Vipul Shah: ಅಕ್ಷಯ್​ ಕುಮಾರ್​ ಜತೆ ಸಿನಿಮಾ ಮಾಡೋದು ನಿಲ್ಲಿಸಿದ್ದೇಕೆ ‘ದಿ ಕೇರಳ ಸ್ಟೋರಿ’ ನಿರ್ಮಾಪಕ? ಬಯಲಾಯ್ತು ಸತ್ಯ

|

Updated on: Jun 19, 2023 | 5:51 PM

Akshay Kumar: ಅಕ್ಷಯ್​ ಕುಮಾರ್​ ಜೊತೆ ಕೆಲಸ ಮಾಡಲು ಕೆಲವು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಅಂಥ ನಿರ್ಮಾಪಕರ ಸಾಲಿನಲ್ಲಿ ವಿಪುಲ್​ ಅಮೃತ್​ಲಾಲ್​ ಶಾ ಕೂಡ ಇದ್ದಾರೆ.

Vipul Shah: ಅಕ್ಷಯ್​ ಕುಮಾರ್​ ಜತೆ ಸಿನಿಮಾ ಮಾಡೋದು ನಿಲ್ಲಿಸಿದ್ದೇಕೆ ‘ದಿ ಕೇರಳ ಸ್ಟೋರಿ’ ನಿರ್ಮಾಪಕ? ಬಯಲಾಯ್ತು ಸತ್ಯ
ವಿಪುಲ್​ ಅಮೃತ್​​ಲಾಲ್​ ಶಾ, ಅಕ್ಷಯ್​ ಕುಮಾರ್​
Follow us on

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ (Akshay Kumar) ಅವರಿಗೆ ತುಂಬ ಬೇಡಿಕೆ ಇದೆ. ಆದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಸತತ ಸೋಲು ಉಂಟಾಗುತ್ತಿದೆ. ಸ್ಕ್ರಿಪ್ಟ್​ ಆಯ್ಕೆಯಲ್ಲಿ ಅವರು ಎಡವುತ್ತಿದ್ದಾರೆ ಎಂಬುದು ನಿಜ. ಅವರು ಮಾಡಿದ ಎಲ್ಲ ಸಿನಿಮಾಗಳೂ ಹೀನಾಯವಾಗಿ ಸೋಲುತ್ತಿವೆ. ‘ಸೆಲ್ಫೀ’, ‘ರಕ್ಷಾ ಬಂಧನ್​’, ‘ಸಾಮ್ರಾಜ್​ ಪೃಥ್ವಿರಾಜ್​’ ಸೇರಿದಂತೆ ಹಲವು ಸಿನಿಮಾಗಳು ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡಲಾಗದೇ ನೆಲ ಕಚ್ಚಿದವು. ಈಗ ಅವರ ಜೊತೆ ಕೆಲಸ ಮಾಡಲು ಕೆಲವು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಅಂಥ ನಿರ್ಮಾಪಕರ ಸಾಲಿನಲ್ಲಿ ವಿಪುಲ್​ ಅಮೃತ್​ಲಾಲ್​ ಶಾ (Vipul Amrutlal Shah) ಕೂಡ ಇದ್ದಾರೆ. ‘ದಿ ಕೇರಳ ಸ್ಟೋರಿ’ (The Kerala Story) ನಿರ್ಮಾಣ ಮಾಡಿ ದೊಡ್ಡ ಗೆಲುವು ಕಂಡಿರುವ ವಿಪುಲ್​ ಶಾ ಅವರು ಅಕ್ಷಯ್​ ಕುಮಾರ್​ ಜೊತೆ ಸಿನಿಮಾ ಮಾಡುವುದನ್ನು ಬಹಳ ಹಿಂದೆಯೇ ನಿಲ್ಲಿಸಿದ್ದಾರೆ.

ನಿರ್ದೇಶಕನಾಗಿಯೂ ವಿಪುಲ್​ ಶಾ ಗುರುತಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಅಕ್ಷಯ್​ ಕುಮಾರ್​ ಮತ್ತು ವಿಪುಲ್​ ಶಾ ಅವರ ಒಟ್ಟಾಗಿ ಹಲವು ಸಿನಿಮಾಗಳನ್ನು ಮಾಡಿದ್ದರು. ಆದರೆ ನಂತರದ ದಿನಗಳಲ್ಲಿ ಅಕ್ಷಯ್​ ಕುಮಾರ್​ ಅವರಿಂದ ವಿಪುಲ್​ ಶಾ ಅಂತರ ಕಾಯ್ದುಕೊಂಡರು. ಇಂಥ ಸಂದರ್ಭಗಳಲ್ಲಿ ಗಾಸಿಪ್​ ಹಬ್ಬುವುದು ಸಹಜ. ಇವರಿಬ್ಬರ ನಡುವೆ ಏನೋ ವೈಮನಸ್ಸು ಉಂಟಾಗಿದೆ ಎಂದು ಎಲ್ಲರೂ ಮಾತನಾಡಿಕೊಂಡರು. ತಾವಿಬ್ಬರೂ ದೂರ ಆಗಿದ್ದಕ್ಕೆ ಕಾರಣ ಏನು ಎಂಬುದನ್ನು ವಿಪುಲ್​ ಶಾ ಅವರು ಈಗ ವಿವರಿಸಿದ್ದಾರೆ. ಆ ಮೂಲಕ ಅವರು ಸತ್ಯ ಏನೆಂಬುದನ್ನು ತಿಳಿಸಿದ್ದಾರೆ.

