AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್’ ಬಗ್ಗೆ ಹೃತಿಕ್ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಆದಿತ್ಯ ಧಾರ್

Hritik Roshan: ‘ಧುರಂಧರ್’ ಚಿತ್ರವನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. ಇತ್ತೀಚೆಗೆ, ಈ ಚಿತ್ರವನ್ನು ನೋಡಿದ ನಂತರ ಹೃತಿಕ್ ರೋಷನ್ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಅವರು ನಿರ್ದೇಶಕ ಆದಿತ್ಯ ಧರ್ ಅವರನ್ನು ಹೊಗಳಿದರು. ಇದೇ ವೇಳೆ ಜನರಿಗೆ ಅರ್ಥವಾಗದ ಒಂದು ವಿಷಯ ಹೇಳಿದರು. ಅದಕ್ಕಾಗಿ ಹೃತಿಕ್​ನ ಟ್ರೋಲ್ ಮಾಡಿದರು. ಇದಕ್ಕೆ ಹೃತಿಕ್ ರೋಷನ್ ಸ್ಪಷ್ಟನೆ ನೀಡಬೇಕಾಯಿತು.

‘ಧುರಂಧರ್’ ಬಗ್ಗೆ ಹೃತಿಕ್ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಆದಿತ್ಯ ಧಾರ್
Dhurandar
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 13, 2025 | 9:25 PM

Share

ಧುರಂಧರ್’ (Dhurandar) ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಅದ್ಭುತಗಳನ್ನು ಸೃಷ್ಟಿ ಮಾಡಿದೆ. ಈ ಚಿತ್ರ ಬಿಡುಗಡೆಯಾಗಿ 8 ದಿನಗಳು ಕಳೆದಿವೆ. 8 ದಿನಗಳಲ್ಲಿ ಚಿತ್ರವು ವಿಶ್ವಾದ್ಯಂತ 357.25 ಕೋಟಿ ರೂ. ಗಳಿಸಿದೆ. ಇಂದು ಹಾಗೂ ನಾಳೆ (ಭಾನುವಾರ).ಚಿತ್ರದ ಆದಾಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಈ ಸಿನಿಮಾದ ಬಗ್ಗೆ ಹೃತಿಕ್ ಟೀಕೆ ಮಾಡಿದ್ದರು. ಅದಕ್ಕೆ ಉತ್ತರ ಸಿಕ್ಕಿದೆ.

‘ಧುರಂಧರ್’ ಚಿತ್ರವನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. ಇತ್ತೀಚೆಗೆ, ಈ ಚಿತ್ರವನ್ನು ನೋಡಿದ ನಂತರ ಹೃತಿಕ್ ರೋಷನ್ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಅವರು ನಿರ್ದೇಶಕ ಆದಿತ್ಯ ಧರ್ ಅವರನ್ನು ಹೊಗಳಿದರು. ಇದೇ ವೇಳೆ ಜನರಿಗೆ ಅರ್ಥವಾಗದ ಒಂದು ವಿಷಯ ಹೇಳಿದರು. ಅದಕ್ಕಾಗಿ ಹೃತಿಕ್​ನ ಟ್ರೋಲ್ ಮಾಡಿದರು. ಇದಕ್ಕೆ ಹೃತಿಕ್ ರೋಷನ್ ಸ್ಪಷ್ಟನೆ ನೀಡಬೇಕಾಯಿತು.

ಹೃತಿಕ್ ಹೇಳಿದ್ದೇನು?

‘ಧುರಂಧರ್ ಚಿತ್ರದ ಕಥೆ ಹೇಳುವಿಕೆ ನನಗೆ ಇಷ್ಟವಾಯಿತು. ಆದರೆ ಅದರಲ್ಲಿ ತೋರಿಸಿರುವ ರಾಜಕೀಯವನ್ನು ನಾನು ಒಪ್ಪುವುದಿಲ್ಲ. ಚಲನಚಿತ್ರ ನಿರ್ಮಾಪಕರು ಯಾವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ನಾನು ಚರ್ಚಿಸಬಲ್ಲೆ’ ಎಂದಿದ್ದರು. ಇದಕ್ಕಾಗಿ ಅವರನ್ನು ವ್ಯಾಪಕವಾಗಿ ಟ್ರೋಲ್ ಮಾಡಲಾಯಿತು. ಆದ್ದರಿಂದ ಹೃತಿಕ್ ರೋಷನ್ ಮತ್ತೊಂದು ಪೋಸ್ಟ್ ಮಾಡಿದರು.

‘ಆದಿತ್ಯ ಧಾರ್ ಓರ್ವ ಒಳ್ಳೆಯ ನಿರ್ದೇಶಕ. ರಣವೀರ್ ಸಿಂಗ್ ಅವರ ಅಭಿನಯ ಸ್ಥಿರವಾಗಿದೆ. ನನಗೆ ಯಾವಾಗಲೂ ಅಕ್ಷಯ್ ಖನ್ನಾ ಇಷ್ಟ. ಎಲ್ಲರಿಗೂ ಅಭಿನಂದನೆಗಳು. ಇಡೀ ತಂಡಕ್ಕೆ ದೊಡ್ಡ ಚಪ್ಪಾಳೆ. ನಾನು ಭಾಗ 2 ಗಾಗಿ ಕುತೂಹಲದಿಂದ ಕಾಯುತ್ತಿದ್ದೇನೆ’ ಎಂದಿದ್ದಾರೆ ಅವರು.

‘ಧುರಂಧರ್ ಚಿತ್ರದ ಮೇಲಿನ ನಿಮ್ಮ ಪ್ರೀತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಸರ್, ಪ್ರತಿಯೊಬ್ಬ ಕಲಾವಿದ ಮತ್ತು ಚಿತ್ರದ ಪ್ರತಿಯೊಂದು ವಿಭಾಗವು 100 ಪ್ರತಿಶತ ಕೆಲಸ ಮಾಡಿದೆ. ನಿಮ್ಮ ಮೆಚ್ಚುಗೆ ಇಡೀ ಚಿತ್ರ ತಂಡದ ಉತ್ಸಾಹವನ್ನು ಹೆಚ್ಚಿಸಿದೆ. ಅವರ ಕಲೆಯನ್ನು ಮೆಚ್ಚಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಭಾಗ 2 ಬರುತ್ತಿದೆ. ನೀವು ನೀಡಿದ ಪ್ರೋತ್ಸಾಹಕ್ಕೆ ನ್ಯಾಯ ಒದಗಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ’ ಎಂದು ಆದಿತ್ಯ ಧಾರ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More