ಯನ್ ಖಾನ್ ಕ್ರೂಸ್ ಕೇಸ್​ಗೆ ಸಂಬಂಧವಿಲ್ಲ ಎಂದು ದೆಹಲಿ ಹೈಕೋರ್ಟ್​ ಅಲ್ಲಿ ವಾದ ಮಂಡಿಸಿದ್ದಾರೆ.

ಸಮೀರ್ ವಾಂಖೆಡೆ ಆರೋಪಗಳಿಗೆ ಕೋರ್ಟ್​ನಲ್ಲೇ ಉತ್ತರ ಕೊಟ್ಟ ಶಾರುಖ್ ಕಂಪನಿ
ಶಾರುಖ್, ಆರ್ಯನ್-ಸಮೀರ್
ರಾಜೇಶ್ ದುಗ್ಗುಮನೆ
|

Updated on: Nov 27, 2025 | 12:26 PM

Share

ಆರ್​ಎಸ್​ ಅಧಿಕಾರಿ ಸಮೀರ್ ವಾಂಖೆಡೆ ಅವರು ಈ ಮೊದಲು ಶಾರುಖ್ ಖಾನ್ ಮಗ ಆರ್ಯನ್​ ಖಾನ್​ನ ಡ್ರಗ್ ಕೇಸ್​ನಲ್ಲಿ ಬಂಧಿಸಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು.ಈ ಪ್ರಕರಣದಲ್ಲಿ ಆರ್ಯನ್ ಖಾನ್ ನಿರ್ದೋಷಿ ಎಂಬುದು ಸಾಬೀತಾಯಿತು. ಈ ಬೆನ್ನಲ್ಲೇ ಆರ್ಯನ್ ಖಾನ್ ನಿರ್ದೇಶನದ ‘ಬ್ಯಾಡ್ಸ್ ಆಫ್ ಬಾಲಿವುಡ್​’ನಲ್ಲಿ ಸಮೀರ್ (Sameer Wankhede) ಅವರನ್ನೇ ಹೋಲುವ ಪಾತ್ರ ಬಂದಿತ್ತು. ಇದನ್ನು ಪ್ರಶ್ನಿಸಿ ಸಮೀರ್ ಕೋರ್ಟ್ ಮೆಟ್ಟಿಲೇರಿದ್ದರು. ಶಾರುಖ್ ಖಾನ್ ನಿರ್ಮಾಣ ಸಂಸ್ಥೆ ಪರ ವಕೀಲರು ಸಮೀರ್​ಗೆ ತಿರುಗೇಟು ನೀಡಿದ್ದಾರೆ.

‘ಬ್ಯಾಡ್ಸ್ ಆಫ್ ಬಾಲಿವುಡ್​’ ವೆಬ್ ಸರಣಿಯನ್ನು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್​ಟೇನ್​ಮೆಂಟ್ ನಿರ್ಮಾಣ ಮಾಡಿದೆ. ಈ ಸರಣಿಯಲ್ಲಿ ಎನ್​ಸಿಬಿ ಅಧಿಕಾರಿ ಒಬ್ಬರನ್ನು ತೋರಿಸಲಾಗಿದ್ದು, ಅವರು ಬಾಲಿವುಡ್​ನವರನ್ನು ಮಾತ್ರ ಟಾರ್ಗೆಟ್​ ಮಾಡೋ ರೀತಿ ತೋರಿಸಲಾಗಿದೆ.ಅನೇಕರಿಗೆ ಇದು ಸಮೀರ್ ವಾಂಖೆಡೆ ಎಂದು ಅನಿಸಿದೆ. ಹೀಗಾಗಿ, ಸಮೀರ್ ಅವರು ದೂರು ದಾಖಲಿಸಿದ್ದರು.

‘ಈ ಸರಣಿ ಪ್ರಸಾರ ತಡೆಗೆ ನಿರ್ಬಂಧ ಹೇರಬೇಕು’ ಎಂದು ಸಮೀರ್ ಕೋರಿದ್ದು, ಇತ್ತೀಚೆಗೆ ದೆಹಲಿ ಹೈಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆದಿದೆ.

ರೆಡ್ ಚಿಲ್ಲೀಸ್ ಅನ್ನು ಪ್ರತಿನಿಧಿಸಿದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್, ನ್ಯಾಯಮೂರ್ತಿ ಪುರುಶೈಂದ್ರ ಕುಮಾರ್ ಕೌರವ್ ಅವರು ಇದು ಫಿಕ್ಷನ್ ಕಥೆ ಎಂದರು. ಇದಕ್ಕೂ ಕ್ರ್ಯೂಸ್ ಕೇಸ್​ಗೂ ಸಂಬಂಧ ಇಲ್ಲ ಎಂದರು.

‘ಈ ವೆಬ್ ಸರಣಿಯು ಸುಮಾರು 20 ವಿಭಿನ್ನ ವಿಷಯಗಳನ್ನು ಒಳಗೊಂಡಿದೆ. ನಾವು ಕಾರ್ಡೆಲಿಯಾ ಕ್ರೂಸ್ ಘಟನೆಯ ಕುರಿತು ಸಾಕ್ಷ್ಯಚಿತ್ರವನ್ನು ತೋರಿಸಿಲ್ಲ. ಅತಿ ಉತ್ಸಾಹಿ ಅಧಿಕಾರಿಗಳಿಂದ ಸ್ಫೂರ್ತಿ ಪಡೆದು ಇದನ್ನು ಮಾಡಲಾಗಿದೆ. ಇದು ಕಾರ್ಡೆಲಿಯಾ ಕ್ರೂಸ್ ಕಥೆ ಅಲ್ಲ’ ಎಂದು ವಕೀಲರು ವಾದ ಮಂಡಿಸಿದರು.

ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಬಳಿಕ ಮತ್ತೆ ಶಾರುಖ್ ಖಾನ್ ಮಗನ ಮೇಲೆ ಕೇಸ್ ಹಾಕಿದ ಸಮೀರ್ ವಾಂಖೆಡೆ

ಈ ಪ್ರಕರಣದಲ್ಲಿ ನೆಟ್​​ಫ್ಲಿಕ್ಸ್ ಕೂಡ ಭಾಗಿ ಆಗಿದೆ. ಏಕೆಂದರೆ ಈ ಸರಣಿಯು ಇದೇ ಒಟಿಟಿಯಲ್ಲಿ ಪ್ರಸಾರ ಕಂಡಿದೆ. ಹೀಗಾಗಿ, ಅವರ ವಿಚಾರಣೆಯನ್ನು ಗುರುವಾರ (ಡಿಸೆಂಬರ್ 4) ಮಾಡಲು ನಿರ್ಧರಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