AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ನಕ್ಕೆ ವಿಷ ಹಾಕಿ ತಂದೆಯೇ ನನ್ನನ್ನು ಮುಗಿಸಲು ಹೊರಟಿದ್ದರು; ಬಿಗ್​ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ದಿವ್ಯಾ

ದಿವ್ಯಾ ತಂದೆ ಅನ್ನಕ್ಕೆ ವಿಷ ಹಾಕಿ ಊಟ ಮಾಡಿಸಿದ್ದರಂತೆ. ಕೇವಲ ದಿವ್ಯಾಗೆ ಮಾತ್ರವಲ್ಲ, ಅವರ ಅಣ್ಣನಿಗೂ ಊಟ ತಿನ್ನಿಸಿದ್ದರಂತೆ.

ಅನ್ನಕ್ಕೆ ವಿಷ ಹಾಕಿ ತಂದೆಯೇ ನನ್ನನ್ನು ಮುಗಿಸಲು ಹೊರಟಿದ್ದರು; ಬಿಗ್​ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ದಿವ್ಯಾ
ದಿವ್ಯಾ ಸುರೇಶ್
ರಾಜೇಶ್ ದುಗ್ಗುಮನೆ
|

Updated on: Mar 25, 2021 | 8:03 PM

Share

ಬಿಗ್​ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ನಗುತ್ತಾ ಕಾಲ ಕಳೆಯುತ್ತಿದ್ದಾರೆ. 14 ಸ್ಪರ್ಧಿಗಳ ನಡುವೆ ಉತ್ತಮ ಬಾಂಡಿಂಗ್​ ಬೆಳೆದಿದ್ದು, ಒಂದು ಫ್ಯಾಮಿಲಿಯಂತೆ ಆಗಿದ್ದಾರೆ. ಆದರೆ, ಎಲ್ಲರ ಹಿಂದೆಯೂ ಒಂದು ನೋವಿನ ಕಥೆ ಇದೆ. ಈ ನೋವಿನ ಕಥೆ ಒಂದೊಂದಾಗೇ ಹೊರ ಬರುತ್ತಿದೆ. ಅವರ ಕಣ್ಣೀರ ಕಥೆ ಕೇಳಿದಾಗೆಲ್ಲ, ಎಲ್ಲರೂ ನಗುವಿನ ಮುಖವಾಡ ಧರಿಸಿದ್ದಾರೆಯೇ ಎನ್ನುವ ಅನುಮಾನ ಮೂಡುತ್ತಿರುವುದಂತೂ ಸುಳ್ಳಲ್ಲ. ಬಿಗ್ ಬಾಸ್ ಸೀಸನ್​ 8ರ ಆರಂಭದಲ್ಲಿ ರಘು ಗೌಡ ಅವರು ತಮ್ಮ ಕಣ್ಣೀರ ಕಥೆ ಹೇಳಿಕೊಂಡಿದ್ದರು. ತಂದೆ-ತಾಯಿ ಕಣ್ಣೆದುರೇ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಹೇಳಿಕೊಂಡು ಅತ್ತಿದ್ದರು. ಇದಾದ ನಂತರ ಮಂಜು ಪಾವಗಡ ತಾವು ಅನುಭವಿಸಿದ ಕಷ್ಟದ ದಿನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈಗ ದಿವ್ಯಾ ಸುರೇಶ್​ ಅವರ ಸರದಿ. ಅವರು ಹೇಳಿರುವ ಕಹಿ ಘಟನೆ ವೀಕ್ಷಕರ ಕಣ್ಣಲ್ಲಿ ನೀರು ತರಿಸುವುದಂತೂ ಗ್ಯಾರಂಟಿ.

ದಿವ್ಯಾ ತಂದೆ ಅನ್ನಕ್ಕೆ ವಿಷ ಹಾಕಿ ಊಟ ಮಾಡಿಸಿದ್ದರಂತೆ. ಕೇವಲ ದಿವ್ಯಾಗೆ ಮಾತ್ರವಲ್ಲ, ಅವರ ಅಣ್ಣನಿಗೂ ಊಟ ತಿನ್ನಿಸಿದ್ದರಂತೆ. ಈ ಭಯಾನಕ ಘಟನೆ ಬಗ್ಗೆ ಅವರು ಬಿಗ್​ ಬಾಸ್​ ಮನೆಯಲ್ಲಿ ಇಂಚಿಚೂ ವಿವರಿಸಿದ್ದಾರೆ.

ನನ್ನ ತಂದೆ ಯಾವಾಗಲೂ ಊಟ ಕಲಸಿ ಕೊಟ್ಟಿಲ್ಲ. ಆದಿನ ಅವರು ಕುಡಿದುಕೊಂಡು ಬಂದಿದ್ದರು. ಆದಾಗ್ಯೂ ಊಟವನ್ನು ಕಲಸಿಕೊಂಡು ಬಂದ್ರು. ನನಗೆ ಮತ್ತು ನನ್ನ ಅಣ್ಣನಿಗೆ ಅಪ್ಪ ಊಟ ಕೊಟ್ಟರು. ಊಟ ಮಾಡುತ್ತಿದ್ದಂತೆ ಅಪ್ಪ ವಾಂತಿ ಮಾಡಿಕೊಂಡರು. ನಂತರ ನಮ್ಮ ಅಣ್ಣ ವಾಂತಿ ಮಾಡಿಕೊಂಡರು. ನಂತರ ನಾನು. ಮೂರು ಜನನೂ ಬದುಕಿರಬಾರದು ಎಂದು ಅಪ್ಪ ಊಟಕ್ಕೆ ವಿಷ ಬೆರೆಸಿಕೊಟ್ಟಿದ್ದರು. ಅವರು ಕೂಡ ಅದೇ ಊಟ ಮಾಡಿದ್ದರು ಎಂದು ದಿವ್ಯಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಅಂದಹಾಗೆ, ಅವರು ನಂತರ ಹೇಗೆ ಉಳಿದುಕೊಂಡರು, ಮುಂದೇನಾಯ್ತು ಎನ್ನುವ ಬಗ್ಗೆ ಇಂದಿನ (ಮಾರ್ಚ್​ 25) ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Bigg Boss Kannada: ‘ದಿವ್ಯಾ ಜೊತೆ ಮದುವೆ ಆಗೋಕೆ ನಮ್ಮ ಮನೆಯಲ್ಲಿ ಒಪ್ಪಿಗೆ ಸಿಗತ್ತೆ’; ಎಲ್ಲವನ್ನೂ ಒಪ್ಪಿಕೊಂಡ ಅರವಿಂದ್​!

Follow Us
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