AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krrish 4: ಮತ್ತೆ ಬರಲಿದೆ ‘ಕೋಯಿ ಮಿಲ್​ ಗಯಾ’ ಜಾದೂ? ಹೃತಿಕ್​ ‘ಕ್ರಿಶ್​ 4’ ಚಿತ್ರದಲ್ಲಿ ಟೈಮ್​ ಟ್ರಾವೆಲಿಂಗ್​ ಕಥೆ

Hrithik Roshan: ಹೃತಿಕ್​ ರೋಷನ್​ ನಟನೆಯ ಬಹುನಿರೀಕ್ಷಿತ ‘ಕ್ರಿಶ್​ 4’ ಸಿನಿಮಾದಲ್ಲಿ ಟೈಮ್​ ಟ್ರಾವೆಲಿಂಗ್​ ಕಾನ್ಸೆಪ್ಟ್​ ಬಳಸಿಕೊಂಡು ಜಾದೂ ಪಾತ್ರವನ್ನು ಮತ್ತೆ ತೆರೆಮೇಲೆ ತರಲು ಚಿತ್ರತಂಡ ತೀರ್ಮಾನಿಸುತ್ತಿದೆ ಎಂಬ ಬಗ್ಗೆ ವರದಿ ಆಗಿದೆ.

Krrish 4: ಮತ್ತೆ ಬರಲಿದೆ ‘ಕೋಯಿ ಮಿಲ್​ ಗಯಾ’ ಜಾದೂ? ಹೃತಿಕ್​ ‘ಕ್ರಿಶ್​ 4’ ಚಿತ್ರದಲ್ಲಿ ಟೈಮ್​ ಟ್ರಾವೆಲಿಂಗ್​ ಕಥೆ
ಜಾದೂ, ಹೃತಿಕ್​ ರೋಷನ್​
Follow us
ಮದನ್​ ಕುಮಾರ್​
|

Updated on:Jun 25, 2021 | 12:56 PM

ಬಾಲಿವುಡ್ ಪ್ರೇಕ್ಷಕರಿಗೆ ಒಂದು ಹೊಸ ಅನುಭವ ನೀಡಿದ ಸಿನಿಮಾ ‘ಕೋಯಿ ಮಿಲ್​ ಗಯಾ’. ಆ ಚಿತ್ರದಲ್ಲಿ ಹೃತಿಕ್​ ರೋಷನ್​ ಅವರು ಎರಡು ಶೇಡ್​ನ ಪಾತ್ರ ಮಾಡಿದ್ದರು. ಒಂದರಲ್ಲಿ ಸೂಪರ್​ ಹೀರೋ ರೀತಿ ಕಾಣಿಸಿಕೊಂಡಿದ್ದರು. ಹೃತಿಕ್​ ನಿರ್ವಹಿಸಿದ್ದ ಆ ಪಾತ್ರಕ್ಕೆ ಸೂಪರ್​ ಹೀರೋ ಗುಣಗಳು ಬರಲು ಕಾರಣವಾಗಿದ್ದು ಜಾದೂ ಎಂಬ ಏಲಿಯನ್​. ಆ ಸಿನಿಮಾದಲ್ಲಿ ಜಾದೂ ಪಾತ್ರ ಸಖತ್​ ಇಂಟರೆಸ್ಟಿಂಗ್​ ಆಗಿತ್ತು. ಈಗ ಮತ್ತೆ ಅದೇ ಜಾದೂ ಜೊತೆ ಹೃತಿಕ್​ ನಟಿಸುತ್ತಾರೆ ಎಂಬ ಸುದ್ದಿ ಹರಡಿದೆ.

ಇತ್ತೀಚೆಗಷ್ಟೇ ‘ಕ್ರಿಶ್​​’ ಚಿತ್ರಕ್ಕೆ 14 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೃತಿಕ್​ ರೋಷನ್​ ಅವರು ‘ಕ್ರಿಶ್​ 4’ ಸಿನಿಮಾದ ಒಂದು ಮಿನಿ ಟೀಸರ್​ ಹಂಚಿಕೊಂಡಿದ್ದರು. ಆ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ಕೆಲಸಕ್ಕೆ ಅವರು ಚಾಲನೆ ನೀಡಿದ್ದರು. ಅದರ ಬೆನ್ನಲ್ಲೇ ‘ಕ್ರಿಶ್​ 4’ ಬಗ್ಗೆ ಒಂದು ಗುಸುಗುಸು ಕೇಳಿಬಂದಿದೆ. ಈ ಸಿನಿಮಾದಲ್ಲಿ ಜಾದೂ ಪಾತ್ರ ಇರಲಿದೆ ಎಂದು ಹೇಳಲಾಗುತ್ತಿದೆ.

