ಬಾಲಿವುಡ್ ಚಿತ್ರವನ್ನು ತಿರಸ್ಕರಿಸಿದ್ದ ದಕ್ಷಿಣದ ಹೀರೋಗಳು; ಬಹುತೇಕ ಚಿತ್ರಗಳು ಹಿಟ್

| Updated By: ರಾಜೇಶ್ ದುಗ್ಗುಮನೆ

Updated on: Oct 14, 2024 | 7:37 AM

2019ರಲ್ಲಿ ರಿಲೀಸ್ ಆದ ಸೈಫ್ ಅಲಿ ಖಾನ್ ನಟನೆಯ ‘ಲಾಲ್ ಕಪ್ತಾನ್’ ಸಿನಿಮಾ ಮೆಚ್ಚುಗೆ ಪಡೆದಿತ್ತು. ಈ ಸಿನಿಮಾದ ಆಫರ್ ಮೊದಲು ಯಶ್​ಗೆ ಹೋಗಿತ್ತು. ಆಗಿನ್ನೂ ಅವರು ಬಾಲಿವುಡ್ ಸಿನಿಮಾ ಮಾಡುವ ಉದ್ದೇಶ ಹೊಂದಿರಲಿಲ್ಲ. ಹೀಗಾಗಿ, ಅವರು ಇದನ್ನು ರಿಜೆಕ್ಟ್ ಮಾಡಿದ್ದರು.

ಬಾಲಿವುಡ್ ಚಿತ್ರವನ್ನು ತಿರಸ್ಕರಿಸಿದ್ದ ದಕ್ಷಿಣದ ಹೀರೋಗಳು; ಬಹುತೇಕ ಚಿತ್ರಗಳು ಹಿಟ್
ಬಾಲಿವುಡ್ ಚಿತ್ರವನ್ನು ತಿರಸ್ಕರಿಸಿದ್ದ ದಕ್ಷಿಣದ ಹೀರೋಗಳು; ಬಹುತೇಕ ಚಿತ್ರಗಳು ಹಿಟ್
Follow us on

ದಕ್ಷಿಣ ಭಾರತದ ಹಲವು ನಟರು​ಗಳು ಬಾಲಿವುಡ್​ನಲ್ಲಿ ಈಗ ಹೆಸರು ಮಾಡಿದ್ದಾರೆ. ಅವರಿಗೆ ಪರಭಾಷೆಯಿಂದ, ಬಾಲಿವುಡ್​ನಿಂದ ಆಫರ್​ಗಳು ಬಂದರೆ ಅದನ್ನು ರಿಜೆಕ್ಟ್ ಮಾಡಿದ ಉದಾಹರಣೆ ಸಾಕಷ್ಟಿದೆ. ದಕ್ಷಿಣ ಭಾರತದ ಹೀರೋಗಳಾದ ಅಲ್ಲು ಅರ್ಜುನ್, ಯಶ್ ಸೇರಿದಂತೆ ಅನೇಕರು ಹಿಂದಿ ಆಫರ್​ಗಳನ್ನು ತಿರಸ್ಕರಿಸಿದ್ದರು. ಆ ಚಿತ್ರಗಳು ಯಶಸ್ಸು ಕಂಡವು ಮತ್ತು ರಿಜೆಕ್ಟ್ ಮಾಡಿದ ಹೀರೋಗಳಿಗೆ ಬೇಸರವನ್ನು ಉಂಟು ಮಾಡಿದವು. ಆ ಬಗ್ಗೆ ಇಲ್ಲಿದೆ ವಿವರ.

‘ಬಜರಂಗಿ ಭಾಯಿಜಾನ್’

‘ಬಜರಂಗಿ ಭಾಯಿಜಾನ್’ ಸಿನಿಮಾ 2015ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಹೀರೋ ಆಗಿ ನಟಿಸಿ ಗಮನ ಸೆಳೆದರು. ಮೂಲತಹವಾಗಿ ಈ ಚಿತ್ರದಲ್ಲಿ ನಟಿಸಬೇಕಾಗಿದ್ದು ಸಲ್ಮಾನ್ ಖಾನ್ ಅಲ್ಲ. ಅಲ್ಲು ಅರ್ಜುನ್ ಅವರು ಎನ್ನಲಾಗಿದೆ. ಅಲ್ಲು ಅರ್ಜುನ್ ಅವರಿಗೆ ಮೊದಲು ಈ ಆಫರ್ ಹೋಗಿತ್ತಂತೆ. ಚಿತ್ರದ ನಿರ್ದೇಶಕ ಕಬೀರ್ ಖಾನ್ ಅವರು ಈ ಆಫರ್​ನ ಅವರಿಗೆ ನೀಡಿದರು. ನಂತರ ಈ ಆಫರ್​ನ ಅವರು ರಿಜೆಕ್ಟ್ ಮಾಡಿದ್ದರು. ನಂತರ ಸಲ್ಮಾನ್ ಖಾನ್ ಅವರು ಮಾಡಿ ಗೆದ್ದರು.

