ಜೂನಿಯರ್ ಎನ್​ಟಿಆರ್ ಮಕ್ಕಳು ಏನಾಗ್ತಾರೆ? ಉತ್ತರಿಸಿದ ನಟ

ಜೂನಿಯರ್​ ಎನ್​ಟಿಆರ್ ಅವರಿಗೆ ಅಭಯ್ ರಾಮ್ ಹಾಗೂ ಭಾರ್ಗವ್ ರಾಮ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಅವರು ಚಿತ್ರರಂಗಕ್ಕೆ ಬರಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ಆದರೆ, ಈ ರೀತಿ ಆಗಬಾರದು ಎಂಬುದು ಜೂನಿಯರ್ ಎನ್​ಟಿಆರ್ ಅವರ ಅಭಿಪ್ರಾಯ.

ಜೂನಿಯರ್ ಎನ್​ಟಿಆರ್ ಮಕ್ಕಳು ಏನಾಗ್ತಾರೆ? ಉತ್ತರಿಸಿದ ನಟ
ಎನ್​ಟಿಆರ್ ಹಾಗೂ ಕುಟುಂಬ
Follow us
| Updated By: ರಾಜೇಶ್ ದುಗ್ಗುಮನೆ

Updated on:Oct 09, 2024 | 8:52 AM

ತೆಲುಗು ಚಿತ್ರರಂಗದಲ್ಲಿ ನಂದಮೂರಿ ಕುಟುಂಬದ ಲೆಗಸಿ ತುಂಬಾನೇ ದೊಡ್ಡದು. ಈ ಕುಟುಂಬದಿಂದ ಅನೇಕರು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಅದರಲ್ಲಿ ಜೂನಿಯರ್ ಎನ್​ಟಿಆರ್ ಕೂಡ ಒಬ್ಬರು. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ನಂದಮೂರಿ ಫ್ಯಾಮಿಲಿ ಲೆಗಸಿಯನ್ನು ಕಾಪಾಡಿಕೊಂಡು ಹೋಗುತ್ತಿದ್ದಾರೆ. ಆದರೆ, ಈ ಒತ್ತಡ ಮಕ್ಕಳ ಮೇಲೆ ಬರಬಾರದು ಎನ್ನುವ ಆಶಯ ಅವರದ್ದು.

ಜೂನಿಯರ್​ ಎನ್​ಟಿಆರ್ ಅವರಿಗೆ ಅಭಯ್ ರಾಮ್ ಹಾಗೂ ಭಾರ್ಗವ್ ರಾಮ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಅವರು ಚಿತ್ರರಂಗಕ್ಕೆ ಬರಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ಆದರೆ, ಈ ರೀತಿ ಆಗಬಾರದು ಎಂಬುದು ಜೂನಿಯರ್ ಎನ್​ಟಿಆರ್ ಅವರ ಅಭಿಪ್ರಾಯ. ಅವರು ಸಿನಿಮಾ ಬಿಟ್ಟು ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಅದಕ್ಕೆ ಜೂನಿಯರ್​ ಎನ್​ಟಿಆರ್ ವಿರೋಧಿಸುವ ಉದ್ದೇಶ ಹೊಂದಿಲ್ಲ.

‘ಅವರಿಗೆ ಒತ್ತಡ ಆಗಬಾರದು. ಅವರು ಎಲ್ಲವೂ ಅನ್ವೇಷಣೆ ಮಾಡಬೇಕು’ ಎಂದು ಜೂನಿಯರ್​ ಎನ್​ಟಿಆರ್ ಅವರು ಹೇಳಿಕೊಂಡಿದ್ದಾರೆ. ಅವರು ನ್ಯಾಷನಲ್​ ಲೆವೆಲ್ ಬ್ಯಾಡ್ಮಿಂಟನ್ ಪ್ಲೇಯರ್ ಹಾಗೂ ಕ್ಲಾಸಿಕಲ್ ಡ್ಯಾನ್ಸರ್. ‘ನನ್ನ ತಂದೆ ನಟನೆ ಮಾಡಬೇಕು ಎಂದು ನನಗೆ ಒತ್ತಡ ಹೇರಿಲ್ಲ. ಆದರೆ, ನಟನಾ ಕ್ಷೇತ್ರದ ಹಿನ್ನೆಲೆ ಇರೋದ್ರಿಂದ ಅದು ನನ್ನ ಸೆಳೆಯಿತು’ ಎಂದಿದ್ದಾರೆ ಅವರು.

