AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮೀರ್ ಖಾನ್​​ಗಿಂತ ವೇಯ್ಟರ್​ ಉತ್ತಮವಾಗಿ ಆ್ಯಕ್ಟ್​ ಮಾಡಿದ್ದ; ಆರ್​ಜಿವಿ ಹೀಗೆ ಹೇಳಿದ್ದರ ಹಿಂದಿತ್ತು ಬೇರೆ ಉದ್ದೇಶ

Ram Gopal Varma: ರಂಗೀಲಾ ತೆರೆಕಂಡ ನಂತರ ರಾಮ್​ಗೋಪಾಲ್​ ವರ್ಮಾ ಸಂದರ್ಶನವೊಂದನ್ನು ನೀಡಿದ್ದರು. ಈ ಸಂದರ್ಶನದಲ್ಲಿ ಮಾತನಾಡಿದ್ದ ಆರ್​ಜಿವಿ, ‘ಆಮೀರ್​ಗಿಂತ ಸಿನಿಮಾದಲ್ಲಿ ಬಂದು ಹೋಗುವ ವೇಯ್ಟರ್​ ಉತ್ತಮವಾಗಿ ಪಾತ್ರ ನಿರ್ವಹಿಸಿದ್ದ’ ಎಂದಿದ್ದರು.

ಆಮೀರ್ ಖಾನ್​​ಗಿಂತ ವೇಯ್ಟರ್​ ಉತ್ತಮವಾಗಿ ಆ್ಯಕ್ಟ್​ ಮಾಡಿದ್ದ; ಆರ್​ಜಿವಿ ಹೀಗೆ ಹೇಳಿದ್ದರ ಹಿಂದಿತ್ತು ಬೇರೆ ಉದ್ದೇಶ
ಆರ್​ಜಿವಿ-ಆಮೀರ್​
ರಾಜೇಶ್ ದುಗ್ಗುಮನೆ
| Edited By: |

Updated on:May 15, 2021 | 4:32 PM

Share

Ram Gopal Varma: 1995ರಲ್ಲಿ ತೆರೆಗೆ ಬಂದಿದ್ದ ‘ರಂಗೀಲಾ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಅಂದಿನ ಕಾಲದಲ್ಲಿ ಇದು ದೊಡ್ಡ ಹಿಟ್ ಸಿನಿಮಾ ಕೂಡ ಹೌದು. ರಾಮ್​ ಗೋಪಾಲ್​ ವರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಆಮೀರ್​ ಖಾನ್​ ಹೀರೋ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ತೆರೆಕಂಡ ನಂತರದಲ್ಲಿ ಆಮೀರ್​ ಹಾಗೂ ಆರ್​ಜಿವಿ ನಡುವಿನ ಫ್ರೆಂಡ್​ಶಿಪ್​ ಮುರಿದು ಬಿದ್ದಿತ್ತು. ಇದರಲ್ಲಿ ನನ್ನದೇ ತಪ್ಪಿದೆ ಎಂದು ಆರ್​ಜಿವಿ ಕೊನೆಗೂ ಒಪ್ಪಿಕೊಂಡಿದ್ದಾರೆ.

ರಂಗೀಲಾ ತೆರೆಕಂಡ ನಂತರ ರಾಮ್​ಗೋಪಾಲ್​ ವರ್ಮಾ ಸಂದರ್ಶನವೊಂದನ್ನು ನೀಡಿದ್ದರು. ಈ ಸಂದರ್ಶನದಲ್ಲಿ ಮಾತನಾಡಿದ್ದ ಆರ್​ಜಿವಿ, ‘ಆಮೀರ್​ಗಿಂತ ಸಿನಿಮಾದಲ್ಲಿ ಬಂದು ಹೋಗುವ ವೇಯ್ಟರ್​ ಉತ್ತಮವಾಗಿ ಪಾತ್ರ ನಿರ್ವಹಿಸಿದ್ದ’ ಎಂದಿದ್ದರು. ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ವಿವಾದ ಹುಟ್ಟು ಹಾಕಿತ್ತು. ಇಬ್ಬರೂ ಒಟ್ಟಿಗೆ ಕೆಲಸ ಮಾಡದೇ ಇರಲು ಇದುವೇ ಕಾರಣ ಎನ್ನಲಾಗಿತ್ತು. ಈ ಬಗ್ಗೆ ಆರ್​ಜಿವಿ ಈಗ ಮೌನ ಮುರಿದಿದ್ದಾರೆ.

