‘ಇದು ಮೋಸದ ಎಲಿಮಿನೇಷನ್​’; ಇಂಡಿಯನ್​ ಐಡಲ್​ ಶೋ ಮೇಲೆ ಪ್ರೇಕ್ಷಕರ ಸಿಟ್ಟಿಗೆ ಇಲ್ಲಿದೆ ಕಾರಣ

| Updated By: ಮದನ್​ ಕುಮಾರ್​

Updated on: Jul 12, 2021 | 1:15 PM

Indian Idol 12 Elimination: ಇತ್ತೀಚಿನ ಎಪಿಸೋಡ್​ನಲ್ಲಿ ಆಶಾ ಭೋಸ್ಲೆ ಕೂಡ ತೀರ್ಪುಗಾರರಾಗಿ ಭಾಗವಹಿಸಿದ್ದರು. ಎಲ್ಲ ಸ್ಪರ್ಧಿಗಳು ಭರ್ಜರಿ ಪೈಪೋಟಿ ನೀಡಿದರು. ಆಶಿಷ್​ ಕುಲಕರ್ಣಿ ಮತ್ತು ಷಣ್ಮುಖಪ್ರಿಯಾ ಅವರು ಡೇಂಜರ್​ ಝೋನ್​ನಲ್ಲಿ ಇದ್ದರು.

‘ಇದು ಮೋಸದ ಎಲಿಮಿನೇಷನ್​’; ಇಂಡಿಯನ್​ ಐಡಲ್​ ಶೋ ಮೇಲೆ ಪ್ರೇಕ್ಷಕರ ಸಿಟ್ಟಿಗೆ ಇಲ್ಲಿದೆ ಕಾರಣ
‘ಇದು ಮೋಸದ ಎಲಿಮಿನೇಷನ್​’; ಇಂಡಿಯನ್​ ಐಡಲ್​ ಶೋ ಮೇಲೆ ಪ್ರೇಕ್ಷಕರ ಸಿಟ್ಟಿಗೆ ಇಲ್ಲಿದೆ ಕಾರಣ
Follow us on

ಹತ್ತು ಹಲವು ಕಾರಣಗಳಿಂದಾಗಿ ‘ಇಂಡಿಯನ್​ ಐಡಲ್​’ (Indian Idol 12) ರಿಯಾಲಿಟಿ ಶೋ ವಿವಾದಕ್ಕೆ ಒಳಗಾಗುತ್ತಿದೆ. ಇತ್ತೀಚೆಗೆ ನಡೆದ ಎಲಿಮಿನೇಷನ್​ ಪ್ರಕ್ರಿಯೆಯಲ್ಲಿ ಗಾಯಕ ಆಶಿಷ್​ ಕುಲಕರ್ಣಿ (Ashish Kulkarni) ಅವರನ್ನು ಎಲಿಮಿನೇಟ್​ ಮಾಡಲಾಗಿದೆ. ಈ ಬಗ್ಗೆ ಪ್ರೇಕ್ಷಕರಿಗೆ ತೀವ್ರ ಬೇಸರ ಆಗಿದೆ. ಮತ್ತೋರ್ವ ಗಾಯಕಿ ಷಣ್ಮುಖಪ್ರಿಯಾ ಅವರು ಎಲಿಮಿನೇಷನ್​ನಿಂದ ಬಜಾವ್​ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಇಂಡಿಯನ್​ ಐಡಲ್​ ಶೋನಲ್ಲಿ ಮೋಸದ ಎಲಿಮಿನೇಷನ್​ ನಡೆದಿದೆ ಎಂದು ನೆಟ್ಟಿಗರು ಟ್ವೀಟ್​ ಮಾಡುತ್ತಿದ್ದಾರೆ.

ಸ್ಪರ್ಧಿಗಳ ನಡುವೆ ಫೇಕ್​ ಲವ್​ ಸ್ಟೋರಿ ಸೃಷ್ಟಿಮಾಡಲಾಗಿದೆ, ಲೆಜೆಂಡರಿ ಗಾಯಕ ಕಿಶೋರ್​ ಕುಮಾರ್​ ಅವರ ಗೀತೆಗಳನ್ನು ಕೆಟ್ಟದಾಗಿ ಹಾಡಲಾಗಿದೆ, ಸ್ಪರ್ಧಿಗಳ ನಡುವೆ ಪಕ್ಷಪಾತ ಮಾಡಲಾಗಿದೆ, ಎಲ್ಲ ಎಪಿಸೋಡ್​ಗಳು ಸ್ಕ್ರಿಪ್ಟೆಡ್​ ಆಗಿವೆ ಎಂಬಿತ್ಯಾದಿ ಆರೋಪಗಳು ಇಂಡಿಯನ್​ ಐಡಲ್ ಶೋ ಮೇಲಿದೆ. ಈಗ ಆಶಿಷ್​ ಕುಲಕರ್ಣಿ ಎಲಿಮಿನೇಷನ್​ ಬಳಿಕ ಒಂದು ವರ್ಗದ ಪ್ರೇಕ್ಷಕರು ಈ ಶೋ ವಿರುದ್ಧ ಗುಡುಗಿದ್ದಾರೆ.

ಇತ್ತೀಚಿನ ಎಪಿಸೋಡ್​ನಲ್ಲಿ ಆಶಾ ಭೋಸ್ಲೆ ಕೂಡ ತೀರ್ಪುಗಾರರಾಗಿ ಭಾಗವಹಿಸಿದ್ದರು. ಎಲ್ಲ ಸ್ಪರ್ಧಿಗಳು ಭರ್ಜರಿ ಪೈಪೋಟಿ ನೀಡಿದರು. ಆಶಿಷ್​ ಕುಲಕರ್ಣಿ ಮತ್ತು ಷಣ್ಮುಖಪ್ರಿಯಾ ಅವರು ಡೇಂಜರ್​ ಝೋನ್​ನಲ್ಲಿ ಇದ್ದರು. ‘ದಿಲ್​ ದೇನಾ ಖೇಲ್​ ಹೈ ದಿಲ್​ದಾರ್​ ಕಾ..’ ಹಾಡನ್ನು ಆಶಿಷ್​ ಹಾಡಿದರು. ‘ದುನಿಯಾ ಮೇ ಲೋಗೋಂಕೋ..’ ಗೀತೆಯನ್ನು ಷಣ್ಮುಖಪ್ರಿಯಾ ಹಾಡಿದರು. ತೀರ್ಪುಗಾರರಿಗೆ ಇಬ್ಬರ ಗಾಯನ ಕೂಡ ಸಖತ್​ ಇಷ್ಟ ಆಯಿತು. ಅಂತಿಮವಾಗಿ ಒಬ್ಬರು ಎಲಿಮಿನೇಟ್​ ಆಗಲೇಬೇಕಿದ್ದರಿಂದ ಆಶಿಷ್​ ಕುಲಕರ್ಣಿ ಅವರು ಶೋನಿಂದ ಹೊರಬೀಳುವಂತಾಯಿತು.

ಆಶಿಷ್​ ಕುಲಕರ್ಣಿ ಅವರ ಎಲಿಮಿನೇಷನ್​ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿರುವ ಅನೇಕರು ಇಂಡಿಯಲ್​ ಐಡಲ್​ ವಿರುದ್ಧ ಟ್ವೀಟ್​ ಮಾಡುತ್ತಿದ್ದಾರೆ. ‘ಷಣ್ಮುಖಪ್ರಿಯಾ ಅವರಿಗಿಂತ ಆಶಿಷ್​ ಕುಲಕರ್ಣಿ ಚೆನ್ನಾಗಿ ಹಾಡುತ್ತಾರೆ. ಆದರೂ ಕೂಡ ಷಣ್ಮುಖಪ್ರಿಯಾಗೆ ಝೋಂಬಿಗಳು ವೋಟ್​ ಮಾಡುತ್ತಿದ್ದಾವೆ. ನನ್ನ ಪ್ರಕಾರ ಆಶಿಷ್​ ಅವರು ಟಾಪ್​ 3 ಸ್ಪರ್ಧಿಗಳಲ್ಲಿ ಒಬ್ಬರಾಗಿರಬೇಕಿತ್ತು’ ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ.

‘ದಿನದಿಂದ ದಿನಕ್ಕೆ ಈ ಶೋ ಹದಗೆಡುತ್ತಿದೆ. ಪಕ್ಷಪಾತವೇ ತುಂಬಿಹೋಗುತ್ತಿದೆ. ಆಶಿಷ್​ ಕುಲಕರ್ಣಿ ಅವರ ಎಲಿಮಿನೇಷನ್​ನಿಂದ ತೀವ್ರ ನಿರಾಸೆ ಆಗಿದೆ. ಅವರ ಬದಲು ಇನ್ನುಳಿದ ಮೂವರಲ್ಲಿ ಯಾರಾದರೂ ಎಲಿಮಿನೇಟ್​ ಆಗಬಹುದಿತ್ತು’ ಎಂದು ಕೆಲವರು ಟ್ವೀಟ್​ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ‘ಈ ಶೋ ಆಯೋಜಕರು ಮತ್ತು ತೀರ್ಪುಗಾರರು ಕಿವುಡರಾಗಿದ್ದಾರಾ? ಕುರುಡರಾಗಿದ್ದಾರಾ’ ಎಂಬ ಕಮೆಂಟ್​ ಕೂಡ ಬಂದಿದೆ.

ಇದನ್ನೂ ಓದಿ:

ಕೆಟ್ಟ ಗಾಯನ ಕೇಳಿ ಇಂಡಿಯನ್​ ಐಡಲ್​ ಶೋನಲ್ಲಿ ಕೆನ್ನೆಗೆ ಹೊಡೆದುಕೊಂಡಿದ್ದ ಜಡ್ಜ್​

ಬಡತನ, ಫೇಕ್​ ಲವ್​ ಸ್ಟೋರಿಗಳೇ ರಿಯಾಲಿಟಿ ಶೋಗಳ ಬಂಡವಾಳ; ಇಂಡಿಯನ್​ ಐಡಲ್​ ವಿನ್ನರ್​ ಆರೋಪ