90ರ ದಶಕದಲ್ಲಿ ಬಾಲ ಕಲಾವಿದನಾಗಿ ಜೂನಿಯರ್​ ಎನ್​ಟಿಆರ್ ಅವರು ನಟಿಸಿದ್ದರು. ಅವರು 2001ರಲ್ಲಿ ‘ನಿನ್ನು ಚೂಡಲಾನಿ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಹೀರೋ ಆಗಿ ಕಾಲಿಟ್ಟರು. ‘ನಾನು ನ್ಯಾಷನಲ್ ಲೆವೆಲ್ ಬ್ಯಾಡ್ಮಿಂಟ್​ ಆಟಗಾರ. ಪ್ರೊಫೆಷನಲ್ ಕ್ಲಾಸಿಕ್ ಡ್ಯಾನ್ಸರ್. ನನಗೆ ತಪ್ಪುಗಳನ್ನು ಮಾಡಲು ಸಾಕಷ್ಟು ಅವಕಾಶ ಇತ್ತು’ ಎಂದು ಅವರು ಹೇಳಿದ್ದಾರೆ.

ಜೂನಿಯರ್​ ಎನ್​ಟಿಆರ್ ಅವರ ತಾತ ನಂದಮೂರು ತಾರಕ್ ರಾಮ್ ರಾವ್, ಜೂನಿಯರ್ ಎನ್​ಟಿಆರ್ ಅವರ ತಂದೆ ಹರಿಕೃಷ್ಣ, ಅಂಕಲ್ ಬಾಲಕೃಷ್ಣ, ಸಹೋದರ ಕಲ್ಯಾಣ್ ರಾಮ್ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ‘ದೇವರ’ ಸೆಲೆಬ್ರೇಷನ್ ವೇಳೆ ಸಿಡಿದ ಪಟಾಕಿ; ಜೂನಿಯರ್ ಎನ್​ಟಿಆರ್​ ಕಟೌಟ್​ಗೆ ಬೆಂಕಿ

ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಚಿತ್ರವು ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಗಳಿಕೆ ಮಾಡುತ್ತಿದೆ. ಈ ಚಿತ್ರಕ್ಕೆ ಎರಡನೇ ಭಾಗವು ಶೀಘ್ರವೇ ಬರಲಿದೆ. ಈ ಚಿತ್ರವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಜೂನಿಯರ್​ ಎನ್​ಟಿಆರ್ ಅವರು ಪ್ರಸ್ತುತ ಪ್ರಶಾಂತ್ ನೀಲ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:52 am, Wed, 9 October 24

ನವರಾತ್ರಿಯ 7ನೇ ದಿನ ಕಾಲರಾತ್ರಿ ದೇವಿ ಆರಾಧನೆಯ ಮಹತ್ವ ತಿಳಿಯಿರಿ
ನವರಾತ್ರಿಯ 7ನೇ ದಿನ ಕಾಲರಾತ್ರಿ ದೇವಿ ಆರಾಧನೆಯ ಮಹತ್ವ ತಿಳಿಯಿರಿ
ನವರಾತ್ರಿ 7ನೇ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ನವರಾತ್ರಿ 7ನೇ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ಸುಪ್ರೀಂ ಕೋರ್ಟ್ ಒಳಗೆ ನುಗ್ಗಿ ವಕೀಲರ ಬ್ಯಾಗ್, ಊಟದ ಬಾಕ್ಸ್ ಕದ್ದ ಕೋತಿ
ಸುಪ್ರೀಂ ಕೋರ್ಟ್ ಒಳಗೆ ನುಗ್ಗಿ ವಕೀಲರ ಬ್ಯಾಗ್, ಊಟದ ಬಾಕ್ಸ್ ಕದ್ದ ಕೋತಿ
PM Modi Speech Live: ಹರಿಯಾಣ ಗೆದ್ದ ಖುಷಿಯಲ್ಲಿ ಮೋದಿ ಮಾತು
PM Modi Speech Live: ಹರಿಯಾಣ ಗೆದ್ದ ಖುಷಿಯಲ್ಲಿ ಮೋದಿ ಮಾತು
ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್