AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಬಾಂಗ್ಲಾ ಬಯೋಸ್ಕೋಪ್ ಅವಾರ್ಡ್: ‘ಹಳೆಯ ದಿನಗಳು ಮತ್ತೆ ಬರಲಿ’

TV9 Bangla: ಟಿವಿ9 ಬಾಂಗ್ಲಾ ಗೊರೆರ್ ಬಯೋಸ್ಕೋಪ್ ಅವಾರ್ಡ್ ಕಾರ್ಯಕ್ರಮ ಕೊಲ್ಕತ್ತನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಟಿವಿ9 ಸಿಇಓ, ಎಂಡಿ ಬರುಣ್ ದಾಸ್ ಅವರು ಬಾಂಗ್ಲಾ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ.

ಟಿವಿ9 ಬಾಂಗ್ಲಾ ಬಯೋಸ್ಕೋಪ್ ಅವಾರ್ಡ್: ‘ಹಳೆಯ ದಿನಗಳು ಮತ್ತೆ ಬರಲಿ’
Barun Das
ಮಂಜುನಾಥ ಸಿ.
|

Updated on: Dec 03, 2024 | 10:45 AM

Share

ಟಿವಿ9 ಬಾಂಗ್ಲಾ ಗೊರೇರ್ ಬಯೋಸ್ಕೋಪ್ ಅವಾರ್ಡ್ ಕಾರ್ಯಕ್ರಮ ಕೊಲ್ಕತ್ತದಲ್ಲಿ ನಿನ್ನೆ (ಡಿಸೆಂಬರ್ 02) ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಟಿವಿ9 ಸಿಇಓ ಬರುಣ್ ದಾಸ್ ಜೊತೆಗೆ ಹಲವು ಸಿನಿಮಾ, ರಾಜಕೀಯ ತಾರೆಯರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಟಿವಿ9 ಸಿಇಓ, ಎಂಡಿ ಬರುಣ್ ದಾಸ್, ‘ಕೊಲ್ಕತ್ತ, ವಿಶ್ವದ ಕ್ರಿಯಾಶೀಲ ನಗರಗಳಲ್ಲಿ ಒಂದಾಗಿದೆ. ಖ್ಯಾತ ಇತಿಹಾಸಕಾರ ಎರಿಕ್ ಕೊಲ್ಕತ್ತ ನಗರವನ್ನು ವೆನ್ನಿಸ್, ಫ್ಲೋರೆನ್ಸ್​ ನಗರಗಳಿಗೆ ಹೋಲಿಸಿದ್ದಾರೆ’ ಎಂದರು.

‘ಬೆಂಗಾಳಿ ಚಿತ್ರರಂಗದ ಮಾರುಕಟ್ಟೆ ಗಾತ್ರ ಹಿರಿದಾಡುತ್ತಿದೆ. ಈ ವರ್ಷ ಅದು 100 ಕೋಟಿಯನ್ನು ದಾಟಲಿದೆ. ಅಲ್ಲು ಅರ್ಜುನ್ ಇಲ್ಲಿನ ಮೆಚ್ಚಿನ ನಟ. ಬೆಂಗಾಳಿ ಚಿತ್ರರಂಗ ಪ್ರಾದೇಶಿಕ ಚಿತ್ರರಂಗ ಆದರೆ ಇಲ್ಲಿನ ಕ್ರಿಯಾಶೀಲತೆ ಭಾರತದ ಹಲವು ಪ್ರಮುಖ ನಗರಗಳಿಗಿಂತಲೂ ಹೆಚ್ಚಿದೆ. ಬಂಗಾಳದಲ್ಲಿ ಇರುವಷ್ಟು ಕ್ರಿಯಾಶೀಲ ಮನಸ್ಸುಗಳ ಸಂಖ್ಯೆ ದೊಡ್ಡದು’ ಎಂದಿದ್ದಾರೆ.

‘ಒಂದು ಕಾಲದಲ್ಲಿ ಬೆಂಗಾಳಿ ಕ್ರಿಯಾಶೀಲ ವ್ಯಕ್ತಿಗಳು ಬಾಲಿವುಡ್ ಅನ್ನು ಆಳುತ್ತಿದ್ದರು. ಭಾರತದ ಅತ್ಯುತ್ತಮ ನಿರ್ದೇಶಕರುಗಳ ಸಾಲಿನಲ್ಲಿರುವ ಸತ್ಯಜಿತ್ ರೇ, ರಿತ್ವಿಕ್ ಘಾಟಕ್, ಮೃಣಾಲ್ ಸೇನ್ ಅವರುಗಳು ಬೆಂಗಾಳಿಗಳು ಎಂಬುದು ಹೆಮ್ಮೆಯ ವಿಷಯ. ಬೆಂಗಾಲಿ ಟಿವಿ ಉದ್ಯಮ 50 ವರ್ಷಗಳನ್ನು ಈ ವರ್ಷ ಪೂರೈಸುತ್ತಿದೆ. ಇದೇ ವರ್ಷ ನಾವು ಖ್ಯಾತ ನಿರ್ದೇಶಕ ರಿತ್ವಕ್ ಘಾಟಕ್ ಅವರ ನೂರನೇ ಜಯಂತಿಯನ್ನು ಆಚರಿಸುತ್ತಿದ್ದೇವೆ. 2023 ರಲ್ಲಿ ನಾವು ಮೃಣಾಲ್ ಸೇನ್ ಅವರ 100ನೇ ವರ್ಷದ ಜಯಂತಿಯನ್ನು ಆಚರಿಸಿದ್ದೇವೆ’ ಎಂದರು ಬರುಣ್ ದಾಸ್.

