AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Divya Uruduga: ಪದೇಪದೇ ಅರವಿಂದ್ ವಹಿಸಿಕೊಂಡು ಬರುವ ದಿವ್ಯಾಗೆ ಮಾತಿನಲ್ಲೇ ತಿವಿದ ಸುದೀಪ್

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ನಮ್ಮ ಆಟವನ್ನು ಆಡಬೇಕು ಎಂಬುದು ಸುದೀಪ್ ಅಭಿಪ್ರಾಯ. ಆದರೆ, ದಿವ್ಯಾ ಉರುಡುಗ ಆಟ ಸಂಪೂರ್ಣ ಬದಲಾಗಿದೆ. ಪ್ರತಿ ವಿಚಾರದಲ್ಲೂ ಅವರು ಅರವಿಂದ್ ಮೇಲೆ ಡಿಪೆಂಡ್ ಆಗುತ್ತಿದ್ದಾರೇನೋ ಎನ್ನುವ ಫೀಲ್ ವೀಕ್ಷಕರಲ್ಲಿ ಬರುತ್ತಿದೆ.

Divya Uruduga: ಪದೇಪದೇ ಅರವಿಂದ್ ವಹಿಸಿಕೊಂಡು ಬರುವ ದಿವ್ಯಾಗೆ ಮಾತಿನಲ್ಲೇ ತಿವಿದ ಸುದೀಪ್
ದಿವ್ಯಾ ಉರುಡುಗ
TV9 Web
| Edited By: |

Updated on:Jun 27, 2021 | 4:29 PM

Share

‘ಬಿಗ್ ಬಾಸ್ ಸೀಸನ್ 8’ ಎರಡನೇ ಇನ್ನಿಂಗ್ಸ್ ಆರಂಭದಲ್ಲಿ ಬಿಗ್ ಬಾಸ್ ವೇದಿಕೆ ಏರಿದ್ದ ದಿವ್ಯಾ ಉರುಡುಗಗೆ ಕಿಚ್ಚ ಸುದೀಪ್ ಪ್ರಶ್ನೆ ಒಂದನ್ನು ಕೇಳಿದ್ದರು. ‘ಬಿಗ್ ಬಾಸ್ ಮನೆಯಲ್ಲಿ ನಿಮ್ಮದು ಡಬಲ್ ರೈಡಿಂಗ್ ಇರುತ್ತದೆಯೋ ಅಥವಾ ಸಿಂಗಲ್ ರೈಡಿಂಗೋ’ ಎಂದು ಪ್ರಶ್ನಿಸಿದ್ದರು. ಆಗ ದಿವ್ಯಾ, ‘ನಾನು ಬದಲಾಗಿದ್ದೇನೆ. ಮೊದಲಿನಂತೆ ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ’ ಎಂದಿದ್ದರು. ಆದರೆ, ಅರವಿಂದ್ ಕೆ.ಪಿ. ಅವರನ್ನು ನಿರಂತರವಾಗಿ ವಹಿಸಿಕೊಂಡು ಬರುವುದನ್ನು ಅವರು ನಿಲ್ಲಿಸಿಲ್ಲ. ಈ ವಿಚಾರ ಸುದೀಪ್​ಗೆ ಕೋಪ ತರಿಸಿದೆ. ಅವರು ಮಾತಿನಲ್ಲೇ ದಿವ್ಯಾಗೆ ತಿವಿದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ನಮ್ಮ ಆಟವನ್ನು ಆಡಬೇಕು ಎಂಬುದು ಸುದೀಪ್ ಅಭಿಪ್ರಾಯ. ಆದರೆ, ದಿವ್ಯಾ ಉರುಡುಗ ಆಟ ಸಂಪೂರ್ಣ ಬದಲಾಗಿದೆ. ಪ್ರತಿ ವಿಚಾರದಲ್ಲೂ ಅವರು ಅರವಿಂದ್ ಮೇಲೆ ಡಿಪೆಂಡ್ ಆಗುತ್ತಿದ್ದಾರೇನೋ ಎನ್ನುವ ಫೀಲ್ ವೀಕ್ಷಕರಲ್ಲಿ ಬರುತ್ತಿದೆ. ಶನಿವಾರದ (ಜೂನ್ 26) ಎಪಿಸೋಡ್​ನಲ್ಲಿ ಇದು ಮತ್ತೊಮ್ಮೆ ಸಾಬೀತಾಯಿತು.

