AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Divya Uruduga: ಪದೇಪದೇ ಅರವಿಂದ್ ವಹಿಸಿಕೊಂಡು ಬರುವ ದಿವ್ಯಾಗೆ ಮಾತಿನಲ್ಲೇ ತಿವಿದ ಸುದೀಪ್

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ನಮ್ಮ ಆಟವನ್ನು ಆಡಬೇಕು ಎಂಬುದು ಸುದೀಪ್ ಅಭಿಪ್ರಾಯ. ಆದರೆ, ದಿವ್ಯಾ ಉರುಡುಗ ಆಟ ಸಂಪೂರ್ಣ ಬದಲಾಗಿದೆ. ಪ್ರತಿ ವಿಚಾರದಲ್ಲೂ ಅವರು ಅರವಿಂದ್ ಮೇಲೆ ಡಿಪೆಂಡ್ ಆಗುತ್ತಿದ್ದಾರೇನೋ ಎನ್ನುವ ಫೀಲ್ ವೀಕ್ಷಕರಲ್ಲಿ ಬರುತ್ತಿದೆ.

Divya Uruduga: ಪದೇಪದೇ ಅರವಿಂದ್ ವಹಿಸಿಕೊಂಡು ಬರುವ ದಿವ್ಯಾಗೆ ಮಾತಿನಲ್ಲೇ ತಿವಿದ ಸುದೀಪ್
ದಿವ್ಯಾ ಉರುಡುಗ
TV9 Web
| Edited By: |

Updated on:Jun 27, 2021 | 4:29 PM

Share

‘ಬಿಗ್ ಬಾಸ್ ಸೀಸನ್ 8’ ಎರಡನೇ ಇನ್ನಿಂಗ್ಸ್ ಆರಂಭದಲ್ಲಿ ಬಿಗ್ ಬಾಸ್ ವೇದಿಕೆ ಏರಿದ್ದ ದಿವ್ಯಾ ಉರುಡುಗಗೆ ಕಿಚ್ಚ ಸುದೀಪ್ ಪ್ರಶ್ನೆ ಒಂದನ್ನು ಕೇಳಿದ್ದರು. ‘ಬಿಗ್ ಬಾಸ್ ಮನೆಯಲ್ಲಿ ನಿಮ್ಮದು ಡಬಲ್ ರೈಡಿಂಗ್ ಇರುತ್ತದೆಯೋ ಅಥವಾ ಸಿಂಗಲ್ ರೈಡಿಂಗೋ’ ಎಂದು ಪ್ರಶ್ನಿಸಿದ್ದರು. ಆಗ ದಿವ್ಯಾ, ‘ನಾನು ಬದಲಾಗಿದ್ದೇನೆ. ಮೊದಲಿನಂತೆ ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ’ ಎಂದಿದ್ದರು. ಆದರೆ, ಅರವಿಂದ್ ಕೆ.ಪಿ. ಅವರನ್ನು ನಿರಂತರವಾಗಿ ವಹಿಸಿಕೊಂಡು ಬರುವುದನ್ನು ಅವರು ನಿಲ್ಲಿಸಿಲ್ಲ. ಈ ವಿಚಾರ ಸುದೀಪ್​ಗೆ ಕೋಪ ತರಿಸಿದೆ. ಅವರು ಮಾತಿನಲ್ಲೇ ದಿವ್ಯಾಗೆ ತಿವಿದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ನಮ್ಮ ಆಟವನ್ನು ಆಡಬೇಕು ಎಂಬುದು ಸುದೀಪ್ ಅಭಿಪ್ರಾಯ. ಆದರೆ, ದಿವ್ಯಾ ಉರುಡುಗ ಆಟ ಸಂಪೂರ್ಣ ಬದಲಾಗಿದೆ. ಪ್ರತಿ ವಿಚಾರದಲ್ಲೂ ಅವರು ಅರವಿಂದ್ ಮೇಲೆ ಡಿಪೆಂಡ್ ಆಗುತ್ತಿದ್ದಾರೇನೋ ಎನ್ನುವ ಫೀಲ್ ವೀಕ್ಷಕರಲ್ಲಿ ಬರುತ್ತಿದೆ. ಶನಿವಾರದ (ಜೂನ್ 26) ಎಪಿಸೋಡ್​ನಲ್ಲಿ ಇದು ಮತ್ತೊಮ್ಮೆ ಸಾಬೀತಾಯಿತು.

