ಮನೆಯಲ್ಲಿದ್ದರೂ ಸುಮ್ಮನೆ ಕೂತಿಲ್ಲ ‘ಜೊತೆ ಜೊತೆಯಲಿ’ ಅನಿರುದ್ಧ್​​; ಸಂಕಷ್ಟದ ಸಮಯದಲ್ಲಿ ಅಳಿಲು ಸೇವೆ

ಕೊವಿಡ್​ ಮಿತಿಮೀರಿ ಹರಡುತ್ತಿರುವುದರಿಂದ ಶೂಟಿಂಗ್​ ನಿಲ್ಲಿಸಲಾಗಿದೆ. ಹೀಗಾಗಿ, ಅನಿರುದ್ಧ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಟಿವಿ9 ಕನ್ನಡ ಡಿಜಿಟಲ್​ ಜತೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಮನೆಯಲ್ಲಿದ್ದರೂ ಸುಮ್ಮನೆ ಕೂತಿಲ್ಲ ‘ಜೊತೆ ಜೊತೆಯಲಿ’ ಅನಿರುದ್ಧ್​​; ಸಂಕಷ್ಟದ ಸಮಯದಲ್ಲಿ ಅಳಿಲು ಸೇವೆ
ಅನಿರುದ್ಧ್​
Follow us
|

Updated on:May 15, 2021 | 3:05 PM

ಸಾಹಸ ಸಿಂಹ ವಿಷ್ಣುವರ್ಧನ್​ ಅಳಿಯ ಅನಿರುದ್ಧ ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಕರ್ನಾಟಕದ ಮೂಲೆಮೂಲೆಯಲ್ಲೂ ಅನಿರುದ್ಧ ಅವರು ಆರ್ಯವರ್ಧನ್​ ಆಗಿ ಹೆಚ್ಚು ಪರಿಚಿತರಾಗಿದ್ದಾರೆ. ಕೊವಿಡ್​ ಮಿತಿಮೀರಿ ಹರಡುತ್ತಿರುವುದರಿಂದ ಶೂಟಿಂಗ್​ ನಿಲ್ಲಿಸಲಾಗಿದೆ. ಹೀಗಾಗಿ, ಅನಿರುದ್ಧ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಟಿವಿ9 ಕನ್ನಡ ಡಿಜಿಟಲ್​ ಜತೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

 ಮಿಸ್​ ಮಾಡುತ್ತಿಲ್ಲ ವ್ಯಾಯಾಮ-ಧ್ಯಾನ

ಅನಿರುದ್ಧ ಶೂಟಿಂಗ್​ ಇದ್ದಾಗ ಒಂದಷ್ಟು ಕೆಲಸಗಳನ್ನು ತಪ್ಪದೇ ಮಾಡುತ್ತಿದ್ದರಂತೆ. ಈಗ ಲಾಕ್​ಡೌನ್​ನಲ್ಲೂ ಅದನ್ನು ಮುಂದುವರಿಸಿದ್ದಾರೆ. ‘ಬೆಳಗ್ಗೆ ಎದ್ದ ನಂತರ ವ್ಯಾಯಾಮ ಮತ್ತು ಧ್ಯಾನ ಮಾಡುತ್ತೇನೆ. ನಿತ್ಯ ಆರ್ಟಿಕಲ್​ ಬರೆಯುತ್ತೇನೆ. ಶೂಟಿಂಗ್​ ಟೈಮ್​ನಲ್ಲಿ ಒಮ್ಮೊಮ್ಮೆ ಸಮಯ ಸಿಗುವುದಿಲ್ಲ. ಆಗ ಬರೆಯೋಕೆ ಆಗುತ್ತಿರಲಿಲ್ಲ. ಈಗ ಸಮಯ ಸಿಕ್ಕಿದೆ, ಬರವಣಿಗೆ ಮುಂದುವರಿಸಿದ್ದೇನೆ’ ಎಂದು ಮಾಹಿತಿ ನೀಡಿದ್ದಾರೆ ಅನಿರುದ್ಧ್​.

