AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ರಿಯಲ್ ಎಸ್ಟೇಟ್ ಸಂಸ್ಥೆ ನನಗೆ ಮೋಸ ಮಾಡಿದೆ: ಜಗಪತಿ ಬಾಬು ಆರೋಪ

ಜಗಪತಿ ಬಾಬು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ತಮಗೆ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ಮೋಸ ಮಾಡಿದೆ ಎಂದು ಹೇಳಿದ್ದಾರೆ. ಸಂಸ್ಥೆ ಯಾವುದು? ಯಾವ ರೀತಿ ಮೋಸ ಮಾಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಮುಂದೆ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

ಆ ರಿಯಲ್ ಎಸ್ಟೇಟ್ ಸಂಸ್ಥೆ ನನಗೆ ಮೋಸ ಮಾಡಿದೆ: ಜಗಪತಿ ಬಾಬು ಆರೋಪ
ಮಂಜುನಾಥ ಸಿ.
|

Updated on: May 29, 2024 | 3:32 PM

Share

ಜಗಪತಿ ಬಾಬು (Jagapathi Babu) ದಕ್ಷಿಣ ಭಾರತ ಚಿತ್ರರಂಗದ (South Movie Inddustry) ಅತ್ಯಂತ ಜನಪ್ರಿಯ ವಿಲನ್. ದಕ್ಷಿಣ ಭಾರತದ ಹಲವು ಸೂಪರ್ ಸ್ಟಾರ್ ನಟರ ಎದುರು ವಿಲನ್ ಆಗಿ ಜಗಪತಿ ಬಾಬು ನಟಿಸಿದ್ದಾರೆ. ಕ್ಲಾಸ್ ವಿಲನ್ ಇರಲಿ ಅಥವಾ ಮಾಸ್ ವಿಲನ್ ಪಾತ್ರವೇ ಇರಲಿ ಜಗಪತಿ ಬಾಬು ಆ ಪಾತ್ರಕ್ಕೆ ಜೀವ ತುಂಬುತ್ತಾರೆ. ಜಗಪತಿ ಬಾಬು ಯಾವ ಭಾಷೆಯಲ್ಲಿ ಸಿನಿಮಾ ಮಾಡುತ್ತಾರೋ ಆ ರಾಜ್ಯದಲ್ಲಿ ಒಂದು ಸೈಟು ತೆಗೆದುಕೊಂಡಿದ್ದರೆ ಈ ಹೊತ್ತಿಗೆಲ್ಲ ಸಾವಿರಾರು ಕೋಟಿ ಆಸ್ತಿಯ ಒಡೆಯರಾಗಿರುತ್ತಿದ್ದರು ಎಂದು ತೆಲುಗಿನ ನಟರೊಬ್ಬರು ಸಿನಿಮಾ ಕಾರ್ಯಕ್ರಮವೊಂದರಲ್ಲಿ ಹಾಸ್ಯ ಮಾಡಿದ್ದರು. ವಿಲನ್​ಗಳ ವಿಲನ್ ಎಂದು ಹೆಸರು ಮಾಡಿರುವ ಜಗಪತಿ ಬಾಬುಗೆ ಯಾರೋ ಮೋಸ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಜಗಪತಿ ಬಾಬು ಮಾತನಾಡಿದ್ದಾರೆ.

ಜಗಪತಿ ಬಾಬು ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಜಾಹೀರಾತುಗಳಲ್ಲಿಯೂ ನಟಿಸುತ್ತಾರೆ. ಇತ್ತೀಚೆಗೆ ಜಗಪತಿ ಬಾಬು ರಿಯಲ್ ಎಸ್ಟೇಟ್ ಸಂಬಂಧಿಸಿದ ಜಾಹೀರಾತೊಂದರಲ್ಲಿ ನಟಿಸಿದ್ದರು. ಆದರೆ ಆ ರಿಯಲ್ ಎಸ್ಟೇಟ್ ಸಂಸ್ಥೆಯವರು ತಮಗೆ ಮೋಸ ಮಾಡಿದ್ದಾರೆ ಎಂದು ಜಗಪತಿ ಬಾಬು ಹೇಳಿದ್ದಾರೆ. ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಜಗಪತಿ ಬಾಬು, ‘ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಾಕಷ್ಟು ಮೋಸ ನಡೆಯುತ್ತಿರುತ್ತದೆ. ಈ ಬಗ್ಗೆ ಸಿಎಂ ರೇವಂತ್ ರೆಡ್ಡಿ (ತೆಲಂಗಾಣ) ಸಹ ಮಾತನಾಡಿದ್ದಾರೆ. ನನಗೂ ಸಹ ಮೋಸ ಆಗಿದೆ. ಇತ್ತೀಚೆಗೆ ನಾನು ಒಂದು ರಿಯಲ್ ಎಸ್ಟೇಟ್ ಜಾಹೀರಾತಿನಲ್ಲಿ ನಟಿಸಿದ್ದೆ, ಆದರೆ ಆ ಸಂಸ್ಥೆಯವರು ನನಗೆ ಮೋಸ ಮಾಡಿದ್ದಾರೆ. ಆದಷ್ಟು ಬೇಗ ಆ ವಿವರಗಳನ್ನು ನಿಮ್ಮ ಮುಂದೆ ಇಡಲಿದ್ದೇನೆ. ಯಾವುದೇ ಸೈಟ್ ಅಥವಾ ಜಮೀನು ಕೊಳ್ಳುವ ಮುಂಚೆ ರೇರಾ ನಿಬಂಧನೆಗಳನ್ನು ತಿಳಿದುಕೊಂಡು ವ್ಯವಹಾರ ನಡೆಸಿ’ ಎಂದಿದ್ದಾರೆ ಜಗಪತಿ ಬಾಬು.