‘ಬಿಗ್ ಬಾಸ್ ಮನೆಯಲ್ಲಿ ಹಾರ್ಡ್ ವರ್ಕ್ ಮಾಡಿ ಬಂದವರು ಯಾರು ಮತ್ತು ಅದೃಷ್ಟ ಬಲದಲ್ಲಿ ನಿಂತವರು ಯಾರು’ ಎಂದು ಸುದೀಪ್ ಪ್ರಶ್ನೆ ಮಾಡಿದರು. ಅದೃಷ್ಟ ಬಲದ ವಿಚಾರದಲ್ಲಿ ಬಹುತೇಕರು ಶಮಂತ್ ಹೆಸರು ತೆಗೆದುಕೊಂಡರು. ಇನ್ನು, ಹಾರ್ಡ್ ವರ್ಕ್ ಮಾಡಿ ಬಂದವರ ಬಗ್ಗೆ ಮಾತನಾಡುವಾಗ ತಮಗೆ ಅನಿಸಿದವರ ಹೆಸರನ್ನು ಸ್ಪರ್ಧಿಗಳು ಹೇಳಿದರು. ಶಮಂತ್ ಸೇರಿ ಕೆಲವರು ತಮ್ಮದೇ ಹೆಸರು ತೆಗೆದುಕೊಂಡರು. ಆಗ ಸುದೀಪ್ ನಿಮ್ಮ ಹೆಸರು ಬಿಟ್ಟು ಬೇರೆಯವರ ಹೆಸರು ಹೇಳಿ ಎಂದು ಕೇಳಿದರು.

ಇದೇ ಪ್ರಶ್ನೆ ದಿವ್ಯಾ ಉರುಡುಗ ಬಳಿಗೂ ಬಂತು. ಆಗ, ದಿವ್ಯಾ ಎಂದಿನಂತೆ ಅರವಿಂದ್ ಹೆಸರನ್ನು ತೆಗೆದುಕೊಂಡರು. ಸುದೀಪ್ ಈ ವಿಚಾರಕ್ಕೆ ಕೋಪಗೊಂಡಂತೆ ಕಂಡರು. ‘ನೀವು ಅರವಿಂದ್ ಹೆಸರು ಬಿಟ್ಟು ಬೇರೆಯವರ ಹೆಸರನ್ನು ಹೇಳಿ. ಎಲ್ಲ ವಿಚಾರದಲ್ಲೂ ಅರವಿಂದ್ ಹೆಸರನ್ನೇ ತೆಗೆದುಕೊಂಡು ಬರ್ತೀರಾ. ಉಳಿದವರಿಗೆ ನಿಮ್ಮ ಹೆಸರನ್ನು ತೆಗೆದುಕೊಳ್ಳಬೇಡಿ ಎಂದು ಹೇಳಿದ್ದೆ. ಆದರೆ, ನಿಮಗೆ ಅರವಿಂದ್ ಹೆಸರು ತೆಗೆದುಕೊಳ್ಳುವುದು ಬೇಡ ಎಂದು ಹೇಳುತ್ತಿದ್ದೇನೆ’ ಎಂದು ಗಂಭೀರವಾಗಿ ಮಾತಿನಲ್ಲೇ ತಿವಿದರು.

ಮಂಜುವಿನ ಬಾಲ ದಿವ್ಯಾ ಸುರೇಶ್ ಎಂದು ಮೊದಲ ಇನ್ನಿಂಗ್ಸ್​ನ​ಲ್ಲಿ ಎಲ್ಲರೂ ಆಡಿಕೊಂಡಿದ್ದರು. ಆದರೆ, ಈ ಬಾರಿ ಅವರು ಬದಲಾಗಿದ್ದಾರೆ. ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಮಾತ್ರ ಬೆರೆಯುತ್ತಿದ್ದಾರೆ. ದಿವ್ಯಾಗೆ ಮಾತ್ರ ಸೀಮಿತವಾಗದೆ  ಎಲ್ಲರನ್ನೂ ನಗಿಸುವ ಕೆಲಸವನ್ನು ಮಂಜು ಮಾಡುತ್ತಿದ್ದಾರೆ. ಆದರೆ, ದಿವ್ಯಾ ಉರುಡುಗ ಮಾತ್ರ ಬದಲಾದಂತೆ ಕಾಣುತ್ತಿಲ್ಲ.

ಇದನ್ನೂ ಓದಿ:

ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಹೊತ್ತಿಕೊಂಡಿತು ದ್ವೇಷದ ಬೆಂಕಿ; ಪ್ರಶಾಂತ್ ಸಂಬರಗಿ ಫೋಟೋ ಸುಟ್ಟ ಸ್ಪರ್ಧಿಗಳು

‘ನೀನು ಮತ್ತು ನಿನ್ನ ತಂದೆ-ತಾಯಿ ಬೇಗ ಸತ್ತುಹೋಗಲಿ’; ಬಿಗ್​ ಬಾಸ್​ ಸ್ಪರ್ಧಿಗೆ ಈ ರೀತಿ ಶಾಪ ಹಾಕಿದ್ದು ಯಾರು?

Published On - 4:17 pm, Sun, 27 June 21

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