 ಸಿನಿಮಾ ವೀಕ್ಷಣೆ ಮೂಲಕ ಕಲಿಕೆ

ಒಟಿಟಿ ಪ್ಲಾಟ್​ಫಾರ್ಮ್​​ಗಳಲ್ಲಿ ಸಾಕಷ್ಟು ಚಿತ್ರಗಳು ಲಭ್ಯವಿದೆ. ಲಾಕ್​ಡೌನ್​ ಸಂದರ್ಭದಲ್ಲಿ ಅದನ್ನು ಅನಿರುದ್ಧ ವೀಕ್ಷಣೆ ಮಾಡುತ್ತಿದ್ದಾರೆ. ‘ಒಟಿಟಿಯಲ್ಲಿ ಸಾಕಷ್ಟು ಸಿನಿಮಾಗಳಿವೆ. ನಿತ್ಯ ಸಿನಿಮಾ ನೋಡುತ್ತಿದ್ದೇನೆ. ನಟನೆಯಲ್ಲಿ ಇರುವವರಿಗೆ ಅದೂ ಒಂದು ಕಲಿಕೆ. ನಮಗೆ ಸಾಕಷ್ಟು ವಿಚಾರಗಳು ತಿಳಿಯುತ್ತವೆ’ ಎಂದು ಅನಿರುದ್ಧ್​ ಹೇಳಿದ್ದಾರೆ.

ಅನಿರುದ್ಧ್​ ಅಳಿಲು ಸೇವೆ

ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಸಹಾಯಕ್ಕೆ ನಿಂತಿದ್ದಾರೆ. ಅನಿರುದ್ಧ್​ ಕೂಡ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ‘ಕೊವಿಡ್​ ಸಂಕಷ್ಟದ ಸಂದರ್ಭದಲ್ಲಿ ನಾನು ಅಳಿಲು ಸೇವೆ ಮಾಡುತ್ತಾ ಇದ್ದೇನೆ. ಕೆಲವರಿಗೆ ಬೆಡ್​ ಸಿಗಲ್ಲ. ಕೆಲವರಿಗೆ ರೆಮಿಡಿಸಿವರ್​ ಇಂಜೆಕ್ಷನ್​ ಸಿಗಲ್ಲ. ನನಗೆ ಪರಿಚಯ ಇದ್ದವರಿಗೆ ಕರೆ ಮಾಡುತ್ತೇನೆ. ಅವರು ಮತ್ಯಾರಿಗೋ ಕರೆ ಮಾಡ್ತಾರೆ. ಇದು ಒಂದು ರೀತಿಯಲ್ಲಿ ಚೈನ್​ ಲಿಂಕ್​. ಒಟ್ಟಿನಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯವಾಗುತ್ತದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅವರು.

ಇದು ಒಂದು ಸಂಘರ್ಷ

‘ಈಗ ನಡೆಯುತ್ತಿರುವುದು ಇದು ತುಂಬಾ ದೊಡ್ಡ ಸಂಘರ್ಷ. ಆರೋಗ್ಯದ ಜತೆಗೆ ಜೀವನವನ್ನೂ ನೋಡಿಕೊಂಡು ಹೋಗಬೇಕು. ನಿತ್ಯದ ಹೊಟ್ಟೆಪಾಡು ನೋಡಿಕೊಳ್ಳಲೇಬೇಕು. ಈ ಸಂಘರ್ಷದಲ್ಲಿ ಒಂದು ಸಕಾರಾತ್ಮಕತೆ ಇದೆ. ಎಲ್ಲರೂ ಪಾಸಿಟಿವ್​ ಆಗಿ ಥಿಂಕ್​ ಮಾಡುತ್ತಿದ್ದಾರೆ. ಕಾಳ ಸಂತೆಯಲ್ಲಿ ತೊಡಗಿಕೊಂಡವರು ಬೆರಳೆಣಿಕೆ ಇರಬಹುದು. ಅದನ್ನು ಬಿಟ್ಟು ಉಳಿದವರು ಸ್ವಾರ್ಥ ಇಲ್ಲದೆ ಸೇವೆ ಮಾಡುತ್ತಿದ್ದಾರೆ. ನಾನು ಅನ್ನೋದು ಬಿಟ್ಟು ನಾವು ಅನ್ನೋದು ಬಂದಿದೆ. ಎಲ್ಲರೂ ಒಂದು ಕುಟುಂಬ ಎನ್ನುವ ಫೀಲ್​ ಬಂದಿದೆ’ ಎನ್ನುತ್ತಾರೆ ಅನಿರುದ್ಧ್​.

