AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜು ಜತೆ ಕುಳಿತುಕೊಳ್ಳೋಕೆ ಯೋಚನೆ ಮಾಡುತ್ತಿದ್ದೇನೆ; ಕಣ್ಣೀರು ಹಾಕಿದ ದಿವ್ಯಾ ಸುರೇಶ್​

ಬಿಗ್​ ಬಾಸ್​ ಮನೆಯಲ್ಲಿ ಬೇರೆ ಬೇರೆ ಟಾಸ್ಕ್​ ನೀಡಲಾಗುತ್ತಿದೆ. ಪ್ರತಿ ಟಾಸ್ಕ್​ ಬರುವುದಕ್ಕೂ ಮೊದಲು ಹಾಡೊಂದು ಬರುತ್ತದೆ. ಈ ಹಾಡು ಬಂದಾಗ ಕ್ಯಾಪ್ಟನ್​ಗಳು ಕನ್​ಫೆಷನ್​ ರೂಮ್​ಗೆ ಹೋಗಬೇಕು.

ಮಂಜು ಜತೆ ಕುಳಿತುಕೊಳ್ಳೋಕೆ ಯೋಚನೆ ಮಾಡುತ್ತಿದ್ದೇನೆ; ಕಣ್ಣೀರು ಹಾಕಿದ ದಿವ್ಯಾ ಸುರೇಶ್​
ದಿವ್ಯಾ ಸುರೇಶ್​
TV9 Web
| Updated By: Vinay Bhat|

Updated on: Jul 15, 2021 | 8:42 AM

Share

‘ಕನ್ನಡ ಬಿಗ್​ ಬಾಸ್​ ಸೀಸನ್ 8’ ಎರಡನೇ ಇನ್ನಿಂಗ್ಸ್​ನಲ್ಲಿ ದಿವ್ಯಾ ಸುರೇಶ್​ ಹಾಗೂ ಮಂಜು ಪಾವಗಡ ಮೊದಲಿನಂತಿಲ್ಲ. ಇಬ್ಬರೂ ಎಷ್ಟಕ್ಕೆಬೇಕೋ ಅಷ್ಟಕ್ಕೆ ಮಾತ್ರ ಮಾತನಾಡಿಕೊಳ್ಳುತ್ತಿದ್ದಾರೆ. ಶುಭಾ ಪೂಂಜಾಗೆ ಮಂಜು ಪಾವಗಡ ಕ್ಲೋಸ್​ ಆಗಿದ್ದಾರೆ. ಈ ಕಾರಣಕ್ಕೆ ಶಮಂತ್​ ಬ್ರೋ ಗೌಡ ಜತೆ ದಿವ್ಯಾ ಫ್ರೆಂಡ್​ಶಿಪ್​ ಬೆಳೆಸಿಕೊಂಡಿದ್ದಾರೆ. ಈ ವಿಚಾರ ಮಂಜುಗೆ ಹೊಟ್ಟೆ ಉರಿ ತರಿಸುತ್ತಿದೆ. ಇದನ್ನು ಅವರು ಒಪನ್​ ಆಗಿ ತೋರಿಸುತ್ತಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಬೇರೆಬೇರೆ ಟಾಸ್ಕ್​ ನೀಡಲಾಗುತ್ತಿದೆ. ಪ್ರತಿ ಟಾಸ್ಕ್​ ಬರುವುದಕ್ಕೂ ಮೊದಲು ಮ್ಯೂಸಿಕ್​ ಒಂದು ಬರುತ್ತದೆ. ಈ ಹಾಡು ಬಂದಾಗ ಎರಡು ತಂಡದ ಕ್ಯಾಪ್ಟನ್​ಗಳು ಕನ್​ಫೆಷನ್​ ರೂಮ್​ಗೆ ಹೋಗಬೇಕು. ಬಿಗ್​ ಬಾಸ್​ ಮ್ಯೂಸಿಕ್​ ಹಾಕಿದರು. ದಿವ್ಯಾ ಇದಕ್ಕೆ ಡಾನ್ಸ್​ ಮಾಡುತ್ತಾ ಬಂದರು. ಆಗ ದಿವ್ಯಾಗೆ ಮಂಜು ಬೈದರು.

