AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chi. Udayashankar‘s Birth Anniversary: ಡಾ. ರಾಜಕುಮಾರರ 92 ಸಿನೆಮಾಗಳಿಗೆ ಸಂಭಾಷಣೆ ಬರೆದ ಚಿತ್ರರಂಗದ ಚಿರಂಜೀವಿ

Kannada Lyricist Chi. Udayashankar : ‘ಹದಿಮೂರನೇ ವಯಸ್ಸಿಗೆ ’ಅಖಿಲ ಕರ್ನಾಟಕ ಮಕ್ಕಳ ಕೂಟ’ದ “ಮಕ್ಕಳ ಬಾವುಟ” ಪತ್ರಿಕೆಯ ಸಂಪಾದಕರಾದರು. ಮೂವತ್ತು ವರ್ಷಗಳಲ್ಲಿ 3,340 ಗೀತೆಗಳು, 330 ಚಿತ್ರಗಳಿಗೆ ಸಂಭಾಷಣೆ ರಚಿಸಿದ ಅವರು ಕನ್ನಡ ಚಿತ್ರರಂಗದ ಮಟ್ಟಿಗೆ “ಅಲ್ಲಾವುದ್ದೀನನ ಅದ್ಭುತ ದೀಪ” ಎಂದು ಕರೆಸಿಕೊಂಡರು.‘ ಎನ್. ಎಸ್. ಶ್ರೀಧರ ಮೂರ್ತಿ

Chi. Udayashankar‘s Birth Anniversary: ಡಾ. ರಾಜಕುಮಾರರ 92 ಸಿನೆಮಾಗಳಿಗೆ ಸಂಭಾಷಣೆ ಬರೆದ ಚಿತ್ರರಂಗದ ಚಿರಂಜೀವಿ
ಡಾ. ರಾಜ್​ಕುಮಾರ್, ಚಿ. ಉದಯಶಂಕರ್ ಮತ್ತು ಪತ್ರಕರ್ತ ಎನ್. ಎಸ್. ಶ್ರೀಧರ ಮೂರ್ತಿ
ಶ್ರೀದೇವಿ ಕಳಸದ
|

Updated on:Feb 18, 2022 | 3:42 PM

Share

ಚಿ. ಉದಯಶಂಕರ್ | Chi. Udayashankar: ಈ ಹೆಸರನ್ನು ನಾನು ಬಾಲ್ಯದಲ್ಲಿ ಅಸಂಖ್ಯಾತ ಸಲ ಕೇಳಿದ್ದು ಆಕಾಶವಾಣಿಯ ಮೂಲಕ. ಆಗ ಪ್ರಸಾರವಾಗುತ್ತಿದ್ದ ಬಹುತೇಕ ಚಿತ್ರಗೀತೆಗಳು ಅವರ ರಚನೆಗಳೇ, ಅಂತಹ ಮಧುರ ಗೀತೆಗಳ ಸೃಷ್ಟಿಕರ್ತ ನಮ್ಮ ಪಾಲಿಗೆ ಗಂಧರ್ವರೇ! ಇಂತಹ ಉದಯಶಂಕರ್ ಅವರನ್ನು ನೋಡಬೇಕು ಎನ್ನುವುದು ನನ್ನ ಬಾಲ್ಯದ ಮಹದಾಸೆಗಳಲ್ಲಿ ಒಂದು. ಬೆಂಗಳೂರಿಗೆ ಬಂದ ನಂತರ ಅದು ಸರಳವಾಗಿಯೇ ಸಾಧ್ಯವಾಗಿ ಬಿಟ್ಟಿತ್ತು. ನನ್ನ ಬಾಲ್ಯದ ಗಂಧರ್ವರು ಎರಡನೇ ಭೇಟಿಯಲ್ಲಿಯೇ ಆತ್ಮೀಯರೂ ಆಗಿ ಬಿಟ್ಟರು. ಅವರ ಖಾಯಂ ತಾಣ ಹೋಟಲ್ ಜನಾರ್ಧನದ 233ನೇ ನಂಬರ್ ಕೊಠಡಿಯಲ್ಲಿ ಆಡಿದ ಮಾತುಗಳು, ಕಂಡ ಕನಸುಗಳಿಗೆ ಕೊನೆಯೇ ಇರಲಿಲ್ಲ. ಆದರೆ ಉದಯಶಂಕರ್ ಒಡನಾಟ ಬಹಳ ಕಾಲ ಉಳಿಯಲಿಲ್ಲ. ಅವರ ಆಯಸ್ಸು ಅಪೂರ್ಣವಾಗಿ ಹಲವು ಕನಸುಗಳು ಹಾಗೇ ಉಳಿದುಕೊಂಡವು. ಎನ್​. ಎಸ್​. ಶ್ರೀಧರಮೂರ್ತಿ, ಹಿರಿಯ ಪರ್ತಕರ್ತ

*

(ಭಾಗ 1)

