AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜು ಜತೆ ಕುಳಿತುಕೊಳ್ಳೋಕೆ ಯೋಚನೆ ಮಾಡುತ್ತಿದ್ದೇನೆ; ಕಣ್ಣೀರು ಹಾಕಿದ ದಿವ್ಯಾ ಸುರೇಶ್​

ಬಿಗ್​ ಬಾಸ್​ ಮನೆಯಲ್ಲಿ ಬೇರೆ ಬೇರೆ ಟಾಸ್ಕ್​ ನೀಡಲಾಗುತ್ತಿದೆ. ಪ್ರತಿ ಟಾಸ್ಕ್​ ಬರುವುದಕ್ಕೂ ಮೊದಲು ಹಾಡೊಂದು ಬರುತ್ತದೆ. ಈ ಹಾಡು ಬಂದಾಗ ಕ್ಯಾಪ್ಟನ್​ಗಳು ಕನ್​ಫೆಷನ್​ ರೂಮ್​ಗೆ ಹೋಗಬೇಕು.

ಮಂಜು ಜತೆ ಕುಳಿತುಕೊಳ್ಳೋಕೆ ಯೋಚನೆ ಮಾಡುತ್ತಿದ್ದೇನೆ; ಕಣ್ಣೀರು ಹಾಕಿದ ದಿವ್ಯಾ ಸುರೇಶ್​
ದಿವ್ಯಾ ಸುರೇಶ್​
TV9 Web
| Updated By: Vinay Bhat|

Updated on: Jul 15, 2021 | 8:42 AM

Share

‘ಕನ್ನಡ ಬಿಗ್​ ಬಾಸ್​ ಸೀಸನ್ 8’ ಎರಡನೇ ಇನ್ನಿಂಗ್ಸ್​ನಲ್ಲಿ ದಿವ್ಯಾ ಸುರೇಶ್​ ಹಾಗೂ ಮಂಜು ಪಾವಗಡ ಮೊದಲಿನಂತಿಲ್ಲ. ಇಬ್ಬರೂ ಎಷ್ಟಕ್ಕೆಬೇಕೋ ಅಷ್ಟಕ್ಕೆ ಮಾತ್ರ ಮಾತನಾಡಿಕೊಳ್ಳುತ್ತಿದ್ದಾರೆ. ಶುಭಾ ಪೂಂಜಾಗೆ ಮಂಜು ಪಾವಗಡ ಕ್ಲೋಸ್​ ಆಗಿದ್ದಾರೆ. ಈ ಕಾರಣಕ್ಕೆ ಶಮಂತ್​ ಬ್ರೋ ಗೌಡ ಜತೆ ದಿವ್ಯಾ ಫ್ರೆಂಡ್​ಶಿಪ್​ ಬೆಳೆಸಿಕೊಂಡಿದ್ದಾರೆ. ಈ ವಿಚಾರ ಮಂಜುಗೆ ಹೊಟ್ಟೆ ಉರಿ ತರಿಸುತ್ತಿದೆ. ಇದನ್ನು ಅವರು ಒಪನ್​ ಆಗಿ ತೋರಿಸುತ್ತಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಬೇರೆಬೇರೆ ಟಾಸ್ಕ್​ ನೀಡಲಾಗುತ್ತಿದೆ. ಪ್ರತಿ ಟಾಸ್ಕ್​ ಬರುವುದಕ್ಕೂ ಮೊದಲು ಮ್ಯೂಸಿಕ್​ ಒಂದು ಬರುತ್ತದೆ. ಈ ಹಾಡು ಬಂದಾಗ ಎರಡು ತಂಡದ ಕ್ಯಾಪ್ಟನ್​ಗಳು ಕನ್​ಫೆಷನ್​ ರೂಮ್​ಗೆ ಹೋಗಬೇಕು. ಬಿಗ್​ ಬಾಸ್​ ಮ್ಯೂಸಿಕ್​ ಹಾಕಿದರು. ದಿವ್ಯಾ ಇದಕ್ಕೆ ಡಾನ್ಸ್​ ಮಾಡುತ್ತಾ ಬಂದರು. ಆಗ ದಿವ್ಯಾಗೆ ಮಂಜು ಬೈದರು.

