AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajinikanth: ‘ಕಷ್ಟದಲ್ಲಿದ್ದೇವೆ, ರಜನಿಕಾಂತ್ ಒಬ್ಬರೇ ದಿಕ್ಕು’; ರಜನಿ ಸಂಬಂಧಿಯೆಂದು ಹೇಳಿಕೊಂಡಿರುವ ಚೇತನ್ ಅಳಲು

ಭಾರತದ ಖ್ಯಾತ ನಟ ರಜನಿಕಾಂತ್ ಅವರ ಸೋದರಳಿಯ ಎಂದು ಹೇಳಿಕೊಂಡಿರುವ ಚೇತನ್, ರಜನಿಯವರು ತಮಗೆ ಸಹಾಯ ಮಾಡಬೇಕು ಎಂದು ಕೋರಿಕೊಂಡಿದ್ದಾರೆ. ಈ ಕುರಿತ ಟಿವಿ9 ವಿಶೇಷ ವರದಿ ಇಲ್ಲಿದೆ.

Rajinikanth: ‘ಕಷ್ಟದಲ್ಲಿದ್ದೇವೆ, ರಜನಿಕಾಂತ್ ಒಬ್ಬರೇ ದಿಕ್ಕು’; ರಜನಿ ಸಂಬಂಧಿಯೆಂದು ಹೇಳಿಕೊಂಡಿರುವ ಚೇತನ್ ಅಳಲು
ರಜನಿಕಾಂತ್ ಮತ್ತು ಚೇತನ್
TV9 Web
| Updated By: shivaprasad.hs|

Updated on: Sep 04, 2021 | 4:15 PM

Share

ಕೊರೊನಾ‌ ಲಾಕ್ ಡೌನ್ ಎಫೆಕ್ಟ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ರಜನಿಕಾಂತ್ ಸಂಬಂಧಿಯೊಬ್ಬರು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಸಂಬಂಧದಲ್ಲಿ ಅಳಿಯ ಅಂತ ಹೇಳಿರುವ ಚೇತನ್, ತಾವು ಕಷ್ಟದಲ್ಲಿದ್ದು, ರಜನಿಯವರನ್ನು ಭೇಟಿಯಾಗಬೇಕು. ಆದರೆ ಸಾಧ್ಯವಾಗುತ್ತಿಲ್ಲ ಎಂದು ದುಃಖ ತೋಡಿಕೊಂಡಿದ್ದಾರೆ. ‘‘ಕಳೆದ ಕೆಲವು ಸಮಯಗಳಿಂದ ರಜನಿಕಾಂತ್ ಭೇಟಿ ಮಾಡಲು ಚೆನ್ನೈಗೆ ಹೋಗಿ ಬಂದಿದ್ದೇನೆ ಹಾಗೂ ಹಲವು ಬೇರೆ ಮೂಲದಿಂದಲೂ ಪ್ರಯತ್ನಪಟ್ಟಿದ್ದೇನೆ. ಚೆನ್ನೈ ಪೋಲೀಸರ ಮೂಲಕವೂ ಅಪ್ರೋಚ್ ಮಾಡುವ ಪ್ರಯತ್ನ ಮಾಡಿದ್ದೇನೆ. ಮನೆಯ ಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಕೂಡ ಆಯ್ತು. ಆದರೆ ರಜನಿ ಭೇಟಿ ಸಾಧ್ಯವಾಗಿಲ್ಲ’’ ಎಂದು ಚೇತನ್ ಹೇಳಿದ್ದಾರೆ.