 ಮಗನಿಗೂ ಕೊರೊನಾ

ಅನಿರುದ್ಧ್​ ಮಗನಿಗೂ ಕೊರೊನಾ ಸೋಂಕು ತಗುಲಿದೆ. ‘ನನ್ನ ಮಗನಿಗೂ ಕೊವಿಡ್​ ಪಾಸಿಟಿವ್​. ದೇವರ ದಯೆ ಇಂದ ತುಂಬಾ ಮೈಲ್ಡ್ ಆಗಿದೆ​. ಅವನು ಐಸೋಲೆಷನ್​​ನಲ್ಲಿ​ ಇದಾನೆ. ಶನಿವಾರ (ಮೇ 15) ಐಸೋಲೇಷನ್​ ಕಂಪ್ಲೀಟ್​ ಆಗುತ್ತದೆ. ಚಿಕ್ಕ ಹುಡುಗನಾದ್ದರಿಂದ ಒಂದೇ ರೂಂನಲ್ಲಿ ಕೂತಿರೋದು ಕಷ್ಟ. ವಿಡಿಯೋ ಕಾಲ್​ ಮಾಡ್ತೀವಿ, ಆದರೆ ಅದು ಸಾಕಾಗಲ್ಲ. ನನ್ನ ತಂದೆ-ತಾಯಿ ಮನೆಯಲ್ಲೇ ಇದಾರೆ. ಅವರಿಗೆ ಇಮ್ಯುನಿಟಿ ಸಿಸ್ಟಮ್ ಅಷ್ಟಾಗಿ ಸದೃಢವಾಗಿರಲ್ಲ. ಹೀಗಾಗಿ, ಬಂದು ನಮ್ಮ ಜತೆ ಕುಳಿತುಕೋ ಎಂದು ಹೇಳೋಕೂ ಸಾಧ್ಯವಾಗುತ್ತಿಲ್ಲ’ ಎಂದು ಅನಿರುದ್ಧ ಬೇಸರ ಹೊರ ಹಾಕಿದರು.

ಇದನ್ನೂ ಓದಿ: ನಾವು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ; ಕೊವಿಡ್​ನಿಂದ ಆಪ್ತನನ್ನು ಕಳೆದುಕೊಂಡು ಭಾವುಕರಾದ ನಟ ಅನಿರುದ್ಧ್​​

Published On - 2:55 pm, Sat, 15 May 21

ತಾಜಾ ಸುದ್ದಿ
ಮುಂಜಾನೆ ಮಂಜಿನ ನಡುವೆ ಟೀಮ್ ಇಂಡಿಯಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಮುಂಜಾನೆ ಮಂಜಿನ ನಡುವೆ ಟೀಮ್ ಇಂಡಿಯಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ವಿಮಾನದಲ್ಲಿ ಟೀಮ್ ಇಂಡಿಯಾ ಆಟಗಾರರ ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ
ವಿಮಾನದಲ್ಲಿ ಟೀಮ್ ಇಂಡಿಯಾ ಆಟಗಾರರ ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ
ಕೆಅರ್​ಎಸ್ ಗೆ ಹೆಚ್ಚಿದ ಒಳಹರಿವು, ಮಳೆಗಾಲದ ಆರಂಭದಲ್ಲೇ 100 ಅಡಿ ನೀರು!
ಕೆಅರ್​ಎಸ್ ಗೆ ಹೆಚ್ಚಿದ ಒಳಹರಿವು, ಮಳೆಗಾಲದ ಆರಂಭದಲ್ಲೇ 100 ಅಡಿ ನೀರು!
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್