ಇದಕ್ಕೆ ದಿವ್ಯಾ ಬೇಸರ ಮಾಡಿಕೊಂಡರು. ಪ್ರಿಯಾಂಕಾ ತಿಮ್ಮೇಶ್​ ಬಳಿ ತೆರಳಿದ ದಿವ್ಯಾ ಈ ಬಗ್ಗೆ ಅಳಲು ತೋಡಿಕೊಂಡರು. ‘ಮಂಜು ಅಷ್ಟು ಸಣ್ಣ ವಿಚಾರಕ್ಕೆ ಯಾಕೆ ಕೂಗಾಡಬೇಕಿತ್ತು? ಅವನಿಗೆ ಮೊದಲಿನ ರೀತಿ ಇರಕಾಗಲ್ಲ ಅಂದ್ರೆ ನಂಗು ಇರಕಾಗಲ್ಲ. ಸುದೀಪ್​ ಅವರು ಚೆನ್ನಾಗಿ ಆಡ್ತಿದೀಯಾ ಅಂತ ನಂಗೆ ಹೇಳಿದ್ರು. ಅದನ್ನು ಕಾಪಾಡಿಕೊಳ್ಳಬೇಕು. ನನ್ನ ಮೇಲೆ ರೇಗಾಡುವ ಅವಶ್ಯಕತೆ ಇದೆಯಾ? ಶುಭಾ ಜತೆ ಮಂಜು ಕ್ಲೋಸ್​ ಆಗಿದಾನೆ. ಮಂಜು ಬೀನ್​ ಬ್ಯಾಗ್​ ಮೇಲೆ ಕೂತಾಗ ಅವನ ಜತೆ ಕೂರೋಕು ಯೋಚನೆ ಮಾಡ್ತೀನಿ’ ಎಂದು ದಿವ್ಯಾ ಬೇಸರ ಹೊರ ಹಾಕಿದರು.

ಟಾಸ್ಕ್​ ಪೂರ್ಣಗೊಂಡ ನಂತರದಲ್ಲಿ ಮಂಜು ಈ ಬಗ್ಗೆ ಪ್ರಶ್ನೆ ಮಾಡಿದರು. ನನ್ನಿಂದ ಏನಾದರೂ ಬೇಸರವಾಗಿದೆಯೇ ಎಂದು ಕೇಳಿದರು. ‘ಎಲ್ಲರ ಎದುರು ಆ ರೀತಿ ಕೂಗಾಡಬೇಡ, ಬಯ್ಯಬೇಡ’ ಎಂದು ಕೋರಿಕೊಂಡರು.

ಆರಂಭದಲ್ಲಿ ಶಮಂತ್ ಅವರನ್ನು ಕಂಡರೆ ದಿವ್ಯಾ ಸುರೇಶ್ ಮಾರು ದೂರ ಹೋಗಿ ನಿಲ್ಲುತ್ತಿದ್ದರು. ಈಗ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಶಮಂತ್ ಜತೆ ಒಳ್ಳೆಯ ಗೆಳೆತನ ಹೊಂದಿದ್ದಾರೆ ದಿವ್ಯಾ. ಈ ವಾರ ‘ನಿಂಗ್ ಐತೆ’ ತಂಡದಲ್ಲಿ ಶಮಂತ್ ಹಾಗೂ ದಿವ್ಯಾ ಸುರೇಶ್ ಇಬ್ಬರೂ ಇದ್ದಾರೆ. ಈ ತಂಡಕ್ಕೆ ಬಿಗ್ ಬಾಸ್ ಚಾಲೆಂಜ್ ಒಂದನ್ನು ನೀಡಿದ್ದರು. ಈ ಟಾಸ್ಕ್​ನ ಅನುಸಾರ ನಿಂಗ್ ಐತೆ ತಂಡದ ಇಬ್ಬರು 10 ಜತೆ ಬಟ್ಟೆಯಲ್ಲಿ ಮಿಂಚಬೇಕು. ಈ ಟಾಸ್ಕ್​ಗೆ ದಿವ್ಯಾ ಹಾಗೂ ಶಮಂತ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಚಿಂಗ್ ಡ್ರೆಸ್, ಸಮ್ಮರ್ ಕಪಲ್ ಲುಕ್ ಸೇರಿ ನಾನಾ ವಿಧವಾದ ಲುಕ್​​ನಲ್ಲಿ ಇವರು ಮಿಂಚಿದ್ದಾರೆ. ಮಂಜು ಉರಿದಕೊಳ್ಳೋಕೆ ಇದು ಕಾರಣ.

ಇದನ್ನೂ ಓದಿ: ದಿವ್ಯಾ ಉರುಡುಗ ಮಾಡಿದ ತಪ್ಪಿಗೆ ಮನೆ ಮಂದಿಗೆ ಶಿಕ್ಷೆ ನೀಡಿದ ಬಿಗ್​ ಬಾಸ್​

ಬಿಗ್ ಬಾಸ್ ಮನೆಯಲ್ಲಿ ಅವಘಡ; ದಿವ್ಯಾ ಉರುಡುಗ ಹೊಡೆದ ಫೋರ್ಸ್​ಗೆ ಗಾಜು ನುಚ್ಚುನೂರು, ಕೈಯಲ್ಲಿ ರಕ್ತ

ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