ಒಟಿಟಿ ಮತ್ತು ಎಐ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ವಿಷಯವಾಗಿ ಮಾತನಾಡಿದ ಬರುಣ್ ದಾಸ್, ‘ಒಟಿಟಿ ಬೆಂಗಾಳಿ ಚಿತ್ರರಂಗ ಬೆಳೆಯಲು ಹೆಚ್ಚು ಸಹಾಯ ಮಾಡುತ್ತಿದೆ. ವಿತರಕರ ಅವಶ್ಯಕತೆಯನ್ನು ಅದು ತೆಗೆದು ಹಾಕುತ್ತಿದೆ. ಚಿತ್ರರಂಗದ ಕ್ರಿಯಾಶೀಲ ಕಾರ್ಯ ನೇರವಾಗಿ ಪ್ರೇಕ್ಷಕನಿಗೆ ತಲುಪುವುದು ಇದರಿಂದ ಸಾಧ್ಯವಾಗಿದೆ. ಇದರಿಂದ ಪ್ರೇಕ್ಷಕ ಮತ್ತೆ ರಾಜನಾಗಿದ್ದಾನೆ. ಆತ ಈಗ ತನಗೆ ಬೇಕಾದುದ್ದನ್ನು ಬೇಕಾದ ಕಡೆಯಿಂದ ನೋಡಬಹುದಾಗಿದೆ’ ಎಂದಿದ್ದಾರೆ. ಎಐ ಬಗ್ಗೆಯೂ ಮಾತನಾಡಿದ ಬರುಣ್ ದಾಸ್, ‘ಎಐ ಒಂದು ಪೆಡಂಭೂತದಂತಿದೆ, ಆದರೆ ಕ್ರಿಯಾಶೀಲತೆಯ ಅಸ್ತ್ರದಿಂದ ನಾವು ಅದನ್ನು ಮಣಿಸಬಹುದಾಗಿದೆ’ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಪ್ರಧಾನಿ ಮೋದಿಯಿಂದ ಸಂಬಂಧ, ಗೌರವ, ಜವಾಬ್ದಾರಿ ಬಗ್ಗೆ ಕಲಿತಿದ್ದೇನೆ; ನ್ಯೂಸ್​9 ಶೃಂಗಸಭೆಯಲ್ಲಿ ಟಿವಿ9 ನೆಟ್​ವರ್ಕ್ ಎಂಡಿ, ಸಿಇಒ ಬರುಣ್ ದಾಸ್

ತಮ್ಮ ಭಾಷಣದಲ್ಲಿ ಬೆಂಗಳೂರಿನ ಉಲ್ಲೇಖ ಮಾಡಿದ ಬರುಣ್ ದಾಸ್, ‘ಐಟಿ ವಿಭಾಗದಲ್ಲಿ ಅದ್ಭುತ ಪ್ರಗತಿ ತೋರಿಸಿರುವ ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎನಿಸಿಕೊಂಡಿದೆ. ಇದೇ ಕಾರ್ಯವನ್ನು ಕೊಲ್ಕತ್ತ ಸಹ ಮಾಡಬೇಕಿದೆ. ಇಲ್ಲಿ ಸಾಕಷ್ಟು ಕ್ರಿಯಾಶೀಲ ಪ್ರತಿಭಾವಂತರಿದ್ದಾರೆ. ಮಾತ್ರವಲ್ಲದೆ ಭಾರತದ ಇತರೆ ನಗರಗಳಿಗೆ ಹೋಲಿಸಿದರೆ ಇಲ್ಲಿ ಅತ್ಯಂತ ಕಡಿಮೆ ಮೌಲ್ಯಕ್ಕೆ ಕ್ರಿಯಾಶೀಲರು, ಪ್ರತಿಭಾವಂತರು ಲಭ್ಯವಿದ್ದಾರೆ. ಕೈಗೆಟುಕುವ ಮೌಲ್ಯದಲ್ಲಿ ಸಿಗುವುದು ಮಾತ್ರವೇ ಅಲ್ಲದೆ ಗುಣಮಟ್ಟದ ಕಾರ್ಯವನ್ನೂ ಸಹ ಇಲ್ಲಿನ ಪ್ರತಿಭಾವಂತರು ನೀಡಬಲ್ಲರು. ನಮಗೆ ಅವಕಾಶವಿದೆ, ಪ್ರತಿಭೆ ಇದೆ, ನಾವು ಬೆಂಗಾಳಿ ಚಿತ್ರರಂಗವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಬಹುದಾಗಿದೆ’ ಎಂದಿದ್ದಾರೆ.

ಅಲ್ಲು ಅರ್ಜುನ್ ಅವರು ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಬೇಕಿತ್ತು, ಆದರೆ ಕೊನೆ ಕ್ಷಣದಲ್ಲಿ ಅಲ್ಲು ಅರ್ಜುನ್, ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಈ ಬಗ್ಗೆ ಮಾಹಿತಿ ನೀಡಿದ ಸಿಇಓ ಬರುಣ್ ದಾಸ್, ‘ಕೆಲವು ಅನಿವಾರ್ಯ ಕಾರಣಗಳಿಂದಾಗಿ ಅಲ್ಲು ಅರ್ಜುನ್ ಇಂದು ಇಲ್ಲಿ ಬರಲಾಗಲಿಲ್ಲ, ಆದರೆ ಅವರ ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗುತ್ತಿದೆ. ಅಡ್ವಾನ್ಸ್ ಬುಕಿಂಗ್ ಅದ್ಭುತವಾಗಿ ನಡೆದಿದೆ. ಮೊದಲ ದಿನವೇ ಈ ಸಿನಿಮಾ 300 ಕೋಟಿ ಗಳಿಸುವ ನಿರೀಕ್ಷೆ ಇದೆ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