ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಫ್ಲಾಪ್ ಆದ ‘ಆಚಾರ್ಯ’ ಚಿತ್ರಕ್ಕೆ ಹೋಲಿಕೆ ಮಾಡಿದ್ದಾರೆ. ‘ದೇವರ’ ಸಿನಿಮಾ ಎರಡು ಭಾಗದಲ್ಲಿ ರಿಲೀಸ್ ಆಗಲಿದೆ. ಮೊದಲ ಭಾಗ ಸೆಪ್ಟೆಂಬರ್ 27ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಗೆಲ್ಲೋದು ಅನುಮಾನ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ಒಂದು ನಂಬಿಕೆ ಬಗ್ಗೆ ಫ್ಯಾನ್ಸ್ ಆತಂಕ ಹೊರಹಾಕಿದ್ದಾರೆ.
ರಾಜಮೌಳಿ ಜೊತೆ ಸಿನಿಮಾ ಮಾಡಿದ ಹೀರೋಗಳ ಮುಂದಿನ ಸಿನಿಮಾ ಫ್ಲಾಪ್ ಆಗುತ್ತದೆ ಎಂಬ ನಂಬಿಕೆ ಟಾಲಿವುಡ್ನಲ್ಲಿ ಇದೆ. ಇದು ಅನೇಕ ಬಾರಿ ಸಾಬೀತಾಗಿದೆ ಕೂಡ. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರದಲ್ಲಿ ನಟಿಸಿದ್ದ ರಾಮ್ ಚರಣ್ ಅವರು ‘ಆಚಾರ್ಯ’ ಸಿನಿಮಾ ಮೂಲಕ ದೊಡ್ಡ ಸೋಲು ಕಂಡರು. ಈಗ ಜೂನಿಯರ್ ಎನ್ಟಿಆರ್ ಫ್ಯಾನ್ಸ್ಗೂ ಆತಂಕ ಬಹುವಾಗಿ ಕಾಡುತ್ತಿದೆ.
ಜೂನಿಯರ್ ಎನ್ಟಿಆರ್ಗೆ ಈ ಅನುಭವ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ರಾಜಮೌಳಿ ನಿರ್ದೇಶನದ, ಜೂನಿಯರ್ ಎನ್ಟಿಆರ್ ನಟನೆಯ ‘ಸ್ಟುಡೆಂಟ್ ನಂಬರ್ 1’ ಸಿನಿಮಾ ಗೆದ್ದ ಬಳಿಕ ರಿಲೀಸ್ ಆದ ‘ಸುಬ್ಬು’ ಫ್ಲಾಪ್ ಆಯಿತು. ‘ಸಿಂಹಾದ್ರಿ’ ಗೆಲುವಿನ ಬಳಿಕ ಅವರು ‘ಆಂಧ್ರಾವಾಲ’ ಚಿತ್ರದ ಮೂಲಕ ಸೋಲು ಕಂಡರು. ‘ಯಮದೊಂಗ’ ಗೆಲುವಿನ ಬಳಿಕ ಜೂನಿಯರ್ ಎನ್ಟಿಆರ್ ‘ಕಂತ್ರಿ’ ಚಿತ್ರದ ಮೂಲಕ ಸೋಲು ಕಂಡರು. ಈ ನಂಬಿಕೆ ಫ್ಯಾನ್ಸ್ ಅವರನ್ನು ಬಲವಾಗಿ ಕಾಡುತ್ತಿದೆ.
ಇದನ್ನೂ ಓದಿ: ಜೂನಿಯರ್ ಎನ್ಟಿಆರ್ಗೆ ಆದ ಗಾಯದಿಂದ ‘ವಾರ್ 2’ ಚಿತ್ರಕ್ಕೆ ದೊಡ್ಡ ನಷ್ಟ
‘ಆರ್ಆರ್ಆರ್’ ಬಳಿಕ ಜೂನಿಯರ್ ಎನ್ಟಿಆರ್ ಅವರ ನಟನೆಯ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಅದು ‘ದೇವರ’. ಈ ಕಾರಣಕ್ಕೆ ಫ್ಯಾನ್ಸ್ ಆತಂಕ ಹೊರಹಾಕಿದ್ದಾರೆ. ಇತ್ತೀಚೆಗೆ ಜೂನಿಯರ್ ಎನ್ಟಿಆರ್ ಸಿನಿಮಾ ಬಗ್ಗೆ ಮಾತನಾಡಿದ್ದರು. ‘ಆರು ವರ್ಷಗಳ ಬಳಿಕ ಸೋಲೋ ಹೀರೋ ಆಗಿ ಬರುತ್ತಿದ್ದೇನೆ. ಈ ಕಾರಣಕ್ಕೆ ನರ್ವಸ್ ಇದೆ. ಉತ್ತರ ಭಾರತದ ಮಂದಿ ಆರ್ಆರ್ಆರ್ ಚಿತ್ರವನ್ನು ಒಪ್ಪಿಕೊಂಡಂತೆ ದೇವರ ಚಿತ್ರವನ್ನು ಒಪ್ಪುತ್ತೀರಿ ಎನ್ನುವ ನಂಬಿಕೆ ಇದೆ’ ಎಂದಿದ್ದರು ಜೂನಿಯರ್ ಎನ್ಟಿಆರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.