‘ಅನಿಮಲ್’

‘ಅನಿಮಲ್’ ಚಿತ್ರವು ಕಳೆದ ವರ್ಷ ರಿಲೀಸ್ ಆದ ಯಶಸ್ವಿ ಸಿನಿಮಾಗಳಲ್ಲಿ ಒಂದು. ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ ಮೆಚ್ಚುಗೆ ಪಡೆಯಿತು. ಈ ಚಿತ್ರವನ್ನು ಜನರು ಹೆಚ್ಚು ಇಷ್ಟಪಟ್ಟರು. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 900 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಈ ಚಿತ್ರದ ಆಫರ್ ಮೊದಲು ಹೋಗಿದ್ದು ಮಹೇಶ್ ಬಾಬು ಅವರಿಗೆ ಎನ್ನಲಾಗಿದೆ.

‘ಲಾಲ್ ಕಪ್ತಾನ್’

2019ರಲ್ಲಿ ರಿಲೀಸ್ ಆದ ಸೈಫ್ ಅಲಿ ಖಾನ್ ನಟನೆಯ ‘ಲಾಲ್ ಕಪ್ತಾನ್’ ಸಿನಿಮಾ ಮೆಚ್ಚುಗೆ ಪಡೆದಿತ್ತು. ಈ ಸಿನಿಮಾದ ಆಫರ್ ಮೊದಲು ಯಶ್​ಗೆ ಹೋಗಿತ್ತು. ಆಗಿನ್ನೂ ಅವರು ಬಾಲಿವುಡ್ ಸಿನಿಮಾ ಮಾಡುವ ಉದ್ದೇಶ ಹೊಂದಿರಲಿಲ್ಲ. ಹೀಗಾಗಿ, ಅವರು ಇದನ್ನು ರಿಜೆಕ್ಟ್ ಮಾಡಿದ್ದರು. ಈಗ ‘ರಾಮಾಯಣ’ ಚಿತ್ರವನ್ನು ಹಿಂದಿಯಲ್ಲಿ ಅವರು ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ಮಾಪಕ ಕೂಡ ಹೌದು.

‘ಲಾಲ್ ಸಿಂಗ್ ಚಡ್ಡಾ’

ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ನಾಗ ಚೈತನ್ಯ ನಟಿಸಿದ್ದರು. ಈ ಸಿನಿಮಾದ ಪಾತ್ರಕ್ಕಾಗಿ ವಿಜಯ್ ಸೇತುಪತಿಗೆ ಆಫರ್ ನೀಡಲಾಗಿತ್ತು. ಆದರೆ, ಅವರು ಇದನ್ನು ರಿಜೆಕ್ಟ್ ಮಾಡಿದ್ದರು ನಂತರ ಈ ಆಫರ್ ನಾಗ ಚೈತನ್ಯ ಕೈ ಸೇರಿತ್ತು.

ಇದನ್ನೂ ಓದಿ: ಮುಂಬೈನಲ್ಲಿ ಯಶ್​, ರಾಧಿಕಾ ಪಂಡಿತ್ ಡಿನ್ನರ್: ಫೋಟೋ, ವಿಡಿಯೋಗೆ ಮುಗಿಬಿದ್ದ ಪಾಪರಾಜಿಗಳು

ಚಿಚೋರೆ

ನವೀನ್ ಪೊಲಿಶೆಟ್ಟಿ ಅವರು ‘ಚಿಚೋರೆ’ ಸಿನಿಮಾ ಮಾಡಬೇಕಿತ್ತು. ಆದದರೆ, ಸಿನಿಮಾದ ಆಫರ್ ಅವರ ಕೈಸೇರಿಲ್ಲ. ಅವರು ರಿಜೆಕ್ಟ್ ಮಾಡಿದ್ದರಿಂದ ಸುಶಾಂತ್ ಸಿಂಗ್ ಅವರು ನಟಿಸಿದ ಕೊನೆಯ ಸಿನಿಮಾ ಇದಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.