ಅಂದು ಆರ್​ಜಿವಿ ಆ ರೀತಿಯಲ್ಲಿ ಮಾತನ್ನೇ ಆಡಿರಲಿಲ್ಲವಂತೆ. ‘ಆಮೀರ್​ಗಿಂತ ವೇಯ್ಟರ್ ಉತ್ತಮವಾಗಿ ನಟಿಸಿದ್ದಾನೆ ಎಂದು ನಾನು ಹೇಳಲೇ ಇಲ್ಲ. ಅಂದು ನಾನು ಹೇಳಿದ ಹೇಳಿಕೆಯನ್ನು ಪತ್ರಿಕೆಗಳು ತಪ್ಪಾಗಿ ಅರ್ಥೈಸಿಕೊಂಡವು. ಅದೇ ರೀತಿಯಲ್ಲಿ ಹೆಡ್​ಲೈನ್​ ನೀಡಿದರು. ಅದನ್ನೇ ಆಮೀರ್ ನಂಬಿಕೊಂಡರು’ ಎಂದಿದ್ದಾರೆ ಆರ್​ಜಿವಿ.

‘ಸಿನಿಮಾ ವಿಮರ್ಶಕ ಮೊಹ್ಮದ್​ ಖಾಲಿದ್​ಗೆ ನಾನು ಸಂದರ್ಶನ ನೀಡುತ್ತಿದ್ದೆ. ಅದೊಂದು ಹೋಟೆಲ್​ ದೃಶ್ಯ. ನಾನು ಪ್ರಮುಖವಾಗಿ ಆ ಸೀನ್​ ಬಗ್ಗೆ ಮಾತ್ರ ಮಾತನಾಡುತ್ತಿದ್ದೆ. ಅಲ್ಲಿ ಆಮೀರ್​ ಮಾತಿಗೆ ವೇಯ್ಟರ್​ ಉತ್ತಮವಾಗಿ ಸ್ಪಂದಿಸಿದ್ದರು. ನಾನು ಈ ದೃಶ್ಯವನ್ನು ಮಾತ್ರ ಉಲ್ಲೇಖಿಸಿ ಹೇಳಿದ್ದೆ. ಆದರೆ,  ಮೊಹ್ಮದ್​ ಬೇರೆ ರೀತಿಯಲ್ಲಿ ಬರೆದರು. ನನಗೆ ಈ ಬಗ್ಗೆ ಸ್ಪಷ್ಟನೆ ನೀಡೋಕೂ ಸಮಯ ಸಿಕ್ಕಿಲ್ಲ. ನಾನು ಆ ರೀತಿ ಹೇಳಿಲ್ಲ ಎಂದು ಅನೇಕ ಸಂದರ್ಶನದಲ್ಲಿ ಹೇಳಿದ್ದೆ. ಆದರೆ, ಆಗ ಸಮಯ ಮಿಂಚಿತ್ತು. ಟೆಕ್ನಿಕಲ್​ ವಿಚಾರಗಳನ್ನು ಮೊಹ್ಮದ್​ಗೆ ಅರ್ಥಮಾಡಿಸಲು ಹೋಗಿದ್ದು ನನ್ನ ತಪ್ಪು’ ಎಂದು ಆರ್​ಜಿವಿ ಹೇಳಿಕೊಂಡಿದ್ದಾರೆ.

ಆಮೀರ್​ ಖಾನ್​ ಸದ್ಯ ಲಾಲ್​ ಸಿಂಗ್​ ಚಡ್ಡಾ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್​ಗಾಗಿ ಅವರು ಲೇಹ್-ಲಡಾಕ್​ಗೆ ತೆರಳಿದ್ದಾರೆ. 50 ದಿನಗಳ ಕಾಲ ಅವರು ಅಲ್ಲಿಯೇ ಇರಲಿದ್ದಾರಂತೆ. ಹಾಲಿವಡ್​​ನ ‘ಫಾರೆಸ್ಟ್​ ಗಂಪ್’​ ಚಿತ್ರದ ರಿಮೇಕ್​ ಆಗಿ ಈ ಸಿನಿಮಾ ಮೂಡಿ ಬರುತ್ತಿದೆ.

ಇದನ್ನೂ ಓದಿ:

 Ram Gopal Varma Birthday: ಇದು ನನ್ನ ಬರ್ತ್​ಡೇ ಅಲ್ಲ; ಡೆತ್​ ಡೇ! ಹುಟ್ಟುಹಬ್ಬದ ದಿನವೇ ರಾಮ್​ ಗೋಪಾಲ್​ ವರ್ಮಾ ಶಾಕಿಂಗ್​ ಮಾತು

ಬೀದಿಯಲ್ಲಿ ಪೋಸ್ಟರ್​ ಹಚ್ಚುತ್ತಿದ್ದ ಆಮೀರ್​ ಖಾನ್​ ವಿಡಿಯೋ ವೈರಲ್​; ಅಂದು ಸಿಗುತ್ತಿದ್ದ ಸಂಬಳ ಎಷ್ಟು?

Published On - 4:15 pm, Sat, 15 May 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್