‘ಕ್ರಿಶ್​ 4’ ಸಿನಿಮಾದಲ್ಲಿ ಟೈಮ್​ ಟ್ರಾವೆಲಿಂಗ್​ ಕಾನ್ಸೆಪ್ಟ್​ ಬಳಸಿಕೊಂಡು ಜಾದೂ ಪಾತ್ರವನ್ನು ಮತ್ತೆ ತೆರೆಮೇಲೆ ತರಲು ಚಿತ್ರತಂಡ ತೀರ್ಮಾನಿಸುತ್ತಿದೆ ಎಂಬ ಬಗ್ಗೆ ವರದಿ ಆಗಿದೆ. ಆದರೆ ಈ ಕುರಿತು ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ. ‘ಭೂತಕಾಲ ಮುಗಿಯಿತು. ಭವಿಷ್ಯ ಕಾಲ ಏನನ್ನು ತರುತ್ತದೆ ಅಂತ ನೋಡೋಣ’ ಎಂಬ ಕ್ಯಾಪ್ಷನ್​ ಜೊತೆಗೆ ಕ್ರಿಶ್​ 4 ಚಿತ್ರದ ಟೀಸರ್​ ಅನ್ನು ಹೃತಿಕ್​ ಹಂಚಿಕೊಂಡಿದ್ದರು. ಆ ಕ್ಯಾಪ್ಷನ್​ನಲ್ಲಿ ಭೂತ-ಭವಿಷ್ಯದ ಬಗ್ಗೆ ಅವರು ಪ್ರಸ್ತಾಪ ಮಾಡಿರುವುದರಿಂದ ಟೈಮ್​ ಟ್ರಾವೆಲಿಂಗ್​ ಬಗೆಗಿನ ಅನುಮಾನಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಈ ಟೀಸರ್​ನಲ್ಲಿ ಹೃತಿಕ್​ ರೋಷನ್​ ಅವರು ಮಾಸ್ಕ್​ ಕಿತ್ತು ಎಸೆಯುವ ದೃಶ್ಯ ಇದೆ. ಇಷ್ಟು ವರ್ಷಗಳ ಕಾಲ ಕಾಣಿಸಿಕೊಂಡಿದ್ದ ಕಪ್ಪು ಮಾಸ್ಕ್​ ಬದಲಿಗೆ ನೀಲಿ ಬಣ್ಣದ ಮಾಸ್ಕ್​ ಬಳಸಲಾಗಿರುವುದು ಕೂಡ ಕೌತುಕಕ್ಕೆ ಕಾರಣ ಆಗಿದೆ.

2020ರಲ್ಲಿಯೇ ‘ಕ್ರಿಶ್​ 4’ ಸಿನಿಮಾ ತೆರೆಕಾಣಬೇಕಿತ್ತು. ಆದರೆ ನಿರ್ದೇಶಕ, ಹೃತಿಕ್​ ರೋಷನ್​ ತಂದೆ ರಾಕೇಶ್​ ರೋಷನ್​ ಅವರು ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯಲು ಆರಂಭಿಸಿದ್ದರಿಂದ ಚಿತ್ರದ ಕೆಲಸಗಳು ನಿಂತಿದ್ದವು. ಅಲ್ಲದೆ, ಲಾಕ್​ಡೌನ್​ ಮತ್ತು ಕೊರೊನಾ ವೈರಸ್​ ಕಾರಣದಿಂದಾಗಿಯೂ ವಿಳಂಬ ಆಗಿತ್ತು. ಆದರೆ ಈಗ ಕಾಲ ಕೂಡಿಬಂದಂತೆ ಕಾಣುತ್ತಿದೆ.

ಇದನ್ನೂ ಓದಿ:

ಹೃತಿಕ್​ ಜತೆ ಕೈ ಜೋಡಿಸಲಿದ್ದಾರೆ ದಕ್ಷಿಣ ಭಾರತದ ಹೀರೋ: 150 ಕೋಟಿ ದಾಟಲಿದೆ ಸಿನಿಮಾ ಬಜೆಟ್​!

ಹೃತಿಕ್​ ಜೊತೆ ರೊಮ್ಯಾನ್ಸ್​ ಮಾಡಲಿದ್ದಾರೆ ದೀಪಿಕಾ ಪಡುಕೋಣೆ: ಈ ಚಿತ್ರಕ್ಕೆ ನಿರ್ದೇಶಕರಾರು ಗೊತ್ತಾ?

Published On - 12:53 pm, Fri, 25 June 21

ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