ಮೂವತ್ತು ವರ್ಷಗಳಲ್ಲಿ ಚಿ.ಉದಯಶಂಕರ್ ಬರೆದಿದ್ದು 3,340 ಗೀತೆಗಳು. ಸಂಭಾಷಣೆ ರಚಿಸಿದ್ದು 330 ಚಿತ್ರಗಳಿಗೆ. ಕನ್ನಡ ಚಿತ್ರರಂಗದ ಮಟ್ಟಿಗೆ “ಅಲ್ಲಾವುದ್ದೀನನ ಅದ್ಭುತ ದೀಪ” ಎಂದು ಅವರು ಕರೆಸಿಕೊಂಡಿದ್ದರು. ರಾಜ್ ಕುಮಾರ್ ಅಭಿನಯಿಸಿದ 92 ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಉದಯಶಂಕರ್ ಅಣ್ಣಾವ್ರ ವೃತ್ತಿ ಜೀವನ ರೂಪಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದರು. ಉದಯಶಂಕರ್ ಅವರ ಮುತ್ತಾತ ನಂಜುಂಡಯ್ಯ ಅಭಿನಯ ಮತ್ತು ಬರವಣಿಗೆ ಎರಡರಲ್ಲಿಯೂ ಹೆಸರು ಮಾಡಿದವರು. ಪವನಪುರೀ ನಾಟಕ ಸಭಾದ ಸ್ಥಾಪಕರು. ತಾತ ಶ್ರೀಕಂಠಯ್ಯ ಕವಿಗಳು ಗಣಿತದಲ್ಲಿ ಪರಿಣಿತರು. ಉದಯಶಂಕರ್ ಅವರ ತಂದೆ ಚಿ.ಸದಾಶಿವಯ್ಯ ಬರಹಗಾರರು. ಐದು ಕಾದಂಬರಿ 23 ನಾಟಕ ಮತ್ತು 120  ಕಥೆಗಳನ್ನು ಬರೆದವರು. ಚಿತ್ರರಂಗದಲ್ಲಿ ಕೂಡ ಹೆಸರು ಮಾಡಿದವರು.

ಶ್ರೀಧರ ಮೂರ್ತಿಯವರ ಈ ಬರಹವನ್ನೂ ಓದಿ : S.V. Parameshwar Bhat Birth Anniversary: ಬಡವ ತಬ್ಬಲಿ ಎಂದು ಚಡಪಡಿಸದಿಹೆ, ಕೊಡುವಾತ ಬಿಡುವಾತ ನನ್ನೊಳಗಿಹನು

ಬರಹಗಾರರ ವಂಶದಲ್ಲಿ ಜನಿಸಿದ ಉದಯಶಂಕರ್ ಹುಟ್ಟಿದ್ದು 1934ರ ಫೆಬ್ರವರಿ 18ರಂದು. ಬಾಲ್ಯದಿಂದಲೇ ಅವರಿಗೆ ಬರವಣಿಗೆಯ ಹವ್ಯಾಸ ಬಂದಿತು. ಆರನೇ ವಯಸ್ಸಿನಲ್ಲಿಯೇ “ನಾನು ಚಂದೂ ಕೆರೆ ಕಟ್ಟಿದೆವು” ಎನ್ನುವ ಕಥೆಯನ್ನು ಬರೆದರು. ಹನ್ನೊಂದನೇ ವಯಸ್ಸಿನಲ್ಲಿ ಅವರು ಬರೆದ “ಕರಡಿಗಳ ಸಿನಿಮಾ” ಕಥೆ “ಕಥಾವಳಿ” ಪತ್ರಿಕೆಯಲ್ಲಿ ಪ್ರಕಟವಾಯಿತು. ಹದಿಮೂರನೇ ವಯಸ್ಸಿಗೆ ಉದಯಶಂಕರ್ “ಅಖಿಲ ಕರ್ನಾಟಕ ಮಕ್ಕಳ ಕೂಟ”ದ “ಮಕ್ಕಳ ಬಾವುಟ” ಪತ್ರಿಕೆಯ ಸಂಪಾದಕರಾದರು. ಚಾಮರಾಜಪೇಟೆಯ ಪತ್ರಿಕೆಯ ಕಚೇರಿಯ ಹತ್ತಿರದಲ್ಲಿಯೇ ಇದ್ದ ಕನ್ನಡ ಸಾಹಿತ್ಯ ಪರಿಷತ್‌ಗೆ ಹೋಗಿ ಬರುವ ಪರಿಪಾಠ ಬೆಳೆಯಿತು. ಹದಿನಾರನೇ ವಯಸ್ಸಿಗೇ “ಸಕ್ಕರೆ ಅಚ್ಚು” ಕವಿತೆಗಳ ಸಂಕಲನ ಅಚ್ಚಾಯಿತು. ಇದಕ್ಕೆ ವರಕವಿ ಬೇಂದ್ರೆ ಮುನ್ನುಡಿ ಬರೆದಿದ್ದರು. ಅವರ “ಕಡ್ಲೆಕಾಯಿ ಚರಿತ್ರೆ”ಕಾದಂಬರಿ ದೇವುಡು ಸಂಪಾಕದರಾಗಿದ್ದ ಕಥಾವಳಿಯಲ್ಲಿ ಪ್ರಕಟವಾಯಿತು. ಬಯಕೆಯ ಬಲಿ, ಚಂದ್ರಿಕೆಯ ಚೆಲುವಿನಲ್ಲಿ, ವಿಜಯ ವೈಭವ ಹೀಗೆ ಹದಿನೆಂಟು ತುಂಬುವಷ್ಟರಲ್ಲಿ ಉದಯಶಂಕರ್ ಹತ್ತು ಕಾದಂಬರಿಗಳನ್ನು ಬರೆದಿದ್ದರು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಇದನ್ನೂ ಓದಿ : S.V. Parameshwar Bhat Birth Anniversary : ‘ಪ್ರೀತಿಯ ನಂದಾದೀಪ’ ಬೆಳಗಿದ ಎಸ್.ವಿ.ಪರಮೇಶ್ವರ ಭಟ್ಟರು

Published On - 11:55 am, Fri, 18 February 22

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