ಇದನ್ನೂ ಓದಿ:Kisi Ka Bhai Kisi Ki Jaan: ‘ವಯಸ್ಸಾದವರ ಮೇಲೆ ಸಲ್ಮಾನ್​ ಖಾನ್​ ಕೈ ಎತ್ತಲ್ಲ’: ಜಗಪತಿ ಬಾಬು

ಜಗಪತಿ ಬಾಬು, ರಿಯಲ್ ಎಸ್ಟೇಟ್​ನಲ್ಲಿ ಆಗಾಗ್ಗೆ ಹೂಡಿಕೆ ಮಾಡುತ್ತಿರುತ್ತಾರೆ. ಹಿಂದೊಮ್ಮೆ ಸಂದರ್ಶನದಲ್ಲಿ ಮಾತನಾಡಿದ್ದ ಜಗಪತಿ ಬಾಬು ‘ನನಗೆ ಸಾಕಷ್ಟು ಮಂದಿ ಮೋಸ ಮಾಡಿದ್ದಾರೆ, ಅವರಿಗೆ ಮೋಸ ಮಾಡಲು ಅವಕಾಶ ಮಾಡಿಕೊಟ್ಟಿದ್ದು ನನ್ನ ದಡ್ಡತನ. ಇಷ್ಟು ವರ್ಷಗಳ ಕರಿಯರ್ ಕಂಡಿರುವ ನಾನು ಕೆಲವು ಕೋಟಿಗಳ ಆಸ್ತಿಯಾದರೂ ಮಾಡಬೇಕಿತ್ತು ಆದರೆ ಮಾಡಲಿಲ್ಲ. ಆದರೆ 2022 ರ ವೇಳೆಗೆ ನನ್ನ ಬಳಿ 30 ಕೋಟಿ ರೂಪಾಯಿ ಹಣ ಬಂತು. ನಾನು ಅದನ್ನು ಸರಿಯಾಗಿ ಹೂಡಿಕೆ ಮಾಡುತ್ತಿದ್ದೇನೆ’ ಎಂದಿದ್ದರು. ಹೂಡಿಕೆ ಮಾಡುವ ನಿರ್ಧಾರ ತಳೆದ ಬಳಿಕ ಜಗಪತಿ ಬಾಬುಗೆ ಈಗ ಮತ್ತೆ ಮೋಸವಾಗಿದೆ. ಮತ್ತೆ ಹಣ ಕಳೆದುಕೊಂಡಿದ್ದಾರೆ.

ಜಗಪತಿ ಬಾಬು ನಾಯಕ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. 90ರ ದಶಕದಲ್ಲಿ ಜನಪ್ರಿಯ ನಾಯಕರಾಗಿದ್ದ ಜಗಪತಿ ಬಾಬು ಕೌಟುಂಬಿಕ ಕತೆಗಳಿಗೆ ನಿರ್ದೇಶಕರ ನೆಚ್ಚಿನ ಆಯ್ಕೆ ಆಗಿದ್ದರು. ಹೊಸ ನಾಯಕ ನಟರ ಎಂಟ್ರಿ ಆಗಿ, ಸಿನಿಮಾಗಳು ಹೆಚ್ಚು ಕಮರ್ಶಿಯಲ್, ಮಾಸ್ ಆಗುತ್ತಲೂ ಜಗಪತಿ ಬಾಬುಗೆ ಅವಕಾಶಗಳು ಕಡಿಮೆಯಾದವು. ಬಳಿಕ ಅವರು ವಿಲನ್ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ವಿಲನ್ ಆಗಿ ರೀ ಎಂಟ್ರಿ ಕೊಟ್ಟ ಜಗಪತಿ ಬಾಬು ಸೂಪರ್ ಹಿಟ್ ವಿಲನ್ ಆಗಿಬಿಟ್ಟರು. ಹೀರೋ ಆಗಿ ಗಳಿಸಿದ್ದಕ್ಕಿಂತಲೂ ಹೆಚ್ಚಿನ ಹಣ ಹಾಗೂ ಜನಪ್ರಿಯತೆಯನ್ನು ವಿಲನ್ ಆಗಿ ಗಳಿಸುತ್ತಿದ್ದಾರೆ ಜಗಪತಿ ಬಾಬು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು