‘ಧುರಂಧರ್ 2’ ಚಿತ್ರದ ಒಟಿಟಿ ಹಕ್ಕಿಗೆ ಡಬಲ್ ಹಣ ಕೊಟ್ಟ ಜಿಯೋ ಹಾಟ್​​ಸ್ಟಾರ್

ಆದಿತ್ಯ ಧಾರ್ ನಿರ್ದೇಶನದ 'ಧುರಂಧರ್' ಯಶಸ್ಸಿನ ನಂತರ, 'ಧುರಂಧರ್ 2: ದಿ ರಿವೆಂಜ್' ಟೀಸರ್ ಬಿಡುಗಡೆಯಾಗಿದೆ. ರಣವೀರ್ ಸಿಂಗ್ ನಟನೆಯ ಈ ಚಿತ್ರದ ಒಟಿಟಿ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಮೊದಲ ಭಾಗವನ್ನು ನೆಟ್‌ಫ್ಲಿಕ್ಸ್ 85 ಕೋಟಿಗೆ ಖರೀದಿಸಿದರೆ, ಜಿಯೋ ಹಾಟ್‌ಸ್ಟಾರ್ 'ಧುರಂಧರ್ 2' ಹಕ್ಕುಗಳನ್ನು ಪಡೆಯಲು ದೊಡ್ಡ ಮೊತ್ತವನ್ನೇ ನೀಡಿದೆ.

‘ಧುರಂಧರ್ 2’ ಚಿತ್ರದ ಒಟಿಟಿ ಹಕ್ಕಿಗೆ ಡಬಲ್ ಹಣ ಕೊಟ್ಟ ಜಿಯೋ ಹಾಟ್​​ಸ್ಟಾರ್
ಧುರಂಧರ್ 2
Edited By:

Updated on: Feb 06, 2026 | 7:56 AM

ಆದಿತ್ಯ ಧಾರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಟಿಸಿದ ‘ಧುರಂಧರ್’ ಜನವರಿ 30, 2026 ರಂದು ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಚಿತ್ರವು ಬಿಡುಗಡೆಯಾದ ತಕ್ಷಣ ನೆಟ್‌ಫ್ಲಿಕ್ಸ್‌ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಇದೆಲ್ಲದರ ನಡುವೆ, ‘ಧುರಂಧರ್ 2: ದಿ ರಿವೆಂಜ್’ನ ಮೊದಲ ಟೀಸರ್ ಅನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಟೀಸರ್ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಈ ಚಿತ್ರದ ಒಟಿಟಿ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆ ಎನ್ನಲಾಗುತ್ತಿದೆ.

ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, ‘ಧುರಂಧರ್’ ಚಿತ್ರದ ಎರಡೂ ಭಾಗಗಳ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್​​ಫ್ಲಿಕ್ಸ್ ಖರೀದಿ ಮಾಡಿತ್ತು. ನೆಟ್‌ಫ್ಲಿಕ್ಸ್ ಎರಡೂ ಭಾಗಗಳನ್ನು ಒಟ್ಟಿಗೆ ಪಡೆಯಲು 170 ಕೋಟಿ ನೀಡಲು ರೆಡಿ ಇತ್ತು. ಆದರೆ, ನಂತರ ಡೀಲ್ ಕ್ಯಾನ್ಸಲ್ ಮಾಡಿ ಹಾಟ್​​ಸ್ಟಾರ್ ಇದರ ಹಕ್ಕನ್ನು ಪಡೆದುಕೊಂಡಿದೆ.

ವರದಿಯ ಪ್ರಕಾರ, ಮೊದಲ ಪಾರ್ಟ್​​ಗಾಗಿ ನೆಟ್​​ಫ್ಲಿಕ್ಸ್​​ 85 ಕೋಟಿ ರೂ ನೀಡಿದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಸಿನಿಮಾ ಖರೀದಿಗೆ ಇತ್ತೀಚೆಗೆ ಕಡಿಮೆ ಆಸಕ್ತಿ ತೋರಿಸುತ್ತಿವೆ ಎಂದು ಹೇಳಲಾಗಿದೆ. ಆದರೆ ‘ಧುರಂಧರ್’ ಚಿತ್ರದ ದೊಡ್ಡ ಯಶಸ್ಸು ಮತ್ತು ಪ್ರೇಕ್ಷಕರಿಂದ ಬಂದ ಬೇಡಿಕೆಯಿಂದಾಗಿ ಅವರು ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಬೇಕಾಯಿತು. ಈಗ ಜಿಯೋ ಹಾಟ್​​ಸ್ಟಾರ್ 170 ಕೋಟಿ ರೂಪಾಯಿ ಕೊಟ್ಟು ಎರಡನೇ ಭಾಗದ ಸ್ಟ್ರೀಮಿಂಗ್ ಹಕ್ಕು ಖರೀದಿಸಿದೆ ಎಂದು ಹೇಳಲಾಗುತ್ತಾ ಇದೆ.

ಇದನ್ನೂ ಓದಿ: ‘ಧುರಂಧರ್’ ಬಗ್ಗೆ ಹೃತಿಕ್ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಆದಿತ್ಯ ಧಾರ್

ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದಿನ ಭಾಗದಲ್ಲಿ ರೆಹಮಾನ್ ಡಕಾಯಿತ್ (ಅಕ್ಷಯ್ ಖನ್ನಾ) ಅವರ ಮರಣದ ನಂತರ, ಎರಡನೇ ಭಾಗವು ಹಮ್ಜಾ ಅಲಿ (ರಣವೀರ್ ಸಿಂಗ್) ಅವರ ಪಾತ್ರ ಹೈಲೈಟ್ ಆಗೋ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಕೂಡ ನಟಿಸಿದ್ದಾರೆ. ಈ ಚಿತ್ರವು ಮಾರ್ಚ್ 19, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us