AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಯನ್​ ಖಾನ್​ ಬಂಧನದಿಂದ ಸಂಕಷ್ಟಕ್ಕೆ ಸಿಲುಕಿದ ಶಾರುಖ್​ ಸಿನಿಮಾಗಳು; ಕೋಟ್ಯಂತರ ರೂಪಾಯಿ ನಷ್ಟ

ಶಾರುಖ್​ ಖಾನ್​ ಅವರು ಅಟ್ಲೀ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್​ ಕೂಡ ಪ್ರಗತಿಯಲ್ಲಿದೆ. ಆದರೆ, ಶಾರುಖ್​ ಇಲ್ಲದ ಕಾರಣ ಸಿನಿಮಾ ಚಿತ್ರೀಕರಣ ಅರ್ಧಕ್ಕೆ ನಿಂತಿದೆ.

ಆರ್ಯನ್​ ಖಾನ್​ ಬಂಧನದಿಂದ ಸಂಕಷ್ಟಕ್ಕೆ ಸಿಲುಕಿದ ಶಾರುಖ್​ ಸಿನಿಮಾಗಳು; ಕೋಟ್ಯಂತರ ರೂಪಾಯಿ ನಷ್ಟ
ಆರ್ಯನ್ ಖಾನ್, ಶಾರುಖ್ ಖಾನ್
TV9 Web
| Edited By: |

Updated on: Oct 06, 2021 | 8:47 PM

Share

ಬಾಲಿವುಡ್​ ನಟ ಶಾರುಖ್​ ಖಾನ್​ ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಎರಡು ಬಿಗ್​ ಬಜೆಟ್​ ಚಿತ್ರಗಳೇ. ಈ ಸಿನಿಮಾಗಳ ಶೂಟಿಂಗ್​ ಈಗಾಗಲೇ ಆರಂಭಗೊಂಡಿದೆ. ಆದರೆ, ಆರ್ಯನ್​ ಖಾನ್​ ಮಾಡಿಕೊಂಡ ಎಡವಟ್ಟಿನಿಂದ ಈ ಸಿನಿಮಾಗಳು ನಷ್ಟ ಅನುಭವಿಸುವಂತಾಗಿದೆ.

ಆರ್ಯನ್​ ಖಾನ್​ ಅಕ್ಟೋಬರ್​ 2ರ ರಾತ್ರಿ ಬಂಧನಕ್ಕೆ ಒಳಗಾದರು. ಅಂದಿನಿಂದ ಇಂದಿನವರೆಗೆ ಶಾರುಖ್​ ಖಾನ್​ಗೆ ಯಾವುದರ ಮೇಲೂ ಗಮನಹರಿಸೋಕೆ ಸಾಧ್ಯವಾಗುತ್ತಿಲ್ಲ. ಮಗನನ್ನು ಹೊರಗೆ ಕರೆದುಕೊಂಡು ಬರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಶಾರುಖ್​ ಖಾನ್. ಅಕ್ಟೋಬರ್​ 3ರಂದು ಶಾರುಖ್​ ಖಾನ್ ಸ್ಪೇನ್​ಗೆ ತೆರಳಬೇಕಿತ್ತು. ‘ಪಠಾಣ್​’ ಸಿನಿಮಾದ ವಿಶೇಷ ಸಾಂಗ್​ ಶೂಟಿಂಗ್​ನಲ್ಲಿ ದೀಪಿಕಾ ಜತೆ ಅವರು ಹೆಜ್ಜೆ ಹಾಕಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇದರಿಂದ ಇಡೀ ಸಿನಿಮಾ ತಂಡ ವಿದೇಶಕ್ಕೆ ತೆರಳೋದು ಕ್ಯಾನ್ಸಲ್​ ಆಗಿತ್ತು. ಇದರಿಂದ ಚಿತ್ರತಂಡಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎನ್ನಲಾಗಿದೆ.

ಶಾರುಖ್​ ಖಾನ್​ ಅವರು ಅಟ್ಲೀ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್​ ಕೂಡ ಪ್ರಗತಿಯಲ್ಲಿದೆ. ಆದರೆ, ಶಾರುಖ್​ ಇಲ್ಲದ ಕಾರಣ ಸಿನಿಮಾ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಇದರಿಂದಲೂ ಸಿನಿಮಾ ತಂಡಕ್ಕೆ ನಷ್ಟ ಉಂಟಾಗುತ್ತಿದೆ.

ಅಟ್ಲೀ ಸಿನಿಮಾ ಈಗ 20 ದಿನದ ಶೂಟಿಂಗ್​ ಪೂರ್ಣಗೊಳಿಸಿದೆ. ಇನ್ನೂ ಬರೋಬ್ಬರಿ 180 ದಿನಗಳ ಶೂಟಿಂಗ್​ ಬಾಕಿ ಇದೆ. ಈಗ ಶಾರುಖ್​ ಸೆಟ್​ಗೆ ಬರದೇ ಇರುವುದರಿಂದ ಸಿನಿಮಾ ಶೂಟಿಂಗ್​ ಕೂಡ ವಿಳಂಬವಾಗುತ್ತಿದೆ.

ಶಾರುಖ್​ ಖಾನ್ ಮಗ ಆರ್ಯನ್​ ಅವರು ಇನ್ನೂ ಎಷ್ಟು ದಿನ ಎನ್​ಸಿಬಿ ಕಸ್ಟಡಿಯಲ್ಲಿ ಇರಬೇಕು ಎಂಬುದು ಅನಿಶ್ಚಿತವಾಗಿದೆ. ಆರ್ಯನ್ ಹಿಂದಿರುಗುವವರೆಗೆ ಶಾರುಖ್​ ಸೆಟ್​ಗೆ ಮರಳುವುದಿಲ್ಲ.

ನಾನಾ ರೀತಿಯ ಬಟ್ಟೆ ಧರಿಸುತ್ತಿರುವ ಸ್ಟಾರ್​ ಕಿಡ್​​ ಆರ್ಯನ್​ಗೆ ಹೇಗಿದೆ ಉಪಚಾರ? ಇಲ್ಲಿದೆ ಮಾಹಿತಿ

ಡ್ರಗ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನಿಗೆ ದೊಡ್ಡ ಪಾಠ ಕಲಿಸಿದ್ದ ಜಾಕಿ ಚಾನ್​; ಶಾರುಖ್​ಗೆ ನೋಡಿ ಕಲಿಯಿರಿ ಎಂದ ಅಭಿಮಾನಿಗಳು

Follow Us
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!