ಇದನ್ನೂ ಓದಿ: Akshay Kumar: ಜಾಮಾ ಮಸೀದಿ ಬಳಿ ಕಾಣಿಸಿಕೊಂಡ ಅಕ್ಷಯ್​ ಕುಮಾರ್​; ಸುತ್ತುವರಿದ ಅಭಿಮಾನಿಗಳು

‘ಆ ಕಾಲದಲ್ಲಿ ನಾವು ಸತತವಾಗಿ ಒಟ್ಟಿಗೆ ಸಿನಿಮಾ ಮಾಡಿದ್ದೆವು. ಬೇರೆ ನಟರ ಜೊತೆಗೂ ನಾನು ಸಿನಿಮಾ ಮಾಡಬೇಕು ಅಂತ ನನಗೆ ಅನಿಸಿತು. ಅದು ನನಗೆ ಮಾತ್ರವಲ್ಲದೇ ಅಕ್ಷಯ್​ ಕುಮಾರ್​ ಅವರಿಗೂ ಸರಿ ಎನಿಸಿತು. ಆಗ ನಾನು ಬೇರೆಯವರ ಜೊತೆ ಸಿನಿಮಾ ಮಾಡಿದೆ. ನಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ. ನಾನು ಯಾರೊಂದಿಗೂ ಜಗಳ ಆಡುವುದಿಲ್ಲ. ನಾನು ಸ್ನೇಹಜೀವಿ. ಇಡೀ ವೃತ್ತಿಬದುಕಿನಲ್ಲಿ ಯಾರ ಜೊತೆಗೂ ಜಗಳ ಮಾಡಿಕೊಂಡಿಲ್ಲ’ ಎಂದು ವಿಪುಲ್​ ಶಾ ಹೇಳಿದ್ದಾರೆ.

ಇದನ್ನೂ ಓದಿ: Oh My God 2: ಶಿವನ ವೇಷದಲ್ಲಿ ಢಮರುಗ ಹಿಡಿದು ಬಂದ ಅಕ್ಷಯ್​ ಕುಮಾರ್​; ಆಗಸ್ಟ್​ 11ಕ್ಕೆ ‘ಓಹ್​ ಮೈ ಗಾಡ್​ 2’ ಬಿಡುಗಡೆ

ಈಗ ನಿರ್ದೇಶನಕ್ಕಿಂತಲೂ ನಿರ್ಮಾಪಕನಾಗಿ ವಿಪುಲ್​ ಶಾ ಅವರು ಬ್ಯುಸಿ ಆಗಿದ್ದಾರೆ. ದೇಶಾದ್ಯಂತ ಸಂಚಲನ ಸೃಷ್ಟಿಸಿದ ‘ದಿ ಕೇರಳ ಸ್ಟೋರಿ’ ಸಿನಿಮಾಗೆ ಅವರು ಬಂಡವಾಳ ಹೂಡಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಮಾಡಿದ ಸಾಧನೆ ದೊಡ್ಡದು. ಕಡಿಮೆ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾ ಬರೋಬ್ಬರಿ 241 ಕೋಟಿ ರೂಪಾಯಿ ಗಳಿಸಿದ್ದು ಅಚ್ಚರಿಯೇ ಸರಿ. ಕೇರಳದಲ್ಲಿ ನಡೆದಿತ್ತು ಎನ್ನಲಾದ ಲವ್​ ಜಿಹಾದ್​ ಮತ್ತು ಮತಾಂತರದ ಕಹಾನಿಯನ್ನು ಇಟ್ಟುಕೊಂಡು ಈ ಸಿನಿಮಾ ಮೂಡಿಬಂದಿದೆ. ಈ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆ ಕ್ರಿಯೇಟಿವ್​ ಡೈರೆಕ್ಟರ್​ ಆಗಿಯೂ ವಿಪುಲ್​ ಅಮೃತ್​ಲಾಲ್​ ಶಾ ಕೆಲಸ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.