ಇದಕ್ಕೆ ದಿವ್ಯಾ ಬೇಸರ ಮಾಡಿಕೊಂಡರು. ಪ್ರಿಯಾಂಕಾ ತಿಮ್ಮೇಶ್​ ಬಳಿ ತೆರಳಿದ ದಿವ್ಯಾ ಈ ಬಗ್ಗೆ ಅಳಲು ತೋಡಿಕೊಂಡರು. ‘ಮಂಜು ಅಷ್ಟು ಸಣ್ಣ ವಿಚಾರಕ್ಕೆ ಯಾಕೆ ಕೂಗಾಡಬೇಕಿತ್ತು? ಅವನಿಗೆ ಮೊದಲಿನ ರೀತಿ ಇರಕಾಗಲ್ಲ ಅಂದ್ರೆ ನಂಗು ಇರಕಾಗಲ್ಲ. ಸುದೀಪ್​ ಅವರು ಚೆನ್ನಾಗಿ ಆಡ್ತಿದೀಯಾ ಅಂತ ನಂಗೆ ಹೇಳಿದ್ರು. ಅದನ್ನು ಕಾಪಾಡಿಕೊಳ್ಳಬೇಕು. ನನ್ನ ಮೇಲೆ ರೇಗಾಡುವ ಅವಶ್ಯಕತೆ ಇದೆಯಾ? ಶುಭಾ ಜತೆ ಮಂಜು ಕ್ಲೋಸ್​ ಆಗಿದಾನೆ. ಮಂಜು ಬೀನ್​ ಬ್ಯಾಗ್​ ಮೇಲೆ ಕೂತಾಗ ಅವನ ಜತೆ ಕೂರೋಕು ಯೋಚನೆ ಮಾಡ್ತೀನಿ’ ಎಂದು ದಿವ್ಯಾ ಬೇಸರ ಹೊರ ಹಾಕಿದರು.

ಟಾಸ್ಕ್​ ಪೂರ್ಣಗೊಂಡ ನಂತರದಲ್ಲಿ ಮಂಜು ಈ ಬಗ್ಗೆ ಪ್ರಶ್ನೆ ಮಾಡಿದರು. ನನ್ನಿಂದ ಏನಾದರೂ ಬೇಸರವಾಗಿದೆಯೇ ಎಂದು ಕೇಳಿದರು. ‘ಎಲ್ಲರ ಎದುರು ಆ ರೀತಿ ಕೂಗಾಡಬೇಡ, ಬಯ್ಯಬೇಡ’ ಎಂದು ಕೋರಿಕೊಂಡರು.

ಆರಂಭದಲ್ಲಿ ಶಮಂತ್ ಅವರನ್ನು ಕಂಡರೆ ದಿವ್ಯಾ ಸುರೇಶ್ ಮಾರು ದೂರ ಹೋಗಿ ನಿಲ್ಲುತ್ತಿದ್ದರು. ಈಗ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಶಮಂತ್ ಜತೆ ಒಳ್ಳೆಯ ಗೆಳೆತನ ಹೊಂದಿದ್ದಾರೆ ದಿವ್ಯಾ. ಈ ವಾರ ‘ನಿಂಗ್ ಐತೆ’ ತಂಡದಲ್ಲಿ ಶಮಂತ್ ಹಾಗೂ ದಿವ್ಯಾ ಸುರೇಶ್ ಇಬ್ಬರೂ ಇದ್ದಾರೆ. ಈ ತಂಡಕ್ಕೆ ಬಿಗ್ ಬಾಸ್ ಚಾಲೆಂಜ್ ಒಂದನ್ನು ನೀಡಿದ್ದರು. ಈ ಟಾಸ್ಕ್​ನ ಅನುಸಾರ ನಿಂಗ್ ಐತೆ ತಂಡದ ಇಬ್ಬರು 10 ಜತೆ ಬಟ್ಟೆಯಲ್ಲಿ ಮಿಂಚಬೇಕು. ಈ ಟಾಸ್ಕ್​ಗೆ ದಿವ್ಯಾ ಹಾಗೂ ಶಮಂತ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಚಿಂಗ್ ಡ್ರೆಸ್, ಸಮ್ಮರ್ ಕಪಲ್ ಲುಕ್ ಸೇರಿ ನಾನಾ ವಿಧವಾದ ಲುಕ್​​ನಲ್ಲಿ ಇವರು ಮಿಂಚಿದ್ದಾರೆ. ಮಂಜು ಉರಿದಕೊಳ್ಳೋಕೆ ಇದು ಕಾರಣ.

ಇದನ್ನೂ ಓದಿ: ದಿವ್ಯಾ ಉರುಡುಗ ಮಾಡಿದ ತಪ್ಪಿಗೆ ಮನೆ ಮಂದಿಗೆ ಶಿಕ್ಷೆ ನೀಡಿದ ಬಿಗ್​ ಬಾಸ್​

ಬಿಗ್ ಬಾಸ್ ಮನೆಯಲ್ಲಿ ಅವಘಡ; ದಿವ್ಯಾ ಉರುಡುಗ ಹೊಡೆದ ಫೋರ್ಸ್​ಗೆ ಗಾಜು ನುಚ್ಚುನೂರು, ಕೈಯಲ್ಲಿ ರಕ್ತ

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು