AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲೂ ನಡೆಯಲಿದೆ ವಿಜಯ್-ರಶ್ಮಿಕಾ ಆರತಕ್ಷತೆ: ಎಲ್ಲಿ? ಯಾವಾಗ?

Rashmika Mandanna-Vijay Deverakonda: ಕೊಡಗಿನವರು, ಕನ್ನಡ ಚಿತ್ರರಂಗದಿಂದ ನಟನೆ ಆರಂಭಿಸಿದ ರಶ್ಮಿಕಾ ಮಂದಣ್ಣಗೆ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳು, ಹಿತೈಷಿಗಳು ಇದ್ದಾರೆ ಆದರೆ ರಶ್ಮಿಕಾ ಅವರ ಮದುವೆ ಸಂಭ್ರಮ ಹೈದರಾಬಾದ್​​ನಲ್ಲಿ ಮಾತ್ರವೇ ಆಯೋಜಿಸಲಾಗಿರುವುದು ಅವರ ಕರ್ನಾಟಕದ ಹಿತೈಷಿಗಳಿಗೆ ತುಸು ಅಸಮಾಧಾನ ಮೂಡಿಸಿದೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಆರತಕ್ಷತೆ ಕರ್ನಾಟಕದಲ್ಲಿಯೂ ನಡೆಯಲಿದೆ.

ಕರ್ನಾಟಕದಲ್ಲೂ ನಡೆಯಲಿದೆ ವಿಜಯ್-ರಶ್ಮಿಕಾ ಆರತಕ್ಷತೆ: ಎಲ್ಲಿ? ಯಾವಾಗ?
Rashmika Vijay12
ಮಂಜುನಾಥ ಸಿ.
|

Updated on: Feb 25, 2026 | 3:31 PM

Share

ಕೊಡಗಿನ ಹುಡುಗಿ ರಶ್ಮಿಕಾ (Rashmika Mandanna) ಮತ್ತು ತೆಲಂಗಾಣದ ಯುವಕ ವಿಜಯ್ ದೇವರಕೊಂಡ ವಿವಾಹ ನಾಳೆ (ಫೆಬ್ರವರಿ 26) ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ. ಮದುವೆ ಕಾರ್ಯ ಆರಂಭವಾಗಿ ಈಗಾಗಲೇ ವಾರವಾಗುತ್ತಾ ಬಂದಿದೆ. ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಅತ್ಯಾಪ್ತ ಸಂಬಂಧಿಗಳು ಈಗಾಗಲೇ ಉದಯಪುರದ ಅರಮನೆಯಂಥಹ ರೆಸಾರ್ಟ್ ತಲುಪಿದ್ದು ಮದುವೆ ಕಾರ್ಯದಲ್ಲಿ ಭಾಗಿ ಆಗಿದ್ದಾರೆ. ಮದುವೆಗೆ ಕೆಲವು ಆಪ್ತರನ್ನಷ್ಟೆ ಆಹ್ವಾನಿಸಲಾಗಿದೆ. ಆದರೆ ಮಾರ್ಚ್ 4 ರಂದು ಅದ್ಧೂರಿಯಾಗಿ ರಿಸೆಪ್ಷನ್ ಆಯೋಜಿಸಲಾಗಿದ್ದು, ಗೆಳೆಯರು, ಸಿನಿಮಾ ಮತ್ತು ರಾಜಕೀಯ ಗಣ್ಯರನ್ನು ಆರತಕ್ಷತೆಗೆ ಆಹ್ವಾನಿಸಲಾಗಿದೆ.

ಕೊಡಗಿನವರು, ಕನ್ನಡ ಚಿತ್ರರಂಗದಿಂದ ನಟನೆ ಆರಂಭಿಸಿದ ರಶ್ಮಿಕಾ ಮಂದಣ್ಣಗೆ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳು, ಹಿತೈಷಿಗಳು ಇದ್ದಾರೆ ಆದರೆ ರಶ್ಮಿಕಾ ಅವರ ಮದುವೆ ಸಂಭ್ರಮ ಹೈದರಾಬಾದ್​​ನಲ್ಲಿ ಮಾತ್ರವೇ ಆಯೋಜಿಸಲಾಗಿರುವುದು ಅವರ ಕರ್ನಾಟಕದ ಹಿತೈಷಿಗಳಿಗೆ ತುಸು ಅಸಮಾಧಾನ ಮೂಡಿಸಿದೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಆರತಕ್ಷತೆ ಕರ್ನಾಟಕದಲ್ಲಿಯೂ ನಡೆಯಲಿದೆ.

ಕೊಡಗು ಜಿಲ್ಲೆ ವಿರಾಜಪೇಟೆಯ ಕದಲೂರು ಗ್ರಾಮದ ರಶ್ಮಿಕಾ ಮಂದಣ್ಣ ಅವರಿಗೆ ಕೊಡಗು, ವಿರಾಜಪೇಟೆ ಹಾಗೂ ಸುತ್ತ-ಮುತ್ತ ಸಾಕಷ್ಟು ಸಂಬಂಧಿಗಳಿದ್ದಾರೆ. ಅಲ್ಲದೆ ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಅವರು ಕೊಡಗು-ವಿರಾಜಪೇಟೆ ಭಾಗದ ಬಹಳ ಪ್ರಭಾವಿ ಉದ್ಯಮಿ, ಸಹಜವಾಗಿಯೇ ಅವರದ್ದು ಬಹುದೊಡ್ಡ ಗೆಳೆಯರ ಬಳಗ. ಮದನ್ ಅವರು ವಿರಾಜಪೇಟೆಯಲ್ಲಿ ತಮ್ಮದೇ ಆದ ಐಶಾರಾಮಿ ಮದುವೆ ಕಲ್ಯಾಣ ಮಂಟಪವನ್ನು ಸಹ ಹೊಂದಿದ್ದಾರೆ. ಇದೀಗ ತಮ್ಮ ಮಗಳು ಮತ್ತು ಅಳಿಯನ ಆರತಕ್ಷತೆಯನ್ನು ತಮ್ಮದೇ ಕಲ್ಯಾಣ ಮಂಟಪದಲ್ಲಿ ಆಯೋಜಿಸುವ ಉದ್ದೇಶವನ್ನು ಮದನ್ ಮಂದಣ್ಣ ಹೊಂದಿದ್ದು, ಅದಕ್ಕಾಗಿ ಯೋಜನೆ ಸಹ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ:ಕನ್ನಡ ಚಿತ್ರರಂಗದಲ್ಲಿ ಯಾರಿಗೆ ಸಿಕ್ಕಿದೆ ರಶ್ಮಿಕಾ-ವಿಜಯ್ ಮದುವೆ ಆಹ್ವಾನ?

ಈಗ ಉದಯಪುರದಲ್ಲಿ ನಡೆಯುತ್ತಿರುವ ಮದುವೆಗೆ ಕುಟುಂಬ ವರ್ಗದವರು ಮತ್ತು ಅತ್ಯಾಪ್ತ ಸ್ನೇಹಿತರನ್ನಷ್ಟೆ ಆಹ್ವಾನಿಸಲಾಗಿದೆ. ಮಾರ್ಚ್ 04 ರಂದು ನಡೆಯುವ ಆರತಕ್ಷತೆಗೆ ಸಿನಿಮಾ ಮತ್ತು ರಾಜಕೀಯ ಗಣ್ಯರು ಆಗಮಿಸುವ ಕಾರಣ ಅಲ್ಲಿಯೂ ಸಹ ಯಾರಿಗೂ ಪ್ರವೇಶ ಇಲ್ಲ. ಹಾಗಾಗಿ ಸಂಬಂಧಿಗಳು ಮತ್ತು ಕೊಡಗು-ವಿರಾಜಪೇಟೆಯ ಗೆಳೆಯರು, ಹಿತೈಷಿಗಳಿಗಾಗಿ ಎಂದೇ ಆರತಕ್ಷತೆ ಅಥವಾ ಔತಣಕೂಟವನ್ನು ಆಯೋಜಿಸಲು ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ನಿರ್ಧರಿಸಿದ್ದಾರಂತೆ.

ಮೂಲಗಳ ಪ್ರಕಾರ, ರಶ್ಮಿಕಾರ ಅವರ ಸಂಬಂಧಿಗಳು, ಅವರ ಕುಟುಂಬದ ಸ್ನೇಹಿತರಿಗಾಗಿ ವಿರಾಜಪೇಟೆಯ ತಮ್ಮದೇ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ ತಿಂಗಳಲ್ಲಿ ಔತಣಕೂಟ ಆಯೋಜಿಸಲಾಗುತ್ತಿದೆಯಂತೆ. ಮಾರ್ಚ್ 4 ರಂದು ಹೈದರಾಬಾದ್​​ನಲ್ಲಿ ಆರತಕ್ಷತೆ ಮುಗಿಸಿಕೊಂಡು ವಿಜಯ್ ಮತ್ತು ರಶ್ಮಿಕಾ ಅವರು ಹನಿಮೂನ್​​ಗಾಗಿ ವಿದೇಶಕ್ಕೆ ತೆರಳಲಿದ್ದು, ಅವರು ಹನಿಮೂನ್​​ನಿಂದ ವಾಪಸ್ ಬಂದ ಬಳಿಕ ವಿರಾಜಪೇಟೆಯಲ್ಲಿ ಆರತಕ್ಷತೆ ಆಯೋಜನೆ ಮಾಡಲಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಧಾರವಾಡದಲ್ಲಿ ಭಾರೀ ಮಳೆ: ಕಲ್ಲಘಟಗಿ ರಸ್ತೆ ತುಂಬೆಲ್ಲಾ ಆಲಿಕಲ್ಲು
ಧಾರವಾಡದಲ್ಲಿ ಭಾರೀ ಮಳೆ: ಕಲ್ಲಘಟಗಿ ರಸ್ತೆ ತುಂಬೆಲ್ಲಾ ಆಲಿಕಲ್ಲು
ಮಂಗಳೂರಿನಲ್ಲಿ ಕಾರಿನಿಂದ ಗುದ್ದಿ ಕೊಲೆಗೆ ಯತ್ನ: ಭಯಾನಕ ವಿಡಿಯೋ
ಮಂಗಳೂರಿನಲ್ಲಿ ಕಾರಿನಿಂದ ಗುದ್ದಿ ಕೊಲೆಗೆ ಯತ್ನ: ಭಯಾನಕ ವಿಡಿಯೋ
ಐಪಿಎಲ್​ಗಾಗಿ ಭಾರತಕ್ಕೆ ಬಂದಿಳಿದ ವಿರಾಟ್ ಕೊಹ್ಲಿ
ಐಪಿಎಲ್​ಗಾಗಿ ಭಾರತಕ್ಕೆ ಬಂದಿಳಿದ ವಿರಾಟ್ ಕೊಹ್ಲಿ
ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನ, ಆಗಿದ್ದೇನು?
ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನ, ಆಗಿದ್ದೇನು?
ಇನ್ಸ್​​ಪೆಕ್ಟರ್ ಸಂದೇಶ್ ಮತ್ತಷ್ಟು ಲೀಲೆಗಳು ಬಯಲು: ಹೊಸ ಆಡಿಯೋ ವೈರಲ್​​
ಇನ್ಸ್​​ಪೆಕ್ಟರ್ ಸಂದೇಶ್ ಮತ್ತಷ್ಟು ಲೀಲೆಗಳು ಬಯಲು: ಹೊಸ ಆಡಿಯೋ ವೈರಲ್​​
ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ
ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ
ಅಪ್ಪು ಸಮಾಧಿಗೆ ಪೂಜೆ ಮಾಡಿದ ಶಿವರಾಜ್ ಕುಮಾರ್: ವಿಡಿಯೋ ನೋಡಿ
ಅಪ್ಪು ಸಮಾಧಿಗೆ ಪೂಜೆ ಮಾಡಿದ ಶಿವರಾಜ್ ಕುಮಾರ್: ವಿಡಿಯೋ ನೋಡಿ
ಎಸ್​​ಎಸ್​​ಎಲ್​​ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮಿಡಿದ ಕಂಡಕ್ಟರ್​​ ಮನ
ಎಸ್​​ಎಸ್​​ಎಲ್​​ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮಿಡಿದ ಕಂಡಕ್ಟರ್​​ ಮನ
ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಕಾಪಾಡಿದ ಹೆಡ್ ಕಾನ್ಸ್‌ಟೇಬಲ್
ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಕಾಪಾಡಿದ ಹೆಡ್ ಕಾನ್ಸ್‌ಟೇಬಲ್
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಸೇಲ್ ಆಗ್ತಿತ್ತು?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಸೇಲ್ ಆಗ್ತಿತ್ತು?