ಅನ್ನಕ್ಕೆ ವಿಷ ಹಾಕಿ ತಂದೆಯೇ ನನ್ನನ್ನು ಮುಗಿಸಲು ಹೊರಟಿದ್ದರು; ಬಿಗ್​ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ದಿವ್ಯಾ

ದಿವ್ಯಾ ತಂದೆ ಅನ್ನಕ್ಕೆ ವಿಷ ಹಾಕಿ ಊಟ ಮಾಡಿಸಿದ್ದರಂತೆ. ಕೇವಲ ದಿವ್ಯಾಗೆ ಮಾತ್ರವಲ್ಲ, ಅವರ ಅಣ್ಣನಿಗೂ ಊಟ ತಿನ್ನಿಸಿದ್ದರಂತೆ.

ಅನ್ನಕ್ಕೆ ವಿಷ ಹಾಕಿ ತಂದೆಯೇ ನನ್ನನ್ನು ಮುಗಿಸಲು ಹೊರಟಿದ್ದರು; ಬಿಗ್​ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ದಿವ್ಯಾ
ದಿವ್ಯಾ ಸುರೇಶ್
Follow us
|

Updated on: Mar 25, 2021 | 8:03 PM

ಬಿಗ್​ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ನಗುತ್ತಾ ಕಾಲ ಕಳೆಯುತ್ತಿದ್ದಾರೆ. 14 ಸ್ಪರ್ಧಿಗಳ ನಡುವೆ ಉತ್ತಮ ಬಾಂಡಿಂಗ್​ ಬೆಳೆದಿದ್ದು, ಒಂದು ಫ್ಯಾಮಿಲಿಯಂತೆ ಆಗಿದ್ದಾರೆ. ಆದರೆ, ಎಲ್ಲರ ಹಿಂದೆಯೂ ಒಂದು ನೋವಿನ ಕಥೆ ಇದೆ. ಈ ನೋವಿನ ಕಥೆ ಒಂದೊಂದಾಗೇ ಹೊರ ಬರುತ್ತಿದೆ. ಅವರ ಕಣ್ಣೀರ ಕಥೆ ಕೇಳಿದಾಗೆಲ್ಲ, ಎಲ್ಲರೂ ನಗುವಿನ ಮುಖವಾಡ ಧರಿಸಿದ್ದಾರೆಯೇ ಎನ್ನುವ ಅನುಮಾನ ಮೂಡುತ್ತಿರುವುದಂತೂ ಸುಳ್ಳಲ್ಲ. ಬಿಗ್ ಬಾಸ್ ಸೀಸನ್​ 8ರ ಆರಂಭದಲ್ಲಿ ರಘು ಗೌಡ ಅವರು ತಮ್ಮ ಕಣ್ಣೀರ ಕಥೆ ಹೇಳಿಕೊಂಡಿದ್ದರು. ತಂದೆ-ತಾಯಿ ಕಣ್ಣೆದುರೇ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಹೇಳಿಕೊಂಡು ಅತ್ತಿದ್ದರು. ಇದಾದ ನಂತರ ಮಂಜು ಪಾವಗಡ ತಾವು ಅನುಭವಿಸಿದ ಕಷ್ಟದ ದಿನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈಗ ದಿವ್ಯಾ ಸುರೇಶ್​ ಅವರ ಸರದಿ. ಅವರು ಹೇಳಿರುವ ಕಹಿ ಘಟನೆ ವೀಕ್ಷಕರ ಕಣ್ಣಲ್ಲಿ ನೀರು ತರಿಸುವುದಂತೂ ಗ್ಯಾರಂಟಿ.

ದಿವ್ಯಾ ತಂದೆ ಅನ್ನಕ್ಕೆ ವಿಷ ಹಾಕಿ ಊಟ ಮಾಡಿಸಿದ್ದರಂತೆ. ಕೇವಲ ದಿವ್ಯಾಗೆ ಮಾತ್ರವಲ್ಲ, ಅವರ ಅಣ್ಣನಿಗೂ ಊಟ ತಿನ್ನಿಸಿದ್ದರಂತೆ. ಈ ಭಯಾನಕ ಘಟನೆ ಬಗ್ಗೆ ಅವರು ಬಿಗ್​ ಬಾಸ್​ ಮನೆಯಲ್ಲಿ ಇಂಚಿಚೂ ವಿವರಿಸಿದ್ದಾರೆ.

ನನ್ನ ತಂದೆ ಯಾವಾಗಲೂ ಊಟ ಕಲಸಿ ಕೊಟ್ಟಿಲ್ಲ. ಆದಿನ ಅವರು ಕುಡಿದುಕೊಂಡು ಬಂದಿದ್ದರು. ಆದಾಗ್ಯೂ ಊಟವನ್ನು ಕಲಸಿಕೊಂಡು ಬಂದ್ರು. ನನಗೆ ಮತ್ತು ನನ್ನ ಅಣ್ಣನಿಗೆ ಅಪ್ಪ ಊಟ ಕೊಟ್ಟರು. ಊಟ ಮಾಡುತ್ತಿದ್ದಂತೆ ಅಪ್ಪ ವಾಂತಿ ಮಾಡಿಕೊಂಡರು. ನಂತರ ನಮ್ಮ ಅಣ್ಣ ವಾಂತಿ ಮಾಡಿಕೊಂಡರು. ನಂತರ ನಾನು. ಮೂರು ಜನನೂ ಬದುಕಿರಬಾರದು ಎಂದು ಅಪ್ಪ ಊಟಕ್ಕೆ ವಿಷ ಬೆರೆಸಿಕೊಟ್ಟಿದ್ದರು. ಅವರು ಕೂಡ ಅದೇ ಊಟ ಮಾಡಿದ್ದರು ಎಂದು ದಿವ್ಯಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಅಂದಹಾಗೆ, ಅವರು ನಂತರ ಹೇಗೆ ಉಳಿದುಕೊಂಡರು, ಮುಂದೇನಾಯ್ತು ಎನ್ನುವ ಬಗ್ಗೆ ಇಂದಿನ (ಮಾರ್ಚ್​ 25) ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Bigg Boss Kannada: ‘ದಿವ್ಯಾ ಜೊತೆ ಮದುವೆ ಆಗೋಕೆ ನಮ್ಮ ಮನೆಯಲ್ಲಿ ಒಪ್ಪಿಗೆ ಸಿಗತ್ತೆ’; ಎಲ್ಲವನ್ನೂ ಒಪ್ಪಿಕೊಂಡ ಅರವಿಂದ್​!

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!