‘‘ರಜನಿಕಾಂತ್ ಅವರಿಗೆ ಕಂಡಕ್ಟರ್ ಕೆಲಸ ಕೊಡಿಸಿದ್ದು ನಮ್ಮ ತಾತ. ಈಗ ಅನಿವಾರ್ಯ ಕಾರಣದಿಂದಾಗಿ ತಾತನ ಹೆಸರು ಹೇಳಿಕೊಂಡು ಸಹಾಯ ಕೇಳುತ್ತಿದ್ದೇನೆ. ಅವರು ಈಗ ಸಹಾಯ ಮಾಡಿದರೆ, 6 ತಿಂಗಳಿನ ಒಳಗೆ ಅದನ್ನು ಮರಳಿಸುತ್ತೇನೆ. ಸದ್ಯ ಸಾಲಗಾರರ ಕಾಟಕ್ಕೆ ಕಳ್ಳನ ರೀತಿ ತಪ್ಪಿಸಿಕೊಂಡು ಓಡಾಡುತ್ತಿದ್ದೇನೆ. ಅಮ್ಮನಿಗೆ ಕ್ಯಾನ್ಸರ್ ಆಗಿದೆ ಮನೆಯಲ್ಲಿ ಇರಲು ಆಗುತ್ತಿಲ್ಲ’’ ಎಂದು ಚೇತನ್ ಹೇಳಿದ್ದಾರೆ.

‘‘ರಜನಿಕಾಂತ್ ದೇವರಿದ್ದಂತೆ. ಆದರೆ ಅವರ ದರ್ಶನಕ್ಕೆ ಸಮೀಪ ಇರುವವರೇ ಬಿಡುತ್ತಿಲ್ಲ. ನಮ್ಮ ಕುಟುಂಬದಲ್ಲಿ ತುಂಬಾ ಚೆನ್ನಾಗಿ ಇರೋರು ಅವರೊಬ್ಬರೇ. ಹಾಗಾಗಿ ಈಗ ಸಹಾಯ ಕೇಳ್ತಿದ್ದೀನಿ. ಎಷ್ಟೋ ಜನಕ್ಕೆ ಅವರು ಸಹಾಯ ಮಾಡಿದ್ದಾರೆ. ನಾವ್ಯಾರು ಅಂತ ಹೇಳಿಕೊಳ್ಳೋಕೆ ಒಂದೇ ಒಂದು ಅವಕಾಶ ಬೇಕಿದೆ. ಆದ್ದರಿಂದ ಈ ಮೂಲಕ ಮನವಿ ಮಾಡುತ್ತಿದ್ದೇನೆ’’ ಎಂದು ಟಿವಿನೈನ್‌ ಮುಂದೆ ಚೇತನ್ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ:

ಮದುವೆ ತಯಾರಿಯಲ್ಲಿದ್ದ ಸಿದ್ದಾರ್ಥ್​ ಶುಕ್ಲಾ ಮತ್ತು ಶೆಹನಾಜ್​ ಗಿಲ್​​ ; ಮೂರು ತಿಂಗಳಿರುವಾಗಲೇ ನಡೆಯಿತು ದುರಂತ

ಶ್ವೇತಾ ಶ್ರೀವಾತ್ಸವ್‌ ಹುಟ್ಟುಹಬ್ಬಕ್ಕೆ ‘ಹೋಪ್’ ಸಿನಿಮಾ ಮೋಷನ್ ಪೋಸ್ಟರ್ ಬಿಡುಗಡೆ

(Chethan who says he is relative of Super star Rajinikanth asks for help)

ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಿಷ್ಟು
ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಿಷ್ಟು
ವಿಷ್ಣು ಸ್ಮಾರಕ: ಸಿಎಂ ಭೇಟಿ ಬಳಿಕ ಹಿರಿಯ ನಟಿ ಭಾರತಿ ಹೇಳಿದ್ದು ಹೀಗೆ
ವಿಷ್ಣು ಸ್ಮಾರಕ: ಸಿಎಂ ಭೇಟಿ ಬಳಿಕ ಹಿರಿಯ ನಟಿ ಭಾರತಿ ಹೇಳಿದ್ದು ಹೀಗೆ
ಧರ್ಮಸ್ಥಳ ಪ್ರಕರಣ: ಎನ್​ಐಎಗೆ ವಹಿಸುವ ಬಗ್ಗೆ ಶಾ ಭೇಟಿ ಮಾಡಲಿರುವ ಹೆಚ್​ಡಿಕೆ
ಧರ್ಮಸ್ಥಳ ಪ್ರಕರಣ: ಎನ್​ಐಎಗೆ ವಹಿಸುವ ಬಗ್ಗೆ ಶಾ ಭೇಟಿ ಮಾಡಲಿರುವ ಹೆಚ್​ಡಿಕೆ