‘ಬಿಗ್ ಬಾಸ್ ಮನೆಯಲ್ಲಿ ಹಾರ್ಡ್ ವರ್ಕ್ ಮಾಡಿ ಬಂದವರು ಯಾರು ಮತ್ತು ಅದೃಷ್ಟ ಬಲದಲ್ಲಿ ನಿಂತವರು ಯಾರು’ ಎಂದು ಸುದೀಪ್ ಪ್ರಶ್ನೆ ಮಾಡಿದರು. ಅದೃಷ್ಟ ಬಲದ ವಿಚಾರದಲ್ಲಿ ಬಹುತೇಕರು ಶಮಂತ್ ಹೆಸರು ತೆಗೆದುಕೊಂಡರು. ಇನ್ನು, ಹಾರ್ಡ್ ವರ್ಕ್ ಮಾಡಿ ಬಂದವರ ಬಗ್ಗೆ ಮಾತನಾಡುವಾಗ ತಮಗೆ ಅನಿಸಿದವರ ಹೆಸರನ್ನು ಸ್ಪರ್ಧಿಗಳು ಹೇಳಿದರು. ಶಮಂತ್ ಸೇರಿ ಕೆಲವರು ತಮ್ಮದೇ ಹೆಸರು ತೆಗೆದುಕೊಂಡರು. ಆಗ ಸುದೀಪ್ ನಿಮ್ಮ ಹೆಸರು ಬಿಟ್ಟು ಬೇರೆಯವರ ಹೆಸರು ಹೇಳಿ ಎಂದು ಕೇಳಿದರು.

ಇದೇ ಪ್ರಶ್ನೆ ದಿವ್ಯಾ ಉರುಡುಗ ಬಳಿಗೂ ಬಂತು. ಆಗ, ದಿವ್ಯಾ ಎಂದಿನಂತೆ ಅರವಿಂದ್ ಹೆಸರನ್ನು ತೆಗೆದುಕೊಂಡರು. ಸುದೀಪ್ ಈ ವಿಚಾರಕ್ಕೆ ಕೋಪಗೊಂಡಂತೆ ಕಂಡರು. ‘ನೀವು ಅರವಿಂದ್ ಹೆಸರು ಬಿಟ್ಟು ಬೇರೆಯವರ ಹೆಸರನ್ನು ಹೇಳಿ. ಎಲ್ಲ ವಿಚಾರದಲ್ಲೂ ಅರವಿಂದ್ ಹೆಸರನ್ನೇ ತೆಗೆದುಕೊಂಡು ಬರ್ತೀರಾ. ಉಳಿದವರಿಗೆ ನಿಮ್ಮ ಹೆಸರನ್ನು ತೆಗೆದುಕೊಳ್ಳಬೇಡಿ ಎಂದು ಹೇಳಿದ್ದೆ. ಆದರೆ, ನಿಮಗೆ ಅರವಿಂದ್ ಹೆಸರು ತೆಗೆದುಕೊಳ್ಳುವುದು ಬೇಡ ಎಂದು ಹೇಳುತ್ತಿದ್ದೇನೆ’ ಎಂದು ಗಂಭೀರವಾಗಿ ಮಾತಿನಲ್ಲೇ ತಿವಿದರು.

ಮಂಜುವಿನ ಬಾಲ ದಿವ್ಯಾ ಸುರೇಶ್ ಎಂದು ಮೊದಲ ಇನ್ನಿಂಗ್ಸ್​ನ​ಲ್ಲಿ ಎಲ್ಲರೂ ಆಡಿಕೊಂಡಿದ್ದರು. ಆದರೆ, ಈ ಬಾರಿ ಅವರು ಬದಲಾಗಿದ್ದಾರೆ. ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಮಾತ್ರ ಬೆರೆಯುತ್ತಿದ್ದಾರೆ. ದಿವ್ಯಾಗೆ ಮಾತ್ರ ಸೀಮಿತವಾಗದೆ  ಎಲ್ಲರನ್ನೂ ನಗಿಸುವ ಕೆಲಸವನ್ನು ಮಂಜು ಮಾಡುತ್ತಿದ್ದಾರೆ. ಆದರೆ, ದಿವ್ಯಾ ಉರುಡುಗ ಮಾತ್ರ ಬದಲಾದಂತೆ ಕಾಣುತ್ತಿಲ್ಲ.

ಇದನ್ನೂ ಓದಿ:

ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಹೊತ್ತಿಕೊಂಡಿತು ದ್ವೇಷದ ಬೆಂಕಿ; ಪ್ರಶಾಂತ್ ಸಂಬರಗಿ ಫೋಟೋ ಸುಟ್ಟ ಸ್ಪರ್ಧಿಗಳು

‘ನೀನು ಮತ್ತು ನಿನ್ನ ತಂದೆ-ತಾಯಿ ಬೇಗ ಸತ್ತುಹೋಗಲಿ’; ಬಿಗ್​ ಬಾಸ್​ ಸ್ಪರ್ಧಿಗೆ ಈ ರೀತಿ ಶಾಪ ಹಾಕಿದ್ದು ಯಾರು?

Published On - 4:17 pm, Sun, 27 June 21

ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!